ಬನವಾಸಿಯ ಮಧುಕೇಶ್ವರ ದೇವಾಲಯ
ಬನವಾಸಿಯ ಇತಿಹಾಸ
ಕರ್ನಾಟಕದ ಅತ್ಯಂತ ಪ್ರಾಚೀನ ಧಾರ್ಮಿಕ ಸ್ಥಳ ಇದಾಗಿದೆ ಮತ್ತು ಇದು ಮೊದಲು ರಾಜಧಾನಿಯಾಗಿದ್ದ ಸ್ಥಳ ಕೂಡ ಇದಾಗಿದೆ. ಬನವಾಸಿಯು ರಾಜ ಮಯೂರ ಶರ್ಮಾನ ಆಡಳಿತದ ಅವಧಿಯಲ್ಲಿ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಅವರು ಕದಂಬ ರಾಜವಂಶದ ಕುಂತಲ ಸಾಮ್ರಾಜ್ಯದ ದಯಾಳು ಚಕ್ರವರ್ತಿಯಾಗಿದ್ದರು. ಮೊದಲು ಕುಂತಲ ಸಾಮ್ರಾಜ್ಯವು ಉತ್ತರದಲ್ಲಿ ಮುಂಬೈ ದ್ವೀಪಗಳು ಮತ್ತು ದಕ್ಷಿಣದಲ್ಲಿ ಚಿಕ್ಕಮಗಳೂರಿನವರೆಗೆ ಪ್ರದೇಶವನ್ನು ಹೊಂದಿತ್ತು. ಶತಮಾನಗಳಿಂದಲೂ ಬನವಾಸಿ ತನ್ನ ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ದೇವಾಲಯಗಳನ್ನು ತನ್ನಲ್ಲಿ ಇರಿಸಿಕೊಂಡು ಬಂದಿದೆ.
ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಶಾಸನಗಳು ಮತ್ತು ಗ್ರಂಥಗಳಲ್ಲಿ ಬನವಾಸಿಯನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗಿದೆ, ಬನವಾಸಿಯನ್ನು ವನವಾಸಿಕ, ಕೌಮುದಿ, ಬೈಂದಿವಿ ಮತ್ತು ಜಯಂತಿ ಎಂಬ ಹೆಸರುಗಳಿಂದ ಕೂಡ ಕರೆಯಲಾಗುತ್ತಿತ್ತು. ಮಹಾಕಾವ್ಯವಾದ ಮಹಾಭಾರತದಲ್ಲಿ ಬನವಾಸಿಯನ್ನು ಸಂಜಯಂತಿಪುರ ಎಂದು ಹೆಸರಿಸಲಾಗಿದೆ, ಈ ಪ್ರದೇಶವನ್ನು ಪಾಂಡವರ ಸಹದೇವ ಆಳ್ವಿಕೆ ನಡೆಸುತ್ತಿದ್ದನು ಎಂದು ಹೇಳಲಾಗಿದೆ.
ಪ್ರಾಚೀನ ಭಾರತದಲ್ಲಿ ಕುಂತಲ ಸಾಮ್ರಾಜ್ಯವು ಪ್ರಜಾಪ್ರಭುತ್ವಗಳ ಮಹಾಜನಪದಗಳ ಒಂದು ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಬನವಾಸಿಯಲ್ಲಿ ಉತ್ಖನನ ಕಾರ್ಯದ ವೇಳೆಯಲ್ಲಿ ದೊರೆತ 5 ನೇ ಶತಮಾನದ BC ನಾಣ್ಯಗಳು ಭಾರತದಲ್ಲಿ ಕಂಡುಬಂದಂತಹ ಅತ್ಯಂತ ಪ್ರಾಚೀನ ನಾಣ್ಯಗಳಲ್ಲಿ ಇವು ಕೂಡ ಆಗಿವೆ.
ಬನವಾಸಿ ಮಧುಕೇಶ್ವರ ದೇವಸ್ಥಾನದ ಇತಿಹಾಸ
ಬನವಾಸಿ ದೇವಸ್ಥಾನದ ಅಡಿಪಾಯವನ್ನು ರಾಜ ಮಯೂರ ಶರ್ಮಾ ಹಾಕಿದ್ದಾರೆಂದು ಹೇಳಲಾಗುತ್ತದೆ. ದೇವಸ್ಥಾನದ ವಾಸ್ತುಶಿಲ್ಪವು ಸೋಂದಾ, ಹೊಯ್ಸಳ, ಚಾಲುಕ್ಯ, ಪಲ್ಲವ ಮತ್ತು ರಾಷ್ಟ್ರಕೂಟ ವಾಸ್ತುಶಿಲ್ಪದ ಸಂಯೋಜನೆ ಇದಾಗಿದೆ.
ಈ ದೇವಸ್ಥಾನದ ವೈಶಿಷ್ಟ್ಯವೆಂದರೆ ಎಲ್ಲಾ ದೇವತೆಗಳ ಶಿಲ್ಪದಲ್ಲಿ ಅವರ ಸಂಗಾತಿಗಳು ಮತ್ತು ಅವರ ವಾಹನ ಕೆತ್ತಲಾಗಿದೆ . ಮಧುಕೇಶ್ವರ ದೇವಸ್ಥಾನದಲ್ಲಿ ಪ್ರಮುಖ ಮಂಟಪವು ದೇವಿ ಪಾರ್ವತಿಯೊಂದಿಗೆ ಅದರ ಬಲಭಾಗದಲ್ಲಿ ಸಂಯುಕ್ತವನ್ನು ಕಾಣಬಹುದಾಗಿದೆ.
ಈ ಪ್ರಾಚೀನ ದೇವಸ್ಥಾನವನ್ನು ಪ್ರವೇಶಿಸುವಾಗ ದೇವಾಲಯಗಳು ವಾಸ್ತುಶಿಲ್ಪ ಮತ್ತು ವಿಗ್ರಹಗಳ ವೈಶಿಷ್ಟ್ಯವನ್ನು ಕಾಣಬಹುದಾಗಿದೆ. ಅದ್ಬುತ ಕೆತ್ತನೆಗಳಿಂದ ಹಿಡಿದು ಸರಳವಾದ ಗರ್ಭಗುಡಿಯ ರಚನೆಗಳವರೆಗೆ, ಈ ದೇವಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಬನವಾಸಿ ಆಳ್ವಿಕೆ ನಡೆಸಿದ ಮತ್ತು ಮಧುಕೇಶ್ವರ ಲಿಂಗವನ್ನು ಆರಾಧಿಸಿದ ರಾಜಮನೆತನಗಳು ಅನುಸರಿಸಿದ ವಾಸ್ತುಶಿಲ್ಪದ ಶೈಲಿಯ ನೋಡಬಹುದಾಗಿದೆ.
ಮಧುಕೇಶ್ವರ ದೇವಸ್ಥಾನದ ದ್ವಿಸ್ತಂಭಗಳು:
ದಕ್ಷಿಣ ಭಾರತದಲ್ಲಿ ಇದು ವಿಶಿಷ್ಟ್ಯವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದಾಗಿದೆ, ಮಧುಕೇಶ್ವರ ದೇವಸ್ಥಾನದ ಮುಖ್ಯ ದೇವಾಲಯದ ಮಂಟಪದ ಮುಂಭಾಗದಲ್ಲಿ ಎರಡು ಸ್ತಂಭಗಳನ್ನು ಕಾಣಬಹುದಾಗಿದೆ. ಅದರಲ್ಲಿ ಒಂದು ಸ್ತಂಭವು ದೀಪಗಳನ್ನು ಬೆಳಗಿಸಲು ನಿರ್ಮಾಣ ಮಾಡಲಾಗಿದೆ ಮತ್ತು ಈ ದೇವಾಲಯದ ಪವಿತ್ರ ದೀಪಸ್ತಂಭ ಇದಾಗಿದೆ. ಮತ್ತೊಂದು ಸ್ತಂಭವು ಮೆಟ್ಟಿಲು ಪಿರಮಿಡ್ ಆಕಾರದ ತಳಹದಿಯೊಂದಿಗೆ ನಿರ್ಮಿಸಲಾಗಿದೆ. ಮೆಟ್ಟಿಲುಗಳ ಒಂದು ಭಾಗದಲ್ಲಿ ಮಧುಕೇಶ್ವರ ಮಂದಿರದ ಮುಖ್ಯ ದೇವಸ್ಥಾನದ ಗರ್ಭಗೃಹಕ್ಕೆ ಮುಂಭಾಗದಲ್ಲಿ ಇಂದ್ರನ ವಿಗ್ರಹವೂ ಕಾಣಬಹುದಾಗಿದೆ.
ಮದುಕೇಶ್ವರ ದೇವಾಲಯದ ನಂದಿ ಮಂಟಪ:
ದೇವಸ್ಥಾನದ ಮಧ್ಯ ಭಾಗದಲ್ಲಿ 7 ಅಡಿ ಎತ್ತರದ ನಂದಿ ವಿಗ್ರಹ ಓರೆಯಾದ ತಲೆಯನ್ನು ಹೊಂದಿರುವುದು ಕಾಣಬಹುದಾಗಿದೆ. ನಂದಿಯ ಒಂದು ಕಣ್ಣು ಶಿವಲಿಂಗವಿರುವ ಗರ್ಭಗುಡಿಯೊಳಗೆ ನೋಡುತ್ತಿರುವಂತೆ ಕೆತ್ತಲಾಗಿದೆ. ಮತ್ತೊಂದು ಕಣ್ಣು ಕಂಬಗಳ ಮೂಲಕ ಅಲ್ಲೇ ಇರುವ ಆದಿಶಕ್ತಿ ಅಥವಾ ಪಾರ್ವತಿಯ ದೇವಾಲಯಕ್ಕೆ ದೃಷ್ಟಿ ಇದೆ. ನಂದಿಯ ವಿಗ್ರಹವು ಕೆತ್ತಿದ ಗ್ರಾನೈಟ್ ಕಂಬಗಳಿಂದ ಸುತ್ತುವರೆದಿರುವುದು ಕಾಣಬಹುದಾಗಿದೆ.
ನೃತ್ಯ ಮಂಟಪ:
ಈ ಮಂಟಪವು ಒಂದು ವೈಶಿಷ್ಟ್ಯವನ್ನು ಮತ್ತು ಹಿಂದಿನ ದೇವದಾಸಿ ಪದ್ಧತಿಯ ಬಗ್ಗೆ ತಿಳಿಸುತ್ತದೆ. ಒಬ್ಬ ರಾಜನು ದೇವದಾಸಿ ತನ್ನ ಮುಂದೆ ನರ್ತನ ಪ್ರದರ್ಶಿಸುವಂತೆ ಮಾಡಿ ಅಲ್ಲಮನನ್ನು ಆಧ್ಯಾತ್ಮಿಕತೆಯಿಂದ ಮನಸ್ಸನ್ನು ಚಂಚಲಗೊಳಿಸಲು ಪ್ರಯತ್ನಿಸಿದನು. ಮಾಯೆ ಎಂಬ ನರ್ತಕಿ ಅಲ್ಲಮನನ್ನು ಮೋಹಿಸಲು ಪ್ರಯತ್ನಿಸಿದರು ವ್ಯರ್ಥವಾಯಿತು. ನಂತರ ಅಲ್ಲಮರು ಲಿಂಗಾಯತ ಸಮುದಾಯದ ಸ್ಥಾಪಕರಾದ ಸಮಾಜ ಸುಧಾರಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಅನೇಕ ಕಪ್ಪು ಕಲ್ಲಿನ ಕಂಬಗಳು ಮತ್ತು ಮಂಟಪದ ವಾಸ್ತುಶಿಲ್ಪವು ಹಿಂದಿನ ಯುಗದ ಅನೇಕ ನೃತ್ಯ ದೃಶ್ಯಗಳನ್ನು ಕಾಣಬಹುದಾಗಿದೆ.
ತ್ರಿಲೋಕ ದೇವಾಲಯ ಅಥವಾ ಶಿಲಾ ಮಂಟಪ:
ಮದುಕೇಶ್ವರ ದೇವಾಲಯದಲ್ಲಿ ಮಹಾಮಂಟಪವನ್ನು ಪ್ರವೇಶಿಸುವ ಮುಂಚಿತವಾಗಿ ಪ್ರವೇಶದ್ವಾರದ ಎಡಭಾಗದಲ್ಲಿ ಒಂದು ಸುಂದರ ಮಂಟಪವು ಅದ್ಭುತವಾಗಿ ಕೆತ್ತಲಾಗಿದೆ. ಈ ಶೀಲಾ ಮಂಟಪವು ಕಲ್ಲಿನಿಂದ ಕೆತ್ತಿದ ಈ ಮಂಟಪವು ಹಿಂದೂ ಪುರಾಣದ ಪ್ರಕಾರ ತ್ರಿಲೋಕದ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಮಂಟಪದ ಆಧಾರವು ‘ನಾಗಲೋಕ’ ಎಂದು ಕರೆಯಲ್ಪಡುವ ಪಾತಾಳ ಲೋಕ ದೇವರುಗಳ ಶಿಲ್ಪಕಲೆಯನ್ನು ಕಾಣಬಹುದಾಗಿದೆ. ಮಂಟಪದ ಮಧ್ಯ ಭಾಗದಲ್ಲಿ ಭೂಮಿಯ ಮೇಲೆ ನೆಲೆಸಿರುವ ದೇವರುಗಳ ವಿವಿಧ ಅವತಾರಗಳ ವಿಗ್ರಹ ರೂಪವನ್ನು ಕಾಣಬಹುದಾಗಿದೆ. ಶೀಲಾ ಮಂಟಪದಲ್ಲಿ ಶಿವ ಮತ್ತು ಪಾರ್ವತಿಯನ್ನು ಕೈಲಾಸ ಪರ್ವತದ ಮೇಲೆ ಕುಳಿತಿರುವುದನ್ನು ಶಿಲ್ಪಕಲೆಯನ್ನು ಚಿತ್ರಿಸಲಾಗಿದೆ. ಮಂಟಪದ ಶಿಖರ ಭಾಗದಲ್ಲಿ ಇಂದ್ರನು ತನ್ನ ಪತ್ನಿ ಮತ್ತು ಆಕಾಶ ನರ್ತಕರು ಮತ್ತು ದೇವತೆಗಳನ್ನೂ ಕಾಣಬಹುದಾಗಿದೆ.
ಆದಿಮಾಧವ–ಮಧುಸೂದನ ವಿಷ್ಣುವಿನ ಅವತಾರ:
ಮದುಕೇಶ್ವರ ದೇವಾಲಯದ ದರ್ಶನ ಮಂಟಪವನ್ನು ಪ್ರವೇಶಿಸಿದ ನಂತರ, ಬಲಭಾಗದಲ್ಲಿ ವಿಷ್ಣುವಿನ ವಿಗ್ರಹವನ್ನು ನೋಡಬಹುದಾಗಿದೆ. ಈ ಕೆತ್ತಿದ ದೇವರ ವಿಗ್ರಹವು ದೇವಸ್ಥಾನದ ಮುಖ್ಯ ದೇವರಾಗಿರಬೇಕು,ಆದ್ದರಿಂದ ಇದನ್ನು ಮಧುಸೂದನ ವಿಷ್ಣುವಿನ ಅವತಾರ ಎನ್ನುತ್ತಾರೆ. ಪುರಾಣಗಳು ಹೇಳುವ ಪ್ರಕಾರ ವಿಷ್ಣುವಿನ ಮಧುಸೂದನ ಅವತಾರದ ಅಭಿವ್ಯಕ್ತಿಯನ್ನು ಶಿಲ್ಪದಲ್ಲಿ ಮೂಡಿಸಲಾಗಿದೆ. ಈ ಪ್ರತಿಮೆಯು ಅತ್ಯಂತ ಕಲಾತ್ಮಕವಾಗಿ ರಚಿಸಲಾಗಿದೆ ಮತ್ತು ಇದರ ಉತ್ತಮ ಶಿಲ್ಪಕಲೆಯು ಬೆರಗುಗೊಳಿಸುವಂತೆ ಕೆತ್ತಲಾಗಿದೆ .
ಪಾರ್ವತಿ ದೇವಾಲಯ:
ಶಿವನ ಪತ್ನಿ ಪಾರ್ವತಿ ದೇವಿಯಾಗಿದ್ದಾಳೆ. ಎಲ್ಲಾ ದೇವತೆಗಳು ಮತ್ತು ದೇವರುಗಳು ಸಂಕಷ್ಟದಲ್ಲಿದ್ದಾಗ ತ್ರಿಲೋಕಗಳಿಗೆ ದಯೆ ತೋರಿದ ಅವಳ ‘ಶಕ್ತಿ’ಯನ್ನು ಹೊಗಳುವ ದಂತಕಥೆಗಳನ್ನು ಕಾಣಬಹುದಾಗಿದೆ. ನವರಾತ್ರಿ ಸಮಯದಲ್ಲಿ, ದೇವಿಯನ್ನು ನವವಿಧಗಳಲ್ಲಿ ಪ್ರತಿ ದಿನವೂ ವಿಭಿನ್ನ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ . ಇದು ದಕ್ಷಿಣ ಭಾರತದ ಪಾರ್ವತಿ ದೇವಾಲಯವಾಗಿದೆ.
2 ನೇ ಶತಮಾನದ ಮಹಾನಾಗ:
ದೇವಸ್ಥಾನದ ಸಂಕೀರ್ಣದಲ್ಲಿ ಎಲ್ಲಾ ದೇವಾಲಯಗಳಲ್ಲಿ, ಎಂಟುಗಳ ರೀತಿಯಲ್ಲಿ ಸುರುಳಿಯಾಗಿ ತುಂಬಾ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾದ ನಾಗನ ಕಲಾಶಿಲ್ಪ ಕಾಣಬಹುದಾಗಿದೆ. ಕಲ್ಲಿನ ಕೆಳಭಾಗದಲ್ಲಿ ಪ್ರಾಕೃತ ಶಾಸನಗಳ ಉಲ್ಲೇಖದ ಪ್ರಕಾರ ಇದನ್ನು ಶಿವಸ್ಕಂದ ನಾಗಶ್ರೀ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಕದಂಬ ರಾಜ್ಯವನ್ನು ಕೆಲಕಾಲದವರೆಗೆ ನಾಗರಖಂಡ ಮತ್ತು ಕದಂಬರು, ನಾಗರು ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು.
ನರಸಿಂಹ ಮತ್ತು ಕೃಷ್ಣ ದೇವಾಲಯಗಳು:
ಮದುಕೇಶ್ವರ ದೇವಾಲಯದ ಎರಡೂ ಬದಿಗಳಲ್ಲಿ ವಿಷ್ಣುವಿನ ಅವತಾರಗಳಾದ ಕೃಷ್ಣ ಮತ್ತು ನರಸಿಂಹ ಸುಂದರ ದೇವಾಲಯಗಳನ್ನು ಕಾಣಬಹುದಾಗಿದೆ. ಈ ದೇವಸ್ಥಾನದಲ್ಲಿ ಯಾವುದೇ ರೀತಿಯ ವಿಗ್ರಹಗಳು ಅಥವಾ ಕೆತ್ತನೆಗಳು ಅಷ್ಟೊಂದು ಕಾಣಲಾಗುವುದಿಲ್ಲ. ಕೃಷ್ಣ ದೇವಸ್ಥಾನದ ಗೋಡೆಗಳ ಮೇಲೆ ಕೆಲವು ಅಪೂರ್ಣ ಕೆತ್ತನೆಗಳು ಕಾಣಬಹುದಾಗಿದೆ ಇವೂ ಕೂಡ ಕುತೂಹಲಕಾರಿಯಾಗಿವೆ.
ಈ ದೇವಾಲಯದ ಗರ್ಭಗುಡಿಯಲ್ಲಿ ಜೇನುತುಪ್ಪದ ಬಣ್ಣದ ಶಿವಲಿಂಗ ಇರುವುದರಿಂದ ಈ ಮಧುಕೇಶ್ವರ ದೇವಸ್ಥಾನಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವು 9 ನೇ ಶತಮಾನಕ್ಕೂ ಹಿಂದಿನದು ಎನ್ನಲಾಗುತ್ತದೆ ಮತ್ತು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಮದುಕೇಶ್ವರ ದೇವಾಲಯ ಕೂಡ ಒಂದಾಗಿದೆ. ಇದನ್ನು ಕದಂಬ ರಾಜವಂಶದ ಮಯೂರ ಶರ್ಮಾ ಆಳ್ವಿಕೆಯ ಅವಧಿಯಲ್ಲಿ ನಿಯೋಜಿಸಿದರು ಎಂದು ಹೇಳಲಾಗುತ್ತದೆ.
ಕದಂಬರು ಕರ್ನಾಟಕದ ಮೊದಲ ಆಡಳಿತ ನಡೆಸಿದ ರಾಜವಂಶವಾಗಿತ್ತು. ಕದಂಬರ ಆಳ್ವಿಕೆಯ ಮುಗಿದ ನಂತರ ಚಾಲುಕ್ಯ ಯುಗ ಮತ್ತು ಹೊಯ್ಸಳರ ಆಳ್ವಿಕೆ ಬಂದಿತು. ಇವರ ಆಳ್ವಿಕೆಯ ಸಮಯದ ಆಡಳಿತಗಾರರು ದೇವಾಲಯಕ್ಕೆ ಕೆಲವು ಸೇರ್ಪಡೆ ಮತ್ತು ನವೀಕರಣಗಳನ್ನು ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ದೇವಸ್ಥಾನವು ಕರ್ನಾಟಕದ ವಾಸ್ತುಶಿಲ್ಪ ಶೈಲಿಗಳ ಬಗ್ಗೆ ತೋರಿಸುತ್ತದೆ.
ದೇವಾಲಯಕ್ಕೆ ಭೇಟಿ ನೀಡುತಿದ್ದಂತೆ ಕಲ್ಲಿನ ಎರಡು ಆನೆಗಳ ಜೋಡಿ ನೋಡಬಹುದು. ಗರ್ಭ ಮಂಟಪವು ಬಹಳ ಸರಳವಾದ ಕಲಾ ರಚನೆಯನ್ನು ಹೊಂದಿರುವುದು ಕಾಣುತ್ತದೆ. ಕಂಬಗಳು ಮತ್ತು ಗೋಡೆಗಳ ಮೇಲೆ ಕೆತ್ತನೆಗಳು ಬಹಳ ಸುಂದರವಾಗಿ ರಚಿಸಿದ್ದು ಇದು ಕಡಿಮೆ ಅಲಂಕಾರದಿಂದ ನಿರ್ಮಾಣ ಮಾಡಲಾಗಿದೆ . ಈ ದೇವಾಲಯದಲ್ಲಿ ಜೇನುತುಪ್ಪದ ಬಣ್ಣದ ಶಿವಲಿಂಗವನ್ನು ಇರಿಸಲಾಗಿದೆ. ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಈ ದೇವಸ್ಥಾನಕ್ಕೆ ಸಂಕಲ್ಪ ಮಂಟಪವನ್ನು ಸೇರ್ಪಡೆ ಮಾಡಲಾಯಿತು.