ಮಂಗಳಸೂತ್ರ ಎಂದರೇನು? ತಾಳಿ

ಮಂಗಳ ಸೂತ್ರದ ಮಹತ್ವ
ಮಂಗಳ ಸೂತ್ರ ಅಥವಾ ತಾಳಿ, ವಿವಾಹಿತ ಹಿಂದೂ ಮಹಿಳೆಯರು ಕೊರಳಲ್ಲಿ ಧರಿಸುವ ಸರವಾಗಿದೆ. ಹಿಂದೂ ವಿವಾಹದ ಸಂದರ್ಭದಲ್ಲಿ, ವರನು ವಧುವಿನ ಕೊರಳಿಗೆ  ಮಂಗಳಸೂತ್ರವನ್ನು ಕಟ್ಟುತ್ತಾನೆ. ಈ ಸಮಯವನ್ನು ಮಾಂಗಲ್ಯ ಧಾರಣಂ ವೇಳೆ ಎಂದು ಹೇಳಲಾಗುತ್ತದೆ.

ಮಂಗಳಸೂತ್ರ ಎಂದರೆ  ” ಶುಭ ದಾರ”  ಇದನ್ನು ವಧುವಿನ ಕೊರಳಿಗೆ ಕಟ್ಟಲಾಗುತ್ತದೆ ಮತ್ತು ಅವಳ ಮದುವೆಯ ನಂತರದ ಸಮಯದಲ್ಲಿ ಪ್ರತಿದಿನವೂ ಧರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅರಿಶಿನ ದಾರದಿಂದ ತಯಾರಿಸಿದ ಅಥವಾ ಕಪ್ಪು ಮಣಿಗಳನ್ನು ಹೊಂದಿರುವ ಹಾರ ಇದಾಗಿದೆ. ಕೆಲವೊಮ್ಮೆ ಆ ಪ್ರದೇಶಗಳಿಗೆ ತಕ್ಕಂತೆ ಮಂಗಳ ಸೂತ್ರಕ್ಕೆ ಚಿನ್ನ, ಕಪ್ಪು, ಕೆಂಪು ಮಣಿಗಳಿಂದ ಮಾಡಲಾಗುತ್ತದೆ.

ಮಂಗಳ ಸೂತ್ರದ ಇತಿಹಾಸವು ಕ್ರಿಸ್ತಪೂರ್ವ 4 ನೇ ಶತಮಾನಕ್ಕೆ ಮುಂಚಿತವಾದದ್ದು , ಇದರ ಬಗ್ಗೆ ಲಲಿತಾ ಸಹಸ್ರನಾಮದಲ್ಲಿ ಮಾಂಗಲ್ಯ ಸೂತ್ರ ಎಂದು ಹೇಳಲಾಗಿದೆ,  ಇದು ಕ್ರಿ.ಶ. 6 ನೇ ಶತಮಾನದಲ್ಲಿ ಬೇರೆ ಪುರುಷರು ಮತ್ತು ದುಷ್ಟಶಕ್ತಿಗಳಿಂದ ಮಹಿಳೆಯರ ರಕ್ಷಣೆಗಾಗಿ ವಧುವಿಗೆ ಕಟ್ಟಲಾದ ಮಂಗಳ ದಾರವಾಗಿದೆ ಎಂದು ಹೇಳಬಹುದು.

ಮಂಗಳ ಸೂತ್ರದ ವಿಶೇಷತೆಯ ಬಗ್ಗೆ ಆದಿ ಶಂಕರರು ಸೌಂದರ್ಯ ಲಹರಿಯಲ್ಲಿ ವರ್ಣಿಸಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ, ಮಾಂಗಲ್ಯವನ್ನು ಪತಿಯ ಆಯುಷ್ಯ ವೃದ್ಧಿಗಾಗಿ  ಧರಿಸಿಕೊಳ್ಳಲಾಗುತ್ತದೆ. ಧಾರ್ಮಿಕ ಪದ್ಧತಿಗಳಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ, ವಿವಾಹಿತ ಮಹಿಳೆಯರು ತಮ್ಮ ಪತಿ ಇರುವವರೆಗೂ ಮಾಂಗಲ್ಯವನ್ನು ಧರಿಸಿಕೊಳ್ಳಬೇಕು  ಮಾಂಗಲ್ಯವನ್ನು ಧರಿಸಿಕೊಳ್ಳುವುದರಿಂದ ಪತಿಯ ಯೋಗಕ್ಷೇಮವನ್ನು ಸುರಕ್ಷಿತವಾಗಿರುತ್ತದೆ ಎಂದು ಹೇಳ್ಲಗುತ್ತದೆ.

ಹಿಂದಿನ ಕಾಲದಲ್ಲಿ ಮಹಿಳೆಯರ ಆಭರಣಗಳು ವೃದ್ಧಾಪ್ಯ ಮತ್ತು ವಿಧವೆಯರ ವಿರುದ್ಧ ಆರ್ಥಿಕ ಸುರಕ್ಷತೆಗಾಗಿಯೂ ಉಪಯೋಗವಾಗುತ್ತಿದ್ದವು, ಮಹಿಳೆಯರಿಗೆ ಆಸ್ತಿ ಹಕ್ಕುಗಳು ಕೂಡ ಇದ್ದವು.   

ಕರ್ನಾಟಕದ ಮಹಿಳೆಯರ ಮಾಂಗಲ್ಯ ಸರವು ಮರಾಠಿ ಶೈಲಿಯಲ್ಲಿ ಇರುವುದನ್ನು ನೋಡಬಹುದಾಗಿದೆ, ಅದರಲ್ಲಿ ಒಂದು ವಟಿಯನ್ನು ನೋಡಬಹುದು. ಇತ್ತೀಚಿನ ಸಮಯದಲ್ಲಿ ಬಹುತೇಕ ಆಡಂಬರದ ಕುಟುಂಬಗಳು ಒಂದೇ ವಟಿ ಅಥವಾ ಹಗುರವಾದ ಮಾಂಗಲ್ಯ ಸೂತ್ರವನ್ನು ಧರಿಸುತ್ತಾರೆ.

ಮಂಗಳ ಸೂತ್ರಗಳನ್ನು ಅನೇಕ ಶೈಲಿಯಲ್ಲಿ ತಯಾರಿ ಮಾಡಲಾಗುತ್ತದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ತೆಲುಗು ಮಹಿಳೆಯರು ಲಕ್ಷ್ಮಿ ತಾಳಿಯನ್ನು ಧರಿಸುತ್ತಾರೆ, ಇದರಲ್ಲಿ   ಲಕ್ಷ್ಮಿದೇವಿಯ ಚಿತ್ರಗಳನ್ನು ರಚಿಸಿರುತ್ತಾರೆ, ಕೇರಳದ ಮಲಯಾಳಿಗಳು ಧರಿಸುವ ಎಲಾ ತಾಳಿ ಮತ್ತು ತಮಿಳುನಾಡಿನ  ಕ್ಷತ್ರಿಯ ಜಾತಿಯ ಮಹಿಳೆಯರು ಕುಂಭ ತಾಳಿ ಧರಿಸುತ್ತಾರೆ . ಈ ವಿನ್ಯಾಸವನ್ನು ಜನರು ತಮ್ಮ ಪದ್ಧತಿಗಳ ಅನುಸಾರ ವರನ ಕುಟುಂಬವು ತಯಾರಿಸುತ್ತಾರೆ.

ಮಂಗಳ ಸೂತ್ರದ ವಿಶೇಷತೆ :
ಮಂಗಳಸೂತ್ರವು ಸಾಮಾನ್ಯ ಆಭರಣಕ್ಕಿಂತ ಹೆಚ್ಚಿನ ಮಹತ್ವದಾಗಿದೆ, ಇದು ಪ್ರೀತಿ, ವಿಶ್ವಾಸ ಮತ್ತು ಸಂಪ್ರದಾಯದ ಪವಿತ್ರ ಬೆಸುಗೆಯ ದಾರವಾಗಿದೆ. ಅದರ ಪ್ರಾಚೀನ ರಚನೆಯಿಂದ ಹಿಡಿದು ಅದರ ಹೊಸ ಶೈಲಿಯಲ್ಲಿಯೂ ತಯಾರಿಸಲಾಗಿದೆ, ಮಾಂಗಲ್ಯವು ಭಾರತೀಯ ವೈವಾಹಿಕ ಜೀವನದಲ್ಲಿ ವಿಶೇಷ ಮಹತ್ವವನ್ನು ಇದು ಹೊಂದಿದೆ ಎಂದು ಹೇಳಬಹುದು.

ಮಂಗಳಸೂತ್ರದ ಮಹತ್ವವು ಸಾವಿರಾರು ವರ್ಷಗಳ ಹಿಂದಿನದು. ” ಸ್ಕಂದ ಪುರಾಣ ” ಮತ್ತು ” ಪದ್ಮ ಪುರಾಣ ” ದಂತಹ ಶ್ರೇಷ್ಠ ಗ್ರಂಥಗಳು ಮದುವೆಯಲ್ಲಿ ಪವಿತ್ರ ಮಂಗಳಸೂತ್ರದ    ಬಳಕೆ ಬಗ್ಗೆ ಹೇಳುತ್ತವೆ. ಪ್ರಾರಂಭದಲ್ಲಿ  ಈ ದಾರಗಳನ್ನು ಹಳದಿ ಅರಿಶಿನ ಬಣ್ಣದ ಹತ್ತಿಯಿಂದ ತಯಾರಿಸಲಾಗುತ್ತಿತ್ತು. ಆಧುನಿಕ ಕಾಲದಲ್ಲಿ ಅವು ಚಿನ್ನ ಮತ್ತು ಕಪ್ಪು ಮಣಿಗಳಿಂದ ತಯಾರಿಸಲಾಗುತ್ತದೆ.

ವೈಜ್ಞಾನಿಕ ಕಾರಣ
ಮಂಗಳ ಸೂತ್ರವನ್ನು ಹೃದಯಕ್ಕೆ ಹತ್ತಿರವಾಗಿ ಧರಿಸುವುದರಿಂದ ಹೃದಯ ಬಡಿತ ಮತ್ತು ಭಾವನಾತ್ಮಕ ವಿಚಾರಗಳನ್ನು ಸಮತೋಲನದಲ್ಲಿ ಇರಿಸುತ್ತವೆ ಎಂದು ಹೇಳಲಾಗುತ್ತದೆ.

ಶಕ್ತಿ ವಿಜ್ಞಾನ ಹೇಳುವ ಪ್ರಕಾರ, ಕಪ್ಪು ಮಣಿಗಳು ನಕಾರಾತ್ಮಕ ಶಕ್ತಿಗಳಿಂದ ಕಾಪಾಡುತ್ತವೆ. ಕೊರಳಲ್ಲಿ ಮಾಂಗಲ್ಯ ಇರುವುದರಿಂದ ಆಕ್ಯುಪ್ರೆಶರ್ ಪಾಯಿಂಟ್‌ಗಳು ಸಮತೋಲನದಲ್ಲಿರುತ್ತವೆ,  ಉತ್ತಮ ಆರೋಗ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡುತ್ತದೆ.

ಕಪ್ಪು ಮಣಿಗಳ ಮಹತ್ವ
ಕಪ್ಪು ಮಣಿಗಳು ಮಂಗಳ ಸೂತ್ರದಲ್ಲಿ ವಿಶೇಷ ಶಕ್ತಿಯನ್ನು ಹೊಂದಿವೆ. ಕಪ್ಪು ಮಣಿಗಳು ಕೇವಲ ಅಲಂಕಾರಕ್ಕಾಗಿ ಬಳಸುವುದಿಲ್ಲ – ದಂಪತಿಗಳನ್ನು ದುಷ್ಟ ಕಣ್ಣು ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡಲು ಅವುಗಳನ್ನು ಉಪಯೋಗಿಸಲಾಗುತ್ತದೆ.  ಚಿನ್ನ ಮತ್ತು ಕಪ್ಪು ಮಣಿಗಳು ಸಮೃದ್ಧಿ ಮತ್ತು ರಕ್ಷಣೆಯನ್ನು ನೀಡುತ್ತವೆ.

ಕಪ್ಪು ಮಣಿಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ?
ಮಂಗಳ ಸೂತ್ರದ ಕರಿ ಮಣಿಗಳನ್ನು ಕಪ್ಪು ಗಾಜು ಅಥವಾ ಗೋಮೇಧಿಕದಿಂದ ತಯಾರಿ ಮಾಡಲಾಗುತ್ತದೆ, ಈ ಮಣಿಗಳು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುವ ಮತ್ತು ದೂರ ಮಾಡುವ ಶಕ್ತಿ ಹೊಂದಿರುವುದಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಆಧುನಿಕ ಮಂಗಳಸೂತ್ರಗಳು ಕೇವಲ ಆಡಂಬರದ ದೃಷ್ಟಿಯನ್ನು ಮಾತ್ರ ಹೊಂದಿವೆ ಮತ್ತು ಕಪ್ಪು ಮುತ್ತುಗಳಿಂದ ಮಾಡಲಾಗುತ್ತದೆ.

ಮಂಗಳಸೂತ್ರದಲ್ಲಿ ಕಪ್ಪು ಮಣಿಗಳ ಉಪಯೋಗ:
*ಮಾಂಗಲ್ಯ ಧರಿಸುವುದರಿಂದ ದುಷ್ಟಶಕ್ತಿ ಹತ್ತಿರ ಬರುವುದಿಲ್ಲ.

*ಪತಿಯ ಆರೋಗ್ಯವು ಸುರಕ್ಷಿತವಾಗಿರುತ್ತದೆ.

*ಮಂಗಳ ಸೂತ್ರ ಧರಿಸುವುದರಿಂದ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಛ್ಗುತ್ತದೆ.

*ಸತಿಪತಿಗಳಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ.

*ಆಂತರಿಕ ಶಕ್ತಿ ಮತ್ತು ಪತಿವರ್ಯತ್ಯವನ್ನು ಹೆಚ್ಚಿಸುತ್ತದೆ. 

ಚಿನ್ನದ ಮಂಗಳಸೂತ್ರ:
ಚಿನ್ನದ ಮಂಗಳಸೂತ್ರವು ಹೆಚ್ಚಾಗಿ ಆಧುನಿಕ ಸಂಪ್ರದಾಯದಲ್ಲಿ ರೂಢಿಯಲ್ಲಿ ಇದೆ. ಮನೆಗಳಲ್ಲಿ ಸಂಪತ್ತು, ಸಮೃದ್ಧಿ  ಮತ್ತು ಶಾಶ್ವತ ನೆಮ್ಮದಿಯನ್ನು ನೀಡುತ್ತದೆ. ಮಾಂಗಲ್ಯ ಶೈಲಿಗಳಲ್ಲಿ ಅನೇಕ ವಿಧಗಳನ್ನು ನೋಡಬಹುದು, ಮಂಗಳ ಸೂತ್ರಗಳು ಧಾರ್ಮಿಕ ಮಹತ್ವವನ್ನು ಇವು ಹೊಂದಿವೆ.

ಮಂಗಳ ಸೂತ್ರದ ಮೂರೂ ಗಂಟುಗಳ ಮಹತ್ವ :
ಹಿಂದೂ ವಿವಾಹದ ಅತ್ಯಂತ ಮುಖ್ಯವಾದದ್ದು ಮತ್ತು ಧಾರ್ಮಿಕ ಸಂಪ್ರದಾಯ ಎಂದರೆ ಅದು ತಾಳಿ ಕಟ್ಟುವುದಾಗಿದೆ.ಮಾನಸ, ವಾಚ ಮತ್ತು ಕರ್ಮೇಣಗಳು ಹಿಂದೂ ವಿವಾಹಗಳಲ್ಲಿ ವಧುವಿನ ಕೊರಳಿಗೆ ಕಟ್ಟುವ ತಾಳಿಯ ಮೂರು ಗಂಟುಗಳಾಗಿವೆ.

ಮೂರು ಗಂಟುಗಳು ವರನು ವಧುವಿಗೆ ತನ್ನ ಸತಿಯಾಗಿ ಸ್ವೀಕರಿಸುವ ಸಮಯದಲ್ಲಿ ಅಗ್ನಿ ಸಾಕ್ಷಿಯಾಗಿ ಕಟ್ಟಲಾಗುತ್ತದೆ : ಮಾನಸ (ಆಲೋಚನೆಗಳು), ವಾಚ (ಮಾತು) ಮತ್ತು ಕರ್ಮಣ (ಕ್ರಿಯೆಗಳು) ಇವು ಮೂರೂ ಗಂಟುಗಳ ಮಹತ್ವವಾಗಿವೆ. ವರನು ವಧುವಿನ ಕೊರಳಿಗೆ ಮಂಗಳ ಸೂತ್ರವನ್ನು ಮೂರು ಬಾರಿ ಗಂಟು ಹಾಕಿ ಕಟ್ಟಿದ ನಂತರವೇ ದಂಪತಿಗಳನ್ನು ಪತಿ-ಪತ್ನಿ ಎಂದು ಹೇಳ್ಲಗುತ್ತದೆ. ತಾಳಿ ಕಟ್ಟುವುದನ್ನು ‘ಮಾಂಗಲ್ಯ ಧಾರಮ್’ ಎಂದು ಹೇಳಲಾಗುತ್ತದೆ.

ಮಂಗಳ ಸೂತ್ರದ ಸಂದೇಶ:
ವರನ ದೀರ್ಘಾಯುಷ್ಯಕ್ಕೆ ಮಾಂಗಲ್ಯ ಸಂಬಂದಿಸಿದ್ದು ವಧುವಿನ ಕುತ್ತಿಗೆಗೆ ಈ ಮಾಂಗಲ್ಯವನ್ನು ಕಟ್ಟುತ್ತಿದ್ದೇನೆ. ಜೀವನದ ದೀರ್ಘಕಾಲ ಆಯುಷ್ಯ ಮತ್ತು ತೃಪ್ತಿಕರ ಜೀವನ ದೊರೆಯಲಿ ಮತ್ತು  ಸಂತೋಷ ನೆಮ್ಮದಿ ಸಿಗಲಿ ಎಂದು.

ವರನು ಮಾಂಗಲ್ಯ ಕಟ್ಟುವ ಮೊದಲ ಎರಡು ಗಂಟುಗಳು ಅವರ ಪರಸ್ಪರ ಭಕ್ತಿಯನ್ನು ಸಂಕೇತಗಳಾಗಿವೆ ಮತ್ತು ವಧುವಿನ ರಕ್ಷಣೆಗಾಗಿ ಆಗಿದೆ. ಮೂರನೇ ಗಂಟು ವರನು  ಇದು ಎರಡು ಕುಟುಂಬಗಳ ಬಂಧನವನ್ನು ಪ್ರತಿನಿಧಿಸುತ್ತದೆ.

ಮೂರು ಗಂಟುಗಳು ವರ ವಧುವಿಗೆ ನೀಡಿದ ಪ್ರಮಾಣಗಳು ಮನಸಾ, ವಾಚಾ ಮತ್ತು ಕರ್ಮೇಣ ಪ್ರತಿನಿಧಿಸಬಹುದು. 

ಮಂಗಳಸೂತ್ರದ ನಿರ್ದಿಷ್ಟ ಉದ್ದ:
ಮಂಗಳಸೂತ್ರದ  ಉದ್ದವು ವಧುವಿನ ಹೃದಯವನ್ನು ತಲುಪಬೇಕು ಎಂದು ಹೇಳಲಾಗುತ್ತದೆ, ಏಕೆಂದರೆ ಅದು ಮಹಿಳೆಯರಿಗೆ ಆರೋಗ್ಯ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಬಹುತೇಕ ಪ್ರಯೋಜನಗಲು ಉಂಟಾಗುತ್ತದೆ.

ಮಂಗಳಸೂತ್ರ ಆರೋಗ್ಯ ಪ್ರಯೋಜನಗಳು:
ಮಂಗಳಸೂತ್ರದ ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವನ್ನು ಹೊಂದಿಲ್ಲ. ಅದಕ್ಕೆ ಕೆಲವೊಂದು ವೈಜ್ಞಾನಿಕತೆ ಕೂಡ ಇದೆ ಎಂದು ಹೇಳಲಾಗುತ್ತದೆ. ಮಂಗಳಸೂತ್ರವನ್ನು ಪರಿಶುದ್ಧ  ಚಿನ್ನದಿಂದ ಮಾಡಿರುತ್ತಾರೆ ಮತ್ತು ಅದನ್ನು ಯಾರಿಗೂ ಕಾಣದಂತೆ  ಧರಿಸಬೇಕು. ಆಯುರ್ವೇದ ಗ್ರಂಥಗಳಲ್ಲಿ ಶುದ್ಧ ಚಿನ್ನದ ಆರೋಗ್ಯದ ಸಮತೋಲನದ ಪ್ರಯೋಜನಗಳ ಬಗ್ಗೆ ತಿಳಿಸುತ್ತವೆ, ಇದು ಹೆಚ್ಚಾಗಿ ಹೃದಯದ ಆರೋಗ್ಯ ಕಾಪಾಡಲು ಸಹಾಯಕವಾಗಿದೆ.

 ಪರಿಶುದ್ಧ ಚಿನ್ನದಿಂದ ತಯಾರಿಸಿದ ಮಂಗಳಸೂತ್ರ ಹೃದಯದ ಮೇಲೆ ಚರ್ಮವನ್ನು ಸ್ಪರ್ಶಿಸುವುದರಿಂದ ಹೃದಯದ ಕಾರ್ಯವನ್ನು ಆರೋಗ್ಯಕರವಾಗಿರುವುದು ಎಂದು ಹೇಳಲಾಗುತ್ತದೆ, ಮಾಂಗಲ್ಯವು ಸುತ್ತಲಿನಿಂದ ಕಾಸ್ಮಿಕ್ ಅಲೆಗಳನ್ನು ತನ್ನತ್ತ ಸೆಳೆಯುವುದರಿಂದ ಹೃದಯದ ಕಾರ್ಯವನ್ನು ನಿಯಂತ್ರಿಸುತ್ತದೆ. ಈ ಅಲೆಗಳು ದಂಪತಿಗಳ ಜೀವನವು ಸಂತೋಷ ಮತ್ತು ಆರೋಗ್ಯಕರವಾಗಿರುವಂತೆ ಮಾಡುತ್ತವೆ ಎಂದು ಹೇಳಾಗುತ್ತದೆ.

ಮಂಗಳಸೂತ್ರಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಕೂಡ ಇದಕ್ಕೆ ಇದೆ ಎಂದು ಹೇಳಲಾಗುತ್ತದೆ. ಇದು ರಕ್ತ ಪರಿಚಲನೆಗೆ ಸಹಾಯಕವಾಗಿದೆ ಮತ್ತು ವ್ಯಕ್ತಿಯನ್ನು ಉತ್ಸಾಹ ಭರಿತನಾಗಿರಲು ಸಹಾಯ ಮಾಡುತ್ತದೆ. ಮಂಗಳಸೂತ್ರವನ್ನು ಧರಿಸುವುದರಿಂದ ರಕ್ತದೊತ್ತಡವು ಸಮತೋಲನದಲ್ಲಿರುತ್ತದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಆಯುರ್ವೇದದಲ್ಲಿ  ಹೇಳಿರುವಂತೆ, ಇದು ಸೂರ್ಯ-ನಾಡಿಯಲ್ಲಿ ಚೈತನ್ಯ ತುಂಬುವ ಮೂಲಕ ಮಹಿಳೆಯ ದೇಹದಲ್ಲಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.

Leave a Comment

Your email address will not be published. Required fields are marked *

Scroll to Top