ಭುವನೇಶ್ವರಿ ದೇವಸ್ಥಾನ, ಸಿದ್ದಾಪುರ

ದೇವಾಲಯದ ಬಗ್ಗೆ

ಭುವನಗಿರಿಯು ಸಿದ್ದಾಪುರ ತಾಲ್ಲೂಕಿನಲ್ಲಿದೆ ಇದು ಇಡೀ ರಾಜ್ಯದಲ್ಲಿ ಕನ್ನಡ ಮಾತೆ ಭುವನೇಶ್ವರಿ ದೇವಿಗೆ ಸಮರ್ಪಿತವಾದ ಏಕೈಕ ದೇವಾಲಯ ಇದಾಗಿದೆ.

ಭುವನೇಶ್ವರಿ ದೇವಿಯು ಹಿಂದೂ ಧಾರ್ಮಿಕ ದೇವತೆಯಾಗಿದ್ದಾಳೆ. ಭುವನೇಶ್ವರಿ ದೇವಿಯು ಶಕ್ತಿ ಧರ್ಮದ ಹತ್ತು ಮಹಾವಿದ್ಯಾ ದೇವತೆಗಳಲ್ಲಿ ನಾಲ್ಕನೆಯವಳು ಮತ್ತು ಮಹಾದೇವಿಯ  ಅಂಶಗಳಲ್ಲಿ ದೇವಿಯು ಒಬ್ಬಳು. ದೇವಿ ಭಾಗವತ ಪುರಾಣದಲ್ಲಿ ಭುವನೇಶ್ವರಿ ದೇವಿಯನ್ನು ಆದಿ ಪರಾಶಕ್ತಿಯ ಎಂದು ಹೇಳಲಾಗಿದೆ.

ಭುವನೇಶ್ವರಿ ಎಂಬ ಪದವು ಬಂದಿರುವುದು ಭುವನ ಈಶ್ವರಿ ಎಂಬ ಪದಗಳ ಸಂಯುಕ್ತ ರೂಪವಾಗಿದ್ದು , ಇದರ ಅರ್ಥ “ಜಗತ್ತಿನ ದೇವತೆ”  ಇಲ್ಲಿ ಲೋಕಗಳು ತ್ರಿ-ಭುವನ ಅಥವಾ ಭೂಹ್ ( ಭೂಮಿ ), ಭುವಹ್ ( ವಾತಾವರಣ ) ಮತ್ತು ಸ್ವಾಹ್ (ಸ್ವರ್ಗ) ಎಂಬ ಮೂರು ಲೋಕಗಳಿಗೂ ದೇವತೆ ಎಂದು ಹೇಳಲಾಗುತ್ತದೆ.

ಭುವನಗಿರಿ ದೇವಾಲಯವು 300 ಅಡಿ ಎತ್ತರದ ತುದಿಯಲ್ಲಿರುವ ಭುವನೇಶ್ವರಿ ದೇವಿಯ ದೇವಸ್ಥಾನವಾಗಿದೆ.  ಇದು ಮೂರು ಶತಮಾನಗಳಷ್ಟು ಹಳೆಯ ದೇವಸ್ಥಾನವಾಗಿದೆ ಇದು  350 ಮೆಟ್ಟಿಲುಗಳನ್ನು ಇದು ಹೊಂದಿದೆ. ವರ್ಷದ ಎಲ್ಲಾ ದಿನಗಳಲ್ಲಿಯೂ ದೇವಿಯ ಆರಾಧನೆ ಮತ್ತು  ನೈವೇದ್ಯ, ಅಭಿಷೇಕ , ಮಂತ್ರಗಳ ಪಠಣದೊಂದಿಗೆ ಆರಾಧಿಸಲಾಗುತ್ತದೆ.  ಭುವನಗಿರಿಯು ಎಲ್ಲಾ ಕಡೆಗಳಲ್ಲಿ ಹಚ್ಚ ಹಸಿರಿನಿಂದ ತುಂಬಿದೆ ಮತ್ತು ಈ ಐತಿಹಾಸಿಕ ದೇವಾಲಯವು ಒಂದು ಪ್ರಸಿದ್ಧ ದೇವಾಲಯವಾಗಿದೆ.

ಈ ದೇವಾಲಯದ ಇತಿಹಾಸದ ಪ್ರಕಾರ, ಭುವನೇಶ್ವರಿ ದೇವಿಗೆ ಮೀಸಲಾಗಿರುವ ದೇವಸ್ಥಾನದ ನಿರ್ಮಾಣದ ಬಗ್ಗೆ ಕದಂಬರು ಕಲ್ಪಿಸಿಕೊಂಡಿದ್ದರೂ, ವಿಜಯನಗರ ಸಾಮ್ರಾಜ್ಯದ ಅಧಿಕಾರಿಗಳು ಅದನ್ನು ನಡೆಸಿಕೊಂಡು ಬಂದರು,  ಅವರು ದೇವರಿಗೆ ನಮಸ್ಕರಿಸದೆ ಯಾವುದೇ ಕಾರ್ಯಗಳನ್ನು ಮಾಡುತ್ತಿರಲಿಲ್ಲ.

ಕೊನೆಯದಾಗಿ, ಭುವನಗಿರಿಯಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನವನ್ನು ಬಿಲಗಿಯ ಅರಸರು ನಿರ್ಮಾಣವನ್ನು ಮಾಡಿದರು.

ಬಿಳಗಿ ರಾಜ್ಯವು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯವರೆಗೆ ಹಬ್ಬಿತ್ತು. ಬಿಳಗಿಯ ರಾಜವಂಶಸ್ಥರು ಕನ್ನಡ ನಾಡಿನ ಪ್ರಸಿದ್ಧ ಆಡಳಿತಗಾರರು ಮತ್ತು ಕನ್ನಡ ನಾಡಿನ ಆರಾಧಕರಾಗಿದ್ದಾರೆ, ಕನ್ನಡ ಮಾತೆ ಭುವನೇಶ್ವರಿ ದೇವಿಗೆ ಅರ್ಪಿತವಾದ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು.

ಭುವನೇಶ್ವರಿ ದೇವಸ್ಥಾನವನ್ನು 1692 ರಲ್ಲಿ ಬಿಳಗಿಯ ಕೊನೆಯ ದೊರೆ ಬಸವೇಂದ್ರ ನಿರ್ಮಾಣ ಮಾಡಿದನವು ಎಂಬುದಕ್ಕೆ  ಬಹಳಷ್ಟು ಪುರಾವೆಗಳು ದೊರೆತಿವೆ. ಈ ಸ್ಥಳದಲ್ಲಿ ಹವ್ಯಕ ಸಮುದಾಯಕ್ಕೆ ಸೇರಿದ ಜನರು ಇರುವುದರಿಂದ, ದೇವಸ್ಥಾನದ ಆಡಳಿತ ವ್ಯವಸ್ಥೆಯನ್ನು ಅವರೇ ನಿರ್ವಹಿಸುತ್ತಾರೆ.

ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ವಿಜಯನಗರದ ಅರಸರು ನಿರ್ಮಿಸಿದ  ಭುವನೇಶ್ವರಿ ದೇವಿಯ ಪ್ರತಿಮೆ ಇದ್ದರು, ಭುವನೇಶ್ವರಿ ದೇವಿ ಪ್ರತ್ಯೇಕ ದೇವಾಲಯವಿರುವ ಏಕೈಕ ಪ್ರದೇಶ ಭುವನಗಿರಿಯಾಗಿದೆ.

ಕರ್ನಾಟಕದಲ್ಲಿ ನವೆಂಬರ್‌ 01 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಆಚರಿಸಲಾಗುತ್ತದೆ.  ಈ ಸಂಭ್ರಮದಲ್ಲಿ ಕನ್ನಡದ ತಾಯಿ ಭುವನೇಶ್ವರಿಯ ದೇವಿಗೆ  ಕನ್ನಡ ನಾಡಿನಲ್ಲಿ ಪೂಜೆ, ಮೆರವಣಿಗೆ ನಡೆಸಲಾಗುತ್ತದೆ. ಭುವನಗಿರಿಯ ದೇವಾಲಯದ ಗುಡಿಯಲ್ಲಿ ಭುವನೇಶ್ವರಿ ದೇವಿ ಕಂಗೊಳಿಸುತ್ತಾ ನೆಲೆಸಿದ್ದಾಳೆ.

ಕನ್ನಡಾಂಬೆ ಭುವನೇಶ್ವರಿಯನ್ನು ನಿತ್ಯ ಪೂಜಿಸಲಾಗುತ್ತದೆ. ಪ್ರತಿನಿತ್ಯವೂ ಸ್ಥಳೀಯರು ಇಲ್ಲಿಗೆ ಭೇಟಿ ನೀಡಿ ದೇವಿಯನ್ನು ಆರಾಧಿಸುತ್ತಾರೆ. ಆದರೆ ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಬೇರೆ ಪ್ರದೇಶದವರು, ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಭೇಟಿ ನೀಡಿ ತಾಯಿ ಭುವನೇಶ್ವರಿಯ ಆರ್ಶಿವಾದವನ್ನು ಪಡೆದುಕೊಳ್ಳುತ್ತಾರೆ. ಬಹಳ ಹಿಂದಿನಿಂದಲೂ   ಭುವನಗಿರಿಯಲ್ಲಿರುವ ಭುವನೇಶ್ವರಿ ನೆಲೆಯಾಗಿದ್ದಾಳೆ. ಕದಂಬರು ಕನ್ನಡದ ಮೊದಲ ರಾಜಮನೆತನವಾಗಿದೆ, ಅವರ  ಕುಲದೇವತೆ ಆಗಿದ್ದ ಭುವನೇಶ್ವರಿದೇವಿ ನಂತರದ ಸಮಯದಲ್ಲಿ ಕನ್ನಡದ ಅಧಿದೇವತೆ ಆಗಿದ್ದಾಳೆ ಎಂದು ಹೇಳಾಲಾಗುತ್ತದೆ.

ಭುವನಗಿರಿಯನ್ನು ಕದಂಬರು ತಮ್ಮ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ  ಆ ಪ್ರದೇಶವನ್ನು ಮೀಸಲಿಟ್ಟಿದ್ದರು. ಭುವನಗಿರಿಯ ಹಚ್ಚ ಹಸಿರಿನ ಗುಡ್ಡ ಪ್ರದೇಶದಲ್ಲಿ ಭುವನೇಶ್ವರಿ ದೇಗುಲ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ಇನ್ನು ದೇವಾಲಯದ ನಿರ್ಮಾಣ ಸಂಪೂರ್ಣವಾಗಿರಲಿಲ್ಲ . ನಂತರ ಆಳ್ವಿಕೆ ನಡೆಸಿದ ವಿಜಯನಗರದ ಅರಸರು ಭುವನೇಶ್ವರಿಯನ್ನು ಆರಾಧಕರಾಗಿದ್ದರು. ವಿಜಯ ನಗರ ಅರಸರು ಕದಂಬರು ಕಟ್ಟಿಸಿದ್ದ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದರು. ಆದರೆ ಬಿಳಗಿಯ ಅರಸರು ಭುವನೇಶ್ವರಿ ದೇವಾಲಯದ ನಿರ್ಮಾಣ ಹಂತವನ್ನು ಪೂರ್ಣಗೊಳಿಸಿದರು ಎಂದು ಹೇಳಲಾಗುತ್ತದೆ.

ಭುವನಗಿರಿ ಜಾತ್ರೆ
ಭುವನಗಿರಿಯು ಭುವನೇಶ್ವರಿ ದೇವಸ್ಥಾನ ಜಾತ್ರೆ ದಿನಾಂಕ : 01 ಫೆಬ್ರವರಿ 2026.

ಭುವನಗಿರಿಯ ತೇರು ಅಥವಾ ಜಾತ್ರೆ 01 ಫೆಬ್ರವರಿ 2026ರಂದು ನಡೆಯಲಿದೆ

ಭುವನೇಶ್ವರಿ ದೇಗುಲ ಶಿಲೆಗಳಿಂದ ನಿರ್ಮಾಣ ಮಾಡಲಾಗಿದೆ:
ಭುವನೇಶ್ವರಿಯ ದೇವಾಲಯವನ್ನು ಶಿಲೆಗಳಿಂದ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಒಳಗೆ ಇರುವ ಕಂಬಗಳು ಅದ್ಬುತ ಕೆತ್ತನೆಯನ್ನು ನೋಡಬಹುದಾಗಿದೆ, ದೇವಾಲಯದ ಒಳ ಚಾವಣಿಯಲ್ಲಿ ಅಷ್ಟದಿಕ್ಕುಗಳ ಸಂಕೇತ, ವಿವಿಧ ಅವತಾರಗಳ ಸನ್ನಿವೇಶ ಹಾಗೂ ಕುಸುರಿ ಕೆತ್ತನೆಗಳ ರಚನೆಯನ್ನು ನೋಡಬಹುದಾಗಿದೆ. ದೇವಾಲಯದ ಅಕ್ಕಪಕ್ಕದಲ್ಲಿ ನಂದೀಶ್ವರ, ರಂಗನಾಥ ಅನೇಕ ಪ್ರತಿಮೆಗಳ  ಸೂಕ್ಷ್ಮ ಕೆತ್ತನೆ ಕಾಣಬಹುದಾಗಿದೆ. ಭುವನೇಶ್ವರಿ ದೇವಿಯ ಮುಂಭಾಗದಲ್ಲಿ ಶ್ರೀದೇವಿಯ ವಾಹನ ಸಿಂಹದ ಮೂರ್ತಿಯನ್ನು ರಚಿಸಲಾಗಿದೆ.

Leave a Comment

Your email address will not be published. Required fields are marked *

Scroll to Top