ಮಾಂಸಾಹಾರಿ ಊಟ ತಿಂದ ನಂತರ ದೇವಸ್ಥಾನಕ್ಕೆ ಹೋಗಬಹುದೇ?
ಹಿಂದೂ ಧರ್ಮದಲ್ಲಿನ ವಿವಿಧ ರೀತಿಯ ಆಹಾರ ಪದ್ಧತಿಗಳು ಇದ್ದು ಭಾರತೀಯರಲ್ಲಿ ವೈವಿಧ್ಯಮಯ ಸಂಪ್ರದಾಯಗಳನ್ನು ತೋರಿಸುತ್ತದೆ. ಹಿಂದೂ ಧರ್ಮಗ್ರಂಥಗಳು ಅಹಿಂಸೆ ಮತ್ತು ಎಲ್ಲಾ ಜೀವಿಗಳ ಬಗ್ಗೆ ಕರುಣೆಯನ್ನು ಆಧರಿಸಿದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಹೆಚ್ಚು ಮಹತ್ವವನ್ನು ನೀಡುತ್ತದೆ. ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯ ಹೇಳುವಂತೆ 44% ಹಿಂದೂಗಳು ಸಸ್ಯಾಹಾರಿಗಳು ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಮೂರು ಪ್ರಮುಖ ಭಾರತೀಯ ಧರ್ಮಗಳಾದ – ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮ – ಅಹಿಂಸೆಯನ್ನು ನೈತಿಕ ಮೌಲ್ಯವಾಗಿ ಮತ್ತು ಪುನರ್ಜನ್ಮದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸುತ್ತಿದ್ದರು. ಸುಮಾರು 200 CE ರ ಅವಧಿಗೆ, ಪ್ರಾಣಿಗಳ ವಧೆಯ ಮಾಡಿ ಹಬ್ಬವನ್ನು ಆಚರಿಸುವುದು ವ್ಯಾಪಕವಾಗಿ ಜೀವಿಗಳ ಹಿಂಸೆ ಎಂದು ಹೇಳಿ ಅಹಿಂಸೆ ಮಾರ್ಗದಲ್ಲಿ ಹೋಗಬೇಕೆಂದು ಹೇಳಲಾಯಿತು ಮತ್ತು ಅದನ್ನು ಧಾರ್ಮಿಕ ಮತ್ತು ಸಾಮಾಜಿಕವಾಗಿ ನಿಷೇದ ಮಾಡಲಾಯಿತು.
ಹಿಂದೂ ಧರ್ಮದಲ್ಲಿ ಮಾಂಸವನ್ನು ಧಾರ್ಮಿಕ ಯಜ್ಞಗಳ ಭಾಗವಾಗಿ ಮಾತ್ರ ಸೇವಿಸಬಹುದಿತ್ತು ಮತ್ತು ಬೇರೆ ಕಾರಣಕ್ಕೆ ಸೇವಿಸುವಂತಿರಲಿಲ್ಲ. ವೇದಗಳ ಪ್ರಕಾರ ಹಿಂದಿನಿಂದಲೂ ‘ಯಜ್ಞದ ಕಸಾಯಿಖಾನೆಯಿಂದಾಗಿ ಅಶಾಂತಿ ಮತ್ತು ಕ್ರೌರ್ಯತೆಯಿಂದ ಕಾರಣದಿಂದ ಪ್ರಾಣಿ ಬಲಿ ಮಾಡುವುದನ್ನು ಸಂಪೂರ್ಣವಾಗಿ ಒಪ್ಪಲು ಆಗಲಿಲ್ಲ. ಶತಪಥ ಬ್ರಾಹ್ಮಣವು ಮಾಂಸವನ್ನು ತಿನ್ನುವುದರ ವಿರುದ್ಧದ ಹೇಳಿಕೆಯನ್ನು ನೀಡುತ್ತದೆ ಮತ್ತು ಚಾಂದೋಗ್ಯ ಉಪನಿಷತ್ತು ಜೀವಿಗಳನ್ನು ಕೊಲ್ಲುವುದರ ವಿರುದ್ಧದ ನಿಷೇಧವನ್ನು ಹೊಂದಿದೆ. ಮಾಂಸ ಸೇವನೆಯ ವಿರುದ್ಧದ ನಿಷೇಧಗಳು ಧರ್ಮಸೂತ್ರಗಳಲ್ಲಿಯೂ ನೋಡಬಹುದಾಗಿದೆ.
ಧರ್ಮ ಶಾಸ್ತ್ರಗಳ ಪ್ರಕಾರ
ಹಿಂದೂ ಧರ್ಮದಲ್ಲಿ ಸನ್ಯಾಸಿ ಸಂಪ್ರದಾಯಗಳಲ್ಲಿ ಆಹಾರದ ಮೇಲೆ ಅತಿಯಾದ ಗೌರವವನ್ನು ಹೊಂದಿತ್ತು. ಹಿಂದೂ ಸಂಪ್ರದಾಯವು ಆಹಾರ ಸಂಗ್ರಹಣೆ ಮಾಡುವುದು ಮತ್ತು ತಯಾರಿಸುವುದು ಇದೊಂದು ಹಿಂಸಾತ್ಮಕ ಪ್ರಕ್ರಿಯೆ ಎಂದು ಪರಿಗಣಿಸುತ್ತದೆ, ಈ ಪ್ರಕ್ರಿಯೆಯಲ್ಲಿ ಇತರ ಜೀವಿಗಳಿಗೆ ಮತ್ತು ಪ್ರಕೃತಿಗೆ ಹಾನಿ ಉಂಟಾಗುತ್ತದೆ, ಭಾಗಶಃ ನಾಶವಾಗುತ್ತದೆ. ಸನ್ಯಾಸಿಗಳು ಮತ್ತು ತಪಸ್ವಿಗಳು ಈ ಪ್ರಕ್ರಿಯೆಯಿಂದ ದೂರವಿರುತ್ತಾರೆ ಮತ್ತು ಆದ್ದರಿಂದ ಮನೆಗಳಿಗೆ ತೆರಳಿ ಆಹಾರಕ್ಕಾಗಿ ಸಂಪೂರ್ಣವಾಗಿ ಭಿಕ್ಷೆ ಬೇಡಿ ಪಡೆಯುತ್ತಾರೆ, ತಮ್ಮ ಆಧ್ಯಾತ್ಮಿಕ ಆಚರಣೆಗಳನ್ನು ಅಳವಡಿಸಿಕೊಂಡು, “ಸನ್ಯಾಸಿ ಮತ್ತು ತಪಸ್ವಿಗಳು ಇತರ ಜನರ ಆಹಾರವನ್ನು ಬೇಡಿ ಪಡೆಯುತ್ತಾರೆ “
ಹಿಂದೂ ಧರ್ಮದ ಅರಣ್ಯ ಸನ್ಯಾಸಿಗಳು ಭಿಕ್ಷೆ ಬೇಡಿ ಆಹಾರವನ್ನು ಸಂಗ್ರಹಿಸುವುದಿಲ್ಲ. ಅವರ ಆಹಾರವನ್ನು ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಮತ್ತು ಕೃಷಿ ಮಾಡದ ಆಹಾರವನ್ನು ಸೇವನೆ ಮಾಡುತ್ತಾರೆ. ಅವರ ಆಹಾರವು ಹೆಚ್ಚಾಗಿ ಹಣ್ಣುಗಳು, ಬೇರುಗಳು, ಸೊಪ್ಪು ಮತ್ತು ಕಾಡಿನಲ್ಲಿ ಬೆಳೆಯುವ ಆಹಾರ ಪದಾರ್ಥವನ್ನು ಸೇವಿಸುತ್ತಾರೆ. ಅರಣ್ಯ ಸನ್ಯಾಸಿಗಳು ಉಳುಮೆ ಮಾಡಿದ ಭೂಮಿಯಲ್ಲಿ ಸಂಚಾರವನ್ನು ಮಾಡುವುದಿಲ್ಲ, ಹೀಗಾಗಿ ಅವರಿಂದ ಮೊಳಕೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ . ಇದರಿಂದಾಗಿ ಜೀವ ರೂಪಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಮಹಾಭಾರತದಲ್ಲಿ ಉಲ್ಲೇಖಿಸಿದ ಪ್ರಕಾರ
ಮಹಾಭಾರತದಲ್ಲಿ ಜೀವ ರೂಪಗಳ ಮೇಲಿನ ಅಹಿಂಸೆಯ ಕುರಿತಾದ ಹಲವಾರು ಕಥೆಗಳನ್ನು ಅದು ಒಳಗೊಂಡಿದೆ ಮತ್ತು ಪ್ರಾಣಿಗಳ ಹಿಂಸೆಗಳ ವಿರುದ್ಧದ ಕೆಲವು ಹೇಳಿಕೆಗಳನ್ನು ಕಾಣಬಹುದಾಗಿದೆ – ಮಹಾಕಾವ್ಯದ ಮೂರು ಅಧ್ಯಾಯಗಳು ಮಾಂಸಾಹಾರದ ದುಷ್ಪರಿಣಾಮಗಳ ಬಗ್ಗೆ ವಿವರಿಸುತ್ತವೆ.
ಇಲ್ಲಿ ಭೀಷ್ಮನು ಕರುಣೆಯು ಒಂದು ಉತ್ತಮವಾದ ಧಾರ್ಮಿಕ ತತ್ವ ಎಂದು ಹೇಳುತ್ತಾನೆ ಮತ್ತು ಪ್ರಾಣಿಗಳ ಮಾಂಸವನ್ನು ಸೇವಿಸುವುದನ್ನು ಒಬ್ಬರ ಪುತ್ರನ ಮಾಂಸವನ್ನು ಸೇವಿಸುವುದಕ್ಕೆ ಸಮ ಎಂದು ಹೇಳುತ್ತಾನೆ.
ಮಾಂಸಹಾರವನ್ನು ತ್ಯಜಿಸುವವನು ಕುದುರೆಯ ಯಜ್ಞವನ್ನು ಮಾಡಿದಾಗ ಬರುವ ಅದೇ ಫಲವನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ ” ಮತ್ತು ಯಾರು “ಸ್ವರ್ಗವನ್ನು ಹೊಂದಬೇಕೆಂದಿರುತ್ತಾರೋ ಅವರು ಪ್ರಾಣಿಗಳ ಬದಲಾಗಿ ಬೀಜಗಳನ್ನು ಉಪಯೋಗಿಸಿ ಯಜ್ಞವನ್ನು ಮಾಡಬಹುದು” ಎಂದು ಹೇಳುತ್ತಾನೆ . ತ್ರೇತಾಯುಗ , ಶುದ್ದತೆಯು ಕಡಿಮೆ ಆದಾಗ ಮತ್ತು ಕರುಣಾಮಯ ಕಾಲದಲ್ಲಿ ಜನರು ಹಿಂಸೆಯನ್ನು ಆರಂಭಿಸಿದಾಗ ಮತ್ತು ಸತ್ಯಯುಗ, ಸುವರ್ಣಯುಗ’ ಇರಲಿಲ್ಲ ಎಂದು ಮಹಾಭಾರತದಲ್ಲಿ ಹೇಳಿರುವುದನ್ನು ಕಾಣಬಹುದಾಗಿದೆ.
ತಿರುಕ್ಕುರಳ್ ಸಾಹಿತ್ಯದ ಪ್ರಕಾರ
ಹಿಂದೂ ಅಥವಾ ಜೈನ ಮೂಲದ ಪ್ರಾಚೀನ ಭಾರತೀಯ ತಮಿಳಿನ ಧಾರ್ಮಿಕ ಸಾಹಿತ್ಯ ಈ ತಿರುಕ್ಕುರಳ್ ಅಹಿಂಸೆಯ ಆಚರಣೆಯ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ ಮತ್ತು ಸಸ್ಯಾಹಾರವನ್ನು ಪ್ರೋತ್ಸಾಹಿಸುತ್ತದೆ. ಇದೊಂದು ದಕ್ಷಿಣ ಭಾರತದ ಭಾಷೆಯಾಗಿದ್ದು ತಮಿಳಿನಲ್ಲಿ ರಚಿಸಲ್ಪಟ್ಟ ಈ ಪಠ್ಯವು ಸಸ್ಯಾಹಾರ ಪದ್ದತಿಯು ಒಂದು ಒಳ್ಳೆಯ ಜೀವನಶೈಲಿ ಎಂದು ಹೇಳಲಾಗಿದೆ ಮತ್ತು 251 ರಿಂದ 260 ರವರೆಗಿನ ಶ್ಲೋಕಗಳಲ್ಲಿ “ಮಾಂಸಾಹಾರ” ವನ್ನು ವಿರೋಧಿಸುತ್ತದೆ.
ಉದಾಹರಣೆಗೆ, 251 ನೇ ಶ್ಲೋಕವು, ” ಒಂದು ಜೀವಿಯು ತನ್ನ ಸ್ವಂತ ದೇಹವನ್ನು ಹೆಚ್ಚಿಸಲು, ಇತರ ಜೀವಿಗಳ ಮಾಂಸವನ್ನು ಸೇವಿಸುವುದರಿಂದ ಹೇಗೆ ದಯೆಯನ್ನು ಹೊಂದಲು ಸಾಧ್ಯವಾಗುತ್ತದೆ ” ಎಂದು ಪ್ರಶ್ನಿಸುತ್ತದೆ. “ಮಾನಸಿಕ ಭ್ರಮೆಗಳಿಂದ ಮುಕ್ತರಾದ ಜ್ಞಾನಿಗಳು ಬೇರೆ ಜೀವಿಗಳ ಕತ್ತರಿಸಿದ ದೇಹವನ್ನು ಸೇವಿಸುವುದಿಲ್ಲ ” ಎಂದು ಸಹ ಹೇಳುತ್ತದೆ.
ಇದು “ಮಾಂಸವು ಕತ್ತರಿಸಿದ ದೇಹದ ತಿರಸ್ಕಾರದ ಗಾಯವನ್ನು ಹೊರತಾಗಿ ಬೇರೇನೂ ಅಲ್ಲ” ಎಂದು ಹೇಳಲಾಗಿದೆ. ಮಾಂಸಾಹಾರ ತ್ಯೆಜಿಸುವುದು ಇಲ್ಲಿಯವರೆಗೂ ತಿಳಿದಿರುವಂತೆ ಇದೊಂದು ಪವಿತ್ರ ಧಾರ್ಮಿಕ ಪದ್ಧತಿಗಿಂತ ಹೆಚ್ಚು ಪವಿತ್ರವಾದ ಆಚರಣೆ ಇದಾಗಿದೆ ಮತ್ತು ಯಾರು ಪ್ರಾಣಿ ವದೆಯನ್ನು ಮಾಡುವುದಿಲ್ಲವೊ ಮತ್ತು ಮಾಂಸಾಹಾರವನ್ನು ಸೇವಿಸುವುದಿಲ್ಲವೊ ಅಂತಹವರು ಮಾತ್ರ ಪೂಜೆಗೆ ಯೋಗ್ಯರಾಗಿರುತ್ತಾರೆ ಎಂದು ಹೇಳಲಾಗಿದೆ. 400 CE ಗಿಂತ ಮೊದಲೇ ರಚಿಸಲ್ಪಟ್ಟ ಈ ಸಾಹಿತ್ಯವನ್ನು ಇದನ್ನು ತಮಿಳು ವೇದ ಎಂದು ಕೂಡ ಹೇಳಲಾಗುತ್ತದೆ.
ಪುರಾಣಗಳು
ಪುರಾಣ ಗ್ರಂಥಗಳು ಬಹುತೇಕ ಸ್ಥಳಗಳಲ್ಲಿ ಪ್ರಾಣಿಗಳ ಮೇಲೆ ಯಾವುದೆ ರೀತಿಯ ಹಿಂಸೆಯನ್ನು ಮಾಡಬಾರದು ಎಂದು ಹೇಳುತ್ತದೆ. ಎಲ್ಲಾ ಜೀವರೂಪಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯುವುದನ್ನು ಶ್ರೇಷ್ಠವಾದ ಧರ್ಮವೆಂದು ಹೇಳಲಾಗುತ್ತದೆ. “ಮಣ್ಣನ್ನು ಮಣ್ಣಿನಿಂದ ತೊಳೆಯಲು ಸಾಧ್ಯವಿಲ್ಲ” ಹಾಗೆಯೆ , ಜೀವಿಗಳಿಗೆ ಹಾನಿ ಮಾಡುವ ಪಾಪವನ್ನು ಶಮ ಯಜ್ಞಗಳನ್ನು ಮಾಡುವುದರಿಂದ ಪಾಪ ನಾಶವಾಗುವುದಿಲ್ಲ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಪ್ರಾಣಿ ಹಿಂಸೆಯನ್ನು ಮಾಡುವುದರಿಂದ ಉಂಟಾಗುವ ಭಯಾನಕ ಕರ್ಮ ಫಲಗಳು ಇವಾಗಿವೆ – ಪ್ರಾಣಿಗಳು ಮತ್ತು ಪಕ್ಷಿಗಳನ್ನು ನಿರ್ದಯವಾಗಿ ಹಿಂಸಿಸುವವರನ್ನು ಕುಂಭಿಪಕಕ್ಕೆ ಹೋಗಿ ಕುದಿಯುವ ಎಣ್ಣೆಯಲ್ಲಿ ಹಾಕಲಾಗುತ್ತದೆ ಮತ್ತು ಪಾಪ ನಾಶಕ್ಕಾಗಿ ಶಮ ಯಜ್ಞಗಳನ್ನು ನಡೆಸುವವರನ್ನು ವಿಷಾಸನ ನರಕದಲ್ಲಿ ಕತ್ತರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಸ್ಕಂದ ಪುರಾಣ
ಸ್ಕಂದ ಪುರಾಣವು ಋಷಿಗಳು ಪ್ರಾಣಿ ಬಲಿಯಿಂದ ನೊಂದುಕೊಂಡರು ಮತ್ತು ಅದು ಧರ್ಮಕ್ಕೆ ವಿರುದ್ಧವೆಂದು ಅರಿತರು ಎಂದು ಹೇಳಲಾಗುತ್ತದೆ, ಯಜ್ಞವನ್ನು ಧಾನ್ಯಗಳು ಮತ್ತು ಹಾಲಿನ ಪದಾರ್ಥಗಳಲ್ಲಿ ಆಚರಣೆ ಮಾಡಬೇಕೆಂದು ಹೇಳುತ್ತದೆ. ಕ್ಷಾಮದ ಸಂದರ್ಭದಲ್ಲಿ ಜನರಿಗೆ ಆಹಾರ ಒದಗಿಸಲು ಮಾತ್ರ ಪ್ರಾಣಿ ಬಲಿ ಮಾಡಲಾಗುತಿತ್ತು, ಆದರೆ ಹಸಿವಿನಿಂದ ಪ್ರಾಣ ತ್ಯಜಿಸಿದರು ಋಷಿಗಳು ಪ್ರಾಣಿಗಳ ವದೆಯನ್ನು ಮಾಡಲಿಲ್ಲ ಎಂದು ಅದು ವಿವರಿಸುತ್ತದೆ.
ಮತ್ಸ್ಯ ಪುರಾಣವು ಪ್ರಾಣಿಗಳ ಮೇಲಿನ ಹಿಂಸೆಯನ್ನು ವಿರೋದಿಸುತ್ತ , ಹಣ್ಣುಗಳು ಮತ್ತು ತರಕಾರಿಗಳನ್ನು ಸಮರ್ಪಿಸುವ ವಿಧಿಗಳನ್ನು ಆದ್ಯತೆ ನೀಡುವ ಋಷಿಗಳ ನಡುವಿನ ವಿಚಾರಗಳನ್ನು ನೋಡಬಹುದಾಗಿದೆ. ಪ್ರಾಣಿಗಳ ವಧೆಯಿಂದ ಉಂಟಾಗುವ ಕ್ರೂರ ಕರ್ಮವು ಯಾವುದೇ ಪುಣ್ಯವು ಲಭಿಸುವುದಿಲ್ಲ ಎಂದು ಪಠ್ಯವು ಹೇಳುತ್ತದೆ.
ಸಸ್ಯಾಹಾರವು ಬಹುತೇಕ ಹಿಂದೂಗಳ ಆಹಾರ ಪದ್ಧತಿಯ ಇದಾಗಿದೆ, ಭಾರತದಲ್ಲಿ ಅಹಿಂಸೆ ಮತ್ತು ಎಲ್ಲಾ ಜೀವರಾಶಿಗಳ ಬಗ್ಗೆ ಕರುಣೆಯ ಹೊಂದಿದೆ. ಈ ಆಚರಣೆಯನ್ನು ಸಾತ್ವಿಕವೆಂದು ಹೇಳಲಾಗುತ್ತದೆ, ಈ ಪದ್ದತಿಯು ಆಧ್ಯಾತ್ಮಿಕ ಪ್ರಗತಿಗೆ ಯೋಗ್ಯವಾದ ಆಚರಣೆಯಾಗಿದೆ,ಇದೊಂದು ಪ್ರಶಾಂತತೆಯಂತಹ ಗುಣಗಳನ್ನು ಅಳವಡಿಸಿಕೊಳ್ಳುವ ಆಚರಣೆಯಾಗಿದೆ.
ಮಾಂಸಾಹಾರಿ ಊಟ ತಿಂದ ನಂತರ ದೇವಸ್ಥಾನಕ್ಕೆ ಏಕೆ ಹೋಗಬಾರದು
ಮಾಂಸ ಸೇವನೆಯನ್ನು ಪಾಪವೆಂದು ಮತ್ತು ಇದೊಂದು ಅಹಿಂಸಾ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಜನರು ಮಾಂಸ ಸೇವಿಸುವ ದಿನಗಳಲ್ಲಿ ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುತ್ತಾರೆ. ಕೆಲವು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಮತ್ತು ಆಧ್ಯಾತ್ಮಿಕತೆಯ ಮಾರ್ಗದಲ್ಲಿರುವವರು ಮಾಂಸಾಹಾರವನ್ನು ತ್ಯೆಜಿಸಿರುತ್ತಾರೆ.
ಮಾಂಸಾಹಾರ ಸೇವನೆಯು ತಾಮಸಿಕ ಎಂದು ಹೇಳಲಾಗುತ್ತದೆ ಮತ್ತು ಅದು ತಾಮಸ ಗುಣಗಳನ್ನು ಉತ್ಪತ್ತಿಯಾಗಿ ಅದು ಮನಸ್ಸನ್ನು ನಕಾರಾತ್ಮಕತೆಯಿಂದ ನಾಶವಾಗುವಂತೆ ಮಾಡುತ್ತದೆ. ನಾವು ಮಾನವರಾಗಿ ಈ ವಿಚಾರದ ಬಗ್ಗೆ ವಿಷಾದ ಮತ್ತು ಅರಿವನ್ನು ಹೊಂದಿರಬೇಕು. ಯಾವುದೇ ಜೀವಿಯನ್ನು ಹಿಂಸಿಸುವುದು ಪಾಪ ಕೃತ್ಯವಾಗುತ್ತದೆ.
ದೇವಾಲಯಗಳು ಒಂದು ಪವಿತ್ರ ಸ್ಥಳಗಳಾಗಿವೆ. ಆದ್ದರಿಂದ ದೇವಾಲಯಗಳಲ್ಲಿ ಮಾಂಸಾಹಾರವನ್ನು ಅನುಮತಿ ನೀಡಲಾಗುವುದಿಲ್ಲ ಮತ್ತು ಈರುಳ್ಳಿ, ಕಾಫಿ, ಚಹಾ, ಅತಿಯಾದ ಮಸಾಲೆಯುಕ್ತ ಆಹಾರ, ಉಪ್ಪುಸಹಿತ ಆಹಾರ ಮುಂತಾದ ಆಹಾರ ಸೇವನೆಯನ್ನು ಸಹ ದೇವಾಲಯಗಳಲ್ಲಿ ಅನುಮತಿಸಲಾಗುವುದಿಲ್ಲ ಏಕೆಂದರೆ ಅವು ಮಾನವರನ್ನು ತಾಮಸ ಗುಣದ ಕಡೆಗೆ ಪ್ರೇರೇಪಿಸುತ್ತವೆ.
ಈ ಆಹಾರ ಪದ್ದತಿಯು ಒಬ್ಬ ವ್ಯಕ್ತಿಯನ್ನು ದೇಹಕ್ಕಿಂತ ಉನ್ನತ ಮಟ್ಟಕ್ಕೆ ಏರಲು ಬಿಡುವುದಿಲ್ಲ. ಈ ಆಹಾರ ಪದ್ದತಿಯು ಒಬ್ಬ ವ್ಯಕ್ತಿಯನ್ನು ಅಧ್ಯಾತ್ಮ ಮಟ್ಟಕ್ಕೆ ಮುಂದುವರೆಯಲು ಅವಕಾಶ ನೀಡುವುದಿಲ್ಲ . ತಾಮಸ ಆಹಾರ ಪದ್ದತಿಯಿಂದ ಪ್ರಾರ್ಥಿಸಲು ಸಾಧ್ಯವಿಲ್ಲ. ಆ ಸ್ಥಿತಿಯಲ್ಲಿ ಪ್ರಾರ್ಥನೆಗೆ ಯಾವುದೇ ಮಹತ್ವವಿರುವುದಿಲ್ಲ. ಸಾತ್ವಿಕ ಆಹಾರ ಪದ್ದತಿಯಿಂದ ಉನ್ನತ ಆಧ್ಯಾತ್ಮಿಕ ಮಟ್ಟಕ್ಕೆ ತಲುಪಲು ಪ್ರಯತ್ನಿಸ ಬೇಕು.