ಕರ್ನಾಟಕದ ಟಾಪ್ 10 ಕಡಲತೀರದ ದೇವಾಲಯಗಳು
1. ಮುರುಡೇಶ್ವರ ದೇವಸ್ಥಾನ (ಮುರುಡೇಶ್ವರ ಬೀಚ್)
ಸ್ಥಳ: ಮುರುಡೇಶ್ವರ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ
ಭೇಟಿ ನೀಡಲು ಉತ್ತಮ ಸಮಯ
ಅಕ್ಟೋಬರ್ ನಿಂದ ಮಾರ್ಚ್ – ದೃಶ್ಯವೀಕ್ಷಣೆ, ದೇವಾಲಯ ಭೇಟಿ ಮತ್ತು ಬೀಚ್ ಚಟುವಟಿಕೆಗಳಿಗೆ ಸೂಕ್ತ.
ಮಳೆಗಾಲವನ್ನು ತಪ್ಪಿಸಿ (ಜೂನ್ ನಿಂದ ಸೆಪ್ಟೆಂಬರ್) – ಭಾರೀ ಮಳೆಯು ಹೊರಾಂಗಣ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು.
ತಲುಪುವುದು ಹೇಗೆ?
ರಸ್ತೆಯ ಮೂಲಕ: NH66 (ಮಂಗಳೂರು – ಗೋವಾ ಹೆದ್ದಾರಿ) ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ.
ರೈಲು ಮೂಲಕ: ಮುರುಡೇಶ್ವರ ರೈಲು ನಿಲ್ದಾಣವು ಬೀಚ್ನಿಂದ ಕೇವಲ 2 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (160 ಕಿ.ಮೀ ದೂರ).
ಶಿವನಿಗೆ ಅರ್ಪಿತವಾದ ಈ ದೇವಾಲಯವು 123 ಅಡಿ ಎತ್ತರದ ಶಿವನ ಪ್ರತಿಮೆ, ರಾಜ ಗೋಪುರ ಮತ್ತು ಅರೇಬಿಯನ್ ಸಮುದ್ರದ ಉಸಿರುಕಟ್ಟುವ ನೋಟಗಳಿಗೆ ಹೆಸರುವಾಸಿಯಾಗಿದೆ. ಜೆಟ್ ಸ್ಕೀಯಿಂಗ್, ದೋಣಿ ವಿಹಾರ ಮತ್ತು ಪ್ಯಾರಾಸೈಲಿಂಗ್ನಂತಹ ನೀರಿನ ಚಟುವಟಿಕೆಗಳು ಲಭ್ಯವಿದೆ. ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ 123 ಅಡಿ ಎತ್ತರದ ಶಿವ ಪ್ರತಿಮೆ ಸಮುದ್ರಕ್ಕೆ ಎದುರಾಗಿ ಇರುವುದರಿಂದ ಮೋಡಿಮಾಡುವ ದೃಶ್ಯವಾಗಿದೆ. ಸೂರ್ಯನ ಬೆಳಕು ನೇರವಾಗಿ ವಿಗ್ರಹದ ಮೇಲೆ ಬೀಳುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ, ಇದು ದೈವಿಕವಾಗಿ ಕಾಣುತ್ತದೆ.
ಪ್ರವೇಶ ಉಚಿತ – ದೇವಾಲಯ ದರ್ಶನಕ್ಕೆ ಯಾವುದೇ ಶುಲ್ಕವಿಲ್ಲ; ಗೋಪುರದ ಮೇಲಕ್ಕೆ ಲಿಫ್ಟ್ಗೆ ಸಣ್ಣ ಶುಲ್ಕವಿದೆ.ಭಕ್ತಿಪೂರ್ವಕ ಧ್ವನಿ ಮತ್ತು ಬೆಳಕಿನ ಪ್ರದರ್ಶನ – ಸಂಜೆ, ದೇವಾಲಯದ ಪ್ರದೇಶವು ಆಧ್ಯಾತ್ಮಿಕ ಸಂಗೀತ ಮತ್ತು ಬೆಳಕಿನಿಂದ ಬೆಳಗುತ್ತದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ – ಮುರುಡೇಶ್ವರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಇದು ನೀರೊಳಗಿನ ಸಾಹಸಗಳಿಗೆ ಸೂಕ್ತವಾಗಿದೆ. ಅರೇಬಿಯನ್ ಸಮುದ್ರದ ಮೇಲೆ ಅದ್ಭುತ ಸೂರ್ಯಾಸ್ತದ ನೋಟಗಳನ್ನು ವೀಕ್ಷಿಸಲು ಅತ್ಯುತ್ತಮ ಸ್ಥಳ. ಬೀಚ್ಸೈಡ್ ಸ್ಟ್ರೀಟ್ ಫುಡ್ – ಬೀಚ್ ಬಳಿ ತಾಜಾ ಸಮುದ್ರಾಹಾರ ಮತ್ತು ದಕ್ಷಿಣ ಭಾರತೀಯ ತಿಂಡಿಗಳನ್ನು ಆನಂದಿಸಿ.
2. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (ಮರವಂತೆ ಬೀಚ್ ಬಳಿ)
ಸ್ಥಳ: ಕೊಲ್ಲೂರು, ಉಡುಪಿ ಜಿಲ್ಲೆ , ಕರ್ನಾಟಕ
ಭೇಟಿ ನೀಡಲು ಉತ್ತಮ ಸಮಯ:
ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದರ್ಶನದ ವ್ಯವಸ್ಥೆ ನೀಡಲಾಗುವುದು. ಭಕ್ತರು ಈ ಸಮಯದಲ್ಲಿ ಮೂಕಾಂಬಿಕಾ ದೇವಿಯ ದರ್ಶನವನ್ನು ಪಡೆಯಬಹುದಾಗಿದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತವೆ .
ರೈಲು ಮೂಲಕ:
ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿಸನಿಹದ ರೈಲ್ವೆ ನಿಲ್ದಾಣವಾಗಿವೆ ಈ ಮೂಲಕ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಬಹುದಾಗಿದೆ.
ಕೊಲ್ಲೂರಿನ ಸುತ್ತಮುತ್ತಲಿನ ಪ್ರಕೃತಿ ನೋಟ:
ನಿತ್ಯಹರಿದ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಹಳ್ಳಿಗಳಿಂದ ಕಾಣಸಿಗುತ್ತದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳೂ ಸೇರಿಕೊಂಡು ದೇವಸ್ಥಾನದಿಂದ ಒಂದು ಕಂಗೊಳಿಸುವ ಪ್ರಕೃತಿಯನ್ನು ವೀಕ್ಷಿಸಬಹುದಾಗಿದೆ.
ವಸತಿ ಸೌಕರ್ಯಗಳು:
ಕೊಲ್ಲೂರಿನಲ್ಲಿ ಬೇರೆ ಬೇರೆ ವಸತಿ-ಸೌಕರ್ಯಗಳು ಲಭ್ಯವಿವೆ. ದೇವಸ್ಥಾನದ ಆಡಳಿತ ಮಂಡಳಿಯು ಸೌಪರ್ಣಿಕಾ ಅತಿಥಿ ಗೃಹವನ್ನು ನಿರ್ವಹಿಸುತ್ತಾ ಬಂದಿದೆ. ಶ್ರೀ ಲಲಿತಾಂಬಿಕಾ ಅತಿಥಿ ಗೃಹ, ಮಾತಾ ಛತ್ರಂ ಅತಿಥಿ ಗೃಹ, ಗೋಯೆಂಕಾ ಅತಿಥಿ ಗೃಹ ಸೌಲಭ್ಯವು ಕಲ್ಪಿಸಲಾಗಿದೆ. ಈ ಸೌಕರ್ಯಗಳಲ್ಲಿ ಸುಮಾರು 400 ಕೋಣೆಗಳು ಸಂಯೋಜಿಸಲ್ಪಟ್ಟಿವೆ ಭಕ್ತಾದಿಗಳು ಇಲ್ಲಿ ಯಾವುದೇ ಅಡಚಣೆ ಇಲ್ಲದೆ ಇರಬಹುದಾಗಿದೆ.
ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಭಕ್ತರಿಗೆ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳಲ್ಲಿ ಒಂದಾಗಿದೆ . ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಸೊಂಪಾಗಿ ಹಸಿರು ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟದಿಂದ ಆವರಿಸಲ್ಪಟ್ಟ ಪ್ರಕೃತಿಯ ಮದ್ಯ ಕಾಣಬಹುದಾಗಿದೆ , ಮಂಗಳೂರಿನಿಂದ ೧೪೭ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನವು ಪ್ರತಿವರ್ಷವೂ ಸಾವಿರಾರು ಭಕ್ತಾದಿಗಳನ್ನು ತನ್ನೆಡೆ ಸೆಳೆಯುತ್ತದೆ.
3. ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ ಬೀಚ್)
ಸ್ಥಳ: ಗೋಕರ್ಣ,ಉತ್ತರ ಕನ್ನಡ
ಭೇಟಿ ನೀಡಲು ಉತ್ತಮ ಸಮಯ:
ಬೆಳಿಗ್ಗೆ 6:00 ಗಂಟೆ ಇಂದ ಮಧ್ಯಾಹ್ನ 12:30ರ ವರೆಗೆ
ಸಂಜೆ 5:00 ಗಂಟೆ ಇಂದ ರಾತ್ರಿ 8:00 ಗಂಟೆ ವರೆಗೆ
ತಲುಪುವುದು ಹೇಗೆ?
ರಸ್ತೆಯ ಮೂಲಕ:
ಕರಾವಳಿ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿ 66 (NH66), ಗೋಕರ್ಣಕ್ಕೆ ಸಮೀಪದಲ್ಲಿ ಇರುವಂತಹ ಹೆದ್ದಾರಿಯಾಗಿದೆ . ಗೋಕರ್ಣವು ಕಾರವಾರದಿಂದ 56 ಕಿಲೋಮೀಟರ್ ದೂರದಲ್ಲಿದೆ, ಮಂಗಳೂರಿನಿಂದ 252 ಕಿಲೋಮೀಟರ್, ಹುಬ್ಬಳ್ಳಿಯಿಂದ 145 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 450 ಕಿಲೋಮೀಟರ್ ದೂರದಲ್ಲಿದೆ. ಯಾತ್ರಿಕರಿಗೆ ಈ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
ರೈಲು ಮೂಲಕ:
ಗೋಕರ್ಣವು ಕಾರವಾರ, ಅಂಕೋಲಾ, ಹುಬ್ಬಳ್ಳಿ, ಮಂಗಳೂರು, ಕುಮಟಾ ಮತ್ತು ಮಾರ್ಗೋವಾ ಮೂಲಕ ರೈಲು ಸಂಪರ್ಕ ಕಲ್ಪಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ಇತರ ಹಲವು ರೈಲುಗಳು ಗೋಕರ್ಣದ ಮೂಲಕ ಸಂಪರ್ಕವನ್ನು ಹೊಂದಿವೆ. ಕುಮಟಾ (35 ಕಿ.ಮೀ) ಮತ್ತು ಅಂಕೋಲಾ (20 ಕಿ.ಮೀ) ಸಮೀಪದ ರೈಲು ಮಾರ್ಗಗಳಾಗಿವೆ.
ವಿಮಾನದ ಮೂಲಕ: ವಿಮಾನ ನಿಲ್ದಾಣವು ಗೋವಾದ ಪಣಜಿಯಲ್ಲಿದೆ
ಧಾರ್ಮಿಕ ಆಚರಣೆಗಳು:
ಭಕ್ತರು ತಮ್ಮ ಪುರೋಹಿತರೊಂದಿಗೆ ಆಚರಿಸುವ ಧಾರ್ಮಿಕ ಆಚರಣೆಗಳಾದ ತಲೆ ಬೋಳಿಸಿಕೊಳ್ಳುವುದು, ಉಪವಾಸ ಮಾಡುವುದು ಮತ್ತು ನಂತರ ದೇವಾಲಯದ ಎದುರಿನ ಅರೇಬಿಯನ್ ಸಮುದ್ರದಲ್ಲಿ ಸ್ನಾನ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡುತ್ತಾರೆ. ನಂತರ ಅವರು ಮಹಾಬಲೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ದರ್ಶನವನ್ನು ಪಡೆಯುತ್ತಾರೆ.
ಹಬ್ಬ:
ಶಿವ ಮತ್ತು ಪಾರ್ವತಿಯರ ಆಚರಣೆಯಾದ ಶಿವರಾತ್ರಿ ಹಬ್ಬವನ್ನು ಗೋಕರ್ಣದಲ್ಲಿ ಮಾಘ ಮಾಸದ ಕತ್ತಲೆಯ ಹದಿನೈದು ದಿನಗಳ 14 ನೇ ದಿನದಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನವು ಕ್ರಿ.ಶ. 4 ನೇ ಶತಮಾನದ ದೇವಸ್ಥಾನವಾಗಿದ್ದು, ಇದನ್ನು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ. ಇದು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಅರೇಬಿಯನ್ ಸಮುದ್ರದ ಗೋಕರ್ಣ ಕಡಲತೀರದತ್ತ ಮುಖ ಮಾಡಿರುವ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿರುವ ಪ್ರಾಣಲಿಂಗವನ್ನು ಆತ್ಮಲಿಂಗ ಅಥವಾ ಶಿವಲಿಂಗ ಎಂದೂ ಕರೆಯಲ್ಪಡುತ್ತದೆ.
ಗೋಕರ್ಣಕ್ಕೆ ಹೋಗುವ ಮಾರ್ಗದಲ್ಲಿ ಒಂದು ಕಡೆ ಕಲ್ಲಿನ ಪರ್ವತಗಳು ಮತ್ತು ಪಶ್ಚಿಮ ಘಟ್ಟಗಳು ಮತ್ತು ಇನ್ನೊಂದು ಕಡೆ ಅರೇಬಿಯನ್ ಸಮುದ್ರವನ್ನು ಹೊಂದಿದ್ದು ತುಂಬಾ ಸುಂದರವಾಗಿ ಕಾಣುತ್ತದೆ. ಗೋಕರ್ಣವು ಕಡಲತೀರಗಳಿಗೆ ತುಂಬಾ ಪ್ರಸಿದ್ದಿಯನ್ನು ಪಡೆದಿದೆ. ಗೋಕರ್ಣ ಮುಖ್ಯ ಬೀಚ್ ಪಟ್ಟಣದಲ್ಲಿದೆ ಮತ್ತು ಕುಡ್ಲೆ ಬೀಚ್ ಪಶ್ಚಿಮಾಭಿಮುಖವಾಗಿದೆ. ಓಂ ಬೀಚ್, ಹಾಫ್ ಮೂನ್ ಬೀಚ್, ಪ್ಯಾರಡೈಸ್ ಬೀಚ್ (ಫುಲ್ ಮೂನ್ ಎಂದೂ ಕರೆಯುತ್ತಾರೆ) ಮತ್ತು ಬೆಲೆಕನ್ ಬೀಚ್ ದಕ್ಷಿಣಾಭಿಮುಖವಾಗಿದೆ ಮತ್ತು ಈ ಕಡಲ ತೀರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
4. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ (ಸಸಿಹಿತ್ಲು ಬೀಚ್ ಬಳಿ)
ಸ್ಥಳ: ಕಟೀಲ್ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ
ತಲುಪುವುದು ಹೇಗೆ?
ರಸ್ತೆಯ ಮೂಲಕ: ಕಟೀಲು ಉತ್ತಮವಾದ ರಸ್ತೆ ಸಂಪರ್ಕ ಮಾರ್ಗವನ್ನು ಹೊಂದಿದೆ.
1. ಮಂಗಳೂರು – ಬಜ್ಪೆ – ಕಟೀಲು (25 ಕಿ.ಮೀ)
2. ಉಡುಪಿ – ಮುಲ್ಕಿ – ಕಿನ್ನಿಗೋಳಿ – ಕಟೀಲು (45 ಕಿ.ಮೀ)
3. ಮೂಡಬಿದಿರೆ – ಕಿನ್ನಿಗೋಳಿ – ಕಟೀಲು (22 ಕಿ.ಮೀ)
4. ಬಿ ಸಿ ರೋಡ್ – ಕೈಕಂಬ – ಬಜ್ಪೆ – ಕಟೀಲು (35 ಕಿಮೀ)
ರೈಲು ಮೂಲಕ: ಮುಲ್ಕಿ ರೈಲ್ವೇ ನಿಲ್ದಾಣ.
ವಿಮಾನದ ಮೂಲಕ: ಬಜ್ಪೆ ವಿಮಾನ ನಿಲ್ದಾಣ ( 15 ಕಿ.ಮೀ)
ಕಟೀಲ್ ಅಥವಾ ಕಟೀಲು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದೇವಾಲಯ ಸ್ಥಳವಾಗಿದೆ. ಇದು ಮಂಗಳೂರಿನಿಂದ ಸುಮಾರು ೨೬ ಕಿ.ಮೀ ದೂರದಲ್ಲಿದೆ ಮತ್ತು ಹಿಂದೂ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿಯ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವು ಒಂದು ಪುಣ್ಯ ಸ್ಥಳವಾಗಿದೆ. ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿ, ಹಚ್ಚ ಹಸಿರಿನ ಮಧ್ಯೆ ಇರುವ ಪ್ರೇಕ್ಷಣೀಯ ದೇವಾಲಯವಾಗಿದೆ.
ಪ್ರಮುಖ ಉತ್ಸವಗಳು:
ಈ ಉತ್ಸವವು ಏಪ್ರಿಲ್ ತಿಂಗಳಲ್ಲಿ ಬರುತ್ತದೆ ಮತ್ತು ೮ ದಿನಗಳವರೆಗೆ ವಿಶಿಷ್ಟ ಆರಾಧನೆಯೊಂದಿಗೆ ಆಚರಿಸಲಾಗುತ್ತದೆ. ಜಾತ್ರಾ ಮಹೋತ್ಸವವು ೮ ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ಲಕ್ಷದೀಪೋತ್ಸವ:
ಸಹಸ್ರಾರು ಭಕ್ತರು ಕಾರ್ತಿಕ ಮಾಸದ ಬಹುಲಾ ಪಂಚಮಿ ದಿನದಂದು ದೀಪಗಳ ಹಬ್ಬವನ್ನು ಬಹಳ ಭಕ್ತಿಪೂರ್ವಕವಾಗಿ ನೆರವೇರಿಸುತ್ತಾರೆ.
ಯಕ್ಷಗಾನ ಸೇವೆ:
ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡ ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಕಟೀಲು ಮೇಳ ಎಂದೇ ಹೆಸರುವಾಸಿಯಾಗಿ ಕರೆಯಲ್ಪಡುವ ಈ ಯಕ್ಷಗಾನ ತಂಡವು ಒಂದು ವಿಶಿಷ್ಟ ‘ಹರಕೆ ಸೇವಾ’ ತಂಡವಾಗಿದೆ.
ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡ ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಕಟೀಲು ಮೇಳ ಎಂದೇ ಹೆಸರುವಾಸಿಯಾಗಿ ಕರೆಯಲ್ಪಡುವ ಈ ಯಕ್ಷಗಾನ ತಂಡವು ಒಂದು ವಿಶಿಷ್ಟ ‘ಹರಕೆ ಸೇವಾ’ ತಂಡವಾಗಿದೆ.
5. ಉಡುಪಿ ಶ್ರೀ ಕೃಷ್ಣ ದೇವಸ್ಥಾನ (ಮಲ್ಪೆ ಬೀಚ್ ಮತ್ತು ಸೇಂಟ್ ಮೇರಿ ದ್ವೀಪದ ಹತ್ತಿರ)
ಸ್ಥಳ: ಉಡುಪಿ
ಭೇಟಿ ನೀಡಲು ಉತ್ತಮ ಸಮಯ:
ಆಗಸ್ಟ್ ನಿಂದ ಮಾರ್ಚ್ ತಿಂಗಳು ಯಾತ್ರಿಕರಿಗೆ ಬಹಳ ಅನುಕೂಲ ಸಮಯವಾಗಿದೆ.
ಬೆಳ್ಳಿಗೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಕ್ಯಾಬ್ /ಟ್ಯಾಕ್ಸಿ ಅಥವಾ ಬಸ್ ಮೂಲಕ
ರೈಲು ಮೂಲಕ: ಹತ್ತಿರದ ರೈಲು ನಿಲ್ದಾಣ ಉಡುಪಿ ರೈಲು ನಿಲ್ದಾಣ (ಯುಡಿ)
ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IXE)
ಕೃಷ್ಣ ಮಠವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತ ಮಧ್ವಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಅವರು ದ್ವೈತ ವೇದಾಂತ ಪಂಥದ ಸ್ಥಾಪಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಮಧ್ವಾಚಾರ್ಯರು ಗೋಪಿಚಂದನದ ದೊಡ್ಡ ಉಂಡೆಯಲ್ಲಿ ಕೃಷ್ಣನ ವಿಗ್ರಹವನ್ನು ಕಂಡುಕೊಂಡು ಅದನ್ನು ಪ್ರತಿಷ್ಠಾಪಿಸಿದರು. ಮಧ್ವಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದಂತೆ ಶ್ರೀ ಕೃಷ್ಣನ ವಿಗ್ರಹವನ್ನು ಪ್ರಾರಂಭದಲ್ಲಿ ಪೂರ್ವ ದಿಕ್ಕಿನಲ್ಲಿ ಇರಿಸಲಾಗಿತ್ತು. ನಂತರ ಕನಕದಾಸರು ತೋರಿಸಿದ ಅಪಾರ ಭಕ್ತಿಯಿಂದಾಗಿ, ಶ್ರೀ ಕೃಷನು ಪಶ್ಚಿಮಕ್ಕೆ ಮುಖ ಮಾಡಿ ಕನಕ ದಾಸರಿಗೆ ದರ್ಶನವನ್ನು ನೀಡಿದನು.
ಉತ್ಸವಗಳು:
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಉತ್ಸವದ ಸಮಯದಲ್ಲಿ , ದೇವಾಲಯದ ನಿರ್ವಹಣೆಯನ್ನು ಮುಂದಿನ ಅಷ್ಟ ಮಠಕ್ಕೆ ವರ್ಗಾಯಿಸಲಾಗುತ್ತದೆ, ದೇವಸ್ಥಾನವನ್ನು ಸರದಿಯ ಪ್ರಕಾರ ನಡೆಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಲಾಗುತ್ತದೆ . ಪ್ರತಿಯೊಂದು ಮಠಗಳಿಗೆ ಒಬ್ಬ ಸ್ವಾಮಿ ಜವಾಬ್ದಾರಿಯನ್ನು ವಹಿಸುತ್ತಾರೆ , ಅವರು ತಮ್ಮ ಸಮಯದಲ್ಲಿ ದೇವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡು ಭಕ್ತಿಪೂರ್ವಕ ಸೇವೆಯನ್ನು ಸಲ್ಲಿಸುತ್ತಾರೆ .
6. ಕೋಟಿ ತೀರ್ಥ ದೇವಸ್ಥಾನ (ಗೋಕರ್ಣ ಬೀಚ್ ಬಳಿ)
ಸ್ಥಳ: ಕೋಟಿ ತೀರ್ಥ,ಗೋಕರ್ಣ
ಭೇಟಿ ನೀಡಲು ಉತ್ತಮ ಸಮಯ:
ಅಕ್ಟೋಬರ್ನಿಂದ ಮಾರ್ಚ್ವರೆಗೆ ಈ ಕರಾವಳಿ ಪಟ್ಟಣಕ್ಕೆ ಭೇಟಿ ಮಾಡಲು ಸರಿಯಾದ ಸಮಯವಾಗಿದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ ಗೋಕರ್ಣಕ್ಕೆ ಸುಮಾರು 485 ಕಿ.ಮೀ ದೂರ ಮತ್ತು ಸುಮಾರು 9 ಗಂಟೆಗಳು ಬೇಕಾಗುತ್ತದೆ.
ಗೋವಾದಿಂದ ಗೋಕರ್ಣಕ್ಕೆ ಸುಮಾರು 135 ಕಿ.ಮೀ ದೂರ ಮತ್ತು ಸುಮಾರು 3 ಗಂಟೆಗಳು ಬೇಕಾಗುತ್ತದೆ.
ಹೈದರಾಬಾದ್ ನಿಂದ ಗೋಕರ್ಣಕ್ಕೆ ಸುಮಾರು 669 ಕಿ.ಮೀ ದೂರ ಮತ್ತು ಸುಮಾರು 13 ಗಂಟೆಗಳು ಬೇಕಾಗುತ್ತದೆ.
ಮಂಗಳೂರಿನಿಂದ ಗೋಕರ್ಣಕ್ಕೆ ಸುಮಾರು 230 ಕಿ.ಮೀ ದೂರ ಮತ್ತು ಸುಮಾರು 4 ಗಂಟೆಗಳು ಬೇಕಾಗುತ್ತದೆ.
ಗೋಕರ್ಣ ನಗರದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಕೋಟಿ ತೀರ್ಥ ಎಂಬ ಮಾನವ ನಿರ್ಮಿತ ಕೊಳವಿದ್ದು, ಇದು ಒಂದು ಪವಿತ್ರ ಸ್ಥಳವಾಗಿದೆ. ಈ ಸುಂದರವಾದ ಪವಿತ್ರ ಕೊಳವು 6 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಧಾರ್ಮಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ, ವರ್ಷವಿಡೀ ಅಪಾರ ಸಂಖ್ಯೆಯ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಪೌರಾಣಿಕ ಪಕ್ಷಿ ಗರುಡನು ಬ್ರಹ್ಮನ ಪವಿತ್ರ ವಾಸಸ್ಥಾನವಾದ ಶತಶೃಂಗ ಪರ್ವತವನ್ನು ವಶಪಡಿಸಿಕೊಂಡನು ಎಂದು ಹೇಳಲಾಗುತ್ತದೆ, ಇದರಿಂದ ಕೋಪಗೊಂಡು ಅವನು ಗರುಡನು ಪರ್ವತವನ್ನು ಕೆಳಗೆ ಇಡಲು ಹೇಳಿದಾಗ, ಗರುಡನು ಅದರ ಅರ್ಧಭಾಗ ಸಮುದ್ರಕ್ಕೆ ಹೋಗುವಂತೆ ಮತ್ತು ಇನ್ನರ್ಧಭಾಗ ನೆಲದ ಮೇಲೆ ಉಳಿಯುವಂತೆ ಅದನ್ನು ಮಾಡಿದನು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಬಳಿ ಇರುವುದರಿಂದ, ಸಹಸ್ರಾರು ಭಕ್ತರು ಇಲ್ಲಿಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ವರ್ಷಪೂರ್ತಿ ಬರುತ್ತಾರೆ. ಕೊಳದ ಸಮೀಪದಲ್ಲಿ ಸನ್ಯಾಸಿಗಳು ಮತ್ತು ಪುರೋಹಿತರು ಮಂತ್ರಗಳನ್ನು ಪಠಿಸುತ್ತಾ ಮತ್ತು ದೈನಂದಿನ ಆಚರಣೆಗಳನ್ನು ನಡೆಸುವುದನ್ನು ಭಕ್ತರು ಕಾಣಬಹುದಾಗಿದೆ.
7. ಸೋಮೇಶ್ವರ ದೇವಸ್ಥಾನ (ಸೋಮೇಶ್ವರ ಬೀಚ್, ಮಂಗಳೂರು)
ಸ್ಥಳ: ಸೋಮೇಶ್ವರ ಗ್ರಾಮ, ಮಂಗಳೂರು
ಭೇಟಿ ನೀಡಲು ಉತ್ತಮ ಸಮಯ
ದರ್ಶನದ ವೇಳೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 8 ರವರೆಗೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯುತ್ತದೆ. ಜಾತ್ರಾ ಸಮಯದಲ್ಲಿ, ದೇವಾಲಯವು ಯಾವಾಗಲು ತೆರೆದಿರುತ್ತದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ:ಸೋಮೇಶ್ವರ ಬಸ್ ನಿಲ್ದಾಣವು ದೇವಸ್ಥಾನಕ್ಕೆ ಸಮೀಪದಲ್ಲಿಯೇ ಇದೆ.
ರೈಲು ಮೂಲಕ: ಮಂಗಳೂರು ರೈಲ್ವೆ ನಿಲ್ದಾಣವು ದೇವಾಲಯಕ್ಕೆ ಹತ್ತಿರದ ನಿಲ್ದಾಣವಾಗಿದೆ, ಸುಮಾರು 13 ಕಿ.ಮೀ ದೂರದಲ್ಲಿದೆ. ಉಳ್ಳಾಲ ರೈಲು ನಿಲ್ದಾಣವು ದೇವಾಲಯದಿಂದ 1 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ: ಕೆಂಜಾರಿನಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 41 ಕಿ.ಮೀ ದೊರದಲ್ಲಿರುವ ನಿಲ್ದಾಣವಾಗಿದೆ.
ಸೋಮನಾಥ ದೇವಾಲಯ, ಮಂಗಳೂರಿನ ಸೋಮೇಶ್ವರ ಗ್ರಾಮದಲ್ಲಿ ನಿರ್ಮಿತವಾಗಿದ್ದು , ಮಂಗಳೂರು ನಗರದಿಂದ ದಕ್ಷಿಣಕ್ಕೆ ಸುಮಾರು 6 ಮೈಲು ದೊರದಲ್ಲಿರುವ ದೇವಾಲಯವಾಗಿದೆ. ಸೋಮನಾಥ ದೇವರ ದೇವಾಲಯವು ಇರುವುದರಿಂದಲೇ ಈ ಗ್ರಾಮಕ್ಕೆ ಸೋಮೇಶ್ವರ ಎಂಬ ಹೆಸರು ಬಂದಿದೆ.ಇದು ಸುಂದರ ಪ್ರದೇಶವಾಗಿದ್ದು, ದೇವಾಲಯದ ಹಿಂಬದಿಯಲ್ಲಿರುವ ಸಮುದ್ರವು ಪ್ರತಿನಿತ್ಯವೂ ತನ್ನ ಬೋರ್ಗರೆಯುವ ಅಲೆಗಳಿಂದ ಯಾತ್ರಿಕರನ್ನು ಆಕರ್ಷಿಸುತ್ತದೆ.
ಭಾರತ ದೇಶದ ದಕ್ಷಿಣಪಥವನ್ನು ರಾಮಾಯಣದ ಕಾಲದಲ್ಲಿ ದಂಡಕಾರಣ್ಯವೆಂದು ಪ್ರಸಿದ್ದಿಯಲ್ಲಿತ್ತು . ಇಲ್ಲಿನ ಜನಸ್ಥಾನವೆಂಬಲ್ಲಿ ಲಂಕಾಧಿಪತಿ ರಾವಣಾಸುರನ ಸಂಬಂಧಿಕನಾದ ಖರಾಸುರನು ರಾಜ್ಯವಾಳುತ್ತಿದ್ದನು. ಇಲ್ಲಿನ ಎಲ್ಲಾ ಶಿವ ದೇವಾಲಯಗಳನ್ನು ಈತನೇ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ.
ನಾಗಬನ: ಇಲ್ಲಿ ಪ್ರಾಕೃತಿಕವಾಗಿ ಸೃಷ್ಟಿಯಾದ ದೊಡ್ಡ ನಾಗನ ಕಲ್ಲ ಇದೆ ಅದನ್ನು ಪೂಜಿಸಲಾಗುತ್ತದೆ. ಇದೊಂದು ವಿಶಿಷ್ಟವಾದ ನಾಗಶಿಲೆಯಾಗಿದ್ದು, ಇಲ್ಲಿ ಪ್ರತೀ ವರ್ಷವೂ ನಾಗರಪಂಚಮಿಯಂದು ಭಕ್ತಾದಿಗಳು ವಿಶೇಷವಾಗಿ ಭಕ್ತಿಯಿಂದ ಪೂಜಿಸುತ್ತಾರೆ.
ಉತ್ಸವಗಳು : ಜಾತ್ರೆ, ಮೀನ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ಚತುರ್ದಶಿಯಂದು ಧ್ವಜಾರೋಹಣವಾಗಿ ಐದನೆಯ ದಿನ ಭಗವತಿಗಳ ಭೇಟಿ, ಅವಭೃಥ ಸ್ನಾನ, ಧ್ವಜಾವರೋಹಣ ಹೀಗೆ 5 ದಿನಗಳ ಕಾಲ ಜಾತ್ರಾ ಮಹೋತ್ಸವು ನಡೆಯುತ್ತದೆ.ಲಕ್ಷ ದೀಪೋತ್ಸವ ಕೂಡ ನಡೆಯುತ್ತದೆ.
8. ಗಣಪತಿ ದೇವಸ್ಥಾನ (ಹೊನ್ನಾವರ ಬೀಚ್)
ಸ್ಥಳ: ಇಡಗುಂಜಿ, ಹೊನ್ನಾವರ
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ವರೆಗೆ ಭಕ್ತಾದಿಗಳು ದರ್ಶನವನ್ನು ಪಡೆಯಬಹುದಾಗಿದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಭಟ್ಕಳ ಮತ್ತು ಹೊನ್ನಾವರ ದಿಂದ ರಾಷ್ಟೀಯ ಹೆದ್ದಾರಿ 66 (ರಾ.ಹೆ. 17)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ದೊರೆಯುತ್ತದೆ. ಭಟ್ಕಳದಿಂದ 32 ಕಿ.ಮೀ ಹಾಗೂ ಹೊನ್ನಾವರದಿಂದ 15 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ: ಹೊನ್ನಾವರ (ಕೊಂಕಣ ರೈಲ್ವೆ )
ವಿಮಾನದ ಮೂಲಕ: ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು.
ಇಡಗುಂಜಿ ವಿನಾಯಕ ದೇವಾಲಯವು ಕರ್ನಾಟಕದ ಒಂದು ಹಿಂದೂ ಧಾರ್ಮಿಕ ಕ್ಷೇತ್ರವಾಗಿದ್ದು ಸುಮಾರು 1500 ವರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪೂರ್ವ ದಿಕ್ಕಿನಲ್ಲಿ ಕಾಣಬಹುದಾಗಿದೆ.
ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಪ್ರತಿಮೆಯು ಸುಮಾರು 88 ಸೆ.ಮೀ ಎತ್ತರ ಮತ್ತು 59 ಸೆ.ಮೀ ಅಗಲವನ್ನು ಹೊಂದಿರುವ ಮೂರ್ತಿಯಾಗಿದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದ್ದು ಭಕ್ತರ ಮನ ಸೆಳೆಯುವಂತಿದೆ.
ವಸತಿ ಮತ್ತು ಆಹಾರ ಸೌಕರ್ಯಗಳು:
ಇಡುಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳ ಸೌಲಭ್ಯವನ್ನು ಇಲ್ಲಿ ಒದಗಿಸಲಾಗುತ್ತದೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಭಕ್ತರು ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳ ಸೌಲಭ್ಯವು ದೊರೆಯುತ್ತದೆ.
9. ಕಾರವಾರ ನಾಗನಾಥ ದೇವಾಲಯ (ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್ ಹತ್ತಿರ)
ಸ್ಥಳ: ಕಾಳಿ ನದಿ, ಕಾರವಾರ ಕರ್ನಾಟಕ
ಭೇಟಿ ನೀಡಲು ಉತ್ತಮ ಸಮಯ
ಭಕ್ತರು ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ದೇವರ ದರ್ಶನವನ್ನು ಪಡೆಯಬಹುದಾಗಿದೆ. ಮಹಾ ಶಿವರಾತ್ರಿ ಮತ್ತು ಕಾರ್ತಿಕ ಪೂರ್ಣಿಮೆಯ ದಿನದಂದು ಈ ದೇವಸ್ಥಾನಕ್ಕೆ ಭೇಟಿ ಮಾಡಲು ಒಳ್ಳೆಯ ಸಮಯವಾಗಿದೆ. ಈ ಸಂದರ್ಭಗಳಲ್ಲಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬಂದು ದೇವರ ದರ್ಶನವನ್ನು ಪಡೆದು ಪಾವನರಾಗುತ್ತಾರೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಕಾರವಾರ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ.
ಗೋವಾ (ಪಣಜಿ)ದಿಂದ 97 ಕಿ.ಮೀ.ದೂರವಿದೆ.
ಬೆಂಗಳೂರಿನಿಂದ 523 ಕಿ.ಮೀ ದೂರದಲ್ಲಿದೆ.
ಪುಣೆಯಿಂದ 718 ಕಿ.ಮೀ ದೂರದಲ್ಲಿದೆ
ಮುರುಡೇಶ್ವರದಿಂದ 125 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ: ಕಾರವಾರ ರೈಲು ನಿಲ್ದಾಣ (5 ಕಿ.ಮೀ) ದೂರದಲ್ಲಿದೆ.
ವಿಮಾನದ ಮೂಲಕ: ಗೋವಾದ ದಾಬೋಲಿಮ್ ವಿಮಾನ ನಿಲ್ದಾಣ (96 ಕಿ.ಮೀ)ದೂರದಲ್ಲಿದೆ.
ನಾಗನಾಥ ದೇವಸ್ಥಾನವು ಹಲವಾರು ಶತಮಾನಗಳಷ್ಟು ಹಳೆಯದಾಗಿರುವ ಹಿಂದೂ ದೇಗುಲವಾಗಿದೆ, ಹಿಂದೂ ಪುರಾಣಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವ ಕ್ಷೇತ್ರವಾಗಿದೆ. ಶೈವ ಧರ್ಮದ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿರುವ ಈ ದೇವಾಲಯವು ಶಿವ ದೇವಾಲಯಗಳಲ್ಲಿ ಒಂದಾಗಿದೆ.
ನಾಗನಾಥ ದೇವಾಲಯವನ್ನು ಸಾಂಪ್ರದಾಯಿಕ ದ್ರಾವಿಡ ವಾಸ್ತುಶಿಲ್ಪದಲ್ಲಿ ವಿನ್ಯಾಸಗೊಳಿಸಲಾಗಿರುವ ಭವ್ಯವಾಗಿರುವ ಯಾತ್ರಾ ಸ್ಥಳವಾಗಿದೆ, ದೇವಾಲಯದ ಒಳಗೆ ಶಿವಲಿಂಗವು ಸ್ವಯಂಭು ರೂಪದಲ್ಲಿದೆ ಭಕ್ತರು ಕಾಣಬಹುದಾಗಿದೆ. ಹಿಂದೂ ದೇವತೆಗಳಿಗೆ ಮೀಸಲಾಗಿರುವ ಇತರ ಸಣ್ಣ ದೇವಾಲಯಗಳನ್ನು ದೇವಾಲಯದ ಆವರಣದಲ್ಲಿ ದರ್ಶಿಸಬಹುದಾಗಿದೆ.
ಹತ್ತಿರದ ಪ್ರವಾಸಿ ಸ್ಥಳಗಳು:
ಕಾರವಾರ ಬೀಚ್,ರವೀಂದ್ರನಾಥ ಟ್ಯಾಗೋರ್ ಬೀಚ್ (6 ಕಿ.ಮೀ),ಸದಾಶಿವಗಡ ಕೋಟೆ (10 ಕಿ.ಮೀ),ದೇವ್ಬಾಗ್ ಬೀಚ್ (7 ಕಿ.ಮೀ) ಈ ಸ್ಥಳಗಳು ಯಾತ್ರಾರ್ಥಿಗಳಿಗೆ ವೀಕ್ಷಣೆ ಮಾಡಬಹುದಾದ ಸ್ಥಳಗಳು.
10. ಅನಂತೇಶ್ವರ ದೇವಸ್ಥಾನ, ಉಡುಪಿ (ಕೋಡಿ ಬೀಚ್)
ಸ್ಥಳ: ಉಡುಪಿ, ಕರ್ನಾಟಕ
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವನ್ನು ಒದಗಿಸಲಾಗಿದೆ.
ಅನಂತೇಶ್ವರ ದೇವಸ್ಥಾನವು 8 ನೇ ಶತಮಾನದಲ್ಲಿ ಅಲೂಪರ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಐತಿಹಾಸಿಕ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಉಡುಪಿಯ ಮಂಜೇಶ್ವರದಲ್ಲಿರುವ ಈ ದೇವಸ್ಥಾನವನ್ನು ‘ಮಂಜುಳ ಕ್ಷೇತ್ರ’ ಮತ್ತು 18 ಊರುಗಳ ದೇವಾಲಯ ಎಂದೂ ಪ್ರಸಿದ್ದಿಯಾಗಿದೆ. ಶ್ರೀ ಅನಂತೇಶ್ವರ ದೇವಾಲಯವು ಉಡುಪಿಯ ಪುರಾತನ ದೇವಾಲಯಗಳಲ್ಲೊಂದಾಗಿದ್ದು, ಈ ಗ್ರಾಮಕ್ಕೆ ಶಿವಳ್ಳಿ ಎಂದು ಹೆಸರು ಬರಲು ಅನಂತೇಶ್ವರ ದೇವಾಲಯವೇ ಕಾರಣವಾಗಿದೆ.
ವಿಶೇಷತೆ :ಈ ದೇಗುಲದಲ್ಲಿ ಪೂಜಿಸಲ್ಪಡುತ್ತಿರುವ ಮುಖ್ಯ ದೇವರು ಅನಂತೇಶ್ವರನ ರೂಪದಲ್ಲಿರುವ ಶ್ರೀನಾರಾಯಣ. ಅನಂತ ಅಂದರೆ ಶೇಷ, ಅನಂತೇಶ್ವರ ಅಂದರೆ ಶೇಷ ಶಯನನಾದ ನಾರಾಯಣ ಎಂದರ್ಥ. ಈ ದೇವಾಲಯವು ನಾರಾಯಣನನ್ನು(ಪರಶುರಾಮ) ಲಿಂಗ ರೂಪದಲ್ಲಿ ಪೂಜಿಸುವ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ, ಈ ದೇಗುಲವು ಶಿವ ಮತ್ತು ವಿಷ್ಣುವಿನ ಸ್ಥಳವಾಗಿದೆ. ಹಾಗಾಗಿ ಇದೊಂದು ಹರಿಹರ ಕ್ಷೇತ್ರವಾಗಿ ಎರಡು ಭಕ್ತರಿಂದ ಪೂಜಿಸಲ್ಪಡುತ್ತದೆ.