ದಕ್ಷಿಣ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು

 

1.ಚಾಮುಂಡೇಶ್ವರಿ ದೇವಸ್ಥಾನ (ಮೈಸೂರು)

ದೇವತೆ: ಚಾಮುಂಡೇಶ್ವರಿ ದೇವಿ (ದುರ್ಗಾ)

ಚಾಮುಂಡೇಶ್ವರಿ ದೇವಾಲಯದ ಇತಿಹಾಸ :

ಚಾಮುಂಡೇಶ್ವರಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳ ಮೇಲೆ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಈ ದೇವಸ್ಥಾನಕ್ಕೆ ಶಕ್ತಿಯ ಉಗ್ರ ರೂಪವಾದ ಚಾಮುಂಡೇಶ್ವರಿ ದೇವಿಯ ಹೆಸರಿಡಲಾಗಿದೆ, ಇದು ಮೈಸೂರು ಮಹಾರಾಜರ ಕಾಲದಿಂದಲೂ ಪೂಜಿಸಲ್ಪಟ್ಟ ಪ್ರಸಿದ್ದ   ದೇವತೆಯಾಗಿದ್ದು ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ಒಂದಾಗಿದೆ.

ವಾಸ್ತುಶಿಲ್ಪ

ಪ್ರಾರಂಭದಲ್ಲಿ ಈ  ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಆಡಳಿತ ನಡೆಸುತ್ತಿದ್ದವರು ನಿರ್ಮಾಣ ಮಾಡಿದ್ದಾರೆಂದು ಹೇಳಲಾಗುತ್ತದೆ, ಆದರೆ ಇದರ ಗೋಪುರವನ್ನು  ಸಾಮಾನ್ಯವಾಗಿ 17 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣ ಮಾಡಿರಬಹುದೆಂದು ಅಂದಾಜಿಸಲಾಗಿದೆ. 1659 ರಲ್ಲಿ, ಬೆಟ್ಟದ 3000 ಅಡಿ ಶಿಖರಕ್ಕೆ ಭಕ್ತರು ದೇವಿಯನ್ನು ದರ್ಶಿಸಲು ಒಂದು ಸಾವಿರ ಮೆಟ್ಟಿಲುಗಳ ಮೆಟ್ಟಿಲನ್ನು ನಿರ್ಮಾಣ ಮಾಡಲಾಗಿದೆ.

ಗರ್ಭಗುಡಿಯಲ್ಲಿ ‘ಅಷ್ಟಭುಜ’ ಅಥವಾ ಎಂಟು ಕೈಗಳನ್ನು ಹೊಂದಿರುವ ಚಾಮುಂಡೇಶ್ವರಿಯನ್ನು ಕಾಣಬಹುದಾಗಿದೆ. ದೇವಾಲಯದಲ್ಲಿ ನಂದಿಯ ಹಲವಾರು ಚಿತ್ರಗಳಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ದೂರದಲ್ಲಿರುವ ಚಿಕ್ಕ ಶಿವ ದೇವಸ್ಥಾನದ ಬಳಿ ಬೆಟ್ಟದ ಮೇಲೆ 700 ನೇ ಮೆಟ್ಟಿಲುಗಳ ಮೇಲೆ ಬೃಹತ್ ಗ್ರಾನೈಟ್ ನಂದಿ ವಿಗ್ರಹವಿರುವುದನ್ನು ನೋಡಬಹುದಾಗಿದೆ. ಈ ರಚನೆಯನ್ನು 1664 ರಲ್ಲಿ ಮೈಸೂರು ಮಹಾರಾಜ ದೂದ ದೇವರಾಜ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಚಾಮುಂಡಿ ಬೆಟ್ಟಗಳು ಶ್ರೀ ಮಹಾಬಲೇಶ್ವರ ದೇವಸ್ಥಾನ ಜೊತೆಯಲ್ಲಿಯೆ ಶ್ರೀ ನಾರಾಯಣಸ್ವಾಮಿ ದೇಗುಲವನ್ನು  ಭಕ್ತರು ವೀಕ್ಷಿಸಬಹುದಾಗಿದೆ.

ಚಾಮುಂಡೇಶ್ವರಿ ದೇವಾಲಯ ಪ್ರವೇಶ ಶುಲ್ಕ:

ಸಾಮಾನ್ಯ ಪ್ರವೇಶ : ಉಚಿತ ಪ್ರವೇಶವಿರುತ್ತದೆ

ವಿಶೇಷ ಪ್ರವೇಶ ಶುಲ್ಕ : ಪ್ರತಿ ಭಕ್ತಾದಿಗೆ 100 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ

ವಿಐಪಿ ದರ್ಶನ : ಪ್ರತಿ ಭಕ್ತಾದಿಗೆ 300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ

ಚಾಮುಂಡೇಶ್ವರಿ ದೇವಸ್ಥಾನವನ್ನು ತಲುಪುವುದು ಹೇಗೆ?

ವಿಮಾನದ ಮೂಲಕ : ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ , ಇದು ಸುಮಾರು 20 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ಈ ದೇವಸ್ಥಾನವನ್ನು ತಲುಪಲು ಟ್ಯಾಕ್ಸಿ ವ್ಯವಸ್ಥೆ ಕೂಡ ಲಭ್ಯವಿದೆ.

ರೈಲು ಮೂಲಕ : ಸಮೀಪದ ರೈಲು ನಿಲ್ದಾಣ ಮೈಸೂರು ಜಂಕ್ಷನ್ ಆಗಿದೆ, ಇದು ದೇವಾಲಯದಿಂದ 13 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ದೊರೆಯುತ್ತದೆ.

ರಸ್ತೆಯ ಮೂಲಕ : ಮೈಸೂರು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ದೇವಾಲಯವನ್ನು ತಲುಪಲು ನೀವು ಸಾರ್ವಜನಿಕ ಬಸ್ ಅಥವಾ ಟ್ಯಾಕ್ಸಿಯನ್ನು ಕೂಡ ಬಳಸಬಹುದಾಗಿದೆ. ಮೈಸೂರು ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ಸೌಲಭ್ಯವು ಉತ್ತಮವಾಗಿಯೆ ಇದೆ.

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ:

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಭೇಟಿ ನೀಡಲು ಸೂಕ್ತ ಅವಧಿ, ಚಳಿಗಾಲದಲ್ಲಿ ವಾತಾವರಣವು ಸೂಕ್ತವಾಗಿದೆ ಮತ್ತು ದೇವಿಯ ದರ್ಶನಕ್ಕೆ ಉತ್ತಮವಾಗಿದೆ. ದಸರಾ ಹಬ್ಬದ ಸಮಯದಲ್ಲಿ ದೇವಾಲಯವು ವಿಶೇಷವಾಗಿ ಅಲಂಕಾರಗಳಿಂದ ತುಂಬಿರುತ್ತದೆ, ಆ ಸಮಯದಲ್ಲಿ ದೇವಿಯಗೆ ವಿಶೇಷ ಪೂಜೆಗಳು ಮತ್ತು ಅನುಷ್ಠಾನಗಳು ನಡೆಸಲಾಗುತ್ತದೆ.

2.ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಮೈಸೂರು

ದೇವರು: ಶಿವ (ಶ್ರೀಕಂಠೇಶ್ವರ)

ದೇವಸ್ಥಾನದ ಬಗ್ಗೆ :

ನಂಜುಂಡೇಶ್ವರ ದೇವಸ್ಥಾವನ್ನು ಶ್ರೀಕಂಠೇಶ್ವರ ದೇವಸ್ಥಾನ ಎಂದೂ ಕೂಡ ಕರೆಯುತ್ತಾರೆ. ಕರ್ನಾಟಕದ

ಹಿಂದೂ ಯಾತ್ರಾಸ್ಥಳ ನಂಜನಗೂಡಿನಲ್ಲಿರುವ ಶಿವನಿಗೆ ಸಮರ್ಪಿತವಾದ ಇದೊಂದು ಪ್ರಾಚೀನ

ದೇಗುಲವಾಗಿದೆ. ಈ ದೇವಾಲಯವನ್ನು ಕಾವೇರಿ ನದಿಯ ಉಪನದಿಯಾದ ಕಬಿನಿ ನದಿಯ ಬಲದಂಡೆಯಲ್ಲಿ ಕಾಣಬಹುದಾಗಿದೆ.

ಕಬಿನಿ ನದಿ :

ಕಬಿನಿ ನದಿಯು ದಕ್ಷಿಣ ಭಾರತದ ಪವಿತ್ರ ನದಿಯಾದ ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ

ಒಂದಾಗಿರುವುದನ್ನು ಕಾಣಬಹುದಾಗಿದೆ. ಈ ನದಿಯು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ

ಕವಿಲುಂಪಾರ ಬಳಿ ಪನಮರಂ ನದಿ ಮತ್ತು ಮಾನಂದವಾಡಿ ನದಿಯ ಸಂಗಮದಿಂದ ಉದ್ಭವವಾದ

ನದಿಯಾಗಿದೆ. ಇದು ವಯನಾಡ್ ಪ್ರದೇಶದ ಮೂಲಕ ಪೂರ್ವಕ್ಕೆ ಹರಿಯುವ ನದಿಯಾಗಿದೆ, ಈ ನದಿಯು

ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಹರಿಯುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ: 6:00 ಗಂಟೆಯಿಂದ ಮಧ್ಯಾಹ್ನ 1:00 ರವರೆಗೆ ಸಂಜೆ: ಸಂಜೆ

4:00 ಗಂಟೆಯಿಂದ ರಾತ್ರಿ 8:30 ರವರೆಗೆ ದರ್ಶನಕ್ಕೆ ಅವಕಾಶವಿದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ದೇವಸ್ಥಾನವು ಮೈಸೂರು ಬಸ್ ನಿಲ್ದಾಣದಿಂದ 23.5 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ನಿಲ್ದಾಣದಿಂದ ನಂಜನಗೂಡಿಗೆ 25.5 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ

ಅಥವಾ ಮಂಡಕಳ್ಳಿ ವಿಮಾನ ನಿಲ್ದಾಣ. ಇದು 14.5 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಬಿಆರ್ಹಿಲ್ಸ್‌: ನಂಜನಗೂಡಿನಿಂದ ಕೇವಲ 70 ಕಿ.ಮೀ ದೂರದಲ್ಲಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ:

ನಂಜನಗೂಡಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಕೇವಲ 58 ಕಿ.ಮೀ ದೂರದಲ್ಲಿದೆ.

ಕೂರ್ಗ್‌: ನಂಜನಗೂಡಿನಿಂದ ಕೂರ್ಗ್‌ ಕೇವಲ 142 ಕಿ.ಮೀ ದೂರದಲ್ಲಿದೆ.

3.ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ (ಮಂಡ್ಯ ಜಿಲ್ಲೆ)

ದೇವರು: ವಿಷ್ಣು (ಚೆಲುವನಾರಾಯಣ ಸ್ವಾಮಿ)

ದೇವಾಲಯದ ಬಗ್ಗೆ :

ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಕರ್ನಾಟಕದ ಮಂಡ್ಯ ಜಿಲ್ಲೆಯ ಮೆಲ್ಕೋಟೆಯಲ್ಲಿರುವ ಒಂದು ವಿಶೇಷ ದೇವಾಲಯವಾಗಿದೆ. ಇದು ಮೆಲ್ಕೋಟೆಯ ತಪ್ಪಲಿನಲ್ಲಿರುವ ದೇವಾಲಯವಾಗಿದೆ ಮತ್ತು ಕಾವೇರಿ ಕಣಿವೆಯಲ್ಲಿ ಕಾಣುವ ಕಲ್ಲಿನ ಬೆಟ್ಟಗಳ ಮೇಲೆ ಬಹು ಸುಂದರವಾಗಿ ನಿರ್ಮಿಸಲಾದ ಯೋಗ ನರಸಿಂಹ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ಈ ದೇವಾಲಯವನ್ನು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿರುವ ದೇವಸ್ಥಾನವಾಗಿದೆ. ಈ ದೇವಾಲಯವು ಮೈಸೂರಿನಿಂದ ಸುಮಾರು 30 ಮೈಲಿಗಳು  ಮತ್ತು ಬೆಂಗಳೂರಿನಿಂದ 156 ಕಿಮೀ ದೂರದಲ್ಲಿರುವ ಸ್ಥಳವಾಗಿದೆ.

ದಂತಕಥೆಯಲ್ಲಿ ಹೇಳಿರುವಂತೆ, ಒಮ್ಮೆ  ವಿಷ್ಣುವಿನ ಬಳಿ ಬ್ರಹ್ಮನು ವಿಷ್ಣುವಿನ ವಿಗ್ರಹವನ್ನು ಪೂಜಿಸಲು ನೀಡುವಂತೆ ಕೋರಿಕೊಂಡನು. ವಿಷ್ಣು ಬ್ರಹ್ಮನಿಗೆ ಒಂದು ವಿಗ್ರಹವನ್ನು ನೀಡಿದನು, ಅದನ್ನು ತೆಗೆದುಕೊಂಡು ಹೋಗಿ ಬ್ರಹ್ಮನು ತನ್ನ ಪುತ್ರನಾದ ಸನತಕುಮಾರನಿಗೆ ನೀಡಿದನು, ಅವನು ಆ ವಿಗ್ರಹವನ್ನು ಮೆಲ್ಕೋಟೆಯಲ್ಲಿ ಪ್ರತಿಷ್ಠಾಪಿಸಿದನು.

ಬ್ರಹ್ಮನು ವಿಷ್ಣುವಿನ ಹತ್ತಿರ ಆರಾಧನೆಗಾಗಿ ಇನ್ನೊಂದು ವಿಗ್ರಹವನ್ನು ಅನುಗ್ರಹಿಸುವಂತೆ ಬೇಡಿಕೊಂಡನು ಮತ್ತು ವಿಷ್ಣು ಬ್ರಹ್ಮನಿಗೆ ಲೋಹದ ವಿಗ್ರಹವನ್ನು ನೀಡಿದನು, ಇದನ್ನು ತ್ರೇತಾಯುಗದಲ್ಲಿ ರಾಮನು , ದ್ವಾಪರಯುಗದಲ್ಲಿ ಬಲರಾಮನು ಮತ್ತು ಕಲಿಯುಗದಲ್ಲಿ ಯಾದವ ಕುಟುಂಬವು ತೆಗೆದುಕೊಂಡು ಹೋಗಿದ್ದಾರೆ ಎಂದು ನಂಬಲಾಗಿದೆ. ಮುಖ್ಯ ದೇವರನ್ನು ನಾರಾಯಣಾದ್ರಿ ಎಂದು ಪೂಜಿಸಲಾಗುತ್ತದೆ ಮತ್ತು ಲೋಹದ ವಿಗ್ರಹವನ್ನು ಯಾದವಾದ್ರಿ ಎಂದು ಆರಾಧಿಸಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ:  ಬೆಳಿಗ್ಗೆ 7:30 ರಿಂದ ಮಧ್ಯಾಹ್ನ1 ಗಂಟೆವರೆಗೆ, ಮತ್ತು  ಸಂಜೆ 4 ಗಂಟೆಯಿಂದ 6 ಗಂಟೆವರೆಗೆ, ನಂತರ ಸಂಜೆ 7 ರಿಂದ 8:30 ವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಮೈಸೂರಿನಿಂದ ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ.

ರೈಲಿನ ಮೂಲಕ: ಮಂಡ್ಯ ರೈಲ್ವೆ ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

1.ಸಂಸ್ಕೃತ ಸಂಶೋಧನಾ ಅಕಾಡೆಮಿ: ಮೇಲುಕೋಟೆಯಲ್ಲಿ ಸಂಸ್ಕೃತ ವೇದಗಳು ಮತ್ತು ಹಸ್ತಪ್ರತಿಗಳ ಸಂಗ್ರಹವನ್ನು ವೀಕ್ಷಿಸಲು ಅಕಾಡೆಮಿ ಆಫ್ ಸಂಸ್ಕೃತ ಸಂಶೋಧನಾ ಅಕಾಡೆಮಿಗೆ ಭೇಟಿ ನೀಡಬಹುದಾಗಿದೆ.

  1. ಯೋಗ ನರಸಿಂಹ ದೇವಾಲಯ: ಭಗವಾನ್ ಯೋಗ ನರಸಿಂಹ ದೇವಾಲಯವನ್ನು ಬೆಟ್ಟದ ತುದಿಯಲ್ಲಿ ನಿರ್ಮಾಣ ಮಾಡಲಾಗಿದೆ ಪ್ರವಾಸಿಗರು ಭೇಟಿ ಮಾಡಬಹುದಾಗಿದೆ.
  2. ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ: 1974 ರಲ್ಲಿ ಸ್ಥಾಪನೆ ಮಾಡಲಾದ ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯವು ತುಂಬಾ ಸುಂದರವಾಗಿದೆ.

4.ಶ್ರವಣಬೆಳಗೊಳ (ಹಾಸನ ಜಿಲ್ಲೆ)

ದೇವತೆ: ಭಗವಾನ್ ಬಾಹುಬಲಿ (ಜೈನ)

ದೇವಾಲಯದ ಬಗ್ಗೆ:

ಶ್ರವಣಬೆಳಗೊಳ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಮೀಪ ಇರುವ ಒಂದು ಧಾರ್ಮಿಕ ಕ್ಷೇತ್ರವಾಗಿದೆ, ಬೆಂಗಳೂರಿನಿಂದ ಸುಮಾರು 144 ಕಿಮೀ ದೂರದಲ್ಲಿ ಕಾಣಬಹುದಾಗಿದೆ. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಬಾಹುಬಲಿ ಮೂರ್ತಿಯು ಜೈನ ಧರ್ಮದ ಪ್ರಮುಖ ತೀರ್ಥಗಳಲ್ಲಿ ಒಂದಾಗಿರುವ ಪ್ರಸಿದ್ಧ ಸ್ಥಳವಾಗಿದೆ,  

 ಈ ಸ್ಥಳವು ತಲಕಾಡಿನ ಪಶ್ಚಿಮ ಗಂಗಾ ರಾಜವಂಶದ ಆಡಳಿತದ ಅವಧಿಯಲ್ಲಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ ತುಂಬಾ ಹೆಸರುವಾಸಿಯಾದ ಕ್ಷೇತ್ರವಾಗಿದೆ. ಚಂದ್ರಗುಪ್ತ ಮೌರ್ಯನು ಕ್ರಿ.ಪೂ 298 ರಲ್ಲಿ ಜೈನ ಸನ್ಯಾಸಿ ಜೀವನಶೈಲಿಯನ್ನು ಅನುಸರಿಸಿದ ನಂತರ ಶ್ರವಣಬೆಳಗೊಳದಲ್ಲಿರುವ ಚಂದ್ರಗಿರಿ ಬೆಟ್ಟದಲ್ಲಿ ನಿಧನರಾಗಿದ್ದಾರೆ ಎಂದು ನಂಬಲಾಗುತ್ತದೆ.

ಗೊಮ್ಮಟೇಶ್ವರನ ಮೂರ್ತಿಯು 58 ಅಡಿ ಎತ್ತರದ ಒಂದೆ ಶಿಲೆಯಲ್ಲಿ ನಿರ್ಮಾಣ ಮಾಡಿರುವ ಮೂರ್ತಿಯು ವಿಂದ್ಯಗಿರಿಯಲ್ಲಿ ನೋಡಬಹುದಾಗಿದೆ. ಈ ಪ್ರತಿಮೆಯನ್ನು ವಿಶ್ವದ ಅತಿದೊಡ್ಡ ಏಕಶಿಲಾ ಪ್ರತಿಮೆ ಇದಾಗಿದೆ. ಪ್ರತಿಮೆಯ ತಳದಲ್ಲಿ ಪ್ರಾಕೃತ ಭಾಷೆಯಲ್ಲಿ ಶಾಸನಗಳನ್ನೂ ರಚಿಸಿರುವುದು ಕಾಣಬಹುದಾಗಿದೆ, ಇದು ಕ್ರಿ.ಶ. 981 ರ ಹಿಂದಿನದು. ಈ ಶಾಸನವು ಈ ಕಾರ್ಯಕ್ಕೆ ಸಹಾಯ ಮಾಡಿದ ರಾಜ ಮತ್ತು ತನ್ನ ತಾಯಿಗೆ ಪ್ರತಿಮೆಯನ್ನು ನಿರ್ಮಿಸಿದ ಅವನ ಸೇನಾಧಿಪತಿ ಚಾವುಂಡರಾಯನ ಬಗ್ಗೆ ತಿಳಿಸುತ್ತದೆ. ಪ್ರತಿ ಹನ್ನೆರಡು ವರ್ಷಗಳಿಗೆ, ಸಾವಿರಾರು ಭಕ್ತರು ಇಲ್ಲಿಗೆ ಮಹಾಮಸ್ತಕಾಭಿಷೇಕವನ್ನು ನೋಡಲು ಬರುತ್ತಾರೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6:30 ರಿಂದ 11:30 ರವರೆಗೆ ಮತ್ತು ಮತ್ತೆ ಮಧ್ಯಾಹ್ನ 3:30 ರಿಂದ ಸಂಜೆ 6:30 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹಾಸನದಿಂದ ಶ್ರವಣಬೆಳಗೊಳಕ್ಕೆ ಬಸ್ಸುಗಳ ವ್ಯವಸ್ಥೆ ಕೂಡ ಇದೆ.

ರೈಲಿನ ಮೂಲಕ: ಶ್ರವಣಬೆಳಗೊಳದಲ್ಲಿ  ರೈಲು ನಿಲ್ದಾಣವನ್ನು ಹೊಂದಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮೈಸೂರು, ಸುಮಾರು 85 ಕಿಲೋಮೀಟರ್ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

1.ಯಗಚಿ ಅಣೆಕಟ್ಟು : ಶ್ರವಣಬೆಳಗೊಳ ದೇವಸ್ಥಾನದಿಂದ 30 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ. ಇದು ಹಾಸನ ಜಿಲ್ಲೆಯ ಬೇಲೂರಿನ ಬಳಿ ಇರುವ ಸ್ಥಳವಾಗಿದೆ.

  1. ವಿಂಧ್ಯಾಗಿರಿ ಬೆಟ್ಟ : ಇದು ಶ್ರವಣಬೆಳಗೊಳ ದೇವಸ್ಥಾನಕ್ಕೆ ಸಮೀಪವಿರುವ ಸ್ಥಳವಾಗಿದೆ. ಈ ಬೆಟ್ಟದಲ್ಲಿ ಸುಮಾರು 600 ಮೆಟ್ಟಿಲುಗಳ ನಿರ್ಮಾಣ ಮಾಡಲಾಗಿದೆ.

5.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (ದಕ್ಷಿಣ ಕನ್ನಡ)

ದೇವರು: ಸುಬ್ರಹ್ಮಣ್ಯ ದೇವರು

ದೇವಾಲಯದ ಬಗ್ಗೆ:

ಕುಕ್ಕೆ ಸುಬ್ರಹ್ಮಣ್ಯವು 5000 ವರ್ಷಗಳಷ್ಟು ಹಳೆಯದಾದ ಹಿಂದೂ ಧಾರ್ಮಿಕ ಕ್ಷೇತ್ರವಾಯಿದೆ, ಇದು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿರುವ ಸುಬ್ರಹ್ಮಣ್ಯ ಗ್ರಾಮದಲ್ಲಿ ಕುಮಾರಧಾರ ನದಿಯ ದಡದಲ್ಲಿದ್ದು ಸುತ್ತಲೂ ಕುಮಾರ ಪರ್ವತ್ತವಿದ್ದು ಪೂರ್ವ ದಿಕ್ಕಿನಲ್ಲಿ ದೇವಾಲಯವು ಆಧ್ಯಾತ್ಮಿಕ ಸ್ಥಳವಾಗಿ ಭಕ್ತರಿಗೆ ಕಾಣಸಿಗುತ್ತದೆ. ಕಾರ್ತಿಕೇಯನನ್ನು ದೇವಾಲಯದಲ್ಲಿ ಎಲ್ಲಾ ಸರ್ಪಗಳ ಅಧಿಪತಿ ಸುಬ್ರಹ್ಮಣ್ಯ ಎಂದು ಪೂಜಿಸಲಾಗುವ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಪ್ರೇಕ್ಷಣಿಯ ಸ್ಥಳವಾಗಿದೆ.

ದಂತಕಥೆಯ ಪ್ರಕಾರ: ಕುಕ್ಕೆ ಸುಬ್ರಹ್ಮಣ್ಯವು ಸಂತ ಪರಶುರಾಮರಿಂದ ನಿರ್ಮಾಣ ಮಾಡಿರುವ ಏಳು ಪವಿತ್ರ ಸ್ಥಳಗಳಲ್ಲಿ ಇದು ಕೂಡ ಮಹತ್ವದಾಗಿದೆ. ವಿಷ್ಣುವಿನ ವಾಹನವಾದ ಗರುಡನಿಂದ ರಕ್ಷಿಸಿಕೊಳ್ಳಲು ಸರ್ಪ ವಾಸುಕಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆಲೆಸಿದೆ ಎಂದು ಹೇಳಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಇರುವ ಕುಮಾರ ಪರ್ವತದಲ್ಲಿ ಕುಮಾರಸ್ವಾಮಿ ಮತ್ತು  ಗಣೇಶ ರಾಕ್ಷಸನಾದ ತಾರಕ ಮತ್ತು ಶೂರ ಪದ್ಮಾಸುರರನ್ನು ಸೋಲಿಸಿದರು ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 6.30 ರಿಂದ ಮಧ್ಯಾಹ್ನ1.30ರ ವರೆಗೆ  ಮತ್ತು ಮಧ್ಯಾಹ್ನ 3.30ರಿಂದ ರಾತ್ರಿ 8.30ರ ವರೆಗೆ ಭಕ್ತರು ದರ್ಶನವನ್ನು ಪಡೆಯಬಹುದಾಗಿದೆ.

ತಲುಪುವುದು ಹೇಗೆ:

ವಿಮಾನದ ಮೂಲಕ : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕುಕ್ಕೆ ಸುಬ್ರಹ್ಮಣ್ಯಕ್ಕೆ  ಕೇವಲ 112 ಕಿ.ಮೀ ದೂರದಲ್ಲಿದೆ.

ರಸ್ತೆಯ ಮೂಲಕ : ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬೇರೆ ಬೇರೆ ಬಸ್ಸುಗಳ ಸೌಲಭ್ಯವಿದೆ.

104 ಕಿ.ಮೀ ದೂರದಲ್ಲಿರುವ ಮಂಗಳೂರಿನ ಬಸ್ ಪ್ರಯಾಣಿಕರು ಕಡಬ ರಸ್ತೆಯ ಮೂಲಕ ಕರ್ನಾಟಕ ಸಾರಿಗೆಯಲ್ಲಿ  ಪ್ರಯಾಣಿಸುವಾಗ 3 ಗಂಟೆಗಳನ್ನು ತೆಗೆದುಕೊಳ್ಳಬಹುದು.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಆದಿ ಸುಬ್ರಹ್ಮಣ್ಯ:  0.25 ಕಿಮೀ ದೂರದಲ್ಲಿದೆ.

ಕಾಶಿಕಟ್ಟೆ ಗಣಪತಿ : ಸುಮಾರು 0.25 ಕಿ.ಮೀ ದೂರದಲ್ಲಿದೆ.

ಬಿಲದ್ವಾರ : ದೇವಾಲಯದಿಂದ 0.30 ಕಿ.ಮೀ ದೂರದಲ್ಲಿದೆ.

ವನದುರ್ಗಾ ದೇವಿ ದೇವಾಲಯ : ಸುಮಾರು 0.50 ಕಿ.ಮೀ ದೂರದಲ್ಲಿದೆ

ಕುಕ್ಕೆ ಶ್ರೀ ಅಭಯ ಮಹಾಗಣಪತಿ :ಸುಮಾರು 0.45 ಕಿ.ಮೀ ದೂರದಲ್ಲಿದೆ.

ಬಸವೇಶ್ವರ ದೇವಸ್ಥಾನ ಕುಲ್ಕುಂದ: 2 ಕಿ.ಮೀ ದೂರದಲ್ಲಿ

ಹರಿ ಹರೇಶ್ವರ ದೇವಸ್ಥಾನ : 8 ಕಿ.ಮೀ ದೂರದಲ್ಲಿದೆ.

6.ಧರ್ಮಸ್ಥಳ ಮಂಜುನಾಥ ದೇವಸ್ಥಾನ (ದಕ್ಷಿಣ ಕನ್ನಡ)

ದೇವತೆ: ಭಗವಾನ್ ಶಿವ (ಮಂಜುನಾಥ) ಮತ್ತು ಧರ್ಮ ಸಂಪ್ರದಾಯಗಳು

ದೇವಾಲಯದ ಬಗ್ಗೆ :

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೆಲೆಸಿರುವ ಮಂಜುನಾಥಸ್ವಾಮಿ ಪ್ರಸಿದ್ಧ ದೇವರಾಗಿದೆ. ಶ್ರವಣಬೆಳಗೊಳದಂತೆ ಇರುವ ಬಾಹುಬಲಿಯ ಪ್ರತಿಮೆ ಕೂಡ ಇಲ್ಲಿ ಕಾಣಬಹುದಾಗಿದೆ. ಸುಮಾರು ಏಳು ನೂರುವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಧಾರ್ಮಿಕ ದೇವಾಲಯವಾಗಿದ್ದು ಇದು ಪವಿತ್ರ ನೇತ್ರಾವತಿ ನದಿಯದಡದಲ್ಲಿ ಇರುವ ದೇವಾಲಯವಾಗಿದೆ. ಇಲ್ಲಿಯ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ತಂದು ಉಡುಪಿಯ ಶ್ರೀ ವಾದಿರಾಜರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ನಂಬಲಾಗುತ್ತದೆ.

ನವಕಲಶ ಅಭಿಷೇಕ: ಧರ್ಮಸ್ಥಳ ದೇವಸ್ಥಾನದಲ್ಲಿ ನಂತರದ ಅಭಿಷೇಕವು ಮಧ್ಯಾಹ್ನ 12:30 ಕ್ಕೆನಡೆಯುತ್ತದೆ. ಇದು ಒಂದು ಪವಿತ್ರ ಅಭಿಷೇಕವಾಗಿದ್ದು ಈ ಸಮಯದಲ್ಲಿ ಅತಿ ಹೆಚ್ಚಿನ ಭಕ್ತರು ಭೇಟಿನೀಡುತ್ತಾರೆ, ಭಕ್ತರು ದೇವಾಲಯದಲ್ಲಿ ದೇವರ ದರ್ಶನ ಮಾಡಲು ಮತ್ತು ಮಂಜುನಾಥನ ಆಶೀರ್ವಾದವನ್ನು ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಭೇಟಿ ನೀಡಲು ಉತ್ತಮ ಸಮಯ: ಈ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ನವೆಂಬರ್ – ಫೆಬ್ರವರಿ ತಿಂಗಳಲ್ಲಿ ಭೇಟಿ ಮಾಡಲು ಉತ್ತಮ ಸ್ಥಳವಾಗಿದೆ.

ತಲುಪುವುದು ಹೇಗೆ:

ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 82 ಕಿ.ಮೀ. ದೂರದಲ್ಲಿದೆ.

ರೈಲಿನ ಮೂಲಕ: ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 72 ಕಿ.ಮೀ. ದೂರದಲ್ಲಿದೆ.

ರಸ್ತೆಯ ಮೂಲಕ: ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 74 ಕಿ.ಮೀ. ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

* ಶ್ರೀ ಸೌತಡ್ಕ ಮಹಾಗಣಪತಿ ದೇವಾಲಯವು ಧರ್ಮಸ್ಥಳದಿಂದ ಕೇವಲ 17 ಕಿ.ಮೀ ದೂರದಲ್ಲಿರುವ ಧಾರ್ಮಿಕ ಸ್ಥಳವಾಗಿದೆ.

* ಸೂರ್ಯ ಸದಾಶಿವ ರುದ್ರ ಪವಿತ್ರ ದೇವಾಲಯವು ಧರ್ಮಸ್ಥಳದಿಂದ ಕೇವಲ 13 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದಾಗಿದೆ.  

* ಶ್ರೀ ವೈದ್ಯನಾಥೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ಕೊಕ್ಕಡ. ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡ ಕ್ಷೇತ್ರ. ಇದು ಧರ್ಮಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿದೆ.

* ಕನ್ಯಾಡಿ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 4 ಕಿ.ಮೀ ಅತಿ ಸಮೀಪದ ಸ್ಥಳವಾಗಿದೆ.

* ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಧರ್ಮಸ್ಥಳದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಒಂದು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ.

7. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (ಉಡುಪಿ ಜಿಲ್ಲೆ)

ದೇವತೆ: ದೇವಿ ಮೂಕಾಂಬಿಕಾ (ಶಕ್ತಿ)

ಹೆಸರುವಾಸಿಯಾಗಿದೆ: ಪ್ರತಿಜ್ಞೆ ನೆರವೇರಿಸುವ ಶಕ್ತಿಗಳು ಮತ್ತು ವೈದಿಕ ಆಚರಣೆಗಳು.

ದೇವಾಲಯದ ಬಗ್ಗೆ :

ಮೂಕಾಂಬಿಕಾ ದೇವಿ ದೇವಾಲಯವು, ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಭಕ್ತರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು  ಹಚ್ಚ ಹಸಿರಿನಿಂದ  ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟವು ನೋಡುಗರ ಗಮನವನ್ನು ಸೆಳೆಯುತ್ತವೆ, ಮಂಗಳೂರಿನಿಂದ ೧೪೭ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪ್ರತಿವರ್ಷವೂ ಸಾವಿರಾರು ಯಾತ್ರಾರ್ಥಿಗಳನ್ನು ತನ್ನೆಡೆ ಆಕರ್ಷಿಸುತ್ತದೆ.

ಸುಪರ್ಣ ಎಂಬ ಗರುಡ ನದಿಯ ಪಕ್ಕದಲ್ಲಿ ತಪಸ್ಸು ಆಚರಿಸಿ ಮೋಕ್ಷವನ್ನು ಪಡೆಯಿತು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ಹೆಸರು ಸೌಪರ್ಣಿಕಾ ನದಿಗೆ ಬಂದಿದೆ. ನದಿಯು ಹರಿದು ಬರುವಾಗ 64 ಅನೇಕ ರೀತಿಯ ಔಷಧೀಯ ಸಸ್ಯಗಳು ಮತ್ತು ಬೇರುಗಳ ಗುಣಗಳನ್ನು ತೆಗೆದುಕೊಂಡು ಬರುತ್ತದೆ, ಆದ್ದರಿಂದ ಈ ನದಿಯಲ್ಲಿ ಸ್ನಾನ ಮಾಡಿದವರ ರೋಗಗಳು ಈ ನದಿ ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ:

ಬೆಳಿಗ್ಗೆ 5:00 ಗಂಟೆಯಿಂದ 7:30 ರವರೆಗೆ ಮತ್ತು ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಅವಕಾಶವಿರುತ್ತದೆ.

ಮಧ್ಯಾಹ್ನದ ಸಮಯ: ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 5:00 ರವರೆಗೆ ಅವಕಾಶವಿರುತ್ತದೆ.

ಸಂಜೆ ಸಮಯ: ಸಂಜೆ 5:00 ಗಂಟೆಯಿಂದ ರಾತ್ರಿ 9:00 ರವರೆಗೆ ಅವಕಾಶವಿರುತ್ತದೆ.

ತಲುಪುವುದು ಹೇಗೆ?

ರಸ್ತೆಯ ಮೂಲಕ: ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತವೆ.

ರೈಲು ಮೂಲಕ: ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್‌‌ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿಸನಿಹದ ರೈಲ್ವೆ ನಿಲ್ದಾಣವಾಗಿವೆ ಈ ಮೂಲಕ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಬಹುದಾಗಿದೆ.

ಕೊಲ್ಲೂರಿನ ಸುತ್ತಮುತ್ತಲಿನ ಪ್ರಕೃತಿ ನೋಟ: ನಿತ್ಯಹರಿದ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಹಳ್ಳಿಗಳಿಂದ ಕಾಣಸಿಗುತ್ತದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳೂ ಸೇರಿಕೊಂಡು ದೇವಸ್ಥಾನದಿಂದ ಒಂದು ಕಂಗೊಳಿಸುವ ಪ್ರಕೃತಿಯನ್ನು ವೀಕ್ಷಿಸಬಹುದಾಗಿದೆ.

8.ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ (ದಕ್ಷಿಣ ಕನ್ನಡ)

ದೇವತೆ: ದುರ್ಗಾ ಪರಮೇಶ್ವರಿ ದೇವಿ

ಸ್ಥಳ: ನಂದಿನಿ ನದಿಯಲ್ಲಿರುವ ದ್ವೀಪದಲ್ಲಿದೆ.

ದೇವಾಲಯದ ಬಗ್ಗೆ :

ಕಟೀಲು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವ ಒಂದು ದೇವಾಲಯ ಸ್ಥಳವಾಗಿದೆ. ಕಟೀಲು ಪ್ರದೇಶವನ್ನು ಭಾರತದ ಅತ್ಯಂತ ಪವಿತ್ರ ಹಿಂದೂ ದೇಗುಲಗಳ ಪಟ್ಟಣಗಳಲ್ಲಿ ಒಂದಾಗಿದೆ. ಈ ಸ್ಥಳವು ನಂದಿನಿ ನದಿಯ ದಡದಲ್ಲಿ ಕಾಣುವ ದೇವಾಲಯವಾಗಿದೆ. ಈ ಸ್ಥಳವು ಮಂಗಳೂರಿನಿಂದ ಸುಮಾರು 20.6 ಕಿಲೋಮೀಟರ್ ಅಂತರದಲ್ಲಿದೆ .ಕಟೀಲು ಉಡುಪಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ.

ವಾರ್ಷಿಕ ಉತ್ಸವ : ಮೇಷ ಸಂಕ್ರಮಣ ದಿನದ ಹಿಂದಿನ ರಾತ್ರಿ ಇದನ್ನು ಆಚರಿಸಲಾಗುತ್ತದೆ, ನಂತರ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಈ ಉತ್ಸವವು ಏಪ್ರಿಲ್ ತಿಂಗಳಲ್ಲಿ ಆಚರಣೆ ಮಾಡಲಾಗುತ್ತದೆ ಮತ್ತು ಪ್ರತಿ ನಿತ್ಯವೂ ವಿಶಿಷ್ಟ ರೀತಿಯ ಆಚರಣೆಗಳನ್ನು 8 ದಿನಗಳವರೆಗೆ ನಡೆಸಲಾಗುತ್ತದೆ.

ಲಕ್ಷ ದೀಪೋತ್ಸವ : ಈ ಉತ್ಸವವನ್ನು ಕಾರ್ತಿಕ ಬಹುಳ ಪಂಚಮಿಯ ದಿನದಂದು ಆಚರಣೆ ಮಾಡಲಾಗುತ್ತದೆ.

ಶರನ್ನವರಾತ್ರಿ : ಆಶ್ವೀಜ ಶುದ್ಧ ಪ್ರತಿಪದದಂದು ಪ್ರಾರಂಭವಾಗುವ ಈ ಆಚರಣೆಯನ್ನು ಒಂಬತ್ತು ದಿನಗಳಕಾಲ ನಡೆಸಲಾಗುತ್ತದೆ. ಈ ಸಮಯದಲ್ಲಿ ರಂಗಪೂಜಾ ಸೇವೆಗಳನ್ನು ನಡೆಸಲಾಗುತ್ತದೆ. ನವರಾತ್ರಿ ಉತ್ಸವದ ಸಮಯದಲ್ಲಿ ಲಲಿತ ಪಂಚಮಿ, ಮಹಾ ನವಮಿ ಮತ್ತು ವಿಜಯ ದಶಮಿ ವಿಶಿಷ್ಟ ದಿನಗಳಾಗಿವೆ. ಯಾವುದೇ ರೀತಿಯ ಕುಟುಂಬದಲ್ಲಿ ಕಲಹ ಮತ್ತು ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಈ ದೇವಾಲಯದಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಮತ್ತೆ ಹರಕೆಯನ್ನು ಹೇಳಿಕೊಂಡರೆ ಈಡೇರುತ್ತವೆ ಎಂಬ ನಂಬಿಕೆ ಇದೆ.

ತಲುಪುವುದು ಹೇಗೆ:

ವಿಮಾನದ ಮೂಲಕ : ಮಂಗಳೂರು ನಗರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಬಜ್ಪೆ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ.

ರೈಲು ಮೂಲಕ : ಮುಂಬೈನಿಂದ ಕೊಂಕಣ ರೈಲುಗಳು, ಕೇರಳ-ಮಂಗಳೂರು ರೈಲುಗಳು ಮತ್ತು ಬೆಂಗಳೂರು-ಹಾಸನ-ಮಂಗಳೂರು ರೈಲುಗಳು ಇಲ್ಲಿನ ಪ್ರಮುಖ ರೈಲು ಸೌಲಭ್ಯಗಳಾಗಿವೆ.

ರಸ್ತೆ ಮೂಲಕ : ಜಿಲ್ಲೆಯನ್ನು ರಾಷ್ಟ್ರೀಯ ಹೆದ್ದಾರಿ 48 ಮತ್ತು ರಾಷ್ಟ್ರೀಯ ಹೆದ್ದಾರಿ 17 ಮೂಲಕ ಹಾದುಹೋಗುತ್ತದೆ ಮತ್ತು ಈ ಹೆದ್ದಾರಿಗಳು ದೇಶದ ಇತರ ಪ್ರದೇಶಗಳನ್ನು ಸಂಪರ್ಕ ಹೊಂದಿವೆ.

9.ಉಡುಪಿ ಶ್ರೀ ಕೃಷ್ಣ ಮಠ (ಉಡುಪಿ ಜಿಲ್ಲೆ)

ದೇವತೆ: ಶ್ರೀಕೃಷ್ಣ

ದೇವಾಲಯದ ಬಗ್ಗೆ:

ಉಡುಪಿ ಶ್ರೀ ಕೃಷ್ಣ ದೇವಸ್ಥಾನವು ಕರ್ನಾಟಕದ ಉಡುಪಿ ನಗರದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಮತ್ತು ದ್ವೈತ ಮಠಕ್ಕೆ ಸೇರಿದ ಪ್ರಸಿದ್ಧ ಪುರಾತನ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು  ದೈನಂದಿನ ಭಕ್ತಿ ಮತ್ತುಆಧ್ಯಾತ್ಮಿಕ  ಪವಿತ್ರ ಪ್ರದೇಶವಾಗಿದೆ. ಶ್ರೀ ಕೃಷ್ಣ ದೇವಾಲಯದ ಸುತ್ತಲೂ ಹಲವಾರು ಭಕ್ತಿ ಪ್ರಧಾನ ದೇವಾಲಯಗಳಿವೆ, ಅವುಗಳೆಂದರೆ ಸಾವಿರ ವರ್ಷಗಳಿಗೂ ಹಳೆಯದಾದ ಉಡುಪಿ ಅನಂತೇಶ್ವರ ದೇವಾಲಯವು ಬಹಳ ಮಹತ್ವಪೂರ್ಣ ದೇಗುಲವಾಗಿದೆ.

ಕೃಷ್ಣ ಮಠವನ್ನು ೧೩ನೇ  ಶತಮಾನದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದರು. ಅವರು ದ್ವೈತ ವೇದಾಂತ ಪಂಥದ ಸ್ಥಾಪಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಮಧ್ವಾಚಾರ್ಯರು ಗೋಪಿಚಂದನದ ದೊಡ್ಡ ಉಂಡೆಯಲ್ಲಿ ಕೃಷ್ಣನ ವಿಗ್ರಹದ ದರ್ಶನವಾಯಿತು ಎಂದು ಹೇಳಲಾಗುತ್ತದೆ.  ಮಧ್ವಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದಂತೆ , ವಿಗ್ರಹವನ್ನು ಪ್ರಾರಂಭದಲ್ಲಿ  ಪೂರ್ವ ದಿಕ್ಕಿನಲ್ಲಿ ಗೋಚರಿಸುವಂತೆ ಇರಿಸಲಾಗಿತ್ತು. ಕನಕದಾಸರು ತೋರಿಸಿದ ತೀವ್ರ ಭಕ್ತಿಗೆ ಒಲಿದ ಶ್ರೀ ಕೃಷ್ಣನು ಪಶ್ಚಿಮಕ್ಕೆ ಮುಖ ಮಾಡಿ ದರ್ಶನವನ್ನು ನೀಡಿದನೆಂದು ನಂಬಿಕೆ ಇದೆ.

ಕೃಷ್ಣ ಮಠಗಳ ದೈನಂದಿನ ಸೇವೆಗಳು ಮತ್ತು ಆಡಳಿತ ಚಟುವಟಿಕೆಯನ್ನು ಅಷ್ಟ ಮಠಗಳು ನಿರ್ವಹಿಸುತ್ತಾ ಬಂದಿವೆ. ಪ್ರತಿಯೊಂದು ಅಷ್ಟ ಮಠಗಳು ಎರಡು ವರ್ಷಗಳ ಕಾಲ ದೇವಾಲಯ ನಿರ್ವಹಣಾ ಕಾರ್ಯಗಳನ್ನು ಚಕ್ರೀಯ ಕ್ರಮದ ಅನುಸಾರ ನಿರ್ವಹಿಸುತ್ತಾ ಬಂದಿವೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಕೆಎಸ್‌ಆರ್‌ಟಿಸಿ ಬಸ್‌ಗಳು ಉಡುಪಿಯಿಂದ ಬೆಂಗಳೂರು ಮತ್ತು ಮಂಗಳೂರಿನಂತಹ ಪ್ರದೇಶಗಳಿಗೆ ಸಂಪರ್ಕ ಸೌಲಭ್ಯವನ್ನು ಹೊಂದಿವೆ.

ರೈಲಿನ ಮೂಲಕ:  ಉಡುಪಿ ತನ್ನದೇ ಆದ ರೈಲು ನಿಲ್ದಾಣ ಸೌಲಭ್ಯವನ್ನು ಹೊಂದಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ , ಉಡುಪಿಯಿಂದ ಸುಮಾರು 60 ಕಿ.ಮೀ ದೂರದಲ್ಲಿ ಲಭ್ಯವಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಅನಂತೇಶ್ವರ ದೇವಸ್ಥಾನ : ಶ್ರೀ ಕೃಷ್ಣ ದೇವಸ್ಥಾನದ ಪಕ್ಕದಲ್ಲಿದ್ದು, ಶಿವನಿಗೆ ಅರ್ಪಿತವಾಗಿದ್ದು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ಚಂದ್ರಮೌಳೇಶ್ವರ ದೇವಸ್ಥಾನ : ಇದೊಂದು ಧಾರ್ಮಿಕ ದೇಗುಲವಾಗಿದ್ದು ವಿಶೇಷ ಮಹತ್ವವನ್ನು ಹೊಂದಿರುವ ಪ್ರಾಚೀನ ದೇವಸ್ಥಾನ.

10.ತಲಕಾಡು ವೈದ್ಯನಾಥೇಶ್ವರ ದೇವಸ್ಥಾನ (ಮೈಸೂರು ಜಿಲ್ಲೆ)

ದೇವತೆ: ಶಿವ

ಪ್ರಸಿದ್ಧಿ: ನಿಗೂಢ ಮರಳಿನಿಂದ ಆವೃತವಾದ ದೇವಾಲಯಗಳು ಮತ್ತುತಲಕಾಡಿನ ಶಾಪ“.

ಮೈಸೂರಿನ ತಲಕಾಡಿನಲ್ಲಿರುವ ವೈದ್ಯನಾಥೇಶ್ವರ ದೇವಾಲಯವು ವಾಸ್ತುಶಿಲ್ಪ ಬಹಳ ಅದ್ಭುತ ರಚನೆಯಾಗಿದೆ. ಶಿವನಿಗೆ ಸಮರ್ಪಿತವಾದ ದೇವಾಲಯ ಇದಾಗಿದ್ದು ಧಾರ್ಮಿಕ ಕ್ಷೇತ್ರವಾಗಿದೆ. ಮೈಸೂರಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದು ಕೂಡ ಒಂದಾಗಿದೆ ವೈದ್ಯನಾಥೇಶ್ವರನ ವಾಸ್ತುಶಿಲ್ಪವು ದ್ರಾವಿಡ ಮತ್ತು ವಿಜಯನಗರ ಶೈಲಿಗಳ ಮಿಶ್ರಣವಾಗಿದೆ  ಏಕೆಂದರೆ ಇದನ್ನು 14 ನೇ ಶತಮಾನದಲ್ಲಿ ಚೋಳ ರಾಜರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ತಲಕಾಡು ಎಂಬುದು ಕಾವೇರಿ ನದಿಯ ಎಡ ದಂಡೆಯ ಮೇಲಿರುವ ಪ್ರದೇಶವಾಗಿದೆ, ಇದು ಕರ್ನಾಟಕದ ಮೈಸೂರಿನಿಂದ 45 ಕಿಮೀ ದೂರದಲ್ಲೂ ಮತ್ತು ಬೆಂಗಳೂರಿನಿಂದ 133 ಕಿಮೀ ದೂರದಲ್ಲಿದೆ. ಇದು 30 ಕ್ಕೂ ಹೆಚ್ಚು ದೇವಾಲಯಗಳಿರುವ ಪ್ರದೇಶವಾಗಿದೆ, ಅವುಗಳಲ್ಲಿ ಬಹುತೇಕ ದೇವಾಲಯಗಳು ಮರಳಿನಲ್ಲಿ ಹೂತುಹೋಗಿರುವುದನ್ನು ಕಾಣಬಹುದಾಗಿದೆ . ಪೂರ್ವಕ್ಕೆ ಹರಿಯುವ ಕಾವೇರಿ ನದಿಯು ದಡದಲ್ಲಿರುವ ಮರಳು ಎಲ್ಲ ಪ್ರದೇಶದಲ್ಲಿ ಹರಡಿಕೊಂಡಿದೆ, ತನ್ನ ಪಥವನ್ನು ಬದಲಾಯಿಸುವ ದೇವಾಲಯಗಳು ಹಿಂದೂಗಳಿಗೆ ವಿಶೇಷ ಪ್ರವಾಸಿ ತಾಣವಾಗಿವೆ.

ರಾಜ ಒಡೆಯರ್ ರಾಣಿಯ ಆಭರಣಗಳನ್ನು ಪಡೆಯ ಬೇಕು ಅಂದುಕೊಂಡಿದ್ದರು ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಅವರು ತಮ್ಮದೆ ಆದ ಸೈನ್ಯವನ್ನು ರಚಿಸಿ ರಾಣಿಯ ವಿರುದ್ಧ ಸಂಚು ಮಾಡಿದ್ದರು. ರಾಣಿ ಅಲಮೇಲಮ್ಮ ಕಾವೇರಿಯ ನದಿ ದಡಕ್ಕೆ ಹೋಗಿ, ಆ ಆಭರಣಗಳನ್ನು ಎಸೆದು, ಮಾಲಂಗಿಯ ನದಿ ಪ್ರದೇಶದಲ್ಲಿ ಮುಳುಗಿ, ಆ ಸಮಯದಲ್ಲಿ  ಸಮಯದಲ್ಲಿ ಮೂರು ಶಾಪವನ್ನು ನೀಡಿದರು: “ತಲಕಾಡು ಮರಳಾಗಲಿ; ಮಾಲಂಗಿ ಸುಳಿಯಾಗಲಿ; ಮೈಸೂರು ರಾಜರು ಉತ್ತರಾಧಿಕಾರಿಗಳು  ಇರದೇ  ವಿಫಲರಾಗಲಿ.” ಈಗಲೂ ಶಾಪದ ಪರಿಣಾಮ ಬೀರುತ್ತಲೇ ಇದೆ.

ಭೇಟಿ ನೀಡಲು ಉತ್ತಮ ಸಮಯ:

ತಲಕಾಡು ದೇವಸ್ಥಾನದ ದರ್ಶನ ಸಮಯ ನಿಗದಿಯಾಗಿಲ್ಲ, ಆದರೆ ಪಂಚಲಿಂಗ ದೇವಸ್ಥಾನಗಳು ಸಾಮಾನ್ಯವಾಗಿ ಬೆಳಿಗ್ಗೆ 8 ಗಂಟೆಯಿಂದ  ಸಂಜೆ 6 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ಮೈಸೂರಿನ ತಲಕಾಡು ದೇಗುಲಗಳಿಗೆ ಭೇಟಿ ನೀಡಲು ಚಳಿಗಾಲವು ಉತ್ತಮ ಸಮಯ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ತಲಕಾಡಿಗೆ ಭೇಟಿ ನೀಡಲು ಮೈಸೂರಿನಿಂದ ಬಸ್ ಸೌಲಭ್ಯವಿದೆ. ಮೈಸೂರಿನ ಕಂಪನಿಗಳಿಂದ ಪೂರ್ಣ ದಿನದ ಕ್ಯಾಬ್ ಬುಕ್ ಮಾಡುವ ಮೂಲಕ ತಲಕಾಡಿಗೆ ಹೋಗಲು ಉತ್ತಮ ಮಾರ್ಗವಾಗಿದೆ.

ರೈಲಿನ ಮೂಲಕ:  ಹತ್ತಿರದ ರೈಲು ನಿಲ್ದಾಣ ಮೈಸೂರಿನಲ್ಲಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮೈಸೂರಿನಲ್ಲಿದೆ.

Leave a Comment

Your email address will not be published. Required fields are marked *

Scroll to Top