ಕನ್ನಡ ಭಾಷೆ ಯಾವ ಭಾಷೆಯಿಂದ ಹುಟ್ಟಿದೆ?
ಕನ್ನಡ ಭಾಷೆಯು ನೈಋತ್ಯ ಭಾರತದ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾಗಿ ಮಾತನಾಡುವ ದ್ರಾವಿಡ ಭಾಷೆ ಇದಾಗಿದೆ, ನೆರೆಯ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಾತನಾಡಲ್ಪಡುತ್ತದೆ. ಕನ್ನಡ ಭಾಷೆಯು 44 ಮಿಲಿಯನ್ ಸ್ಥಳೀಯ ಭಾಷಿಕರನ್ನು ಇದು ಹೊಂದಿದೆ ಮತ್ತು ಕರ್ನಾಟಕದ 15 ಮಿಲಿಯನ್ ಭಾಷಿಕರಿಗೆ ಪ್ರಥಮ ಅಥವಾ ತೃತೀಯ ಭಾಷೆ ಇದಾಗಿದೆ. ಕನ್ನಡ ಭಾಷೆಯು ಕರ್ನಾಟಕದ ಅಧಿಕೃತ ಮತ್ತು ಆಡಳಿತ ಭಾಷೆಯಾಗಿದೆ. ಕನ್ನಡ ಭಾಷೆಯು ಭಾರತದಲ್ಲಿ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ ಮತ್ತು ದೇಶದ ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದಾಗಿದೆ.
ಕನ್ನಡವು ಮಲಯಾಳಂ ಮತ್ತು ತಮಿಳಿನಂತೆ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ, ಇದರಿಂದಲೇ ಇದು ತನ್ನ ವ್ಯಾಕರಣ ಮತ್ತು ಮೂಲ ಶಬ್ದಕೋಶವನ್ನು ಪಡೆದುಕೊಂಡಿದೆ.
ಇದರ ಇತಿಹಾಸವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು:
ಹಳೇಗನ್ನಡ ಕ್ರಿ.ಶ. 450 ರಿಂದ 1200 ರವರೆಗೆ,
ಮಧ್ಯ ಕನ್ನಡ 1200 ರಿಂದ 1700 ರವರೆಗೆ,
ಆಧುನಿಕ ಕನ್ನಡ 1700 ರಿಂದ ಇಂದಿನವರೆಗೆ ಕಾಣಬಹುದಾಗಿದೆ.
ಕನ್ನಡ ಭಾಷೆಯು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಕೂಡಿದೆ – ರೂಪವಿಜ್ಞಾನ, ಧ್ವನಿಶಾಸ್ತ್ರ, ಶಬ್ದಕೋಶ, ವ್ಯಾಕರಣ ಮತ್ತು ವಾಕ್ಯರಚನೆಯಲ್ಲಿ ಕಾಣಬಹುದಾಗಿದೆ. ಸಾಹಿತ್ಯಿಕ ಕನ್ನಡ ವ್ಯಾಕರಣದಲ್ಲಿ ಇರುವ ಮೂರು ಪ್ರಮುಖ ಮೂಲಗಳು ಪಾಣಿನಿಯ ವ್ಯಾಕರಣ, ಪಾಣಿನಿಯೇತರ ಸಂಸ್ಕೃತ ವ್ಯಾಕರಣ ಶಾಲೆಗಳು, ವಿಶೇಷವಾಗಿ ಕತಂತ್ರ ಮತ್ತು ಶಕಟಾಯನ ಶಾಲೆಗಳು ಮತ್ತು ಪ್ರಾಕೃತ ವ್ಯಾಕರಣ. ಮೊದಲಿನಿಂದಲೂ ಸಾಹಿತ್ಯಿಕ ಪ್ರಾಕೃತವು ಕರ್ನಾಟಕದಲ್ಲಿ ಉಪಯೋಗಿಸಲಾಗುತ್ತದೆ ಎಂದು ಕಾಣುತ್ತದೆ.
ದಕ್ಷಿಣ ಭಾರತದಲ್ಲಿ ತಮಿಳು ಭಾಷೆಯ ನಂತರ ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ತಮಿಳು ಭಾಷೆಯ ಉಗಮದ ಬಗ್ಗೆ ಇಲ್ಲಿಯವರೆಗೆ ನಿಖರವಾಗಿ ಯಾವುದೇ ಮಾಹಿತಿ ತಿಳಿದಿಲ್ಲ ಮತ್ತು ಪುರಾತತ್ತ್ವ ಶಾಸ್ತ್ರದ ಆಧಾರಗಳಿಂದ ಇದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಗಿಂತಲೂ ಪ್ರಾಚೀನವಾದದ್ದು ಎಂದು ಇದುವರೆಗೆ ಸಾಬೀತಾಗಿದೆ.
ಕನ್ನಡದಲ್ಲಿ ತಮಿಳಿಗಿಂತ ಅಧಿಕ ವ್ಯಂಜನಗಳನ್ನು ಕಾಣಬಹುದಾಗಿದೆ. ಕನ್ನಡವು ಹೆಚ್ಚಾಗಿ ಸಂಸ್ಕೃತ ಆಧಾರಿತವಾಗಿರುವುದನ್ನು ಕಾಣಬಹುದಾಗಿದೆ, ತಮಿಳಿಗಿಂತ ಅಕ್ಷರಗಳಲ್ಲಿ ಭಿನ್ನವಾಗಿ ಬರೆಯಲಾಗುತ್ತದೆ.
ಕನ್ನಡವು ಮಾತನಾಡುವ ಭಾಷೆಯಾಗಿ 2,500 ವರ್ಷಗಳ ಹಿಂದೆಯೇ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ, ಕನ್ನಡ ಭಾಷೆ ಲಿಖಿತ ರೂಪಕ್ಕಿಂತ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಮತ್ತು ಇದು ಭಾರತದ ಅತ್ಯಂತ ಪ್ರಮುಖ ಪ್ರಾಚೀನ ಭಾಷೆಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಹೇಳಬಹುದು. ಅತ್ಯಂತ ಪ್ರಾಚೀನ ರೂಪಗಳಲ್ಲಿ ಒಂದಾದ ಬ್ರಾಹ್ಮಿಯಲ್ಲಿ ಇದರ ಮೂಲ ಹೊಂದಿದೆ
ಐದನೇ ಶತಮಾನದ ಸುಮಾರಿಗೆ, ಈ ಭಾಷೆಯು ಹಳೆಯ ಕನ್ನಡವಾಗಿ ರೂಪುಗೊಂಡಿತು, ಇದು ಭಾರತದ ಪ್ರಮುಖ ಧರ್ಮಗಳಲ್ಲಿ ಒಂದಾದ ಜೈನ ಧರ್ಮದಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿತ್ತು . ಹಳೆ ಕನ್ನಡವನ್ನು ಆರನೇ ಶತಮಾನದ ಗಂಗಾ ರಾಜವಂಶ ಮತ್ತು ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟ ಆಳ್ವಿಕೆಯ ಕಾಲದಲ್ಲಿ ಬಳಸಲಾಗಿತ್ತು. ಭಾರತದ ಶ್ರೇಷ್ಠ ಕವಿಯಾದ ಹತ್ತನೇ ಶತಮಾನದ ಪಂಪ ಕವಿ ಕನ್ನಡ ಭಾಷೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಮುಖ ಕೃತಿಗಳು ಮಹಾಕಾವ್ಯಗಳಾದ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಆಗಿದೆ. ಪಂಪ, ಸಮಕಾಲೀನರಾದ ರನ್ನ ಮತ್ತು ಪೊನ್ನ ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.
ಮಧ್ಯ ಕನ್ನಡ ಹಂತವು ಹದಿಮೂರನೇ ಶತಮಾನದ ವೇಳೆಗೆ ವಿಕಸನ ಹೊಂದಿತು. ಜೈನ ಮತ್ತು ಹಿಂದೂ ಧರ್ಮದ ಪ್ರಭಾವಗಳಿಂದ ಕನ್ನಡ ಭಾಷೆ ಮತ್ತಷ್ಟು ಅಭಿವೃದ್ಧಿ ಹೊಂದಿತ್ತು. ಹದಿನಾಲ್ಕನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಾಮ್ರಾಜ್ಯವು ಕುಮಾರ ವ್ಯಾಸ, ಪ್ರಸನ್ನ ವೆಂಕಟದಾಸ ಮತ್ತು ವಿಜಯದಾಸರಂತಹ ಸಾಹಿತಿ ಮತ್ತು ಕವಿಗಳನ್ನು ಹುಟ್ಟುಹಾಕಿತ್ತು. ಈ ಬರಹಗಾರರು ಕನ್ನಡ ಭಾಷೆಯಲ್ಲಿ ಅನೇಕ ಕಾವ್ಯಾತ್ಮಕ ಮತ್ತು ಧಾರ್ಮಿಕ ಕೃತಿಗಳನ್ನು ಹಾಗೂ ಸಾಮಾಜಿಕ ವ್ಯಾಖ್ಯಾನವನ್ನು ಕನ್ನಡಕ್ಕೆ ನೀಡಿದ್ದಾರೆ.
ಆಧುನಿಕ ಕನ್ನಡ ಅಥವಾ ಹೊಸಗನ್ನಡ ಭಾಷೆಯು ಹದಿನೆಂಟನೇ ಶತಮಾನದ ಸುಮಾರಿಗೆ ಅಭಿವೃದ್ಧಿಯನ್ನು ಹೊಂದಿ ಇಪ್ಪತ್ತೊಂದನೇ ಶತಮಾನದವರೆಗೂ ಮಾತನಾಡಲ್ಪಡುತ್ತಿದೆ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷ್ ವಸಾಹತುಶಾಹಿ ಪದ್ಧತಿ ಮುಗಿದ ನಂತರ, ಭಾರತವು ವಿಶಿಷ್ಟ ರಾಷ್ಟ್ರೀಯ ಗುರುತನ್ನು ಹೊಂದಿದ್ದು ಮತ್ತು ಸಂಸ್ಕೃತಿ ಮತ್ತು ಭಾಷೆಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿತ್ತು. ಇದು ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಹೊಸ ಬೆಳವಣಿಗೆ ಕಂಡಿತು. 2008 ರಲ್ಲಿ, ಭಾರತ ಸರ್ಕಾರವು ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯಾಗಿ ಘೋಷಿಸಿತು.
ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಇದು ಕೂಡ ಒಂದಾಗಿದೆ. ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು 45 ದಶಲಕ್ಷ ಜನರು ಆಡು ನುಡಿಯಾಗಿ ಉಪಯೋಗಿಸುತ್ತಾರೆ. ಕನ್ನಡ ಭಾಷೆಯು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನರು ಮಾತನಾಡಲು ಉಪಯೋಗಿಸುವ ಭಾಷೆಗಳಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡ ಪಡೆದುಕೊಂಡಿದೆ. 2011ರ ಜನಗಣತಿಯ ಪ್ರಕಾರ ಪ್ರಪಂಚದಲ್ಲಿ 6.4 ಕೋಟಿ ಜನರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. 5.5 ಕೋಟಿ ಜನರ ಮಾತೃಭಾಷೆ ಕನ್ನಡ ಭಾಷೆಯಾಗಿದೆ.
ಬ್ರಾಹ್ಮಿ ಲಿಪಿಯಿಂದ ಕನ್ನಡ ಲಿಪಿ ರೂಪುಗೊಂಡಿದೆ. ಕನ್ನಡ ಭಾಷೆಗೆ ಸಾವಿರದ ಐನೂರು ವರುಷಗಳ ಇತಿಹಾಸವಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಆಳ್ವಿಕೆಯ ವೇಳೆಯಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಆಳ್ವಿಕೆಯ ಸಮಯದಲ್ಲಿ ಹಳಗನ್ನಡ ಸಾಹಿತ್ಯ ತುಂಬಾ ಹೆಚ್ಚಿನ ರಾಜಾಶ್ರಯ ಹೊಂದಿತ್ತು .ವಿನೋಬಾ ಭಾವೆಯವರು ಕನ್ನಡ ಲಿಪಿಗಳನ್ನೂ ಲಿಪಿಗಳ ರಾಣಿಯೆಂದು ಹೇಳಿದ್ದಾರೆ.
ಕನ್ನಡಕ್ಕೆ ಅನೇಕ ಪದಗಳು ಸಂಸ್ಕೃತದಿಂದ ಬಂದಿದ್ದು ಸಂಸ್ಕೃತದ ಪ್ರಭಾವ ಅಧಿಕವಾಗಿದೆ. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡದ ಮೇಲೆ ಬೀರಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುಂಚಿತವಾಗಿ ಕನ್ನಡ ಭಾಷೆ ಸಂವಹನ ಭಾಷೆಯಾಗಿ ರೂಪುಗೊಂಡಿತ್ತೆಂದು ಹೇಳಲಾಗುತ್ತದೆ. ಪ್ರಾಕೃತ ಭಾಷೆ, ತಮಿಳು ಭಾಷೆಯಲ್ಲಿಯೂ ರಚಿಸಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆ ಎಂದು ಹೇಳಲಾಗುತ್ತದೆ.
ಹಳಗನ್ನಡ ಸಾಹಿತ್ಯ:
ತ್ರಿಪದಿ ಛಂಧಸ್ಸಿನಲ್ಲಿ ರಚಿಸಿದ ಕನ್ನಡದ ಮೊಟ್ಟ ಮೊದಲ ಕವಿತೆ ಕ್ರಿ.ಶ. 700ರ ಕಪ್ಪೆ ಅರಭಟ್ಟನ ಶಾಸನದಲ್ಲಿ ನೋಡಬಹುದಾಗಿದೆ. ರಾಜಾ ನೃಪತುಂಗ ಅಮೋಘ ವರ್ಷ ಬರೆದ ಕವಿರಾಜಮಾರ್ಗ ಕನ್ನಡದ ಮೊದಲ ರಚನೆಗೊಂಡ ಕೃತಿಯಾಗಿದೆ . ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಇರುವಂತಹ ಕೃತಿಯಾಗಿದೆ ಈ ಕೃತಿಯು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕನ್ನಡದ ಉಪಭಾಷೆಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಇದು ಮಾಡಿದೆ ಎಂದು ಹೇಳಬಹುದು. ಈ ಕೃತಿ ಕ್ರಿ.ಶ. 6ನೆಯ ಶತಮಾನದ ರಾಜನಾದ ದುರ್ವಿನೀತನ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ಕ್ರಿ.ಶ. 636ರ ಐಹೊಳೆ ಶಾಸನವು ರವಿಕೀರ್ತಿಯ ಬಗ್ಗೆಯೂ ಹೇಳುತ್ತದೆ.
ನಡುಗನ್ನಡ
ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ಮಧ್ಯ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಸಮಯವಾಗಿತ್ತು. ಆ ವೇಳೆಯ ಅತ್ಯಂತ ಶ್ರೇಷ್ಠ ಕವಿಯಾದ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿ ರಚಿಸಿ ವಿಶ್ವಪ್ರಖ್ಯಾತಿಯನ್ನು ಪಡೆದನು. ಮಹಾಭಾರತವನ್ನು ಆಧರಿಸಿ ರಚಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೂ ಇದು ಹೊಂದಿದೆ. ಈ ವೇಳೆಯಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕ, ಸಾಮಾಜಿಕ ಪ್ರಭಾವ ಬೀರಿತ್ತು.
ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ಪ್ರಸನ್ನವೆಂಕಟ ದಾಸರು ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರು ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಕಾವ್ಯಗಳು ಕರ್ಣಾಟಕ ಶಾಸ್ತ್ರೀಯ ಸಂಗೀತದ ಕೃತಿಗಳಾಗಿವೆ. ಕನಕ ದಾಸರು ರಚಿಸಿದ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ನೋಡಬಹುದಾಗಿದೆ.
ಹೊಸಗನ್ನಡ
ಹತ್ತೊಂಬತ್ತನೆಯ ಶತಮಾನದ ಮುಗಿದ ನಂತರ ಕನ್ನಡ ಕೃತಿಗಳ ಭಾಷೆಯಲ್ಲಿ ಅನೇಕ ಬದಲಾವಣೆ ಕಂಡುಬಂದಿತು. ಈ ಅನೇಕ ಬಗೆಯಲ್ಲಿ ಬದಲಾವಣೆ ತಂದುಕೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಹೇಳಲಾಗುತ್ತದೆ. ಹೊಸಗನ್ನಡ ಬರಹಗಾರರಲ್ಲಿ ಬಹಳ ಪ್ರಸಿದ್ಧನಾದವನು ಮುದ್ದಣ ಎಂಬ ಕಾವ್ಯನಾಮ ಹೊಂದಿರುವ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಸೃಷ್ಟಿಗೆ ಕಾರಣವಾಗಿದ್ದರು, ಗುಲ್ವಾಡಿ ವೆಂಕಟರಾಯರು ರಚಿಸಿದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಪ್ರಥಮ ಕೃತಿಯೆಂದು ಹೇಳುತ್ತಾರೆ.
ಜಾನಪದ ಸಾಹಿತ್ಯ
ಕನ್ನಡ ಸಾಹಿತ್ಯವು ಅಘಾದವಾದ ಜಾನಪದ ಸಾಹಿತ್ಯವನ್ನು ಹೊಂದಿದ್ದು ಇದು ಕನ್ನಡ ಭಾಷೆಗೆ ಕೊಡುಗೆಯಾಗಿದೆ. ಈ ಜಾನಪದ ಹಾಡು ಹಾಗೂ ಪದ್ಯಗಳಲ್ಲಿ ಇರುವ ವಿಷಯವು, ಕನ್ನಡ ನಾಡಿನ ಜನರ ಗೃಹ ಹಾಗೂ ಸಾಮಾಜಿಕ ಜೀವನ ಶೈಲಿಯಾಗಿದೆ. ಅವುಗಳ ರಚನಾ ಶೈಲಿ ಹಾಗೂ ವಿಶಿಷ್ಟ ದಾಟಿಯಿಂದ, ಅದ್ಬುತ ಶೈಲಿಯ ಸಾಹಿತ್ಯಕ್ಕೆ ಸರಿದೂಗುತ್ತದೆ ಎಂದು ಹೇಳಬಹುದಾಗಿದೆ. ಗುಂಪು ಹಾಡುಗಳು, ನಾಡಪದ (ಲಾವಣಿ) , ತ್ರಿಪದಿಗಳು , ಲಾಲಿ ಹಾಡು ಹಾಗೂ ಇತರ ಹಾಡುಗಳು, ಕನ್ನಡ ಜಾನಪದ ಸಾಹಿತ್ಯಕ್ಕೆ ಒಂದು ವಿಶೇಷ ಸ್ಥಾನವನ್ನೂ ತಂದುಕೊಟ್ಟಿದೆ ಎಂದು ಹೇಳಬಹುದು.
ಕುಶಲ ಕಲೆಗಳು
ಕುಶಲ ಕಲೆಗಳಲ್ಲಿ,ಸಂಗೀತವು ವಿಜಯನಗರದ ಕಾಲದಲ್ಲಿ ಬಹಳಷ್ಟು ಬೆಳವಣಿಗೆಯನ್ನು ಕಂಡಿತು. ವಿಜಯನಗರದ ರಾಜರು ಸಂಗೀತದ ಆಸಕ್ತ ವ್ಯಕ್ತಿಗಳಾಗಿದ್ದು ಈ ವಿಷಯವನ್ನು ಕುರಿತಾಗಿ ಬಗ್ಗೆ ಮಾಹಿತಿಯನ್ನು ಹೊಂದಿದ್ದರು. ವಿದ್ಯಾರಣ್ಯರು ಕರ್ನಾಟಕ ಸಂಗೀತಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಬರೆದ ‘ಸಂಗೀತಸಾರ’ವು ದೊರೆಯದಿದ್ದರೂ ರಘುನಾಥ ಹಾಗೂ ಇತರರ ಸಂಗೀತವನ್ನು ಕುರಿತಾಗಿ ಬರೆಯುವ ನಂತರದ ಬರಹಗಾರರಿಗೆ ಸಹಾಯಕವಾಗಿದೆ ಎಂದು ಹೇಳಬಹುದು.
ದೇವರಾಯನ ಸಾಮ್ರಾಜ್ಯದಲ್ಲಿ ಚತುರಾಲಂಕಾರನಾಥನು ಸಾರಂಗದೇವನ ‘ಸಂಗೀತ ರತ್ನಾಕರ’ವನ್ನು ರಚಿಸಿದ ಉತ್ತಮ ಭಾಷ್ಯಕಾರನಾಗಿದ್ದನು ಎಂದು ಹೇಳಬಹುದು. ಈ ಭಾಷ್ಯವು ಸಂಗೀತದ ಒಂದು ವಿಶ್ವಕೋಶವಾಗಿದ್ದು, ಭರತನ ಸಂಗೀತ ತತ್ವವನ್ನು ತಿಳಿದುಕೊಳ್ಳಲು ಅಗತ್ಯವಾದ ಕೃತಿಯಾಗಿದೆ.
ಕನ್ನಡದ ಉಪಭಾಷೆಗಳು
ಕನ್ನಡ ಭಾಷೆಯಲ್ಲೂ ಬರೆಯಲು ಮತ್ತು ಮಾತನಾಡುವ ಭಾಷೆಯಲ್ಲಿ ಅನೇಕ ವ್ಯತ್ಯಾಸ ಇರುವಂತೆ ಕನ್ನಡ ಭಾಷೆಯಲ್ಲೂ ಇದೆ. ಮಾತನಾಡುವ ಭಾಷಾ ಪದ್ಧತಿ ಅಲ್ಲಿಯ ಪ್ರದೇಶಕ್ಕೆ ಅನುಗುಣವಾಗಿ ಭಾಷೆ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಭಾಷೆ ಎಲ್ಲೆಡೆ ಒಂದೇ ರೀತಿಯಲ್ಲಿ ಕಂಡುಬರುತ್ತದೆ. ಕುಂದಗನ್ನಡ,ಕೋಟಗನ್ನಡ, ಹವ್ಯಕ ಕನ್ನಡ, ಅರೆಭಾಷೆ (ಗೌಡಕನ್ನಡ), ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡದಲ್ಲಿ ನೋಡಬಹುದಾಗಿದೆ.