ಪೂರ್ವ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು

1.ಕೋಲಾರಮ್ಮ ದೇವಸ್ಥಾನ (ಕೋಲಾರ)

ದೇವತೆ: ಕೋಲಾರಮ್ಮ ದೇವತೆ (ದುರ್ಗಾ)

ನಿರ್ಮಿಸಿದವರು: 10 ನೇ ಶತಮಾನದಲ್ಲಿ ಚೋಳರು

ದೇವಾಲಯದ ಬಗ್ಗೆ :

ಕೋಲಾರಮ್ಮ ಕರ್ನಾಟಕದ ಕೋಲಾರ ಪ್ರದೇಶದ ಮುಖ್ಯ ದೇವತೆ. ಕೋಲಾರಮ್ಮ ದೇವಸ್ಥಾನವು ಸಾವಿರ ವರ್ಷಗಳಷ್ಟು ಪ್ರಾಚೀನವಾಗಿದ್ದು, ದಕ್ಷಿಣ ಭಾರತೀಯ ಶೈಲಿಯ ವಾಸ್ತುಶಿಲ್ಪದಲ್ಲಿ ಚೋಳರು ನಿರ್ಮಾಣವನ್ನು ಮಾಡಿದ್ದಾರೆ. ಕೋಲಾರದ ಜನತೆಯು ಪಾರ್ವತಿ ದೇವಿಯ ರೂಪದಲ್ಲಿ ಕೋಲಾರಮ್ಮನನ್ನು ಆರಾಧಿಸುತ್ತಾರೆ. ಮೈಸೂರಿನ ಮಹಾರಾಜರು ಕೋಲಾರಮ್ಮನ ದರ್ಶನವನ್ನು ಪಡೆಯಲು ಈ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದಲ್ಲಿ ಅದ್ಭುತವಾಗಿ ಕೆತ್ತಿದ ಪ್ರತಿಮೆಗಳು ಮತ್ತು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ, ಈ ದೇವಾಲಯವನ್ನು ಗ್ರಾನೈಟ್ ಕಲ್ಲುಗಳನ್ನು ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ.

ಈ ದೇವಾಲಯದ ಮತ್ತೊಂದು ದೇವತೆ ಚೆಲಮ್ಮ. ಚೆಲಮ್ಮ ದೇವಾಲಯದಲ್ಲಿ ದೇವರು ಚೇಳಿನ ಕಡಿತದಿಂದ ರಕ್ಷಣೆ ನೀಡುತ್ತದೆ ಎಂದು ಭಕ್ತರು ನಂಬುತ್ತಾರೆ. ದೇವಾಲಯದ  ಇನ್ನೊಂದು ವಿಶೇಷತೆ ಎಂದರೆ ಅಲ್ಲಿಯ ಹುಂಡಿಯನ್ನು ಭಕ್ತರಿಂದ ಕಾಣಿಕೆಗಳನ್ನು ಸಂಗ್ರಹಿಸಲು ಉಪಯೋಗಿಸಲಾಗುತ್ತದೆ, ಮತ್ತು ದೇವಾಲಯದ ನೆಲದಲ್ಲಿ  ಇರುವ ಕಾಣಿಕೆ ಹುಂಡಿಗೆ ನಾಣ್ಯವನ್ನು ಹಾಕುವುದು ಅಲ್ಲಿನ ಆಚರಣೆಯಾಗಿದೆ, ಹುಂಡಿಯಲ್ಲಿ ಸಂಗ್ರಹಿಸಲ್ಪಟ್ಟ ನಾಣ್ಯಗಳ ಶಬ್ದ ಇನ್ನೂ ಕೇಳಬಹುದಾಗಿದೆ.

ಭೇಟಿ ನೀಡಲು ಉತ್ತಮ ಸಮಯ:

ಬೆಳಿಗ್ಗೆ ಸಮಯ – ಬೆಳಿಗ್ಗೆ 07 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ಸಂಜೆ ಸಮಯ – ಸಂಜೆ 05:30 ರಿಂದ ರಾತ್ರಿ 08 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. 

ತಲುಪುವುದು ಹೇಗೆ:

ರಸ್ತೆಯ ಮೂಲಕ:  ಕರ್ನಾಟಕದ ವಿವಿಧ ನಗರಗಳಿಗೆ ರಸ್ತೆ ಮೂಲಕ ಬಸ್ ಸೌಲಭ್ಯವನ್ನು ಹೊಂದಿದೆ.

ರೈಲಿನ ಮೂಲಕ: ಬೆಂಗಳೂರಿನಿಂದ ಚೆನ್ನೈ ಮತ್ತು ಕೇರಳಕ್ಕೆ ಹೋಗುವ ರೈಲಿನ ಮೂಲಕವೂ ಕೋಲಾರಕ್ಕೆ ರೈಲು ಸೌಲಭ್ಯವಿದೆ.

ವಿಮಾನದ ಮೂಲಕ:  ಈ ದೇವಾಲಯಕ್ಕೆ ಬೆಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. 

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

1.ಕೋಟಿಲಿಂಗೇಶ್ವರ ದೇವಸ್ಥಾನ:

ವಿಶ್ವದ ಅತಿದೊಡ್ಡ ಶಿವಲಿಂಗಗಳಲ್ಲಿ ಒಂದಾದ ಕೋಟಿಲಿಂಗೇಶ್ವರ ದೇವಸ್ಥಾನವು ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿ ಭೇಟಿ ಮಾಡಬಹುದಾಗಿದೆ.

2.ಸೋಮೇಶ್ವರ ದೇವಸ್ಥಾನ (ಕೋಲಾರ)

ಕೋಲಾರದ ಹೃದಯಭಾಗದಲ್ಲಿರುವ ಈ ಪುರಾತತ್ತ್ವ ಶಾಸ್ತ್ರದ ರಚನೆಯು 14 ನೇ ಶತಮಾನದ ಆರಂಭದ ಹಿಂದಿನ ದೇವಾಲಯವಾಗಿದೆ.

ದೇವತೆ: ಶಿವ

ಪ್ರಸಿದ್ಧ: ವಿಶ್ವದ ಅತಿ ಎತ್ತರದ ಶಿವಲಿಂಗಗಳಲ್ಲಿ ಒಂದನ್ನು ಒಳಗೊಂಡಂತೆ 90 ಲಕ್ಷಕ್ಕೂ ಹೆಚ್ಚು ಶಿವಲಿಂಗಗಳನ್ನು ಹೊಂದಿದೆ.

ದೇವಾಲಯದ ಬಗ್ಗೆ :

ಪ್ರಪಂಚದ ಬಹಳ ಎತ್ತರದ ಶಿವಲಿಂಗವನ್ನು ಹೊಂದಿರುವ ದೇವಸ್ಥಾನವನ್ನು ನಿರ್ಮಾಣವನ್ನು ಮಾಡಿ ಇಲ್ಲಿ ಹಲವಾರು ಗಾತ್ರದ ತೊಂಬತ್ತು ಲಕ್ಷಕ್ಕೂ ಅಧಿಕ ಶಿವಲಿಂಗಗಳೊಂದಿಗೆ ಸ್ಥಾಪಿಸಲಾಗಿದೆ. 33 ಮೀಟರ್ ಎತ್ತರದ ಅದ್ಬುತ ಶಿವಲಿಂಗ ಮತ್ತು 11 ಮೀಟರ್ ಎತ್ತರವಿರುವ ನಂದಿ ವಿಗ್ರಹವನ್ನು ನೋಡಬಹುದು, ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ. ಹಲವಾರು  ಗಾತ್ರದ ಶಿವಲಿಂಗಗಳನ್ನು ದಾನ ಮಾಡುವ ಮೂಲಕ ಪ್ರತಿಷ್ಠಾಪಿಸಲು ದೇವಾಲಯವು ಮುಕ್ತವಾಗಿದೆ, ಈ ಲಿಂಗಗಳನ್ನು ದಾನಿಗಳ ಹೆಸರಿನೊಂದಿಗೆ ಕೂಡ ಸ್ಥಾಪಿಸಬಹುದು.

 ಕೋಟಿ ಲಿಂಗೇಶ್ವರವನ್ನು1980 ರಲ್ಲಿ, ಸ್ವಾಮಿ ಸಾಂಭ ಶಿವ ಮೂರ್ತಿ ಅವರು ದೇವಸ್ಥಾನವನ್ನು ಉದ್ಘಾಟನಾ ಸಮಾರಂಭವನ್ನು ಮಾಡಿದರು ಮತ್ತುಈ ದೇವಾಲಯದ ನಿರ್ಮಾಣವನ್ನು ಮಾಡಿದರು. ದೇವಾಲಯಕ್ಕೆ ಹೋಗುವ ಭಕ್ತರಿಗೆ ರಸ್ತೆ ವ್ಯವಸ್ಥೆ ತುಂಬಾ ಅನುಕೂಲಕರವಾಗಿದೆ ಮತ್ತು ಈ ಸ್ಥಳವು ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಸಣ್ಣ ಹಳ್ಳಿಯಲ್ಲಿರುವ ದೇವಾಲಯವಾಗಿದೆ.

ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಕಾಣಬಹುದು, ಮಹಾ ಶಿವರಾತ್ರಿಯಂದು ದೇಗುಲದಲ್ಲಿ ಲಕ್ಷಾಂತರ ಭಕ್ತರನ್ನು ಕಾಣಬಹುದಾಗಿದೆ. ಶಿವರಾತ್ರಿಯು ಶಿವನ ವಿಶಿಷ್ಟ ಹಬ್ಬವಾಗಿದೆ ಮತ್ತು ಸಾಮಾನ್ಯವಾಗಿ ಈ ಹಬ್ಬವು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯುವ ಆಚರಣೆಯಾಗಿದೆ. ಮತ್ತಿತ್ತರ  ದೇವತೆಗಳಾದ ವಿಷ್ಣು, ಬ್ರಹ್ಮ, ಮಹೇಶ್, ರಾಮ, ಅನ್ನಪೂರ್ಣೇಶ್ವರಿ, ಕರುಮಾರಿ ಅಮ್ಮ, ವೆಂಕಟರಮಣ ಸ್ವಾಮಿ, ಪಾಂಡುರಂಗ ಸ್ವಾಮಿ, ರಾಮ, ಸೀತಾ ಮತ್ತು ಲಕ್ಷ್ಮಣ ದೇವಸ್ಥಾನ, ಪಂಚಮುಖ ಗಣಪತಿ, ಆಂಜನೇಯ ಮತ್ತು ಪರಮೇಶ್ವರಿ ಕನ್ನಿಕಾ ದೇವಿಯ ಆವರಣದಲ್ಲಿ 11 ಸಣ್ಣ ವಿಶಿಷ್ಟ ದೇವಾಲಯಗಳನ್ನು ಕಾಣಬಹುದಾಗಿದೆ.

ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನವನ್ನು ತಲುಪುವುದು ಹೇಗೆ?

ವಿಮಾನದ ಮೂಲಕ: ಕೋಲಾರಕ್ಕೆ ಸಮೀಪದ ವಿಮಾನ ನಿಲ್ದಾಣ ಬೆಂಗಳೂರು ಆಗಿದೆ. ವಿಮಾನ ನಿಲ್ದಾಣದಿಂದ ಪ್ರಯಾಣಿಕರು ಕೋಲಾರ ತಲುಪಲು ಕ್ಯಾಬ್‌ಗಳನ್ನು ಬಾಡಿಗೆಗೆ ದೊರೆಯುತ್ತವೆ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸಬಹುದಾಗಿದೆ.

ರೈಲು ಮೂಲಕ: ಕೋರಮಂಡಲ್ ರೈಲು ನಿಲ್ದಾಣವು ದೇವಾಲಯಕ್ಕೆ ಸಮೀಪದಲ್ಲಿದೆ ಮತ್ತು 8 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು, ಮಂಗಳೂರು, ಹಾಸನ, ಕೋಲಾರ ಮತ್ತು ಹುಬ್ಬಳ್ಳಿಯಿಂದ ಉತ್ತಮ ಸಂಪರ್ಕ ಹೊಂದಿದ ರೈಲು ನಿಲ್ದಾಣವಾಗಿದೆ.

ರಸ್ತೆ ಮೂಲಕ: ರಸ್ತೆಯ ಮೂಲಕ ದೇವಾಲಯವನ್ನು ತಲುಪುವುದಾದರೆ, ಕೋಲಾರದ ಮೂಲಕ ಹೋಗಬೇಕು. ಕೋಲಾರವು ಬೆಂಗಳೂರಿನಿಂದ ಸುಮಾರು  2.5 ಗಂಟೆಗಳ ದೂರದಲ್ಲಿದೆ.

ಕಮ್ಮಸಂದ್ರ ಗ್ರಾಮ ಪಂಚಾಯತ್ ಬಸ್ ನಿಲ್ದಾಣವು ದೇವಾಲಯಕ್ಕೆ ಹತ್ತಿರದಲ್ಲಿದೆ, ಇದು 0.5 ಕಿಲೋಮೀಟರ್ ದೂರದಲ್ಲಿದೆ.

ಕೋಟಿಲಿಂಗೇಶ್ವರ ದೇವಸ್ಥಾನದ ದರ್ಶನದ ಸಮಯ : ದೇವಾಲಯವು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದೇವರ ದರ್ಶನವನ್ನು ಪಡೆಯಬಹುದಾಗಿದೆ.

ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಹತ್ತಿರದ ಸ್ಥಳಗಳು :

ಸೋಮೇಶ್ವರ ದೇವಾಲಯ:

ಸೋಮೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯ ಇದು ನಗರದಿಂದ 6 ಕಿಲೋ ಮೀಟರ್ ದೂರದಲ್ಲಿದೆ. ಇದು 14 ನೇ ಶತಮಾನದ ರಾಷ್ಟ್ರೀಯ ಪ್ರಾಮುಖ್ಯತೆಯ ಸೇರಿದ ದೇವಾಲಯವಾಗಿದೆ. ದೇವಾಲಯದ ಪ್ರವೇಶದ್ವಾರ ಗಮನಿಸಿದಾಗ ಎತ್ತರದ, ವಿವರವಾದ ಇಟ್ಟಿಗೆ ಮತ್ತು ಗಾರೆ ರಚನೆಯ ಮೂಲಕ ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ನಾವು ನೋಡಬಹುದಾಗಿದೆ.

ಕೆಜಿಎಫ್:

ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಕೆಜಿಎಫ್ ಎಂದೇ ಪ್ರಸಿದ್ಧವಾಗಿರುವ ಕೋಲಾರ ಚಿನ್ನದ ಗಣಿಯು ನಗರದಿಂದ 28 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಭಾರತದ ಅತ್ಯಂತ ಪ್ರಮುಖ ಚಿನ್ನದ ಗಣಿಗಳಲ್ಲಿ ಒಂದಾಗಿರುವ ಗಣಿಯಾಗಿದೆ ಮತ್ತು ವಿಶ್ವದ ಎರಡನೇ ಆಳವಾದ ಚಿನ್ನದ ಗಣಿ ಇದಾಗಿದೆ ಎಂದು ಹೇಳಲಾಗಿದೆ.

3.ಅಂತರಗಂಗೆ ದೇವಸ್ಥಾನ ಮತ್ತು ಗುಹೆಗಳು (ಕೋಲಾರ)

ದೇವತೆ: ಶಿವ

ವಿಶೇಷತೆ: ನೈಸರ್ಗಿಕ ಬುಗ್ಗೆ ನೀರು ಮತ್ತು ಗುಹೆ ಪರಿಶೋಧನೆಯೊಂದಿಗೆ ಬೆಟ್ಟದ ದೇವಾಲಯ.

ದೇವಾಲಯದ ಬಗ್ಗೆ:

ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಒಂದು ಸಣ್ಣ ಪರ್ವತ ಶ್ರೇಣಿ ಅಂತರಗಂಗೆ  ಪ್ರದೇಶವು ವೀಕ್ಷಿಸಲು ತುಂಬಾ ಸುಂದರವಾಗಿದೆ. ಇಲ್ಲಿನ ಪ್ರಾಚೀನ ಗುಹಾ ದೇವಾಲಯ ಮತ್ತು ಅರೋಗ್ಯ ವೃದ್ಧಿ ಗುಣಗಳನ್ನು ಹೊಂದಿರುವ ನೈಸರ್ಗಿಕ ಬುಗ್ಗೆಗೆ ಪ್ರಸಿದ್ದಿ ಆಗಿದೆ. ಈ ಗುಹಾ ದೇವಾಲಯವು ಶಿವನಿಗೆ ಪೂಜಿಸಲ್ಪಡುತ್ತದೆ, ಭಕ್ತರಿಗೆ ಒಂದು ಯಾತ್ರಾ ಸ್ಥಳವಾಗಿದೆ. ಈ ದೇವಾಲಯವು ಪರ್ವತ ಶ್ರೇಣಿಯ ನಡುವೆ ತುತ್ತತುದಿಯಲ್ಲಿ ಕಾಣಬಹುದಾಗಿದೆ ಮತ್ತು ಕಡಿದಾದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಆ ಪ್ರಕೃತಿಯ ರಮಣೀಯ ನೋಟವನ್ನು ನೋಡಬಹುದಾಗಿದೆ. ಈ ಗುಹಾ ದೇವಾಲಯವು ಪ್ರಾಚೀನ ಭಾರತೀಯ ಶಿಲಾ-ಕೆತ್ತನೆಯ ವಾಸ್ತುಶಿಲ್ಪದ ಸೊಬಗನ್ನು ಪ್ರವಾಸಿಗರು ಕಾಣಬಹುದಾಗಿದೆ.

ಈ ಸ್ಥಳವು ಪ್ರಾಚೀನ ಜ್ವಾಲಾಮುಖಿ ಗುಹೆಗಳು ಮತ್ತು ಹತ್ತಿರದ ಬೆಟ್ಟಗಳಿಂದ ಬರುವ ಪ್ರಕೃತಿ ವಿಸ್ಮಯ ಹೊಳೆಗಳಿಗೆ ಪ್ರಸಿದ್ದವಾಗಿವೆ. ಪ್ರವಾಸಿಗರು ಗುಹೆಗಳನ್ನು ಅನ್ವೇಷಿಸಬಹುದು ಮತ್ತು ಸುತ್ತಮುತ್ತಲಿನ ಬೆಟ್ಟಗಳ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಗುಹಾ ಚಾರಣಕ್ಕೆ ಪ್ರವೇಶ ಸಮಯ ಬೆಳಿಗ್ಗೆ 6 ಗಂಟೆಯಿಂದ  11 ಗಂಟೆವರೆಗೆ. ದೇವಾಲಯಕ್ಕೆ ಹಗಲಿನ ಯಾವುದೇ ಸಮಯದಲ್ಲಿ ಭೇಟಿ ಮಾಡಿ ದರ್ಶನವನ್ನು ಪಡೆದು ಪ್ರಕೃತಿಯ ವೀಕ್ಷಣೆಯನ್ನು ಮಾಡಬಹುದಾಗಿದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಕೋಲಾರದಿಂದ 3 ಕಿಲೋಮೀಟರ್ ದೂರದಲ್ಲಿದೆ.

ರೈಲಿನ ಮೂಲಕ: ಕೋಲಾರ ರೈಲು ನಿಲ್ದಾಣ. ಇದು ಅಂತರಗಂಗೆಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (BLR).

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

 ಕೋಲಾರ: ಅಂತರಗಂಗೆಯಿಂದ 6 ಕಿ.ಮೀ ದೂರದಲ್ಲಿರುವ ಕೋಲಾರವು ಚಿನ್ನದ ಗಣಿಗಳಿಗೆ ಜನಪ್ರಿಯ ಪುರಾತನ ಪಟ್ಟಣವಾಗಿದೆ.

ನಂದಿಬೆಟ್ಟ: ಅಂತರಗಂಗೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವು ಒಂದು ಪ್ರಸಿದ್ಧ ಗಿರಿಧಾಮ.

ಶಿವಗಂಗಾ ಬೆಟ್ಟಗಳು: ಅಂತರಗಂಗೆಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಶಿವಗಂಗಾ ಬೆಟ್ಟಗಳು.

  1. ಶ್ರೀ ಭೋಗ ನಂದೀಶ್ವರ ದೇವಸ್ಥಾನ (ನಂದಿ ಬೆಟ್ಟಗಳು, ಚಿಕ್ಕಬಳ್ಳಾಪುರ)

ದೇವತೆ: ಶಿವ (ಭೋಗ ನಂದೀಶ್ವರ)

ವಿಶೇಷತೆ: ಅತ್ಯುತ್ತಮ ಹೊಯ್ಸಳ ವಾಸ್ತುಶಿಲ್ಪವನ್ನು ಹೊಂದಿರುವ ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

ದೇವಾಲಯದ ಬಗ್ಗೆ :

ಭೋಗನಂದೀಶ್ವರ ದೇವಸ್ಥಾನ ಮತ್ತು ಅರುಣಾಚಲೇಶ್ವರ ದೇವಾಲಯಗಳು ಭಾರತದ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಅವಳಿ ಹಿಂದೂ ದೇವಾಲಯಗಳಾಗಿವೆ. ಸುಂದರ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಶಿವ ದೇವಾಲಯವಾಗಿದೆ.

 ಇದು ಕರ್ನಾಟಕದ ನೊಳಂಬವಾಡಿ ಶೈಲಿಯ ದ್ರಾವಿಡ ವಾಸ್ತುಶಿಲ್ಪದಲ್ಲಿ ಕಂಡು ಬರುವ ತುಂಬಾ ಪ್ರಾಚೀನ ದೇವಾಲಯವಾಗಿದೆ. ಚೋಳ ಸಾಮ್ರಾಜ್ಯದ ಕಾಲದಲ್ಲಿ  ಈ ಸ್ಥಳವನ್ನು  ಮರು ಸ್ಥಾಪನೆ ಮಾಡಲಾಯಿತು . ದೇವಾಲಯಗಳನ್ನು ಕೆತ್ತಿದ ಸಭಾ-ಮಂಟಪ, ಶಾಸನಗಳು ಮತ್ತು ಕಲಾಕೃತಿಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ, ಅವುಗಳಲ್ಲಿ ಇವು   ಶೈವ ಧರ್ಮಕ್ಕೆ ಸಂಬಂಧವನ್ನು ಹೊಂದಿವೆ.

ದೇವಾಲಯದ ಸಂಕೀರ್ಣದ ಹೊರಗೆ ಎರಡು ಸಣ್ಣ ದೇವತೆಗಳ ದೇವಾಲಯಗಳನ್ನು ಹೊಂದಿದೆ.  ದೇವಾಲಯಗಳ ಉತ್ತರಕ್ಕೆ ಯಾಲಿ ಕಂಬಗಳನ್ನು ಹೊಂದಿರುವ ನವರಂಗ ಮಂಟಪ  ಹೊಂದಿರುವ ಎರಡನೇ ಸಂಯುಕ್ತವಿದೆ. ಈ ದೇವಾಲಯದ ಹೊರಗೆ ದೊಡ್ಡ ಮೆಟ್ಟಿಲುಗಳ ಕಲ್ಯಾಣಿ ಇದೆ, ಇದನ್ನು ಸ್ಥಳೀಯವಾಗಿ ಶೃಂಗೇರಿ ತೀರ್ಥ ಎಂದು ಹೇಳಲಾಗುತ್ತದೆ, ಅಲ್ಲಿ ಧಾರ್ಮಿಕ ಆಚರಣೆಗಳ ಸಮಯದಲ್ಲಿ ದೀಪಗಳನ್ನು ಬೆಳಗಿಸಿ ಆರಾಧಿಸಲಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 7:30 ರಿಂದ ಸಂಜೆ 7 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ನಂದಿ ದೇವಸ್ಥಾನವನ್ನು ನಂದಿ ಗ್ರಾಮದಿಂದ ಸಾರ್ವಜನಿಕ ಸಾರಿಗೆಯ ಮೂಲಕ ಸುಲಭವಾಗಿ ಭೇಟಿ ನೀಡಬಹುದಾಗಿದೆ.

ರೈಲಿನ ಮೂಲಕ: ಚಿಕಬಳ್ಳಾಪುರ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ, ಇದು ದೇವಾಲಯದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ದೇವಾಲಯವಾಗಿದೆ.

ವಿಮಾನದ ಮೂಲಕ: ಬೆಂಗಳೂರು ವಿಮಾನ ನಿಲ್ದಾಣದಿಂದ 31 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಟಿಪ್ಪು ಸುಲ್ತಾನರ ಬೇಸಿಗೆ ವಿಹಾರ

*ಮುದ್ದೇನಹಳ್ಳಿ ವಸ್ತುಸಂಗ್ರಹಾಲಯ

*ಅಮೃತ ಸರೋವರ

5.ವೀರಭದ್ರ ದೇವಸ್ಥಾನ, ಲೇಪಾಕ್ಷಿ (ಚಿಕ್ಕಬಳ್ಳಾಪುರ ಹತ್ತಿರ, ಆಂಧ್ರ ಗಡಿಯಲ್ಲಿ)

ದೇವರು: ವೀರಭದ್ರ ದೇವರು (ಶಿವನ ರೂಪ)

ಹೆಸರುವಾಸಿಯಾಗಿದೆ: ನೇತಾಡುವ ಕಂಬ ಮತ್ತು ಬೆರಗುಗೊಳಿಸುತ್ತದೆ ವಿಜಯನಗರ ಶೈಲಿಯ ಕೆತ್ತನೆಗಳು.

ದೇವಾಲಯದ ಬಗ್ಗೆ :

ವೀರಭದ್ರ ದೇವಾಲಯವು ಭಾರತದ ಚಿಕ್ಕಬಳ್ಳಾಪುರ ಹತ್ತಿರ, ಆಂಧ್ರಪ್ರದೇಶ ರಾಜ್ಯದ ಗಡಿ ಲೇಪಾಕ್ಷಿಯಲ್ಲಿರುವ ಒಂದು ಹಿಂದೂ ಧಾರ್ಮಿಕ ದೇವಸ್ಥಾನವಾಗಿದೆ. ಈ ದೇವಾಲಯವು ಶಿವನ ಉಗ್ರ ರೂಪವಾದ ವೀರಭದ್ರನಿಗೆ ಅರ್ಪಿತವಾದ ದೇವಾಲಯವಾಗಿದೆ.

ಈ ದೇವಸ್ಥಾನವನ್ನು ಲೇಪಾಕ್ಷಿ ಪಟ್ಟಣದ ದಕ್ಷಿಣ ಭಾಗದಲ್ಲಿ, ಆಮೆಯ ರಚನೆಯಲ್ಲಿ ದೊಡ್ಡ ಗ್ರಾನೈಟ್ ಬಂಡೆಯ ಸಣ್ಣ ಗುಡ್ಡದ ಮೇಲೆ ನಿರ್ಮಾಣ ಮಾಡಲಾಗಿದೆ, ಆದ್ದರಿಂದ ಇದನ್ನು ಕೂರ್ಮ ಶೈಲ ಎಂದು ಪ್ರಾಮುಖ್ಯತೆಯನ್ನು ಪಡೆದಿದೆ. ಈ ದೇವಾಲಯವು ಬೆಂಗಳೂರಿನಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ಕ್ಷೇತ್ರವಾಗಿದೆ.  ದೇವಾಲಯವನ್ನು  ಹಿಂದೂಪುರದಿಂದ ಒಂದು ಮಾರ್ಗ ಇಲ್ಲಿಗೆ ಇದೆ.  ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿ ಈ ಸ್ಥಳವನ್ನು ತಲುಪಬಹುದಾಗಿದೆ.

16 ನೇ ಶತಮಾನದಲ್ಲಿ  ಈ ದೇವಾಲಯದ ನಿರ್ಮಾಣವನ್ನು ಮಾಡಿದ್ದು  ವಾಸ್ತುಶಿಲ್ಪದ ರಚನೆಗಳು ವಿಜಯನಗರ ಶೈಲಿಯಲ್ಲಿ ನಿರ್ಮಾಣವನ್ನು ಮಾಡಲಾಗಿದೆ, ದೇವಾಲಯದ  ಕೆತ್ತನೆಗಳು ಮತ್ತು ವರ್ಣಚಿತ್ರಗಳು ಎಲ್ಲೆಡೆ ಕಾಣಬಹುದಾಗಿದೆ. ಈ ದೇವಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರೀಯವಾಗಿ ಸಂರಕ್ಷಿತ ಸ್ಮಾರಕಗಳಲ್ಲಿ ಗುರುತಿಸಲಾಗಿದೆ  ಮತ್ತು ಇದನ್ನು  ವಿಜಯನಗರ ದೇವಾಲಯಗಳಲ್ಲಿ ಪ್ರಮುಖವಾದ ದೇವಾಲಯಗಳಲ್ಲಿ ಒಂದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಲೇಪಾಕ್ಷಿ ಬಸ್ ನಿಲ್ದಾಣದಿಂದ ಸುಮಾರು 400 ಮೀಟರ್ ದೂರದಲ್ಲಿ ದೇವಾಲಯವಿದೆ.

ರೈಲಿನ ಮೂಲಕ: ಹಿಂದೂಪುರ ರೈಲು ನಿಲ್ದಾಣವು ಲೇಪಾಕ್ಷಿ ದೇವಸ್ಥಾನಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದ್ದು ಇಲ್ಲಿಂದ ಭೇಟಿ ಮಾಡಬಹುದಾಗಿದೆ.

ವಿಮಾನದ ಮೂಲಕ:  ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ನಂತರ ಇದು 100 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಬೃಹತ್ ಏಕಶಿಲೆಯ ಬುಲ್ ಪ್ರತಿಮೆ

*ಲೇಪಾಕ್ಷಿ ಜಟಾಯು ಶಿಲ್ಪ

 *ಘಾಟಿ ಸುಬ್ರಹ್ಮಣ್ಯ ದೇವಸ್ಥಾನ

 *ನಾಗಾರ್ಜುನ ಸಾಗರ್ ಅಣೆಕಟ್ಟುಗಳು

6.ಕೂಡಲಸಂಗಮ (ಬಳ್ಳಾರಿ ಸುತ್ತಮುತ್ತಲ)

ದೇವರು: ಸಂಗಮೇಶ್ವರ (ಶಿವ)

ಪ್ರಾಮುಖ್ಯತೆ: ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನ ಅಂತಿಮ ವಿಶ್ರಾಂತಿ ಸ್ಥಳ.

ದೇವಾಲಯದ ಬಗ್ಗೆ :

12 ನೇ ಶತಮಾನದಲ್ಲಿ ಜಾತವೇದ ಮುನಿ ಸಾರಂಗಮಠ ಎಂಬ ಶಿಕ್ಷಣ ಕೇಂದ್ರವನ್ನು ಸ್ಥಾಪನೆಯನ್ನು ಮಾಡಿದ್ದರು ಮತ್ತು ಬಸವೇಶ್ವರ, ಚನ್ನಬಸವಣ್ಣ ಮತ್ತು ಅಕ್ಕನಾಗಮ್ಮ ವಿದ್ಯಾರ್ಥಿಗಳಾಗಿ ಇಲ್ಲಿ ಇದ್ದರೆಂದು ಹೇಳಲಾಗುತ್ತದೆ. ಬಸವೇಶ್ವರರು ತಮ್ಮ ಅಭ್ಯಾಸವನ್ನು ಇಲ್ಲೆ ನಡೆಸಿದ್ದರು ಮತ್ತು ಕಲ್ಯಾಣದಿಂದ ಬಂದ ನಂತರ, ಅವರು ಈ ಪ್ರದೇಶದಲ್ಲಿಯೇ ದೇವರೊಂದಿಗೆ ಐಕ್ಯರಾದರು ಎಂದುನಂಬಲಾಗುತ್ತದೆ.

ಕೃಷ್ಣ ನದಿಯನ್ನು ಹಿಂದೂಗಳು ಹಿಂದಿನಿಂದಲೂ ಪವಿತ್ರವೆಂದು ಪೂಜಿಸಿ ಆರಾಧಿಸುತ್ತಾರೆ. ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುವವರ ಎಲ್ಲಾ ಪಾಪಗಳನ್ನು ನಿವಾರಣೆಯಾಗುತ್ತವೆ ಎಂಬ ನಂಬಿಕೆಯು ಕೂಡ ಇದೆ. ಪ್ರತಿ ಹನ್ನೆರಡು ವರ್ಷಕೊಮ್ಮೆ ಕೃಷ್ಣಾ ನದಿಯ ದಡದಲ್ಲಿ ಆಚರಿಸುವ ಕೃಷ್ಣ ಪುಷ್ಕರಂ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಕೃಷ್ಣ ನದಿಯ ದಡದ ಉದ್ದಕ್ಕೂ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅನೇಕ ಧಾರ್ಮಿಕ ಕ್ಷೇತ್ರವನ್ನು ಕಾಣಬಹುದಾಗಿದೆ. ಕೃಷ್ಣ ನದಿಯ ಮೂಲ ಸ್ಥಳವು ಮಹಾಗಣಪತಿ ಮಂದಿರ ಮತ್ತು ಕಾಶಿವಿಶ್ವೇಶ್ವರ ದೇವಸ್ಥಾನಕ್ಕೆ ಪ್ರಸಿದ್ದಿಯಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆವರೆಗೆ ತೆರೆದಿರುತ್ತದೆ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 8:00 ಗಂಟೆವರೆಗೆ ತೆರೆದಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಬಾಗಲಕೋಟೆಯಿಂದ ಕೂಡಲ ಸಂಗಮ ತಲುಪಲು ಬಸ್ಸುಗಳ ಸೌಲಭ್ಯ ಕೂಡ ಇವೆ.

ರೈಲಿನ ಮೂಲಕ: ಬಾಗಲಕೋಟೆ ಜಂಕ್ಷನ್ ಹತ್ತಿರದ ರೈಲು ನಿಲ್ದಾಣ 50 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಬೆಳಗಾವಿ ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ, ಇವು ಸುಮಾರು

170 ಕಿ.ಮೀ ದೂರದಲ್ಲಿವೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಕೂಡಲ ಸಂಗಮದಿಂದ ಆಲಮಟ್ಟಿ ಅಣೆಕಟ್ಟು 32 ಕಿ.ಮೀ. ದೂರದಲ್ಲಿದೆ.

*ಈ ಸ್ಥಳಗಳು ಕೂಡಲಸಂಗಮ ಕ್ರಾಸ್ ನಿಂದ 90 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದಾಗಿದೆ.

*ವಿಜಯಪುರದಲ್ಲಿ ನಾವು ಗೋಲ್ಗುಂಬಜ್, ಇಬ್ರಾಹಿಂ ರೋಜಾ, ಶಿದ್ದೇಶ್ವರ ದೇವಸ್ಥಾನ, ತೊರವಿ ಲಕ್ಷ್ಮಿ ನರಸಿಂಹ ದೇವಸ್ಥಾನವನ್ನುಕೂಡ ಭೇಟಿ ಮಾಡಬಹುದಾಗಿದೆ.

*ಬಾಗಲಕೋಟೆಯಲ್ಲಿ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ, ಜಿಲ್ಲಾ ಆಡಳಿತ ಕಚೇರಿ ಇತ್ಯಾದಿಗಳನ್ನೂ ನೋಡಬಹುದಾಗಿದೆ.

*ತಂಗಡಗಿ ಸೇತುವೆಯಲ್ಲಿ ಶರಣೆ ನೀಲಾಂಬಿಕಾ, ಹಡಪದ ಅಪ್ಪಣ್ಣ ಮತ್ತು ಮಡಿವಾಳ ಮಾಚಿದೇವರ ಐಕ್ಯ ಮಂಟಪವನ್ನು ಭೇಟಿ ಮಾಡಬಹುದು. ತಂಗಡಗಿ-20 ಕಿ.ಮೀ. ದೂರದಲ್ಲಿದೆ.

7.ವಿರೂಪಾಕ್ಷ ದೇವಸ್ಥಾನ, ಹಂಪಿ (ಬಳ್ಳಾರಿ ಜಿಲ್ಲೆ)

ದೇವತೆ: ಭಗವಾನ್ ಶಿವ (ವಿರೂಪಾಕ್ಷ)

ವಿಶೇಷತೆ : UNESCO ಸೈಟ್; ಹಂಪಿಯ ಅತ್ಯಂತ ಹಳೆಯ ಸಕ್ರಿಯ ದೇವಾಲಯ.

ದೇವಾಲಯದ ಬಗ್ಗೆ :

ವಿರೂಪಾಕ್ಷ ದೇವಾಲಯ ಪ್ರಸಿದ್ದವಾದ ದೇವಾಲಯವಾಗಿದ್ದು  ಇದು ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಇದೆ , ಇದು 7 ನೇ ಶತಮಾನದ ಶಿವನ ದೇವಾಲಯವಾಗಿದ್ದು  ಇದು ತುಂಗಭದ್ರಾ ನದಿಯ ದಡದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಹಂಪಿಯಲ್ಲಿರುವ ಸ್ಮಾರಕಗಳ ಗುಂಪಿನಲ್ಲಿ ಈ ದೇವಾಲಯವು ಒಂದಾಗಿದೆ, ವಿರೂಪಾಕ್ಷ ದೇವಾಲಯವನ್ನು  ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ.  ವಿಜಯನಗರ ಸಾಮ್ರಾಜ್ಯದ ದೊರೆಯಾದ ಪ್ರೌಡ ದೇವ ರಾಯನ ನಾಯಕ ಲಕ್ಕನ್ ದಂಡೇಶ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ ಎಂದು ಹೇಳಲಾಗಿದೆ.

ವಿರೂಪಾಕ್ಷ ದೇವಾಲಯದಲ್ಲಿ ಗರ್ಭಗುಡಿ, ಮುಂಭಾಗದಲ್ಲಿ ಮೂರು ಕೋಣೆಗಳು ಮತ್ತು  ಕಂಬದ ಸಭಾಂಗಣ ಹೊಂದಿದ್ದು, ತೆರೆದ ಕಂಬದ ಸಭಾಂಗಣವನ್ನು ಕಾಣಬಹುದಾಗಿದೆ. ಇಲ್ಲಿನ ಕಂಬಗಳನ್ನು ಸೂಕ್ಷ್ಮವಾಗಿ ಕೆತ್ತಿ ರಚಿಸಲಾಗಿದೆ. ಸುಂದರವಾದ ಪ್ರವೇಶ ದ್ವಾರಗಳು,ವಿಶಾಲವಾದ  ಅಂಗಳಗಳು, ಸುತ್ತಲೂ ಸಣ್ಣ ದೇವಾಲಯಗಳು ಮತ್ತು ಇತರ ನಿರ್ಮಾಣಗಳು ದೇವಾಲಯದಲ್ಲಿ ಕಾಣಬಹುದಾಗಿದೆ.

ಒಂಬತ್ತು ಹಂತಗಳಿಂದ ಪೂರ್ವ ದ್ವಾರವು ರಚನೆಯಾಗಿದ್ದು, 50 ಮೀಟರ್‌ಗಳಷ್ಟು ದೊಡ್ಡದಾಗಿ ನಿರ್ಮಾಣ ಮಾಡಲಾಗಿದೆ, ಕೆಲವು ಪ್ರಾಚೀನ ರಚನೆಗಳನ್ನು ಕೂಡ ನೋಡಬಹುದಾಗಿದೆ. ಇದು ವಿವಿಧ ಉಪ-ದೇವಾಲಯಗಳಿರುವ ಹೊರ ದೇವಾಲಯಗಳಿಗೆ ಪ್ರವೇಶವನ್ನು ಸಂಪರ್ಕಿಸುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ನಿಂಬಾಪುರದಿಂದ ಹೊಸಪೇಟೆಗೆ ಬಸ್ ಮೂಲಕ ತಲುಪಿದ ನಂತರ ಹೊಸಪೇಟೆಯಿಂದ ಹಂಪಿಗೆ ಮತ್ತೊಂದು ಸ್ಥಳೀಯ ಬಸ್ ಮೂಲಕ ತಲುಪಬಹುದಾಗಿದೆ.

ರೈಲಿನ ಮೂಲಕ: ಹಂಪಿಗೆ ಹತ್ತಿರದ ರೈಲು ನಿಲ್ದಾಣ ಹೊಸಪೇಟೆಯಲ್ಲಿದೆ.

ವಿಮಾನದ ಮೂಲಕ: ವಿದ್ಯಾನಗರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ವಿಠಲ ದೇವಾಲಯ: ಹಂಪಿಯಲ್ಲಿ ಬಹು ಸುಂದರವಾಗಿ ನಿರ್ಮಾಣವನ್ನು ಮಾಡಲಾಗಿದೆ. ವಿಠಲ ದೇವಾಲಯವು 16 ನೇ ಶತಮಾನಕ್ಕೆ ಹಿಂದಿನದು ಬಹು ಅದ್ಬುತ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದಾಗಿದೆ.

ಕಮಲದ ಅರಮನೆ :  ರಾಜಮನೆತನದ ಮಹಿಳೆಯರಿಗಾಗಿ ನಿರ್ಮಾಣ ಮಾಡಿರುವ ಮತ್ತೊಂದು ಕಟ್ಟಡ ಇದಾಗಿದೆ ಇದು ಕಮಲದಂತಹ ರಚನೆಯನ್ನು ಹೊಂದಿದ್ದು ಈ ಗುಮ್ಮಟದ ಹೆಸರು ಕೂಡ ಕಮಲದ ಅರಮನೆ ಎಂದು ಪ್ರಸಿದ್ದಿಯಾಗಿದೆ.

  1. ಹಜಾರ ರಾಮ ದೇವಸ್ಥಾನ, ಹಂಪಿ

ದೇವತೆ: ರಾಮ

ವಿಶೇಷತೆ: ದೇವಾಲಯದ ಗೋಡೆಗಳ ಮೇಲೆ ರಾಮಾಯಣವಿಷಯದ ಕಲ್ಲಿನ ಕೆತ್ತನೆಗಳು.

ದೇವಾಲಯದ ಬಗ್ಗೆ:

ಹಜಾರ ರಾಮ ದೇವಾಲಯವನ್ನು 15 ನೇ ಶತಮಾನದ ಪ್ರಾರಂಭದಲ್ಲಿ ವಿಜಯನಗರದ ರಾಜ ಎರಡನೇ ದೇವರಾಯ ಇದನ್ನು ನಿರ್ಮಾಣ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಇದನ್ನುಮೊದಲು ಸರಳವಾಗಿ ನಿರ್ಮಾಣ ಮಾಡಲಾಗಿತ್ತು. ಇದು ಕೇವಲ ಗರ್ಭಗುಡಿ, ಕಂಬಗಳ ಸಭಾಂಗಣ ಮತ್ತು ಅರ್ಧ ಮಂಟಪವನ್ನು ಮಾತ್ರ ಹೊಂದಿತ್ತು. ನಂತರ ದೇವಾಲಯದ ಪುನರ್ ನಿರ್ಮಾಣ ಮಾಡಲಾಯಿತು.  ತೆರೆದ ಮುಖಮಂಟಪ ಮತ್ತು  ಕಂಬಗಳನ್ನು ನಿರ್ಮಾಣ ಮಾಡಿ ನವೀಕರಿಸಲಾಯಿತು.

ಹಜಾರ ರಾಮ ದೇವಾಲಯವು ಹಲವು ಬಗೆಯ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ದೇವಾಲಯವಾಗಿದೆ. ದೇವಾಲಯದ ಹೆಸರೆ ವಿಶೇಷವಾಗಿದ್ದು  ‘ಹಜಾರ ರಾಮ’ ಎಂಬ ಪದದ ಅರ್ಥ ಸಾವಿರ ರಾಮ. ಈ ದೇವಾಲಯದಲ್ಲಿ ಗೋಡೆಗಳ ಕಲ್ಲಿನ ಮೇಲೆ ಕೆತ್ತಿರುವ ರಾಮಾಯಣದ ಕಥೆಯನ್ನು ನೋಡಬಹುದಾಗಿದೆ. ದೇವಾಲಯದ ಹೊರ ಗೋಡೆಗಳಲ್ಲಿ ರಾಮ ಮತ್ತು ಕೃಷ್ಣನ  ರಚಿಸಲಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹಂಪಿಯು ರಸ್ತೆ ಮೂಲಕ ಹಲವಾರು ಪಟ್ಟಣಗಳು ​​ಮತ್ತು ನಗರಗಳಿಗೆ ಸಂಪರ್ಕ ಹೊಂದಿದೆ ಬಸ್ ಮೂಲಕ ಭೇಟಿ ಮಾಡಬಹುದಾಗಿದೆ.

ರೈಲಿನ ಮೂಲಕ: ಹಂಪಿಗೆ ಹತ್ತಿರದ ರೈಲು ನಿಲ್ದಾಣ ಹೊಸಪೇಟೆಯಲ್ಲಿದೆ.

ವಿಮಾನದ ಮೂಲಕ: ವಿದ್ಯಾನಗರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಹತ್ತಿರದಲ್ಲಿ  ಪ್ರಸಿದ್ದ ಸ್ಠಳಗಳು:

*ವಿರೂಪಾಕ್ಷ ದೇವಾಲಯ

*ಮಹಾನವಮಿ ದಿಬ್ಬ / ದಸರಾ ದಿಬ್ಬ

*ಪಟ್ಟಾಭಿರಾಮ ದೇವಸ್ಥಾನ

*ಹೇಮಕೂಟ ಬೆಟ್ಟದ ದೇವಾಲಯ ಸಂಕೀರ್ಣ

9. ರಘುನಾಥಸ್ವಾಮಿ ದೇವಸ್ಥಾನ, ಮಾಗಡಿ (ಚಿಕ್ಕಬಳ್ಳಾಪುರ ಜಿಲ್ಲೆ)

ದೇವರು: ರಾಮ

ವಿಶೇಷತೆ: ರಮಣೀಯ ಬೆಟ್ಟದ ಸ್ಥಳ ಮತ್ತು ಶಾಂತಿಯುತ ವಾತಾವರಣ.

ದೇವಾಲಯದ ಬಗ್ಗೆ :

ರಂಗನಾಥ ಸ್ವಾಮಿ ದೇವಾಲಯ ಕರ್ನಾಟಕ ರಾಜ್ಯದ ಐತಿಹಾಸಿಕ ಪಟ್ಟಣವಾದ ಮಾಗಡಿಯಲ್ಲಿ ಕಾಣಬಹುದಾಗಿದೆ. ಈ ದೇವಾಲಯಗಳು ಭಾರತೀಯ ಪುರಾತತ್ವ ಸಮೀಕ್ಷೆಯ  ಅಡಿಯಲ್ಲಿ ಸಂರಕ್ಷಿತ ಸ್ಮಾರಕಗಳಾಗಿರುವುದು ವಿಶೇಷವಾಗಿದೆ.

ಚೋಳ ರಾಜವಂಶವು ಈ ಸ್ಥಳದಲ್ಲಿ ಆಡಳಿತ ನಡೆಸುತ್ತಿದ್ದಾಗ ಮಾಗಡಿಯನ್ನ ಸ್ಥಾಪನೆ ಮಾಡಿತು. ಕೆಂಪೇಗೌಡರು ಮತ್ತು ಅವರ ನಂತರ ಬಂದು ಆಡಳಿತ ನಡೆಸಿದ ನಾಯಕರು ಈ ಪ್ರದೇಶದಲ್ಲಿ ಬಹಳಷ್ಟು ವಾಸ್ತುಶಿಲ್ಪ ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು.

ತಿರುಪತಿಯಲ್ಲಿರುವಂತೆ ನಿಂತಿರುವ ಭಂಗಿಯಲ್ಲಿ ದೇವರು ಮಹಾವಿಷ್ಣುವನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ಮಹಾವಿಷ್ಣುವು ಪಶ್ಚಿಮಕ್ಕೆ ಮುಖ ಮಾಡಿರುವುದರಿಂದ ಈ ದೇವಾಲಯದ ಹೆಸರು ಪಶ್ಚಿಮ ವೆಂಕಟಾಚಲಪತಿ ದೇವಾಲಯ ಎಂದೆ ಪ್ರಸಿದ್ಧವಾಗಿದೆ. ಈ ದೇವಾಲಯ ಇರುವ ಸ್ಥಳವನ್ನು ತಿರುಮಲೆ ಎಂದು ಹೇಳಲಾಗುತ್ತದೆ.  ದೇವಾಲಯದ ಗೋಡೆಯ ಮೇಲೆ ಕಾಣಸಿಗುವ ರಂಗನಾಥನ ಸಣ್ಣ ಪ್ರತಿಮೆ ಇದ್ದು ರಂಗನಾಥ ದೇವಾಲಯ ಎಂದು ಪ್ರಸಿದ್ದಿಯಾಗಿದೆ, ಈ ಪ್ರತಿಮೆಯು ಪ್ರತಿ ವರ್ಷವು  ಗಾತ್ರದಲ್ಲಿ ದೊಡ್ಡದಾಗುತ್ತಿದೆ ಎಂದು ಹೇಳಲಾಗುತ್ತದೆ. ರಂಗನಾಥ ದೇವಾಲಯದ ಗರ್ಭಗುಡಿಯನ್ನು ಪ್ರಥಮ ಬಾರಿಗೆ 12 ನೇ ಶತಮಾನದ ಪ್ರಾರಂಭದಲ್ಲಿ ಚೋಳ ದೊರೆ ಪವಿತ್ರಗೊಳಿಸಿದ್ದಾರೆ  ಮತ್ತು ಆಗಿನಿಂದ ದೇವಸ್ಥಾನದ  ನವೀಕರಣ ನಡೆಯುತ್ತಲೆ ಇದೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30 ವರೆಗೆ ಸಂಜೆ 4:30 ರಿಂದ 7:30 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಬೆಂಗಳೂರಿನಿಂದ ಮಾಗಡಿಗೆ ಬಸ್ ಬೆಳಿಗ್ಗೆ 06:25 ಕ್ಕೆ ಮತ್ತು ಕೊನೆಯ ಬಸ್ ಸಂಜೆ 05:43 ಲಭ್ಯವಿದೆ.

ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಯಶವಂತಪುರದಲ್ಲಿದ್ದು, ಇದು 50 ಕಿ.ಮೀ ದೂರದಲ್ಲಿರುವ ನಿಲ್ದಾಣವಾಗಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದ್ದು, ಇದು 80 ಕಿ.ಮೀ ದೂರದಲ್ಲಿರುವ ನಿಲ್ದಾಣವಾಗಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯ

*ಮುತ್ತುರಾಯಸ್ವಾಮಿ ದೇವಾಲಯ

10.ನರಸಿಂಹ ಸ್ವಾಮಿ ದೇವಸ್ಥಾನ, ದೇವರಾಯನದುರ್ಗ (ತುಮಕೂರು/ಪೂರ್ವ ಕರ್ನಾಟಕದ ಗಡಿ)

ದೇವತೆ: ನರಸಿಂಹ (ವಿಷ್ಣು)

ಪ್ರಸಿದ್ಧ: ಪವಿತ್ರ ಬೆಟ್ಟದ ದೇವಾಲಯ ಮತ್ತು ಅವಳಿ ದೇವಾಲಯಗಳು (ಯೋಗ ಮತ್ತು ಭೋಗ ನರಸಿಂಹ).

ದೇವಾಲಯದ ಬಗ್ಗೆ :

ದೇವರಾಯನದುರ್ಗದಲ್ಲಿ, ಯೋಗ ಲಕ್ಷ್ಮಿ ನರಸಿಂಹ ಸ್ವಾಮಿ ಮತ್ತು ಭೋಗ ನರಸಿಂಹ ಸ್ವಾಮಿಗೆ ಸಮರ್ಪಿತವಾದ ದೇವಾಲಯಗಳು ಮತ್ತು ಹನುಮನ  ಸಂಜೀವರಾಯ ದೇವಾಲಯವಿದೆ. ನರಸಿಂಹ ದೇವಸ್ಥಾನದ ಸಮೀಪ ನರಸಿಂಹ ತೀರ್ಥ, ಪರಾಶರ ತೀರ್ಥ ಮತ್ತು ಪಾದ ತೀರ್ಥ ಎಂಬ ಮೂರು ಪವಿತ್ರ ತೀರ್ಥ ಸ್ಥಳಗಳನ್ನು ಕಾಣಬಹುದಾಗಿದೆ. ಪಾದ ತೀರ್ಥವು ದೊಡ್ಡ ಗುಹೆಯೊಳಗೆ ಇರುವ ಕೊಳವಾಗಿದೆ.  ರಾಮ, ಸೀತೆ ಮತ್ತು ಲಕ್ಷ್ಮಣನ ಮೂರ್ತಿಗಳನ್ನು ಹೊಂದಿರುವ ಇನ್ನೊಂದು ಗುಹೆ ಕೂಡ ಇಲ್ಲಿ ಇದೆ. ಜಯಮಂಗಲಿ ಮತ್ತು ಶಿಂಷಾ ನದಿಗಳು ಈ ಬೆಟ್ಟದಲ್ಲಿಯೇ ಹುಟ್ಟಿ ಹರಿಯುತ್ತವೆ.

ಭೇಟಿ ನೀಡಲು ಉತ್ತಮ ಸಮಯ: ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ:  ತುಮಕೂರಿನಿಂದ 15 ಕಿ.ಮೀ ದೂರದಲ್ಲಿ ಬಸ್ ಸೌಲಭ್ಯ ದೊರೆಯುತ್ತದೆ.

ರೈಲಿನ ಮೂಲಕ: ದೇವರಾಯನದುರ್ಗಕ್ಕೆ ಹತ್ತಿರದ ರೈಲು ನಿಲ್ದಾಣ ತುಮಕೂರು ರೈಲು ನಿಲ್ದಾಣವಾಗಿದ್ದು , ಇದು 15 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಬೆಂಗಳೂರು ವಿಮಾನ ನಿಲ್ದಾಣವು ೧೦೩ ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಶಿವಗಂಗೆ (30 ಕಿ.ಮೀ) ದೂರದಲ್ಲಿದೆ.

*ಮಂದರಗಿರಿ (19 ಕಿ.ಮೀ) ದೂರದಲ್ಲಿದೆ.

*ಮಧುಗಿರಿ ಕೋಟೆ (45 ಕಿ.ಮೀ) ದೂರದಲ್ಲಿದೆ.

*ಮೈದೇನಹಳ್ಳಿ ಕೃಷ್ಣಮೃಗ ಅಭಯಾರಣ್ಯ ದೂರದಲ್ಲಿದೆ.

Leave a Comment

Your email address will not be published. Required fields are marked *

Scroll to Top