ಮುರ್ಡೇಶ್ವರ ದೇವಾಲಯ

ಮುರ್ಡೇಶ್ವರ ಎಂಬ ಹೆಸರಿನ ಮೂಲ ರಾಮಾಯಣ ಕಾಲದ್ದಾಗಿದ್ದು ಪುರಾತನ ಧಾರ್ಮಿಕ ಇತಿಹಾಸವನ್ನು ಹೊಂದಿದೆ. ಹಿಂದೂ ದೇವರುಗಳು ಆತ್ಮ-ಲಿಂಗ ಎಂಬ ದೈವಿಕ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಮತ್ತು ಅಜೇಯತೆಯನ್ನು ಪಡೆದು ಧನ್ಯರಾಗುತ್ತಾರೆ.

ಲಂಕಾಧಿಪತಿಯಾದ ರಾವಣನು ಆತ್ಮ-ಲಿಂಗವನ್ನು ಪಡೆಯುವ ಮೂಲಕ ಅಮರತ್ವವನ್ನು ಪಡೆಯಲು ಬಯಸಿದನು. ಆತ್ಮ -ಲಿಂಗವು ಶಿವನದ್ದಾಗಿದ್ದು , ರಾವಣನು ಭಕ್ತಿಯಿಂದ ಶಿವನ ಕುರಿತು ತಪಸ್ಸನ್ನು ಆಚರಿಸಿ. ಅವನ ಪ್ರಾರ್ಥನೆಯಿಂದ ಸಂತೋಷಗೊಂಡ ಶಿವನು ಅವನ ಮುಂದೆ ಪ್ರತ್ಯಕ್ಷನಾಗಿ ಅವನಿಗೆ ಏನು ವರ ಬೇಕು ಎಂದು ಕೇಳಿದನು. ರಾವಣನು ಆತ್ಮ-ಲಿಂಗವನ್ನು ತನಗೆ ಕೊಡುವಂತೆ ಕೇಳಿದನು . ಲಂಕೆಯನ್ನು ತಲುಪುವ ಮೊದಲು ಅದನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡುವಂತಿಲ್ಲ ಎಂಬ ಷರತ್ತಿನ ಮೇಲೆ ಶಿವನು ಅವನಿಗೆ ವರವನ್ನು ನೀಡಲು ತಯಾರಾದನು.
ಆತ್ಮ-ಲಿಂಗವನ್ನು ಯಾವುದೇ ಕಾರಣಕ್ಕಾದರೂ ನೆಲದ ಮೇಲೆ ಇರಿಸಿದರೆ, ಅದನ್ನು ಅದನ್ನು ಮತ್ತೆ ಎತ್ತಲು ಅಸಾಧ್ಯ. ತನ್ನ ವರವನ್ನು ಪಡೆದ ನಂತರ, ರಾವಣನು ಲಂಕೆಗೆ ತನ್ನ ಪ್ರಯಾಣವನ್ನು ಮತ್ತೆ ಪ್ರಾರಂಭಿಸಿದನು.

ಈ ವಿಚಾರದ ಬಗ್ಗೆ ತಿಳಿದ ವಿಷ್ಣು ಪರಮಾತ್ಮನು, ಆತ್ಮಲಿಂಗದ ಸಹಾಯದಿಂದ ರಾವಣ ಅಮರತ್ವವನ್ನು ಪಡೆದು ಭೂಮಿಯ ಮೇಲೆ ಕೇಡು ಮಾಡಬಹುದು ಎಂದು ತಿಳಿದ ವಿಷ್ಣು ಪರಮಾತ್ಮನು. ಅವನು ಗಣೇಶನ ಬಳಿಗೆ ಹೋಗಿ ಆತ್ಮಲಿಂಗವು ಲಂಕೆಯನ್ನು ತಲುಪದಂತೆ ಮಾಡಬೇಕೆಂದು ವಿನಂತಿಸಿದನು . ರಾವಣನು ಪ್ರತಿ ಸಂಜೆಯೂ ಯಾವುದೇ ಕಾರಣಕ್ಕೂ ತಪ್ಪದೆ ಪ್ರಾರ್ಥನೆಗಳನ್ನು ಮಾಡುವ ಅತ್ಯಂತ ಭಕ್ತಿಯುಳ್ಳ ವ್ಯಕ್ತಿ ಎಂದು ಗಣಪತಿಗೆ ತಿಳಿದಿತ್ತು. ಈ ಸಂದರ್ಭವನ್ನು ಬಳಸಿಕೊಳ್ಳಲು ಅವನು ನಿರ್ಧರಿಸಿದನು ಮತ್ತು ರಾವಣನಿಂದ ಆತ್ಮಲಿಂಗವನ್ನು ಪಡೆದುಕೊಳ್ಳುವ ಉಪಾಯವನ್ನು ಮಾಡಿದನು.

ರಾವಣ ಗೋಕರ್ಣವನ್ನು ತಲುಪುತಿದ್ದಂತೆ, ವಿಷ್ಣು ತನ್ನ ಶಕ್ತಿಯಿಂದ ಸೂರ್ಯನ ಬೆಳಕನ್ನು ಮರೆಮಾಚಿ ಅವನಿಗೆ ಮುಸ್ಸಂಜೆಯ ವಾತಾವರಣ ಕಾಣುವಂತೆ ಮಾಡಿದನು. ರಾವಣನು ಈಗ ತನ್ನ ಸಂಜೆಯ ಆಚರಣೆಗಳನ್ನು ಮಾಡಬೇಕಾದ ಸಮಯವಾದ್ದರಿಂದ ರಾವಣನು ಆತ್ಮ-ಲಿಂಗವನ್ನು ಕೈಯಲ್ಲಿಟ್ಟುಕೊಂಡು ತನ್ನ ದಿನನಿತ್ಯದ ಆಚರಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಯೋಚಿಸುತ್ತಿದನು. ಈ ಸಮಯದಲ್ಲಿ, ಬ್ರಾಹ್ಮಣ ಬಾಲಕನ ವೇಷದಲ್ಲಿರುವ ಗಣಪತಿಯು ಅವನ ಎದುರಿಗೆ ಬಂದನು.

ರಾವಣನು ಗಣೇಶನ ಬಳಿ ತನ್ನ ಆಚರಣೆಗಳನ್ನು ಮಾಡುವವರೆಗೆ ಆತ್ಮ-ಲಿಂಗವನ್ನು ನೀನು ಇದನ್ನು ಹಿಡಿದಿಟ್ಟುಕೊ ಎಂದು ವಿನಂತಿಸಿದನು ಮತ್ತು ಅದನ್ನು ನೆಲದ ಮೇಲೆ ಇಡದಂತೆ ಗಣೇಶನ ಬಳಿ ಕೇಳಿಕೊಂಡನು. ಗಣೇಶನು ರಾವಣನನ್ನು ಮೂರು ಬಾರಿ ಕೂಗಿ ಕರೆಯುವುದಾಗಿ ಮತ್ತು ಆ ಸಮಯದಲ್ಲಿ ರಾವಣ ಹಿಂದುರುಗಿ ಬರದಿದ್ದರೆ, ಆತ್ಮ-ಲಿಂಗವನ್ನು ನೆಲದ ಮೇಲೆ ಇರಿಸುತ್ತೇನೆಂದು ಅವನೊಂದಿಗೆ ಒಪ್ಪಂದ ಮಾಡಿಕೊಂಡು ಆತ್ಮ ಲಿಂಗವನ್ನು ತಾನು ಹಿಡಿದುಕೊಂಡು ನಿಂತನು .

ರಾವಣ ಹಿಂತಿರುಗಿ ಬಂದಾಗ ಗಣಪತಿಯು ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟಿರುವುದನ್ನು ನೋಡಿದ ರಾವಣನು ತುಂಬಾ ಹತಾಶಯನಾಗಿ ನಿಂತನು. ನಂತರ ವಿಷ್ಣು ತನ್ನ ಮಾಯಾ ಶಕ್ತಿಯನ್ನು ತೆಗೆದುಹಾಕಿದನು ಮತ್ತು ಮತ್ತೆ ಹಗಲು ಹೊತ್ತಾಯಿಗಿ ಕಾಣುವಂತೆ ಮಾಡಿದನು. ರಾವಣನು ತಾನು ಮೋಸ ಹೋಗಿದ್ದೇನೆಂದು ಅರಿತುಕೊಂಡು ಲಿಂಗವನ್ನು ಕಿತ್ತು ನಾಶಮಾಡಲು ತಯಾರಾದನು. ರಾವಣನ ತನ್ನ ಬಲದಿಂದಾಗಿ, ಆತ್ಮ ಲಿಂಗದ ಕೆಲವು ತುಣುಕುಗಳು ಚದುರಿ ದೂರ ಹೋದವು. ಆತ್ಮ ಲಿಂಗದ ತಲೆಯಿಂದ ಅಂತಹ ಒಂದು ದೈವಿಕ ಪವಿತ್ರ ತುಣುಕು ಇಂದಿನ ಸುರತ್ಕಲ್‌ನಲ್ಲಿ ಬಿದ್ದಿದೆ ಎಂದು ನಂಬಲಾಗುತ್ತದೆ. ಸದಾಶಿವ ದೇಗುಲವನ್ನು ಆ ಲಿಂಗದ ತುಂಡಿನ ಸುತ್ತಲೂ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ಇಂದಿಗೂ ಅದನ್ನು ಪೂಜಿಸಲಾಗುತ್ತದೆ.

ಮುರುಡೇಶ್ವರ ದೇವಾಲಯದ ವಾಸ್ತುಶಿಲ್ಪ:
ಮುರುಡೇಶ್ವರ ದೇಗುಲವನ್ನು ಲಕ್ಕಡಿವ್ ಸಮುದ್ರದ ನೀರಿನಿಂದ ಮೂರು ಕಡೆ ಆವರಿಸಲ್ಪಟ್ಟ ಕಂದುಕ ಬೆಟ್ಟದ ಮೇಲೆ ಬಹಳ ಸುಂದರವಾಗಿ ನಿರ್ಮಾಣವನ್ನು ಮಾಡಲಾಗಿದೆ. ಇದು ಶಿವನ ದೇವಾಲಯವಾಗಿದೆ ಮತ್ತು 2008 ರಲ್ಲಿ ದೇವಾಲಯದಲ್ಲಿ 20 ಅಂತಸ್ತಿನ ಬಹಳ ಅದ್ಬುತವಾದ ರಾಜ ಗೋಪುರವನ್ನು ಆಕರ್ಷಕವಾಗಿ ನಿರ್ಮಿಸಲಾಯಿತು. ದೇವಾಲಯದ ಅಧಿಕಾರಿಗಳು ರಾಜ ಗೋಪುರದ ಮೇಲಿನಿಂದ 123 ಅಡಿ ಎತ್ತರದ ಶ್ರೀ ಶಿವ ವಿಗ್ರಹದ ನೋಟವನ್ನು ಒದಗಿಸುವ ಲಿಫ್ಟ್ ಅನ್ನು ಸ್ಥಾಪಿಸಿದ್ದು ಇದು ಭಕ್ತರಿಗೆ ವೀಕ್ಷಣೆ ಮಾಡಲು ಸಹಾಯಕವಾಗಿದೆ.
ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ಲಿಂಗವೂ ಸಹ ಇದ್ದು ಭಕ್ತರು ದರ್ಶನವನ್ನು ಮಾಡಬಹುದಾಗಿದೆ, ಅಲ್ಲಿ ಭಕ್ತರು ಸ್ವತಃ ಸೇವೆಯನ್ನು ಮಾಡಬಹುದು. ಶ್ರೀ ಅಕ್ಷಯಗುಣ ವಿಗ್ರಹದ ಪಕ್ಕದಲ್ಲಿ ಶನೇಶ್ವರ ದೇವಸ್ಥಾನವನ್ನು ಭಕ್ತರು ವೀಕ್ಷಿಸಬಹುದಾಗಿದೆ. ಅದಕ್ಕೆ ಹೋಗುವ ಮೆಟ್ಟಿಲುಗಳಲ್ಲಿ ಕಾಂಕ್ರೀಟ್‌ನಲ್ಲಿ ಎರಡು ಬೃಹತ್ ಆನೆಗಳು ಕಾವಲು ಕಾಯುತ್ತಿರುವ ದ್ರಶ್ಯವನ್ನು ನಾವು ವೀಕ್ಷಿಸಬಹುದಾಗಿದೆ. 209 ಅಡಿ ಎತ್ತರದ ರಾಜ ಗೋಪುರ ಸೇರಿದಂತೆ ಇಡೀ ದೇವಾಲಯ ಮನಮೋಹಕವಾಗಿ ನಿರ್ಮಿಸಿದ ಧಾರ್ಮಿಕ ಕ್ಷೇತ್ರವಾಗಿದೆ ಮತ್ತು ದೇವಾಲಯ ಸಂಕೀರ್ಣವು ಅತ್ಯಂತ ಎತ್ತರದ ದೇಗುಲಗಳ ಪಟ್ಟಿಯಲ್ಲಿ ಒಂದಾಗಿದೆ.

ಮುರುಡೇಶ್ವರದ ಈ ಲಿಂಗವು ಆತ್ಮಲಿಂಗದ ಒಂದು ತುಣುಕಾಗಿದೆ ಎಂದು ನಂಬಿಕೆ ಇದ್ದು ಸಾವಿರಾರು ಭಕ್ತರು ಇಲ್ಲಿ ದರ್ಶನವನ್ನು ಪಡೆಯುತ್ತಾರೆ ಮತ್ತು ನೆಲಮಟ್ಟದಿಂದ ಸುಮಾರು ಎರಡು ಅಡಿ ಕೆಳಗೆ ಇದ್ದು ಪೂಜಿಸಲಾಗುತ್ತದೆ. ಅಭಿಷೇಕ, ರುದ್ರಾಭಿಷೇಕ, ರಥೋತ್ಸವ ವಿವಿಧ ಪೂಜೆಗಳನ್ನು ಮಾಡುವ ಭಕ್ತರು ಗರ್ಭಗುಡಿಯ ಬಾಗಿಲ ಮುಂದೆ ನಿಂತು ದೇವರನ್ನು ದರ್ಶಿಸಬಹುದಾಗಿದೆ. ಲಿಂಗವು ಮೂಲಭೂತವಾಗಿ ನೆಲದೊಳಗಿನ ಒಂದು ಶಿಲೆಯಾಗಿದೆ. ಯಾವುದೇ ಭಕ್ತರಿಗೆ ಗರ್ಭಗುಡಿಯ ಒಳಗೆ ಪ್ರವೇಶವನ್ನು ನೀಡುವುದಿಲ್ಲ.

ಶಿವ ಪ್ರತಿಮೆಯ ವಿಶೇಷತೆ
ದೇವಾಲಯ ಆವರಣದಲ್ಲಿ ಬಹಳ ದೂರದಿಂದ ಕಾಣುವ ಬೃಹತ್ ಎತ್ತರದ ಶಿವನ ಪ್ರತಿಮೆ ಅನ್ನು ಬಹಳ ಅದ್ಬುತವಾಗಿ ನಿರ್ಮಾಣವನ್ನು ಮಾಡಲಾಗಿದೆ. ನಂಬಿಕೆಯ ಪ್ರತಿಮೆ ಮತ್ತು ಕೈಲಾಶನಾಥ ಮಹಾದೇವ ಪ್ರತಿಮೆಯ ನಂತರ ಇದು ವಿಶ್ವದ ಮೂರನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿರುವುದು ಕರ್ನಾಟಕದ ಹೆಮ್ಮೆಯ ಧಾರ್ಮಿಕ ಪ್ರತಿಮೆಯಾಗಿದೆ. ಈ ಪ್ರತಿಮೆ 123 ಅಡಿ (37 ಮೀ) ಎತ್ತರವಿದ್ದು, ನಿರ್ಮಿಸಲು ಸುಮಾರು ಎರಡು ವರ್ಷಗಳ ಸಮಯ ಬೇಕಾಯಿತು.

ಮುರುಡೇಶ್ವರ ದೇವಾಲಯದ ದರ್ಶನದ ಸಮಯ:
ದೇವಾಲಯದ ಸಮಯ : ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟಿವರೆಗೆ ತೆರೆದಿರುತ್ತದೆ.
ದರ್ಶನ ಅವಧಿ: ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12:30 ವರೆಗೆ ಮತ್ತು ಮಧ್ಯಾಹ್ನ 3:30ರಿಂದ ಸಂಜೆ 7:30ವರೆಗೆ ತೆರೆದಿರುತ್ತದೆ.
ಅಭಿಷೇಕ (ವಿಧಿ) ಅವಧಿ: ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 7:30ರ ವರೆಗೆ ಮತ್ತು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುತ್ತದೆ
ಅನ್ನ ಪ್ರಸಾದ (ಉಚಿತ ಊಟ) : ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ಪ್ರಸಾದ ವಿತರಣೆ ನಡೆಯುತ್ತದೆ.

ಮುರುಡೇಶ್ವರ ದೇವಾಲಯ ಪ್ರವೇಶ ಶುಲ್ಕ
ಪ್ರವೇಶ ಶುಲ್ಕ : ಎಲ್ಲಾ ಭಕ್ತರಿಗೂ ಉಚಿತವಾಗಿ ಪ್ರವೇಶವನ್ನು ನೀಡಲಾಗುವುದು.

ಮುರುಡೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಪಾವತಿಸಬೇಕಾದ ಶುಲ್ಕ:
ದೇವಸ್ಥಾನದಲ್ಲಿ ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಮತ್ತು ಅಭಿಷೇಕ, ಹೋಮಗಳನ್ನು ನಡೆಸಲಾಗುತ್ತದೆ. ಭಕ್ತರು ಈ ವಿಶೇಷ ಆಚರಣೆಗಳನ್ನು ನಡೆಸಲು ದೇವಾಲಯದ ಕೌಂಟರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಬುಕ್ ಮಾಡಬಹುದು.

ರುದ್ರಾಭಿಷೇಕ : ಈ ಆಚರಣೆಗೆ ₹500 ಪಾವತಿಸಬೇಕಾಗುತ್ತದೆ
ಪಂಚಾಮೃತ ಅಭಿಷೇಕ : ಈ ಆಚರಣೆಗೆ ₹1,000 ಪಾವತಿಸಬೇಕಾಗುತ್ತದೆ
ಮಹಾಪೂಜೆ : ಈ ಆಚರಣೆಗೆ ₹5,000 ಪಾವತಿಸಬೇಕಾಗುತ್ತದೆ
ಅರ್ಚನಾ : ಈ ಆಚರಣೆಗೆ ₹100 ಪಾವತಿಸಬೇಕಾಗುತ್ತದೆ
ಹೋಮ (ಹವನ) : ಈ ಆಚರಣೆಗೆ ₹10,000 ದಿಂದ ಪ್ರಾರಂಭವಾಗುತ್ತದೆ.

ಮುರುಡೇಶ್ವರ ದೇವಸ್ಥಾನದಲ್ಲಿ ನಡೆಸುವ ಆಚರಣೆಗಳ ವಿಧಗಳು:
ಮುರುಡೇಶ್ವರ ದೇವಸ್ಥಾನದಲ್ಲಿ ಅನೇಕ ರೀತಿಯ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ, ಇದು ಶಿವನ ಆರಾಧನೆಯನ್ನು ಬಯಸುವ ಭಕ್ತರಿಗೆ ಒಂದು ಭಕ್ತಿಪೂರ್ವಕ ಆಧ್ಯಾತ್ಮಿಕ ಸ್ಥಳವಾಗಿದೆ. ಸಾಮಾನ್ಯ ಪೂಜೆ ಮತ್ತು ಆಚರಣೆಗಳು ಸೇರಿವೆ:

ರುದ್ರಾಭಿಷೇಕ : ಶಿವನಿಗೆ ಪವಿತ್ರ ನೀರು, ಹಾಲು ಮತ್ತು ಹೂವುಗಳನ್ನು ಒಳಗೊಂಡ ಪವಿತ್ರ ಆಚರಣೆ ಈ ರುದ್ರಾಭಿಷೇಕವಾಗಿದೆ .
ಪಂಚಾಮೃತ ಅಭಿಷೇಕ : ಐದು ಪವಿತ್ರ ಪದಾರ್ಥಗಳನ್ನು ಬಳಸಿಕೊಂಡು ಮಾಡುವ ವಿಶಿಷ್ಟ ಅಭಿಷೇಕ ಆ ಪದಾರ್ಥಗಳೆಂದರೆ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ತುಪ್ಪ.
ಹೋಮ : ಸುತ್ತಮುತ್ತಲಿನ ಪ್ರದೇಶಗಳನ್ನು ಮತ್ತು ಮನಸ್ಸನ್ನು ದೇಹವನ್ನು ಶುದ್ಧೀಕರಿಸಲು ಮತ್ತು ದೈವಿಕ ಆಶೀರ್ವಾದಗಳನ್ನು ಪಡೆದುಕೊಳ್ಳಲು ಮಾಡುವ ಅಗ್ನಿ ಅರ್ಪಣೆಗಳ ವಿಧಾನವಾಗಿದೆ.
ಅರ್ಚನೆ : ದೇವರ ಆಶೀರ್ವಾದ ಪಡೆಯಲು ಮಾಡುವ ಒಂದು ತ್ವರಿತ ಆಚರಣೆಗೆ ಅರ್ಚನೆ ಎನ್ನುತ್ತಾರೆ ,ಇದರಲ್ಲಿ ಕುಂಕುಮಾರ್ಚನೆಯು ಒಂದಾಗಿದೆ.

ಮುರುಡೇಶ್ವರ ದೇವಸ್ಥಾನವನ್ನು ತಲುಪುವ ವಿಧಾನ :
ರಸ್ತೆಯ ಮೂಲಕ : ಈ ದೇವಸ್ಥಾನವು ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಬೆಂಗಳೂರು, ಮಂಗಳೂರು ಮತ್ತು ಗೋಕರ್ಣದಿಂದ ಬಸ್ಸುಗಳು ಸೌಲಭ್ಯಗಳು ದೊರೆಯುತ್ತವೆ.

ರೈಲು ಮೂಲಕ : ಬಹಳ ಹತ್ತಿರದ ರೈಲು ನಿಲ್ದಾಣವೆಂದರೆ ಮುರುಡೇಶ್ವರ ರೈಲು ನಿಲ್ದಾಣ, ಇದು ಕೇವಲ 2 ಕಿ.ಮೀ ದೂರದಲ್ಲಿದ್ದು ಪ್ರಯಾಣಿಕರಿಗೆ ಬಹಳ ಸಮೀಪದಲ್ಲಿದೆ. ಬೆಂಗಳೂರು, ಮುಂಬೈ ಮತ್ತು ಮಂಗಳೂರಿನಿಂದ ನಿಯಮಿತ ರೈಲುಗಳು ಚಲಿಸುತ್ತವೆ.

ವಿಮಾನದ ಮೂಲಕ : ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ ಎಂದು ಹೇಳಬಹುದು, ಇದು 165 ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಭಕ್ತರು ಟ್ಯಾಕ್ಸಿ ಅಥವಾ ಬಸ್ ಮೂಲಕ ಮುರುಡೇಶ್ವರಕ್ಕೆ ಸಂಚರಿಸಬಹುದಾಗಿದೆ.

ಮುರುಡೇಶ್ವರ ದೇವಸ್ಥಾನದ ವಿವಿಧ ವಸತಿ ಸೌಲಭ್ಯಗಳು :
ಆರ್‌ಎನ್‌ಎಸ್ ರೆಸಿಡೆನ್ಸಿ : ಅರೇಬಿಯನ್ ಸಮುದ್ರದತ್ತ ವೀಕ್ಷಿಸಬಹುದಾಂತಹ ಕೊಠಡಿಗಳನ್ನು ಹೊಂದಿರುವ ದೇವಸ್ಥಾನದ ಟ್ರಸ್ಟ್ ನಿರ್ವಹಿಸುವ ಹೋಟೆಲ್ ಇದಾಗಿದೆ .
ಬಜೆಟ್ ಹೋಟೆಲ್‌ಗಳು : ದೇವಸ್ಥಾನದ ಆವರಣದ ಬಳಿ ಹಲವಾರು ಬಜೆಟ್ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳ ವ್ಯವಸ್ಥೆಯು ಲಭ್ಯವಿದೆ.
ಐಷಾರಾಮಿ ರೆಸಾರ್ಟ್‌ಗಳು : ಹೆಚ್ಚು ಆರಾಮದಾಯಕ ವಸತಿ ವ್ಯವಸ್ಥೆಯನ್ನು ಬಯಸುವವರಿಗೆ, ಪ್ರೀಮಿಯಂ ಸೌಲಭ್ಯಗಳನ್ನು ನೀಡುವ ರೆಸಾರ್ಟ್‌ಗಳು ಹತ್ತಿರದಲ್ಲಿ ದೊರೆಯುತ್ತವೆ.

ಮುರುಡೇಶ್ವರ ದೇವಸ್ಥಾನದ ಸಮೀಪದ ಇತರ ದೇವಾಲಯಗಳು:
1. ಮಹಾಬಲೇಶ್ವರ ದೇವಸ್ಥಾನ : ಇದು ಗೋಕರ್ಣದ ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ರಾವಣ ತಂದ ಆತ್ಮಲಿಂಗವನ್ನು ಇಲ್ಲಿ ಇಡಲಾಗಿತ್ತು. ಎಲ್ಲ ಶಿವನ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆಯುತ್ತಾರೆ ಮತ್ತು ಕೆಲವು ದಿನಗಳ ಕಾಲ ಈ ದೇವಾಲಯದಲ್ಲಿ ಇರುವುದರಿಂದ ತಮ್ಮ ಆತ್ಮಗಳು ಶುದ್ಧವಾಗುತ್ತವೆ ಎಂದು ನಂಬಿಕೆ ಇದೆ.

2. ಮಹಾ ಗಣಪತಿ ದೇವಸ್ಥಾನ : ಮಹಾ ಗಣಪತಿ ದೇವಸ್ಥಾನವು ಗಣಪತಿಯ ಒಂದು ವಿಶೇಷತೆಯನ್ನು ಹೊಂದಿರುವ ದೇಗುಲವಾಗಿದೆ. ಇದು ರಾವಣನು ಆತ್ಮಲಿಂಗವನ್ನು ತೆಗೆದುಕೊಂಡು ಹೋಗುವುದನ್ನು ತಡೆಯುವಲ್ಲಿ ಗಣೇಶನ ವೈಶಿಷ್ಟತೆಯನ್ನು ಕಾಣಬಹುದಾದ ದೇವಾಲಯವಾಗಿದೆ.

3.ಶ್ರೀ ವೆಂಕಟರಮಣ ದೇವಸ್ಥಾನ : ವೆಂಕಟರಮಣನಿಗೆ ಸಮರ್ಪಿತವಾದ ಈ ದೇವಸ್ಥಾನವು ಪ್ರಕೃತಿ ಸೌಂದರ್ಯ ಮತ್ತು ಅದ್ಬುತ ವಾಸ್ತುಶಿಲ್ಪದಿಂದ ಸುತ್ತುವರೆದಿರುವ ವಿಷ್ಣು ಭಕ್ತರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ.

4. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ : ಮುರುಡೇಶ್ವರ ದೇವಸ್ಥಾನದಿಂದ 60 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನಿರ್ಮಾಣಗೊಂಡಿದೆ ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯನ್ನು ದರ್ಶಿಸಬಹುದಾಗಿದೆ .

Leave a Comment

Your email address will not be published. Required fields are marked *

Scroll to Top