ಕರ್ನಾಟಕದ ಪ್ರಮುಖ 10 ನದಿ ತೀರದ ದೇವಾಲಯಗಳು

  1. ಶೃಂಗೇರಿ ಶಾರದ ಪೀಠಚಿಕ್ಕಮಗಳೂರು

ನದಿ: ತುಂಗಾ ನದಿ

ಶ್ರೀ ಶೃಂಗೇರಿ ಮಠವು ಶೃಂಗೇರಿಯಲ್ಲಿ ತುಂಗಾ ನದಿಯ ದಡದಲ್ಲಿದೆ. ಮಠ ಸಂಕೀರ್ಣವು ನದಿಯ ಉತ್ತರ ಮತ್ತು ದಕ್ಷಿಣ ಎರಡೂ ದಡಗಳಲ್ಲಿ ದೇವಾಲಯಗಳನ್ನು ಒಳಗೊಂಡಿದೆ. ತುಂಗಾ ನದಿಯ ಉತ್ತರ ದಡದಲ್ಲಿರುವ ಮೂರು ಪ್ರಸಿದ್ಧ ದೇಗುಲಗಳು ಪೀಠದ ಪ್ರಧಾನ ದೇವತೆ ಮತ್ತು ಆತ್ಮ -ವಿದ್ಯಾ – ಶ್ರೀ ಶಾರದ, ಶ್ರೀ ಆದಿ ಶಂಕರ, ಮತ್ತು ಜಗದ್ಗುರು ಶ್ರೀ ವಿದ್ಯಾಶಂಕರ ತೀರ್ಥ ಇದೆ. ದಕ್ಷಿಣ ದಂಡೆಯು ಆಳುವ ಮಠಾಧೀಶರ ನಿವಾಸ, ಹಿಂದಿನ ಮಠಾಧೀಶರ ಅಧಿಷ್ಠಾನ ದೇವಾಲಯಗಳು ಮತ್ತು ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಥಶಾಲೆಗೆ ಕಂಡುಬರುತ್ತದೆ.

ಶೃಂಗೇರಿ ಪೀಠವನ್ನು ಜಗದ್ಗುರು ಶಂಕರಾಚಾರ್ಯರ ಪಂಥಕ್ಕೆ ಸೇರಿದ ತಪಸ್ವಿಗಳಾದ ಮಠಾಧೀಶರು ಅಧಿಕಾರವನ್ನು ವಹಿಸುತ್ತಾರೆ. ಶೃಂಗೇರಿ ಪೀಠದ ಮೊದಲ ಮಠಾಧೀಶರು ಶ್ರೀ ಆದಿ ಶಂಕರರ ಹಿರಿಯ ಶಿಷ್ಯರಾದ  ಶ್ರೀ ಸುರೇಶ್ವರಾಚಾರ್ಯರು ನೇತೃತ್ವವನ್ನು ವಹಿಸಿದ್ದರು, ವೇದಾಂತ ಮಾನಸೊಲ್ಲಾಸ ಮತ್ತು ನೈಷ್ಕರ್ಮ್ಯ ಸಿದ್ಧಿಗಳ ಬಗೆಗಿನ  ತಮ್ಮ ಗ್ರಂಥಗಳಿಗೆ ಪ್ರಸಿದ್ಧರಾಗಿದ್ದಾರೆ. ಈಗಿನ ಮಠಾಧೀಶರಾದ ಶ್ರೀ ಭಾರತೀ ತೀರ್ಥ ಸ್ವಾಮಿನ್ ಅವರು ಅಂದಿನಿಂದ ಮಠಾಧೀಶರ ಆಧ್ಯಾತ್ಮಿಕ ಅಧಿಕಾರಾವಧಿಯಲ್ಲಿ 36 ನೇ ಜಗದ್ಗುರುಗಳಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ.

ಶ್ರೀ ಶಾರದಾ ಪೀಠವು ಶೃಂಗೇರಿಯ ಉಡುಪಿಯಿಂದ ಪೂರ್ವಕ್ಕೆ ಸುಮಾರು 85 ಕಿಲೋಮೀಟರ್ ದೂರದಲ್ಲು ಮತ್ತು ಪಶ್ಚಿಮದಲ್ಲಿ  ಮಂಗಳೂರಿನಿಂದ ಈಶಾನ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರವಾಗುತ್ತದೆ ಮತ್ತು ಬೆಂಗಳೂರಿನಿಂದ ಪಶ್ಚಿಮ-ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರವಾಗುತ್ತದೆ. 

ಶೃಂಗೇರಿ ಶಾರದಾ ಪೀಠದ ಇತಿಹಾಸ:

ಅದ್ವೈತ ವೇದಾಂತದ ಪ್ರಸಿದ್ಧ  ಪ್ರತಿಪಾದಕರಾದ ಶ್ರೀ ಆದಿ ಶಂಕರಾಚಾರ್ಯರು ಸನಾತನ ಧರ್ಮ ಮತ್ತು ಅದ್ವೈತ ವೇದಾಂತವನ್ನು ಪ್ರಚಾರ ಮಾಡಲು ಭಾರತದಲ್ಲಿ ನಾಲ್ಕು ಪೀಠಗಳನ್ನು  ಸ್ಥಾಪಿಸಿದರು. ಅವುಗಳಲ್ಲಿ ಪ್ರಮುಖವಾದವು  ದಕ್ಷಿಣದಲ್ಲಿ ಕರ್ನಾಟಕದಲ್ಲಿ ಶೃಂಗೇರಿ ಶ್ರೀ ಶಾರದ ಪೀಠವಾಗಿದೆ ,  ಗುಜರಾತಿನ ಪಶ್ಚಿಮದಲ್ಲಿ ದ್ವಾರಕಾ ಶಾರದ ಪೀಠವಾಗಿದೆ , ಒಡಿಶಾದ ಪೂರ್ವದಲ್ಲಿ ಪುರಿ ಗೋವರ್ಧನ್ ಪೀಠ ಮತ್ತು  ಉತ್ತರಖಂಡದ ಉತ್ತರದಲ್ಲಿ ಬದ್ರಿ ಜ್ಯೋತಿಷ್ಪೀಠಂ ಆಗಿದೆ.

ಭೇಟಿ ನೀಡಲು ಉತ್ತಮ ಸಮಯ: ಶಾರದಾಂಬಾ ದೇವಾಲಯ

ಸಾಮಾನ್ಯ ದಿನಗಳು ಬೆಳಿಗ್ಗೆ 6  ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. 

ಸಂಜೆ 4 ಗಂಟೆಯಿಂದ ರಾತ್ರಿ ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಮಹಾಮಂಗಳಾರತಿ:

ಬೆಳಗ್ಗೆ 10:00 ಗಂಟೆಗೆ ನಡೆಯುತ್ತದೆ. 

ಮಧ್ಯಾಹ್ನ 12:00 ಗಂಟೆಗೆ ನಡೆಯುತ್ತದೆ. 

ಸಂಜೆ 7:30 ಗಂಟೆಗೆ ನಡೆಯುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಶೃಂಗೇರಿಗೆ ಬೆಂಗಳೂರಿನಿಂದ ಬಸ್ ವ್ಯವಸ್ಥೆ ದೊರೆಯುತ್ತದೆ. ಶಿವಮೊಗ್ಗ ಮತ್ತು ಮಂಗಳೂರಿನಿಂದ ಕೂಡ ಬಸ್ಸುಗಳ ಸೌಲಭ್ಯವಿದೆ.

ರೈಲಿನ ಮೂಲಕ: ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣ (90 ಕಿ.ಮೀ)ದ ವ್ಯವಸ್ಥೆ ಇದೆ.

ವಿಮಾನದ ಮೂಲಕ: ಬೆಂಗಳೂರಿನಿಂದ 320 ಕಿ.ಮೀ ಮತ್ತು ಮಂಗಳೂರಿನಿಂದ 111 ಕಿ.ಮೀ ದೂರದಲ್ಲಿದೆ.ಶಿವಮೊಗ್ಗದಲ್ಲೂ ಕೂಡ ವಿಮಾನ ನಿಲ್ದಾಣದ ಸೌಲಭ್ಯವಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಆಗುಂಬೆ (30 ಕಿ.ಮೀ) ದೂರದಲ್ಲಿದೆ. 

ಸಿರಿಮನೆ ಜಲಪಾತ (12 ಕಿ.ಮೀ) ದೂರದಲ್ಲಿದೆ. 

ಕುಂದಾದ್ರಿ (28 ಕಿ.ಮೀ) ದೂರದಲ್ಲಿದೆ. 

ಕವಿಶೈಲ (40 ಕಿ.ಮೀ) ದೂರದಲ್ಲಿದೆ. 

ಹೊರನಾಡು (54 ಕಿ.ಮೀ) ದೂರದಲ್ಲಿದೆ. 

ಶೃಂಗೇರಿಯ ವೀಕ್ಷಣೆಯ ಜೊತೆಗೆ ಭೇಟಿ ನೀಡಬಹುದಾದ ಮತ್ತಿತ್ತರ ಪ್ರಸಿದ್ಧ ಸ್ಥಳಗಳಾಗಿವೆ.

  1. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಉಡುಪಿ

ನದಿ: ಸೌಪರ್ಣಿಕಾ ನದಿ

ದೇವಾಲಯದ ಬಗ್ಗೆ:

ಮೂಕಾಂಬಿಕೆಯು ಆದಿಪರ ಶಕ್ತಿ ಮತ್ತು ಪರಬ್ರಹ್ಮರ ಶಕ್ತಿಯಾಗಿದ್ದು, ಲಿಂಗವು ಅದರ ಎಡಭಾಗದಲ್ಲಿ ಮಹಾ ಕಾಳಿ, ಮಹಾ ಲಕ್ಷ್ಮಿ ಮತ್ತು ಮಹಾ ಸರಸ್ವತಿ” ಯಲ್ಲಿ ರೂಪವಾಗಿದ್ದರಿಂದ. ಈ ದೇವಸ್ಥಾನವು 108 ದುರ್ಗಾಲಯಗಳು ಮತ್ತು 108 ಶಿವಾಲಯಗಳ ವರ್ಗವಾಗಿರುವುದರಿಂದ ಇದು ಬಹಳ ವಿಶೇಷವಾಗಿರುವ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವು ಸೌಪರ್ಣಿಕಾ ನದಿಯ ದಕ್ಷಿಣ ದಂಡೆಯಲ್ಲಿರುವ ಕೊಡಚಾದ್ರಿ ಬೆಟ್ಟಗಳ ಪ್ರದೇಶದಲ್ಲಿ ಕಾಣಬಹುದಾಗಿದೆ

.

ಸೌಪರ್ಣಿಕಾ ನದಿ ಕರ್ನಾಟಕದ ಬೈಂದೂರು ತಾಲ್ಲೂಕಿನಲ್ಲಿ  ಹರಿಯುವ ಪವಿತ್ರ ನದಿಯಾಗಿದೆ . ಇದು ವಾರಾಹಿ ನದಿ , ಕುಬ್ಜಾ ನದಿಯೊಂದಿಗೆ ಸೇರಿ ಅರೇಬಿಯನ್ ಸಮುದ್ರಕ್ಕೆ ಹರಿದು ಸಾಗುತ್ತದೆ . ಈ ನದಿಯು ಕೊಲ್ಲೂರಿನ ಮೂಕಾಂಬಿಕಾ ದೇವಾಲಯದ ಬಳಿ ಹರಿಯುತ್ತದೆ, ದೇವಾಲಯದ ಭಕ್ತರು ಇದೊಂದು ಪವಿತ್ರ ನದಿ ಎಂದು ಪೂಜಿಸುತ್ತಾರೆ.

ಸುಪರ್ಣ ಎಂಬ ಗರುಡ ನದಿಯ ಪಕ್ಕದಲ್ಲಿ ತಪಸ್ಸು ಆಚರಿಸಿ ಮೋಕ್ಷವನ್ನು ಪಡೆಯಿತು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ಹೆಸರು ಸೌಪರ್ಣಿಕಾ ನದಿಗೆ ಬಂದಿದೆ. ನದಿಯು ಹರಿದು ಬರುವಾಗ 64 ಅನೇಕ ರೀತಿಯ ಔಷಧೀಯ ಸಸ್ಯಗಳು ಮತ್ತು ಬೇರುಗಳ ಗುಣಗಳನ್ನು ತೆಗೆದುಕೊಂಡು ಬರುತ್ತದೆ, ಆದ್ದರಿಂದ ಈ ನದಿಯಲ್ಲಿ  ಸ್ನಾನ ಮಾಡಿದವರ ರೋಗಗಳು ಈ ನದಿ ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ:

ಬೆಳಿಗ್ಗೆ 5:00 ಗಂಟೆಯಿಂದ 7:30 ರವರೆಗೆ ಮತ್ತು ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಅವಕಾಶವಿರುತ್ತದೆ.

ಮಧ್ಯಾಹ್ನದ ಸಮಯ: ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 5:00 ರವರೆಗೆ ಅವಕಾಶವಿರುತ್ತದೆ.

ಸಂಜೆ ಸಮಯ: ಸಂಜೆ 5:00 ಗಂಟೆಯಿಂದ ರಾತ್ರಿ 9:00 ರವರೆಗೆ ಅವಕಾಶವಿರುತ್ತದೆ.

ತಲುಪುವುದು ಹೇಗೆ?

ರಸ್ತೆಯ ಮೂಲಕ: ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತವೆ .

ರೈಲು ಮೂಲಕ:

ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್‌‌ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿಸನಿಹದ ರೈಲ್ವೆ ನಿಲ್ದಾಣವಾಗಿವೆ ಈ ಮೂಲಕ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಬಹುದಾಗಿದೆ.

ಕೊಲ್ಲೂರಿನ ಸುತ್ತಮುತ್ತಲಿನ ಪ್ರಕೃತಿ ನೋಟ:

ನಿತ್ಯಹರಿದ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಹಳ್ಳಿಗಳಿಂದ ಕಾಣಸಿಗುತ್ತದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳೂ ಸೇರಿಕೊಂಡು ದೇವಸ್ಥಾನದಿಂದ ಒಂದು ಕಂಗೊಳಿಸುವ ಪ್ರಕೃತಿಯನ್ನು ವೀಕ್ಷಿಸಬಹುದಾಗಿದೆ.

  1. ಕೂಡಲಸಂಗಮಬಾಗಲಕೋಟ

ನದಿ: ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮ

ದೇವಾಲಯದ ಬಗ್ಗೆ:

ಕರ್ನಾಟಕದ  ಕೂಡಲಸಂಗಮ ಲಿಂಗಾಯತರಿಗೆ ಒಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಕೃಷ್ಣಾ ನದಿ ಮತ್ತು ಘಟಪ್ರಭಾ ನದಿ ಇಲ್ಲಿ ಒಂದಾಗಿ ಆಂಧ್ರಪ್ರದೇಶದ ಶ್ರೀಶೈಲಂ ಕಡೆಗೆ ಪೂರ್ವಕ್ಕೆ ಹರಿಯುತ್ತ ಸಾಗುತ್ತದೆ.

12 ನೇ ಶತಮಾನದಲ್ಲಿ ಜಾತವೇದ ಮುನಿ ಸಾರಂಗಮಠ ಎಂಬ  ಶಿಕ್ಷಣ ಕೇಂದ್ರವನ್ನು ಸ್ಥಾಪನೆಯನ್ನು ಮಾಡಿದ್ದರು ಮತ್ತು ಬಸವೇಶ್ವರ, ಚನ್ನಬಸವಣ್ಣ ಮತ್ತು ಅಕ್ಕನಾಗಮ್ಮ ವಿದ್ಯಾರ್ಥಿಗಳಾಗಿ ಇಲ್ಲಿ ಇದ್ದರೆಂದು ಹೇಳಲಾಗುತ್ತದೆ. ಬಸವೇಶ್ವರರು ತಮ್ಮ ಅಭ್ಯಾಸವನ್ನು ಇಲ್ಲೆ ನಡೆಸಿದ್ದರು ಮತ್ತು ಕಲ್ಯಾಣದಿಂದ ಬಂದ ನಂತರ, ಅವರು ಈ ಪ್ರದೇಶದಲ್ಲಿಯೇ  ದೇವರೊಂದಿಗೆ ಐಕ್ಯರಾದರು ಎಂದು ನಂಬಲಾಗುತ್ತದೆ.

ಕೃಷ್ಣ ನದಿಯನ್ನು ಹಿಂದೂಗಳು ಹಿಂದಿನಿಂದಲೂ ಪವಿತ್ರವೆಂದು ಪೂಜಿಸಿ ಆರಾಧಿಸುತ್ತಾರೆ. ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುವವರ ಎಲ್ಲಾ ಪಾಪಗಳನ್ನು ನಿವಾರಣೆಯಾಗುತ್ತವೆ ಎಂಬ ನಂಬಿಕೆಯು ಕೂಡ ಇದೆ.  ಪ್ರತಿ ಹನ್ನೆರಡು ವರ್ಷಕೊಮ್ಮೆ ಕೃಷ್ಣಾ ನದಿಯ ದಡದಲ್ಲಿ ಆಚರಿಸುವ  ಕೃಷ್ಣ ಪುಷ್ಕರಂ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಕೃಷ್ಣ ನದಿಯ ದಡದ ಉದ್ದಕ್ಕೂ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅನೇಕ ಧಾರ್ಮಿಕ ಕ್ಷೇತ್ರವನ್ನು ಕಾಣಬಹುದಾಗಿದೆ. ಕೃಷ್ಣ ನದಿಯ ಮೂಲ ಸ್ಥಳವು  ಮಹಾಗಣಪತಿ ಮಂದಿರ ಮತ್ತು ಕಾಶಿವಿಶ್ವೇಶ್ವರ ದೇವಸ್ಥಾನಕ್ಕೆ ಪ್ರಸಿದ್ದಿಯಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆವರೆಗೆ ತೆರೆದಿರುತ್ತದೆ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 8:00 ಗಂಟೆವರೆಗೆ ತೆರೆದಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಬಾಗಲಕೋಟೆಯಿಂದ ಕೂಡಲ ಸಂಗಮ ತಲುಪಲು ಬಸ್ಸುಗಳ ಸೌಲಭ್ಯ ಕೂಡ ಇವೆ.

ರೈಲಿನ ಮೂಲಕ: ಬಾಗಲಕೋಟೆ ಜಂಕ್ಷನ್ ಹತ್ತಿರದ ರೈಲು ನಿಲ್ದಾಣ 50 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಬೆಳಗಾವಿ ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ, ಇವು ಸುಮಾರು 170 ಕಿ.ಮೀ ದೂರದಲ್ಲಿವೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಕೂಡಲ ಸಂಗಮದಿಂದ ಆಲಮಟ್ಟಿ ಅಣೆಕಟ್ಟು 32 ಕಿ.ಮೀ. ದೂರದಲ್ಲಿದೆ. 

*ಈ ಸ್ಥಳಗಳು ಕೂಡಲಸಂಗಮ ಕ್ರಾಸ್ ನಿಂದ 90 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದಾಗಿದೆ.

*ವಿಜಯಪುರದಲ್ಲಿ ನಾವು ಗೋಲ್ಗುಂಬಜ್, ಇಬ್ರಾಹಿಂ ರೋಜಾ, ಶಿದ್ದೇಶ್ವರ ದೇವಸ್ಥಾನ, ತೊರವಿ ಲಕ್ಷ್ಮಿ       ನರಸಿಂಹ ದೇವಸ್ಥಾನವನ್ನುಕೂಡ ಭೇಟಿ ಮಾಡಬಹುದಾಗಿದೆ.

*ಬಾಗಲಕೋಟೆಯಲ್ಲಿ  ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ, ಜಿಲ್ಲಾ ಆಡಳಿತ ಕಚೇರಿ ಇತ್ಯಾದಿಗಳನ್ನೂ ನೋಡಬಹುದಾಗಿದೆ.

*ತಂಗಡಗಿ ಸೇತುವೆಯಲ್ಲಿ ಶರಣೆ ನೀಲಾಂಬಿಕಾ, ಹಡಪದ ಅಪ್ಪಣ್ಣ ಮತ್ತು ಮಡಿವಾಳ ಮಾಚಿದೇವರ ಐಕ್ಯ ಮಂಟಪವನ್ನು ಭೇಟಿ ಮಾಡಬಹುದು.  ತಂಗಡಗಿ-20 ಕಿ.ಮೀ. ದೂರದಲ್ಲಿದೆ.

  1. ತಲಕಾಡು ದೇವಾಲಯಗಳುಮೈಸೂರು

ನದಿ: ಕಾವೇರಿ ನದಿ

ದೇವಾಲಯದ ಬಗ್ಗೆ:

ತಲಕಾಡು ಎಂಬುದು ಕಾವೇರಿ ನದಿಯ ಎಡ ದಂಡೆಯ ಮೇಲಿರುವ ಪ್ರದೇಶವಾಗಿದೆ, ಇದು ಕರ್ನಾಟಕದ ಮೈಸೂರಿನಿಂದ 45 ಕಿಮೀ ದೂರದಲ್ಲೂ ಮತ್ತು ಬೆಂಗಳೂರಿನಿಂದ 133 ಕಿಮೀ ದೂರದಲ್ಲಿದೆ. ಇದು 30 ಕ್ಕೂ ಹೆಚ್ಚು ದೇವಾಲಯಗಳಿರುವ ಪ್ರದೇಶವಾಗಿದೆ, ಅವುಗಳಲ್ಲಿ ಬಹುತೇಕ ದೇವಾಲಯಗಳು ಮರಳಿನಲ್ಲಿ ಹೂತುಹೋಗಿರುವುದನ್ನು ಕಾಣಬಹುದಾಗಿದೆ . ಪೂರ್ವಕ್ಕೆ ಹರಿಯುವ ಕಾವೇರಿ ನದಿಯು ದಡದಲ್ಲಿರುವ ಮರಳು ಎಲ್ಲ ಪ್ರದೇಶದಲ್ಲಿ ಹರಡಿಕೊಂಡಿದೆ, ತನ್ನ ಪಥವನ್ನು ಬದಲಾಯಿಸುವ ದೇವಾಲಯಗಳು ಹಿಂದೂಗಳಿಗೆ ವಿಶೇಷ ಪ್ರವಾಸಿ ತಾಣವಾಗಿವೆ.

ರಾಜ ಒಡೆಯರ್ ರಾಣಿಯ ಆಭರಣಗಳನ್ನು ಪಡೆಯ ಬೇಕು ಅಂದುಕೊಂಡಿದ್ದರು ಮತ್ತು ಅವುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಅವರು ತಮ್ಮದೆ ಆದ ಸೈನ್ಯವನ್ನು ರಚಿಸಿ ರಾಣಿಯ ವಿರುದ್ಧ ಸಂಚು ಮಾಡಿದ್ದರು. ರಾಣಿ ಅಲಮೇಲಮ್ಮ ಕಾವೇರಿಯ ನದಿ ದಡಕ್ಕೆ ಹೋಗಿ, ಆ ಆಭರಣಗಳನ್ನು ಎಸೆದು, ಮಾಲಂಗಿಯ ನದಿ ಪ್ರದೇಶದಲ್ಲಿ ಮುಳುಗಿ, ಆ ಸಮಯದಲ್ಲಿ  ಸಮಯದಲ್ಲಿ ಮೂರು ಶಾಪವನ್ನು ನೀಡಿದರು: “ತಲಕಾಡು ಮರಳಾಗಲಿ; ಮಾಲಂಗಿ ಸುಳಿಯಾಗಲಿ; ಮೈಸೂರು ರಾಜರು ಉತ್ತರಾಧಿಕಾರಿಗಳು  ಇರದೇ  ವಿಫಲರಾಗಲಿ.” ಈಗಲೂ ಶಾಪದ ಪರಿಣಾಮ ಬೀರುತ್ತಲೇ ಇದೆ.

ಭೇಟಿ ನೀಡಲು ಉತ್ತಮ ಸಮಯ:

ತಲಕಾಡು ದೇವಸ್ಥಾನದ ದರ್ಶನ ಸಮಯ ನಿಗದಿಯಾಗಿಲ್ಲ, ಆದರೆ ಪಂಚಲಿಂಗ ದೇವಸ್ಥಾನಗಳು ಸಾಮಾನ್ಯವಾಗಿ ಬೆಳಿಗ್ಗೆ 8 ಗಂಟೆಯಿಂದ  ಸಂಜೆ 6 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ಮೈಸೂರಿನ ತಲಕಾಡು ದೇಗುಲಗಳಿಗೆ ಭೇಟಿ ನೀಡಲು ಚಳಿಗಾಲವು ಉತ್ತಮ ಸಮಯ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ತಲಕಾಡಿಗೆ ಭೇಟಿ ನೀಡಲು ಮೈಸೂರಿನಿಂದ ಬಸ್ ಸೌಲಭ್ಯವಿದೆ. ಮೈಸೂರಿನ ಕಂಪನಿಗಳಿಂದ ಪೂರ್ಣ ದಿನದ ಕ್ಯಾಬ್ ಬುಕ್ ಮಾಡುವ ಮೂಲಕ ತಲಕಾಡಿಗೆ ಹೋಗಲು ಉತ್ತಮ ಮಾರ್ಗವಾಗಿದೆ.

ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಮೈಸೂರಿನಲ್ಲಿದೆ.

ವಿಮಾನದ ಮೂಲಕ:ಹತ್ತಿರದ ವಿಮಾನ ನಿಲ್ದಾಣ ಮೈಸೂರಿನಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಸೋಮನಾಥಪುರ:

ತಲಕಾಡು ಪಟ್ಟಣದ ಹತ್ತಿರದ ಸಣ್ಣ ಹಳ್ಳಿಯಾದ ಸೋಮನಾಥಪುರವು ಪ್ರಾಚೀನ ದೇವಾಲಯಗಳನ್ನು ಕಾಣಬಹುದಾಗಿದೆ. ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು 1268 ರಲ್ಲಿ ನಿರ್ಮಿಸಲಾದ ಶ್ರೀ ಚನ್ನಕೇಶವ ದೇವಾಲಯಗಳು ವೀಕ್ಷಿಸಲು ಬಹಳ ಸುಂದರವಾಗಿವೆ.

ಪಂಚಲಿಂಗ ದರ್ಶನ :

ಇದು ಪಟ್ಟಣದಲ್ಲಿರುವ ಐದು ಶಿವ ದೇವಾಲಯಗಳ ಗೌರವಾರ್ಥವಾಗಿ ನಡೆಯುವ ಒಂದು ಉತ್ಸವವಾಗಿದೆ. ಈ ಜಾತ್ರೆಯು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ವಿಶಾಖ ಮತ್ತು ಖುಹಾ ಯೋಗದ ಎರಡು ನಕ್ಷತ್ರಗಳು ಸಂಗಮಿಸುವಾಗ ನಡೆಯುತ್ತದೆ.

ಮಲ್ಲಿಕಾರ್ಜುನ ದೇವಸ್ಥಾನ:

ಮಲ್ಲಿಕಾರ್ಜುನ ಸ್ವಾಮಿ ಮತ್ತು ಬ್ರಹ್ಮರಾಂಬಿಗೈ ದೇವಿಯ ಲಿಂಗಕ್ಕೆ ಸಮರ್ಪಿತವಾದ ಧಾರ್ಮಿಕ ದೇವಾಲಯವಾಗಿದೆ. ಈ ದೇವಾಲಯವು ಕಾಮಧೇನುವಿಗೆ ಸೇರಿದ್ದು ಎಂದು ಹೇಳಲಾಗುತ್ತದೆ ಲಿಂಗದ ಮೇಲಿನ ಹೆಜ್ಜೆಗುರುತುಗಳು ಇರುವುದನ್ನು ಕಾಣಬಹುದಾಗಿದೆ.

  1. ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇವಸ್ಥಾನಮಂಡ್ಯ

ನದಿ: ಕಾವೇರಿ ನದಿ

ದೇವಾಲಯದ ಬಗ್ಗೆ:

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯವು ಹಿಂದೂ ದೇವರು ರಂಗನಾಥ ಸ್ವಾಮಿ ದೇಗುಲವಾಗಿದೆ. ಈ ದೇವಾಲಯವು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿ ವಿಶೇಷವಾಗಿದೆ. ರಂಗನಾಥನ ಸ್ವಾಮಿ ಭಕ್ತರಿಗಾಗಿ ಕಾವೇರಿ ನದಿಯ ಉದ್ದಕ್ಕೂ ಸ್ಮಾರ್ತರು ಮತ್ತು ಶ್ರೀ ವೈಷ್ಣವರು ಭೇಟಿ ನೀಡುವಂತಹ ಐದುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ . ಈ ಐದು ಸ್ಥಳಗಳನ್ನು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರಗಳು ಎಂದು ಪ್ರಸಿದ್ಧವಾಗಿವೆ.

ಈ ದೇಗುಲವು ಬಹಳ ಪ್ರಾಚೀನತೆಯನ್ನು ಹೊಂದಿರುವ ದೇವಾಲಯವಾಗಿದೆ. ದೇವಾಲಯದಲ್ಲಿರುವ ಒಂದು ಈ ಶಾಸನವನ್ನು ಪಶ್ಚಿಮ ಗಂಗ ರಾಜವಂಶದ ಸಾಮಂತ ತಿರುಮಲಯ್ಯ ಎಂಬ ಸ್ಥಳೀಯ ಮುಖ್ಯಸ್ಥ ನಿರ್ಮಿಸಿದ್ದಾನೆ ಎಂದು ಹೇಳುತ್ತದೆ. ಶ್ರೀರಂಗಪಟ್ಟಣದಲ್ಲಿ ದೇವತೆಯ ಅಸ್ತಿತ್ವದ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತದೆ, ಇದು ಮೊದಲೇ  ಅಸ್ತಿತ್ವದಲ್ಲಿರುವ ರಂಗನಾಥಸ್ವಾಮಿ ದೇಗುಲದ ಮೇಲೆ ದೇಗುಲವನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತದೆ.

 12 ನೇ ಶತಮಾನದ ಪ್ರಾರಂಭದಲ್ಲಿ, ಹೊಯ್ಸಳ ರಾಜನಾದ  ವಿಷ್ಣುವರ್ಧನ ಶ್ರೀರಂಗಪಟ್ಟಣ ಗ್ರಾಮವನ್ನು ವೈಷ್ಣವ ಸಂತರಾದಂತಹ ರಾಮಾನುಜಾಚಾರ್ಯರಿಗೆ ಅಗ್ರಹಾರವಾಗಿ ನೀಡಿದನು. ಹೊಯ್ಸಳ ರಾಜ ವೀರ ಬಲ್ಲಾಳ II ನ  ಶಾಸನವು ಆ ಸಮಯದಲ್ಲಿ ದೇವಾಲಯಕ್ಕೆ ಸೇರ್ಪಡೆ ಮಾಡಲಾಗಿದೆ ಮತ್ತು ನವೀಕರಣ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ:

ದರ್ಶನಕ್ಕೆ ಅವಕಾಶ ಬೆಳಿಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಮತ್ತು  ಸಂಜೆ 4:00 ಗಂಟೆಯಿಂದ ರಾತ್ರಿ 8:30ರ ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. 

ತಲುಪುವುದು ಹೇಗೆ:

ರಸ್ತೆಯ ಮೂಲಕ: ದಕ್ಷಿಣದ ಎಲ್ಲಾ ಪ್ರಮುಖ ನಗರಗಳಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ರೈಲಿನ ಮೂಲಕ: ಶ್ರೀರಂಗಪಟ್ಟಣವು ಮೈಸೂರಿನಿಂದ 20 ಕಿ.ಮೀ ದೂರದಲ್ಲಿದ್ದು ಹತ್ತಿರದ ರೈಲು ನಿಲ್ದಾಣವಾಗಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದ್ದು, ಇದು 168 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಶ್ರೀರಂಗಪಟ್ಟಣ ಕೋಟೆ

ದರಿಯಾ ದೌಲತ್ ಅರಮನೆ

ಬಲಮುರಿ ಜಲಪಾತಗಳು

ನಿಮಿಷಾಂಬಾ ದೇವಸ್ಥಾನ

ಕರ್ನಲ್ ಬೈಲಿಸ್ ಡಂಜಿಯನ್

ರಂಗನತಿಟ್ಟು ಪಕ್ಷಿಧಾಮ

  1. ಗೋಕರ್ಣ ಮಹಾಬಲೇಶ್ವರ ದೇವಸ್ಥಾನಉತ್ತರ ಕನ್ನಡ

ನದಿ: ಅಘನಾಶಿನಿ ನದಿ (ಹತ್ತಿರ)

ದೇವಾಲಯದ ಬಗ್ಗೆ:

ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯವು  ಕ್ರಿ.ಶ. 4 ನೇ ಶತಮಾನದ ಧಾರ್ಮಿಕ ಸ್ಥಳವಾಗಿದ್ದು, ಈ ದೇವಾಲಯವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ. ಇದು ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇಗುಲವು ಅರಬ್ಬಿ ಸಮುದ್ರದ ಗೋಕರ್ಣ ಕಡಲ ತೀರದ ಕಡೆ ಮುಖ ಮಾಡಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಪ್ರಾಣಲಿಂಗವನ್ನು  ಆತ್ಮಲಿಂಗ   ಎಂದೂ ಪೂಜಿಸಲಾಗುತ್ತದೆ.

ಧಾರ್ಮಿಕ ಆಚರಣೆಗಳು:

 ಭಕ್ತರು ತಮ್ಮ ಪುರೋಹಿತರೊಂದಿಗೆ ಆಚರಿಸುವ ಧಾರ್ಮಿಕ ಆಚರಣೆಗಳಾದ ತಲೆ ಬೋಳಿಸಿಕೊಳ್ಳುವುದು, ಉಪವಾಸ ಮಾಡುವುದು ಮತ್ತು ನಂತರ ದೇವಾಲಯದ ಎದುರಿನ ಅರೇಬಿಯನ್ ಸಮುದ್ರದಲ್ಲಿ ಸ್ನಾನ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡುತ್ತಾರೆ. ನಂತರ ಅವರು ಮಹಾಬಲೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ದರ್ಶನವನ್ನು ಪಡೆಯುತ್ತಾರೆ.

ಭೇಟಿ ನೀಡಲು ಉತ್ತಮ ಸಮಯ:

ಬೆಳಿಗ್ಗೆ 6:00  ಗಂಟೆ ಇಂದ  ಮಧ್ಯಾಹ್ನ 12:30ರ ವರೆಗೆ

ಸಂಜೆ 5:00 ಗಂಟೆ ಇಂದ  ರಾತ್ರಿ 8:00 ಗಂಟೆ ವರೆಗೆ

ತಲುಪುವುದು ಹೇಗೆ?

ರಸ್ತೆಯ ಮೂಲಕ:

ಕರಾವಳಿ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿ 66 (NH66), ಗೋಕರ್ಣಕ್ಕೆ ಸಮೀಪದಲ್ಲಿ ಇರುವಂತಹ ಹೆದ್ದಾರಿಯಾಗಿದೆ . ಗೋಕರ್ಣವು  ಕಾರವಾರದಿಂದ 56 ಕಿಲೋಮೀಟರ್ ದೂರದಲ್ಲಿದೆ, ಮಂಗಳೂರಿನಿಂದ 252 ಕಿಲೋಮೀಟರ್, ಹುಬ್ಬಳ್ಳಿಯಿಂದ 145 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 450 ಕಿಲೋಮೀಟರ್ ದೂರದಲ್ಲಿದೆ. ಯಾತ್ರಿಕರಿಗೆ ಈ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ರೈಲು ಮೂಲಕ:

ಗೋಕರ್ಣವು ಕಾರವಾರ, ಅಂಕೋಲಾ, ಹುಬ್ಬಳ್ಳಿ, ಮಂಗಳೂರು, ಕುಮಟಾ ಮತ್ತು ಮಾರ್ಗೋವಾ ಮೂಲಕ ರೈಲು ಸಂಪರ್ಕ ಕಲ್ಪಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ಇತರ ಹಲವು ರೈಲುಗಳು ಗೋಕರ್ಣದ ಮೂಲಕ ಸಂಪರ್ಕವನ್ನು ಹೊಂದಿವೆ.  ಕುಮಟಾ (35 ಕಿ.ಮೀ) ಮತ್ತು ಅಂಕೋಲಾ (20 ಕಿ.ಮೀ) ಸಮೀಪದ ರೈಲು ಮಾರ್ಗಗಳಾಗಿವೆ.

ವಿಮಾನದ ಮೂಲಕ: ವಿಮಾನ ನಿಲ್ದಾಣವು ಗೋವಾದ ಪಣಜಿಯಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಓಂ ಬೀಚ್

*ಕುಡ್ಲೆ ಬೀಚ್

*ಯಾಣ ಗುಹೆಗಳು

*ಹಾಫ್ ಮೂನ್ ಬೀಚ್

  1. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಮೈಸೂರು

ನದಿ: ಕಪಿಲಾ (ಕಬಿನಿ) ನದಿ

ದೇವಸ್ಥಾನದ ಬಗ್ಗೆ :

ನಂಜುಂಡೇಶ್ವರ ದೇವಸ್ಥಾವನ್ನು ಶ್ರೀಕಂಠೇಶ್ವರ ದೇವಸ್ಥಾನ ಎಂದೂ ಕೂಡ ಕರೆಯುತ್ತಾರೆ. ಕರ್ನಾಟಕದ ಹಿಂದೂ ಯಾತ್ರಾಸ್ಥಳ ನಂಜನಗೂಡಿನಲ್ಲಿರುವ ಶಿವನಿಗೆ ಸಮರ್ಪಿತವಾದ  ಇದೊಂದು ಪ್ರಾಚೀನ ದೇಗುಲವಾಗಿದೆ. ಈ ದೇವಾಲಯವನ್ನು ಕಾವೇರಿ ನದಿಯ ಉಪನದಿಯಾದ ಕಬಿನಿ ನದಿಯ ಬಲದಂಡೆಯಲ್ಲಿ ಕಾಣಬಹುದಾಗಿದೆ. ನಂಜನಗೂಡನ್ನು “ದಕ್ಷಿಣದ ಕಾಶಿ” ಎಂದೂ ಕೂಡ ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಕಬಿನಿ ನದಿ :

ಕಬಿನಿ ನದಿಯು ದಕ್ಷಿಣ ಭಾರತದ ಪವಿತ್ರ ನದಿಯಾದ ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ ಒಂದಾಗಿರುವುದನ್ನು ಕಾಣಬಹುದಾಗಿದೆ. ಈ ನದಿಯು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಕವಿಲುಂಪಾರ ಬಳಿ ಪನಮರಂ ನದಿ ಮತ್ತು ಮಾನಂದವಾಡಿ ನದಿಯ ಸಂಗಮದಿಂದ ಉದ್ಭವವಾದ ನದಿಯಾಗಿದೆ. ಇದು ವಯನಾಡ್ ಪ್ರದೇಶದ ಮೂಲಕ ಪೂರ್ವಕ್ಕೆ ಹರಿಯುವ ನದಿಯಾಗಿದೆ, ಈ ನದಿಯು ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಹರಿಯುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ: 6:00 ಗಂಟೆಯಿಂದ  ಮಧ್ಯಾಹ್ನ 1:00 ರವರೆಗೆ ಸಂಜೆ: ಸಂಜೆ 4:00 ಗಂಟೆಯಿಂದ ರಾತ್ರಿ 8:30 ರವರೆಗೆ ದರ್ಶನಕ್ಕೆ ಅವಕಾಶವಿದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ದೇವಸ್ಥಾನವು ಮೈಸೂರು ಬಸ್ ನಿಲ್ದಾಣದಿಂದ 23.5 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ನಿಲ್ದಾಣದಿಂದ ನಂಜನಗೂಡಿಗೆ 25.5 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ ಅಥವಾ ಮಂಡಕಳ್ಳಿ ವಿಮಾನ ನಿಲ್ದಾಣ. ಇದು 14.5 ಕಿ.ಮೀ ದೂರದಲ್ಲಿದೆ. 

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಬಿಆರ್ಹಿಲ್ಸ್‌: ನಂಜನಗೂಡಿನಿಂದ ಕೇವಲ 70 ಕಿ.ಮೀ ದೂರದಲ್ಲಿದೆ.

 ಬಂಡೀಪುರ ರಾಷ್ಟ್ರೀಯ ಉದ್ಯಾನವನ:

ನಂಜನಗೂಡಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಕೇವಲ 58 ಕಿ.ಮೀ ದೂರದಲ್ಲಿದೆ.

ಕೂರ್ಗ್‌:

ನಂಜನಗೂಡಿನಿಂದ ಕೂರ್ಗ್‌ ಕೇವಲ 142 ಕಿ.ಮೀ ದೂರದಲ್ಲಿದೆ.

  1. 8. ಬನವಾಸಿ ಮಧುಕೇಶ್ವರ ದೇವಸ್ಥಾನಉತ್ತರ ಕನ್ನಡ

ನದಿ: ವರದಾ ನದಿ

ದೇವಸ್ಥಾನದ ಬಗ್ಗೆ :

ಮಧುಕೇಶ್ವರ ದೇಗುಲವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಬನವಾಸಿ ಪ್ರದೇಶದಲ್ಲಿದೆ. ಇದು ಸಿರ್ಸಿ ಮತ್ತು ಸೊರಬ ಸ್ಥಳದಿಂದ ಸುಮಾರು 24 ಕಿಮೀ ದೂರದಲ್ಲಿರುವ ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಸುಮಾರು 1500 ವರ್ಷದ ಹಿಂದೆಯೆ  ಕದಂಬರು, ಚಾಲುಕ್ಯರು, ಹೊಯ್ಸಳರ ಆಳ್ವಿಕೆ ಕಾಲದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ತುಂಬಾ ಪ್ರಖ್ಯಾತಿಯನ್ನು ಪಡೆದ ಅಮರಶಿಲ್ಪಿ ಜಕಣಾಚಾರಿ ಈ ದೇಗುಲದ ನಿರ್ಮಾಣವನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಪರಿಶುದ್ಧ ವರದಾ ನದಿಯು ದೇವಸ್ಥಾನದ  ಮುಂಭಾಗದಲ್ಲಿ ಹರಿಯುತ್ತಿದೆ.

ಮಾರ್ಕಂಡೇಯ ಪುರಾಣದ ಕಥೆ:

ಮಾರ್ಕಂಡೇಯ ಪುರಾಣದ ಪ್ರಕಾರ ಕೃತಯುಗದಲ್ಲಿ ಮಹಾವಿಷ್ಣುವಿನ ಕಿವಿಯಿಂದ ಮಧು,ಕೈಟಭರೆಂಬ ಇಬ್ಬರು ರಾಕ್ಷಸರು ಸ್ರಷ್ಠಿಯಾಗುತ್ತಾರೆ. ಅವರು ಶಿವನ್ನನ್ನು ಕುರಿತು ಘೋರ ತಪಸ್ಸು ಮಾಡಿ ವರ ಪಡೆದು ಅಮರರಾಗುತ್ತಾರೆ. ನಂತರ ಅವರಲ್ಲಿ ಅಹಂಕಾರ ಉಂಟಾಗಿ ಲೋಕಕ್ಕೆ ಕಂಟಕರಾಗುತ್ತಾರೆ.

ನಂತರ ಮಹಾವಿಷ್ಣು ಯೋಚಿಸಿ ನಿಮಗೆ ವರವೇನಾದರೂ ಬೇಕಿದ್ದರೆ ಕೇಳಿ ಎಂದು ಕೇಳಿಕೊಳ್ಳುತ್ತಾನೆ,ಆಗ ಬುದ್ದಿಹೀನರಾದ ದೈತ್ಯರು ನಾವೇ ನಿನಗೆ ಬೇಕಾದ ವರ ನೀಡುತ್ತೇವೆ  ಕೇಳಿಕೋ ಎಂದು ಅಹಂಕಾರದಿಂದ ಹೇಳುತ್ತಾರೆ. ಇದನ್ನೇ ಬಯಸಿದ್ದ  ಮಹಾವಿಷ್ಣುವು ನಗುಮುಖದಿಂದ ಹಾಗಾದರೆ ನನ್ನಿಂದ ನೀವು ಸಂಹಾರವಾಗುವ ವರ ನೀಡಿ ಎಂದು  ಹೇಳುತ್ತಾನೆ. ಈ ಮಾತನ್ನು ಕೇಳಿ ಸಿಡಿಲು ಬಡಿದವರಂತೆ ಆಗಿ ಅಹಂಕಾರ ತೊಲಗಿ  ಮಧು-ಕೈಟಭರು ತಾವಾಗೇ ಇಂಥ ಸ್ಥಿಯನ್ನು  ತಂದುಕೊಂಡೆವಲ್ಲ ಎಂದು ಬೇಸರದಿಂದ  ಮನಸಿನ್ನಲ್ಲೇ ಕೊರಗಿ,  ನಮ್ಮನ್ನು ಸಂಹರಿಸಬಹುದು ಬದಲಾಗಿ  ನಮ್ಮ ಪ್ರತೀಕವಾಗಿ ಇಲ್ಲಿ ಶಿವ ದೇಗುಲವನ್ನು  ನಿರ್ಮಾಣ ಮಾಡಿ  ಎಂದು ಪ್ರಾರ್ಥಿಸುತ್ತಾರೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6:30 ರಿಂದ ರಾತ್ರಿ 8:30 ರ ವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹತ್ತಿರದ ಬಸ್ ನಿಲ್ದಾಣ ಸಿರಸಿ ಆಗಿದೆ. ಇದು ಬೆಂಗಳೂರು ಅಥವಾ ಮೈಸೂರಿನಿಂದ ಚಿಕ್ಕಮಗಳೂರು-ಶಿವಮೊಗ್ಗ-ಸಿದ್ದಾಪುರ-ಶಿರಸಿ ಮಾರ್ಗದ ಮೂಲಕ ಹೋಗಬಹುದಾಗಿದೆ.  

ರೈಲಿನ ಮೂಲಕ: ಹತ್ತಿರದ ನಿಲ್ದಾಣ ತಾಳಗುಪ್ಪ. ಇದು ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು,  ಶಿವಮೊಗ್ಗಗಳಿಗೆ ಸಂಪರ್ಕ ಹೊಂದಿದೆ. ತಾಳಗುಪ್ಪ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಂಗಳೂರು, ಶಿವಮೊಗ್ಗ ಮೂಲಕ ಪ್ರತಿದಿನ ಚಲಿಸುತ್ತದೆ.

ವಿಮಾನದ ಮೂಲಕ: ಹುಬ್ಬಳ್ಳಿ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಸಮೀಪದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಮಧುಕೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಪಂಪಾವನವು  ಇದು ಅನೇಕ ಔಷಧೀಯ ಸಸ್ಯಗಳು, ಅನೇಕ ವಿಭಿನ್ನ ಮರಗಳನ್ನು ಕಾಣಬಹುದಾಗಿದೆ. 

*ಶ್ರೀ ಆದಿ ಮಧುಕೇಶ್ವರ ದೇವಸ್ಥಾನ, ಗೊಡ್ಡೆ ಅಮ್ಮನವರು ದೇವಾಲಯವು ಮತ್ತು ವಸಿಷ್ಠ ತೀರ್ಥ, ಪವಿತ್ರ ನೀರನ್ನು ಹೊಂದಿರುವ ಒಂದು ಸಣ್ಣ ಉದ್ಯಾನವನವಾಗಿದೆ. ಈ ಸ್ಥಳದಲ್ಲಿ ಆದಿ ಕವಿ ಪಂಪಾ ಬೇರೆ ಬೇರೆ ಮಹಾಕಾವ್ಯಗಳನ್ನು ರಚಿಸಿದ್ದರಿಂದ ಈ ಉದ್ಯಾನವನವನ್ನು ಪಂಪಾವನ ಎಂದೆ  ಹೆಸರುವಾಸಿಯಾಗಿದೆ.

  1. 9. ಹಂಪಿ ವಿರೂಪಾಕ್ಷ ದೇವಸ್ಥಾನಬಳ್ಳಾರಿ

ನದಿ: ತುಂಗಭದ್ರಾ ನದಿ

ದೇವಾಲಯದ ಬಗ್ಗೆ:

ವಿರೂಪಾಕ್ಷ ದೇವಸ್ಥಾನವು  ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ದೇವಾಲಯವಾಗಿದೆ, ಶಿವನ ದೇವಾಲಯವಾಗಿದ್ದು ಪ್ರಸಿದ್ಧ  ತುಂಗಭದ್ರಾ ನದಿಯ ದಡದ ಮೇಲೆ ಕಾಣಬಹುದಾಗಿದೆ. ಇದು ಹಂಪಿಯಲ್ಲಿರುವ ಸ್ಮಾರಕಗಳ ಸಾಲಿನಲ್ಲಿ ನೋಡಬಹುದಾಗಿದೆ, ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಕೂಡ ಗುರುತಿಸಲಾಗಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಪ್ರೌಡದೇವ ರಾಯ ಎಂದೂ ಕರೆಯಲ್ಪಡುವ ದೊರೆ ದೇವರಾಯ II ರ  ನಾಯಕ  ಲಕ್ಕನ್ ದಂಡೇಶ ನಿರ್ಮಾಣವನ್ನು ಮಾಡಲಾಗಿದೆ  ಎಂದು ಹೇಳಲಾಗಿದೆ.

ದೇವಾಲಯದ ವಾಸ್ತುಶಿಲ್ಪ:

ದೇವಾಲಯದಲ್ಲಿ ಮುಖ್ಯವಾಗಿ ದೇವಾಲಯವು ಗರ್ಭಗುಡಿ, ಮೂರು ಮುಂಭಾಗದ ಕೋಣೆಗಳು, ಒಂದು ಕಂಬದ ಸಭಾಂಗಣ ಮತ್ತು ತೆರೆದ ಕಂಬದ ಸಭಾಂಗಣವನ್ನು ಹೊಂದಿದೆ. ಇದನ್ನು ಸೂಕ್ಷ್ಮವಾಗಿ ಕೆತ್ತಿದ ಕಂಬಗಳಿಂದ ಅಲಂಕರಿಸಿರುವುದು ಬಹು ಸುಂದರವಾಗಿದೆ. ಕಂಬದ ಮಠ, ಪ್ರವೇಶ ದ್ವಾರಗಳು, ಅಂಗಳಗಳು, ಸಣ್ಣ ದೇವಾಲಯಗಳು ಮತ್ತು ಇತರ ಬೇರೆ ಬೇರೆ ರಚನೆಗಳು ದೇವಾಲಯದ ಸುತ್ತಲೂ ಕಾಣಬಹುದಾಗಿದೆ.

ಈ ದೇವಸ್ಥಾನದ ವಿಶೇಷತೆ ಎಂದರೆ ಅದನ್ನು ನಿರ್ಮಿಸಲು ಮತ್ತು ಅಲಂಕರಿಸಲು ಗಣಿತದ ಪರಿಕಲ್ಪನೆಗಳನ್ನು ಬಳಸಲಾಗಿದೆ . ದೇಗುಲವು ಫ್ರ್ಯಾಕ್ಟಲ್‌ಗಳ ಪರಿಕಲ್ಪನೆಯನ್ನು ಪ್ರದರ್ಶಿಸುವ ರಚನೆಯನ್ನು ನೋಡಬಹುದು. ದೇವಾಲಯದ ಮುಖ್ಯ ಆಕಾರವು ತ್ರಿಕೋನವಾಗಿರುವುದು ವಿಶೇಷವಾಗಿದೆ. ದೇವಾಲಯದ ಮೇಲ್ಭಾಗವನ್ನು ನೋಡಿದಾಗ, ಮಾದರಿಗಳು ಬೇರೆ ಬೇರೆಯಾಗುತ್ತವೆ ಮತ್ತು ಸ್ನೋಫ್ಲೇಕ್‌ನಲ್ಲಿರುವಂತೆ ಅವುಗಳು ಪುನರಾವರ್ತಿಸುವುದನ್ನು ನೋಡಬಹುದು.

ಭೇಟಿ ನೀಡಲು ಉತ್ತಮ ಸಮಯ: ವಿರೂಪಾಕ್ಷ  ದೇವಸ್ಥಾನದ ದರ್ಶನದ ಸಮಯ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 9 ರವರೆಗೆ ಅವಕಾಶವಿರುತ್ತದೆ. ಇದು ಪ್ರತಿದಿನ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹಂಪಿ ಬಸ್ ನಿಲ್ದಾಣದಿಂದ ಕೆಲವೇ ನೂರು ಮೀಟರ್ ದೂರದಲ್ಲಿದೆ.

ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಹೊಸಪೇಟೆ ಜಂಕ್ಷನ್ 14 ಕಿ.ಮೀ ದೂರದಲ್ಲಿದೆ.  

ವಿಮಾನದ ಮೂಲಕ: ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ 37 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ವಿಠಲ ದೇವಾಲಯ:

ಹಂಪಿಯಲ್ಲಿ ಅತ್ಯಂತ ಅದ್ಭುತವಾದ ರಚನೆಯಾದ ವಿಠಲ ದೇವಾಲಯವು 16 ನೇ ಶತಮಾನಕ್ಕೆ ಹಿಂದಿನದು ವಾಸ್ತುಶಿಲ್ಪದ ಪ್ರತಿರೂಪವಾಗಿರುವ ಪ್ರಸಿದ್ಧ ಕಲ್ಲಿನ ರಥವು ಹಂಪಿಯಲ್ಲಿರುವ ಈ ದೇವಸ್ಥಾನದ ಆವರಣದೊಳಗೆ ಕಾಣಬಹುದಾಗಿದೆ.

ತಿರುವೆಂಗಲನಾಥ ದೇವಾಲಯ:

ಹಂಪಿಯ ಈ ದೇಗುಲವು ತಿರುವೆಂಗಲನಾಥ ದೇವಾಲಯ ಎಂದೂ ಕೂಡ ಹೆಸರುವಾಸಿಯಾಗಿದೆ , ಇದು ಒಂದು ಶಿವನ ದೇವಾಲಯವಾಗಿದೆ. ಹಂಪಿಯ ಇತರ ದೇಗುಲಗಳಂತೆ   ಇದು ಆಧುನಿಕ ವಾಸ್ತುಶಿಲ್ಪವನ್ನು ನೋಡಬಹುದು. ಇಲ್ಲಿನ ಅನೇಕ ಪ್ರಾಚೀನ ಕೆತ್ತನೆಗಳು ಪೌರಾಣಿಕ ದಂತಕಥೆಗಳನ್ನು ಕಾಣಬಹುದಾಗಿದೆ.

  1. 1 ಶಿವಗಂಗಾ ಗಂಗಾಧರೇಶ್ವರ ದೇವಸ್ಥಾನಬೆಂಗಳೂರು ಗ್ರಾಮಾಂತರ

ನದಿ: ವೃಷಭಾವತಿ ಹೊಳೆಯ ಬಳಿ (ಮೂಲ ಬಿಂದು)

ದೇವಾಲಯದ ಬಗ್ಗೆ:

ಶಿವಗಂಗೆ 1,368 ಮೀಟರ್ ಎತ್ತರವಿರುವ ಒಂದು ಪರ್ವತ ಶಿಖರವಾಗಿದ್ದು ಬಹಳ ಅದ್ಭುತವಾಗಿದೆ, ಭಾರತದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಬ್ಬಾಸ್‌ಪೇಟೆ ಬಳಿ ಇರುವ ಸ್ಥಳವಾಗಿದೆ. ಈ ಪರ್ವತವು ಶಿವಲಿಂಗದ ಆಕಾರದಲ್ಲಿ ಕಂಡು ಬರುತ್ತದೆ ಮತ್ತು “ಗಂಗಾ” ಎಂದು ಕರೆಯಲ್ಪಡುವ ಸ್ಥಳದ ಬಳಿ ಒಂದು ಚಿಲುಮೆ ಕೂಡ ಇರುವುದನ್ನು ಕಾಣಬಹುದಾಗಿದೆ, ಹೀಗಾಗಿ ಈ ಸ್ಥಳಕ್ಕೆ ಶಿವಗಂಗಾ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಸ್ಥಳವು ದಕ್ಷಿಣ ಕಾಶಿ ಎಂದೂ ಪ್ರಸಿದ್ದಿಯಾಗಿದೆ ಮತ್ತು ಗಂಗಾಧರೇಶ್ವರ ದೇವಸ್ಥಾನ, ಶ್ರೀ ಹೊನ್ನಮ್ಮದೇವಿ ದೇವಸ್ಥಾನ, ಓಲಕಲ್ ತೀರ್ಥ, ನಂದಿ ಪ್ರತಿಮೆ, ಪಾತಾಳಗಂಗೆ ಶಾರದಾಂಬೆ ದೇವಸ್ಥಾನ ಮತ್ತು ಅಗಸ್ತ್ಯ ತೀರ್ಥ, ಕಣ್ವ ತೀರ್ಥ, ಕಪಿಲ ತೀರ್ಥ, ಪಾತಾಳ ಗಂಗೆ ಮುಂತಾದ ಹಲವಾರು ತೀರ್ಥಗಳನ್ನು ಸ್ಥಳಗಳನ್ನು ಹೊಂದಿದೆ.

ಶಿವಗಂಗೆಯು ಸಮುದ್ರ ಮಟ್ಟದಿಂದ 4,559 ಅಡಿ ಎತ್ತರವಿರುವ ಒಂದು ಪವಿತ್ರ ಬೆಟ್ಟವಾಗಿದೆ ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರ ಬಾಹ್ಯರೂಪವು  ಪೂರ್ವದಿಂದ ಗೂಳಿಯಂತೆ, ಪಶ್ಚಿಮದಿಂದ ಗಣೇಶನಂತೆ, ಉತ್ತರದಿಂದ ಸರ್ಪದಂತೆ ಮತ್ತು ದಕ್ಷಿಣದಿಂದ ಲಿಂಗದಂತೆ ನೋಡುಗರನ್ನು ಆಕರ್ಷಿಸುತ್ತದೆ. ಶಿಖರಕ್ಕೆ ಹೋಗುವ ಮೆಟ್ಟಿಲುಗಳ ಸಂಖ್ಯೆಯು ಬನಾರಸ್ ರೀತಿಯ ಸಂಖ್ಯೆಗೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದೆ. ಶಿಖರ ಏರುವುದನ್ನು ಪವಿತ್ರ ತೀರ್ಥಯಾತ್ರೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಗೆ ತೆರೆಯುತ್ತದೆ ಮತ್ತು ಸಂಜೆ 6 ಗಂಟೆಗೆ ಮುಚ್ಚುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ತುಮಕೂರು ಮತ್ತು ಡಬ್ಬಾಸ್ ಪೇಟೆಗೆ ಹೋಗುವ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ಡಿಪೋದಿಂದ ಬರುತ್ತವೆ.

ರೈಲಿನ ಮೂಲಕ: ಶಿವಗಂಗೆಗೆ ಹತ್ತಿರದ ರೈಲು ನಿಲ್ದಾಣ ಡಾಬ್ಸ್‌ಪೇಟೆ, ಸುಮಾರು 8 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಗಂಗಾಧರೇಶ್ವರ ದೇವಸ್ಥಾನ ಒಂದು ಧಾರ್ಮಿಕ ಸ್ಥಳವಾಗಿದೆ ಮತ್ತು ಒಳಕಲ್ ತೀರ್ಥ ಕೂಡ ವಿಶೇಷವಾದ ಪವಿತ್ರ ಸ್ಥಳವಾಗಿದೆ.

Leave a Comment

Your email address will not be published. Required fields are marked *

Scroll to Top