ಮೈಸೂರಿನ ಟಾಪ್ 10 ದೇವಾಲಯಗಳು

1) ಚಾಮುಂಡೇಶ್ವರಿ ದೇವಾಲಯ:

ಚಾಮುಂಡೇಶ್ವರಿ ದೇವಾಲಯದ ಇತಿಹಾಸ

ಚಾಮುಂಡೇಶ್ವರಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳ ಮೇಲೆ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಈ ದೇವಸ್ಥಾನಕ್ಕೆ ಶಕ್ತಿಯ ಉಗ್ರ ರೂಪವಾದ ಚಾಮುಂಡೇಶ್ವರಿ ದೇವಿಯ ಹೆಸರಿಡಲಾಗಿದೆ , ಇದು ಮೈಸೂರು ಮಹಾರಾಜರ ಕಾಲದಿಂದಲೂ ಪೂಜಿಸಲ್ಪಟ್ಟ ಪ್ರಸಿದ್ದ   ದೇವತೆಯಾಗಿದ್ದು ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ಒಂದಾಗಿದೆ.

ಕನ್ನಡ ನಾಡಿನ ಜನತೆಯು ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಪೂಜಿಸುತ್ತಾರೆ, ಇದರ ಅರ್ಥ ನಾಡ  ದೇವತೆ. ಇದು ಸಮುದ್ರ ಮಟ್ಟದಿಂದ ಸುಮಾರು 3300 ಅಡಿ ಎತ್ತರದಲ್ಲಿರುವ ಒಂದು ಪವಿತ್ರ ಹಿಂದೂ ದೇವಾಲಯವಾಗಿದೆ. ದುರ್ಗಾ ದೇವಿಯು ರಾಕ್ಷಸನಾದ  ಮಹಿಷಾಸುರನನ್ನು ತನ್ನ ಶಕ್ತಿಯಿಂದ ಈ ಬೆಟ್ಟದ ತುದಿಯಲ್ಲಿ ಸಂಹರಿಸಿದಳು ಎಂದು ಹೇಳಲಾಗುತ್ತದೆ, ಈ ಪ್ರದೇಶವನ್ನು ಅವನು ಆಳುತ್ತಿದ್ದನು. ನಂತರ ಈ ಸ್ಥಳವನ್ನು ಮಹಿಷೂರು ಎಂದು ಪ್ರಚಲಿತವಾಯಿತು. ಬ್ರಿಟಿಷರು ಇದನ್ನು ಮೈಸೂರು ಎಂದು  ಬದಲಾಯಿಸಿದರು.

ಚಾಮುಂಡೇಶ್ವರಿ ದೇವಸ್ಥಾನವನ್ನು ತಲುಪುವುದು ಹೇಗೆ?

ವಿಮಾನದ ಮೂಲಕ : ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ , ಇದು ಸುಮಾರು 20 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ಈ ದೇವಸ್ಥಾನವನ್ನು ತಲುಪಲು ಟ್ಯಾಕ್ಸಿ ವ್ಯವಸ್ಥೆ ಕೂಡ ಲಭ್ಯವಿದೆ

ರೈಲು ಮೂಲಕ : ಸಮೀಪದ ರೈಲು ನಿಲ್ದಾಣ ಮೈಸೂರು ಜಂಕ್ಷನ್ ಆಗಿದೆ, ಇದು ದೇವಾಲಯದಿಂದ 13 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ದೊರೆಯುತ್ತದೆ.

ರಸ್ತೆಯ ಮೂಲಕ : ಮೈಸೂರು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ದೇವಾಲಯವನ್ನು ತಲುಪಲು ನೀವು ಸಾರ್ವಜನಿಕ ಬಸ್ ಅಥವಾ ಟ್ಯಾಕ್ಸಿಯನ್ನು ಕೂಡ ಬಳಸಬಹುದಾಗಿದೆ. ಮೈಸೂರು ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ಸೌಲಭ್ಯವು ಉತ್ತಮವಾಗಿಯೆ ಇದೆ.

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ:

ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಭೇಟಿ ನೀಡಲು ಸೂಕ್ತ ಅವಧಿ, ಚಳಿಗಾಲದಲ್ಲಿ ವಾತಾವರಣವು ಸೂಕ್ತವಾಗಿದೆ ಮತ್ತು ದೇವಿಯ ದರ್ಶನಕ್ಕೆ ಉತ್ತಮವಾಗಿದೆ. ದಸರಾ ಹಬ್ಬದ ಸಮಯದಲ್ಲಿ ದೇವಾಲಯವು ವಿಶೇಷವಾಗಿ ಅಲಂಕಾರಗಳಿಂದ ತುಂಬಿರುತ್ತದೆ, ಆ ಸಮಯದಲ್ಲಿ ದೇವಿಯಗೆ ವಿಶೇಷ ಪೂಜೆಗಳು ಮತ್ತು ಅನುಷ್ಠಾನಗಳು ನಡೆಸಲಾಗುತ್ತದೆ.

ಹತ್ತಿರದ ಆಕರ್ಷಣೆಯ ಸ್ಥಳಗಳು:

ಮೈಸೂರು ಅರಮನೆ : ದೇವಾಲಯದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರಾಚೀನ ಅರಮನೆಯು ಇದಾಗಿದ್ದು ಎಲ್ಲಾ ಯಾತ್ರಿಕರು ಭೇಟಿ ಮಾಡಲೇ ಬೇಕಾದ ಸ್ಥಳ ಇದಾಗಿದೆ.

ಬೃಂದಾವನ ಉದ್ಯಾನಗಳು : ಸುಮಾರು 25 ಕಿ.ಮೀ ದೂರದಲ್ಲಿದೆ, ಸುಂದರವಾದ ಉದ್ಯಾನಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ ಮತ್ತು ಸಂಗೀತ ಕಾರಂಜಿಗಳು  ನೋಡುಗರಿಗೆ ಸಂತೋಷವನ್ನು ಉಂಟುಮಾಡುತ್ತವೆ.

ಸಂತ ಫಿಲೋಮಿನಾ ಚರ್ಚ್ : ದೇವಾಲಯದಿಂದ 10 ಕಿ.ಮೀ ದೂರದಲ್ಲಿರುವ ಗೋಥಿಕ್ ಶೈಲಿಯ ಕ್ಯಾಥೆಡ್ರಲ್ ಇದಾಗಿದ್ದು ನೋಡಲೇ ಬೇಕಾದ ಸ್ಥಳ ಇದಾಗಿದೆ.

ಕಾರಂಜಿ ಸರೋವರ :  ಇದು ಸುಮಾರು 11 ಕಿ.ಮೀ ದೂರದಲ್ಲಿರುವ ಪ್ರಶಾಂತ ಸರೋವರ, ಪಕ್ಷಿ ವೀಕ್ಷಣೆ ಮತ್ತು ದೋಣಿ ವಿಹಾರಕ್ಕೆ ಸೂಕ್ತವಾಗಿರುವ ಪ್ರವಾಸಿಗರ ಮನೋರಂಜನೆಗೆ ಸೂಕ್ತವಾಗಿದೆ.

ಲಲಿತ ಮಹಲ್ ಅರಮನೆ : ಇದೊಂದು ಸುಂದರವಾದ ಬಿಳಿ ಅರಮನೆಯಾಗಿದೆ , ಈಗ ಇದು ಒಂದು ಪಾರಂಪರಿಕ ಹೋಟೆಲ್, ದೇವಾಲಯದಿಂದ 17 ಕಿ.ಮೀ ದೂರದಲ್ಲಿ ಇದನ್ನು ಭೇಟಿ ಮಾಡಬಹುದಾಗಿದೆ.

2.ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ (ಮಂಡ್ಯ ಜಿಲ್ಲೆ)

ದೇವರು: ವಿಷ್ಣು (ಚೆಲುವನಾರಾಯಣ ಸ್ವಾಮಿ)

ದೇವಾಲಯದ ಬಗ್ಗೆ :

ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಕರ್ನಾಟಕದ ಮಂಡ್ಯ ಜಿಲ್ಲೆಯ ಮೆಲ್ಕೋಟೆಯಲ್ಲಿರುವ ಒಂದು ವಿಶೇಷ ದೇವಾಲಯವಾಗಿದೆ. ಇದು ಮೆಲ್ಕೋಟೆಯ ತಪ್ಪಲಿನಲ್ಲಿರುವ ದೇವಾಲಯವಾಗಿದೆ ಮತ್ತು ಕಾವೇರಿ ಕಣಿವೆಯಲ್ಲಿ ಕಾಣುವ ಕಲ್ಲಿನ ಬೆಟ್ಟಗಳ ಮೇಲೆ ಬಹು ಸುಂದರವಾಗಿ ನಿರ್ಮಿಸಲಾದ ಯೋಗ ನರಸಿಂಹ ದೇವಸ್ಥಾನದೊಂದಿಗೆ ಸಂಬಂಧ ಹೊಂದಿದೆ. ಈ ದೇವಾಲಯವನ್ನು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದಾಗಿರುವ ದೇವಸ್ಥಾನವಾಗಿದೆ. ಈ ದೇವಾಲಯವು ಮೈಸೂರಿನಿಂದ ಸುಮಾರು 30 ಮೈಲಿಗಳು  ಮತ್ತು ಬೆಂಗಳೂರಿನಿಂದ 156 ಕಿಮೀ ದೂರದಲ್ಲಿರುವ ಸ್ಥಳವಾಗಿದೆ.

ದಂತಕಥೆಯಲ್ಲಿ ಹೇಳಿರುವಂತೆ, ಒಮ್ಮೆ  ವಿಷ್ಣುವಿನ ಬಳಿ ಬ್ರಹ್ಮನು ವಿಷ್ಣುವಿನ ವಿಗ್ರಹವನ್ನು ಪೂಜಿಸಲು ನೀಡುವಂತೆ ಕೋರಿಕೊಂಡನು. ವಿಷ್ಣು ಬ್ರಹ್ಮನಿಗೆ ಒಂದು ವಿಗ್ರಹವನ್ನು ನೀಡಿದನು, ಅದನ್ನು ತೆಗೆದುಕೊಂಡು ಹೋಗಿ ಬ್ರಹ್ಮನು ತನ್ನ ಪುತ್ರನಾದ ಸನತಕುಮಾರನಿಗೆ ನೀಡಿದನು, ಅವನು ಆ ವಿಗ್ರಹವನ್ನು ಮೆಲ್ಕೋಟೆಯಲ್ಲಿ ಪ್ರತಿಷ್ಠಾಪಿಸಿದನು.

ಬ್ರಹ್ಮನು ವಿಷ್ಣುವಿನ ಹತ್ತಿರ ಆರಾಧನೆಗಾಗಿ ಇನ್ನೊಂದು ವಿಗ್ರಹವನ್ನು ಅನುಗ್ರಹಿಸುವಂತೆ ಬೇಡಿಕೊಂಡನು ಮತ್ತು ವಿಷ್ಣು ಬ್ರಹ್ಮನಿಗೆ ಲೋಹದ ವಿಗ್ರಹವನ್ನು ನೀಡಿದನು, ಇದನ್ನು ತ್ರೇತಾಯುಗದಲ್ಲಿ ರಾಮನು , ದ್ವಾಪರಯುಗದಲ್ಲಿ ಬಲರಾಮನು ಮತ್ತು ಕಲಿಯುಗದಲ್ಲಿ ಯಾದವ ಕುಟುಂಬವು ತೆಗೆದುಕೊಂಡು ಹೋಗಿದ್ದಾರೆ ಎಂದು ನಂಬಲಾಗಿದೆ. ಮುಖ್ಯ ದೇವರನ್ನು ನಾರಾಯಣಾದ್ರಿ ಎಂದು ಪೂಜಿಸಲಾಗುತ್ತದೆ ಮತ್ತು ಲೋಹದ ವಿಗ್ರಹವನ್ನು ಯಾದವಾದ್ರಿ ಎಂದು ಆರಾಧಿಸಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ:  ಬೆಳಿಗ್ಗೆ 7:30 ರಿಂದ ಮಧ್ಯಾಹ್ನ1 ಗಂಟೆವರೆಗೆ, ಮತ್ತು  ಸಂಜೆ 4 ಗಂಟೆಯಿಂದ 6 ಗಂಟೆವರೆಗೆ, ನಂತರ ಸಂಜೆ 7 ರಿಂದ 8:30 ವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಮೈಸೂರಿನಿಂದ ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ.

ರೈಲಿನ ಮೂಲಕ: ಮಂಡ್ಯ ರೈಲ್ವೆ ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

1.ಸಂಸ್ಕೃತ ಸಂಶೋಧನಾ ಅಕಾಡೆಮಿ: ಮೇಲುಕೋಟೆಯಲ್ಲಿ ಸಂಸ್ಕೃತ ವೇದಗಳು ಮತ್ತು ಹಸ್ತಪ್ರತಿಗಳ ಸಂಗ್ರಹವನ್ನು ವೀಕ್ಷಿಸಲು ಅಕಾಡೆಮಿ ಆಫ್ ಸಂಸ್ಕೃತ ಸಂಶೋಧನಾ ಅಕಾಡೆಮಿಗೆ ಭೇಟಿ ನೀಡಬಹುದಾಗಿದೆ.

  1. ಯೋಗ ನರಸಿಂಹ ದೇವಾಲಯ: ಭಗವಾನ್ ಯೋಗ ನರಸಿಂಹ ದೇವಾಲಯವನ್ನು ಬೆಟ್ಟದ ತುದಿಯಲ್ಲಿ ನಿರ್ಮಾಣ ಮಾಡಲಾಗಿದೆ ಪ್ರವಾಸಿಗರು ಭೇಟಿ ಮಾಡಬಹುದಾಗಿದೆ.
  2. ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ: 1974 ರಲ್ಲಿ ಸ್ಥಾಪನೆ ಮಾಡಲಾದ ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯವು ತುಂಬಾ ಸುಂದರವಾಗಿದೆ.

3.ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಮೈಸೂರು

ದೇವರು: ಶಿವ (ಶ್ರೀಕಂಠೇಶ್ವರ)

ದೇವಸ್ಥಾನದ ಬಗ್ಗೆ :

ನಂಜುಂಡೇಶ್ವರ ದೇವಸ್ಥಾವನ್ನು ಶ್ರೀಕಂಠೇಶ್ವರ ದೇವಸ್ಥಾನ ಎಂದೂ ಕೂಡ ಕರೆಯುತ್ತಾರೆ. ಕರ್ನಾಟಕದ

ಹಿಂದೂ ಯಾತ್ರಾಸ್ಥಳ ನಂಜನಗೂಡಿನಲ್ಲಿರುವ ಶಿವನಿಗೆ ಸಮರ್ಪಿತವಾದ ಇದೊಂದು ಪ್ರಾಚೀನ

ದೇಗುಲವಾಗಿದೆ. ಈ ದೇವಾಲಯವನ್ನು ಕಾವೇರಿ ನದಿಯ ಉಪನದಿಯಾದ ಕಬಿನಿ ನದಿಯ ಬಲದಂಡೆಯಲ್ಲಿ ಕಾಣಬಹುದಾಗಿದೆ.

ಕಬಿನಿ ನದಿ :

ಕಬಿನಿ ನದಿಯು ದಕ್ಷಿಣ ಭಾರತದ ಪವಿತ್ರ ನದಿಯಾದ ಕಾವೇರಿ ನದಿಯ ಪ್ರಮುಖ ಉಪನದಿಗಳಲ್ಲಿ

ಒಂದಾಗಿರುವುದನ್ನು ಕಾಣಬಹುದಾಗಿದೆ. ಈ ನದಿಯು ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ

ಕವಿಲುಂಪಾರ ಬಳಿ ಪನಮರಂ ನದಿ ಮತ್ತು ಮಾನಂದವಾಡಿ ನದಿಯ ಸಂಗಮದಿಂದ ಉದ್ಭವವಾದ

ನದಿಯಾಗಿದೆ. ಇದು ವಯನಾಡ್ ಪ್ರದೇಶದ ಮೂಲಕ ಪೂರ್ವಕ್ಕೆ ಹರಿಯುವ ನದಿಯಾಗಿದೆ, ಈ ನದಿಯು

ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಹರಿಯುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ: 6:00 ಗಂಟೆಯಿಂದ ಮಧ್ಯಾಹ್ನ 1:00 ರವರೆಗೆ ಸಂಜೆ: ಸಂಜೆ

4:00 ಗಂಟೆಯಿಂದ ರಾತ್ರಿ 8:30 ರವರೆಗೆ ದರ್ಶನಕ್ಕೆ ಅವಕಾಶವಿದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ದೇವಸ್ಥಾನವು ಮೈಸೂರು ಬಸ್ ನಿಲ್ದಾಣದಿಂದ 23.5 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ನಿಲ್ದಾಣದಿಂದ ನಂಜನಗೂಡಿಗೆ 25.5 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ

ಅಥವಾ ಮಂಡಕಳ್ಳಿ ವಿಮಾನ ನಿಲ್ದಾಣ. ಇದು 14.5 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

ಬಿಆರ್ಹಿಲ್ಸ್‌: ನಂಜನಗೂಡಿನಿಂದ ಕೇವಲ 70 ಕಿ.ಮೀ ದೂರದಲ್ಲಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ:

ನಂಜನಗೂಡಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಕೇವಲ 58 ಕಿ.ಮೀ ದೂರದಲ್ಲಿದೆ.

4.ಶ್ರೀ ನಂದಿ ದೇವಸ್ಥಾನ (ಗೂಳಿ ದೇವಸ್ಥಾನ)

ದೇವಾಲಯದ ಬಗ್ಗೆ :

ಈ ನಂದಿ ದೇವಸ್ಥಾನವು ಮೈಸೂರಿನ ಚಾಮುಂಡಿ ಬೆಟ್ಟಗಳ ಎತ್ತರದ ದಾರಿಯಲ್ಲಿ ಇರುವಂತಹ ದೇವಾಲಯವಾಗಿದೆ. 350 ವರ್ಷಗಳ ಹಿಂದೆ, ಇದು ಮೈಸೂರಿನ ಅತ್ಯಂತ ಪ್ರಾಚೀನ ವಿಗ್ರಹಗಳಲ್ಲಿ  ಇದು ಕೂಡ ಒಂದಾಗಿದೆ. ಹಿಂದೂ ಸಂಸ್ಕ್ರತಿಯಲ್ಲಿ ನಂದಿಯನ್ನು ಶಿವನ ವಾಹನವಾಗಿದೆ. ಪ್ರತಿ ಶಿವನ ದೇವಸ್ಥಾನದ ಎದುರಿನಲ್ಲಿ ನಂದಿಯ ವಿಗ್ರಹವನ್ನು ನೋಡಬಹುದು.

ಈ ನಂದಿಯ ವಿಗ್ರಹವು  ಸುಮಾರು ಹದಿನಾರು ಅಡಿ ಎತ್ತರ ಮತ್ತು ಇಪ್ಪತ್ನಾಲ್ಕು ಅಡಿ ಉದ್ದವಿದ್ದು ಚಾಮುಂಡಿ ಬೆಟ್ಟದ ಮೇಲಿರುವ ಒಂದು ಸುಂದರ ವಿಗ್ರಹವಾಗಿದೆ ಈ ನಂದಿ ವಿಗ್ರಹವು ಏಷ್ಯಾದ ಮೂರನೇ ಅತಿದೊಡ್ಡ ನಂದಿ ವಿಗ್ರಹವಾಗಿದೆ. ಈ ದೊಡ್ಡ ನಂದಿ ವಿಗ್ರಹವನ್ನು ಮೈಸೂರಿನ ಪ್ರಸಿದ್ಧ ಮಹಾರಾಜರಾದ ದೊಡ್ಡ ದೇವರಾಜ ಒಡೆಯರ್ 1659 ರಿಂದ 1673 ರಲ್ಲಿ ನಿರ್ಮಾಣ ಮಾಡಿದ್ದಾರೆ. ಮೊದಲು ಇದು ಒಂದು ಬೃಹತ್ ಬಂಡೆಯಾಗಿತ್ತು ನಂತರ ಇದನ್ನು ನಂದಿಯ ವಿಗ್ರಹವಾಗಿ ಈ ಬಂಡೆಯನ್ನು ಆ ಸ್ಥಳದಲ್ಲೇ ಕೆತ್ತಿ ವಿಗ್ರಹವನ್ನು ನಿರ್ಮಾಣ ಮಾಡಲಾಯಿತು. ಈ ನಂದಿ ದೇವಾಲಯವನ್ನು ಭೇಟಿ ಮಾಡಿದಾಗ ಈ ಪ್ರದೇಶದ ಸುತ್ತಲೂ ಇದೇ ರೀತಿಯ ಬಂಡೆಗಳನ್ನು ಕಾಣಬಹುದಾಗಿದೆ. ವಾಸ್ತವವಾಗಿ, ನಂದಿ ವಿಗ್ರಹದ ಹಿಂದೆ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಇದು ಬಂಡೆಯ ಕೆಳಗೆ ಒಂದು ಚಿಕ್ಕ ಗುಹಾ ದೇವಾಲಯವಿರುವುದನ್ನು ಕಾಣಬಹುದಾಗಿದೆ. ಈ ಬಂಡೆಗಳನ್ನು ಬಿಳಿ ಮತ್ತು ಕೆಂಪು ಪಟ್ಟೆಗಳನ್ನು ಬಳಿಯಲಾಗಿದೆ. ಈ ವಿಗ್ರಹವನ್ನು ಬಹಳ ಉತ್ತಮ ಕಲಾಶೈಲಿಯಲ್ಲಿ ಕೆತ್ತಿ ನಿರ್ಮಾಣ ಮಾಡಲಾಗಿದೆ. ನಂದಿಯ ಮೇಲೆ ಹಲವಾರು ಗಂಟೆಗಳು ಮತ್ತು ಹೂಮಾಲೆಗಳನ್ನು ನೇತು ಹಾಕಲಾಗಿದೆ. ಸಂಪೂರ್ಣ ನಂದಿ ವಿಗ್ರಹವು ಸುಮಾರು ನಾಲ್ಕು ಅಡಿ ಎತ್ತರದ ವೇದಿಕೆಯ ಮೇಲೆ ನಿರ್ಮಾಣ ಮಾಡಲಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಈ ದೇವಾಲಯವು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ, ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಮೈಸೂರಿನ ಸಿಟಿ ಬಸ್ಸುಗಳು ಚಾಮುಂಡಿ ಬೆಟ್ಟಗಳನ್ನು ಒಳಗೊಂಡಿರುವ ಮಾರ್ಗದಲ್ಲಿ ಪ್ರಯಾಣ ಮಾಡುತ್ತವೆ, ಅಲ್ಲಿಂದ ನಂದಿ ದೇವಾಲಯವನ್ನು ತಲುಪಬಹುದಾಗಿದೆ.

ರೈಲಿನ ಮೂಲಕ: ಮೈಸೂರಿನ ಶ್ರೀ ನಂದಿ ದೇವಾಲಯಕ್ಕೆ ಹತ್ತಿರದ ಪ್ರಮುಖ ರೈಲು ನಿಲ್ದಾಣ ಮೈಸೂರು ಜಂಕ್ಷನ್ (MYS) ಆಗಿದೆ.

ವಿಮಾನದ ಮೂಲಕ: ಶ್ರೀ ನಂದಿ ದೇವಸ್ಥಾನವು ಮೈಸೂರು ವಿಮಾನ ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಮೈಸೂರು ಅರಮನೆ :  ಶ್ರೀ ನಂದಿ ದೇವಸ್ಥಾನದಿಂದ 3.2 ಕಿ.ಮೀ. ದೂರದಲ್ಲಿದೆ.

*ಶ್ರೀ ಮಹಾಬಲೇಶ್ವರ ದೇವಸ್ಥಾನ. 

*ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ : ಮೈಸೂರು ಅರಮನೆಯ ಹತ್ತಿರ,  ಶ್ರೀ ನಂದಿ ದೇವಸ್ಥಾನದಿಂದ 1.9 ಕಿ.ಮೀ. ದೂರದಲ್ಲಿದೆ.

*ಕಾರಂಜಿ ಸರೋವರ: ಶ್ರೀ ನಂದಿ ದೇವಸ್ಥಾನದಿಂದ 1.5 ಕಿ.ಮೀ ದೂರದಲ್ಲಿದೆ.

5.ತ್ರಿನೇಶ್ವರಸ್ವಾಮಿ ದೇವಸ್ಥಾನ

ದೇವಾಲಯದ ಬಗ್ಗೆ :

ಮೈಸೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ತ್ರಿನೇಶ್ವರಸ್ವಾಮಿ ದೇವಸ್ಥಾನವು ಸಾಮಾಜಿಕ, ಧಾರ್ಮಿಕ ಕ್ಷೇತ್ರವಾಗಿದೆ. ರಾಜ ಒಡೆಯರ್ 1578 ರಿಂದ 1617 ಆಳ್ವಿಕೆಯ ವೇಳೆಯಲ್ಲಿ ತ್ರಿನೇಶ್ವರಸ್ವಾಮಿ ದೇವಸ್ಥಾನವು 450 ವರ್ಷಗಳಿಗೂ ಪ್ರಾಚೀನವಾದುದು ಎಂದು ಹೇಳಲಾಗಿದೆ. ಕಂಠೀರವ ನರಸರಾಜ ಒಡೆಯರ್ 1638 ರಿಂದ 1659 ಅವಧಿಯಲ್ಲಿ ಮತ್ತು ಅವರ ಉತ್ತರಾಧಿಕಾರಿ ದೊಡ್ಡ ದೇವರಾಜ ಒಡೆಯರ್ (1659-1672) ಆಳ್ವಿಕೆಯಲ್ಲಿ ಮೈಸೂರು ಕೋಟೆಯನ್ನು ದೊಡ್ಡದಾಗಿ ಮಾಡುವ ಸಂದರ್ಭದಲ್ಲಿ, ತ್ರಿನೇಶ್ವರಸ್ವಾಮಿ ದೇವಾಲಯವು ಅರಮನೆಗೆ ಸಮೀಪವಿತ್ತು.

ಸಾಂಪ್ರದಾಯಿಕ ದ್ರಾವಿಡ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.  ತ್ರಿನೇಶ್ವರಸ್ವಾಮಿ ದೇವಾಲಯವನ್ನು ಹಚ್ಚಹಸಿರಿನಿಂದ ಕೂಡಿದ ಪ್ರದೇಶದಲ್ಲಿ  ನಿರ್ಮಾಣ ಮಾಡಲಾಗಿದೆ,  ಸುಂದರವಾದ ಉದ್ಯಾನವನವನ್ನು ಹೊಂದಿದೆ. ಪ್ರಧಾನ ಪ್ರವೇಶ ದ್ವಾರವು ಎತ್ತರದ ದೇವಾಲಯ ಗೋಪುರವನ್ನು ಹೊಂದಿದೆ. 

ತ್ರಿನೇಶ್ವರಸ್ವಾಮಿ ದೇವಸ್ಥಾನದಲ್ಲಿರುವ ಪ್ರಮುಖ ದೇವರು ‘ತ್ರಿನೇಶ್ವರ’, ಮೂರು ನೇತ್ರಗಳನ್ನು ಹೊಂದಿರುವ ಶಿವ ಮತ್ತು ಗಣಪತಿ, ವೀರಭದ್ರ ಮತ್ತು ದಕ್ಷಿಣಾಮೂರ್ತಿಗೆ ಸಮರ್ಪಿತವಾಗಿರುವ ಚಿಕ್ಕ ಪವಿತ್ರ ದೇವರನ್ನು ಕಾಣಬಹುದಾಗಿದೆ. ನವರಂಗದ ದಕ್ಷಿಣ ಭಾಗದ ಆಚೆ ಇರುವ ನೀರಿನ ಮೇಲೆ ದಕ್ಷಿಣಾಮೂರ್ತಿಯ ಪ್ರತಿಮೆಯ ಪ್ರತಿಬಿಂಬವು  ಕಾಣಿಸುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ:  ಈ ದೇವಾಲಯವು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ಸಿಗುತ್ತದೆ.

ರೈಲಿನ ಮೂಲಕ: ಮೈಸೂರು ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ವಿಮಾನದ ಮೂಲಕ: ಮೈಸೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಮೈಸೂರು ಅರಮನೆ ,

*ಚಾಮುಂಡಿ ಬೆಟ್ಟ

*ಶ್ರೀ ಚಾಮುಂಡೇಶ್ವರಿ ದೇವಸ್ಥಾನ

*ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್

*ರೈಲ್ವೆ ಮ್ಯೂಸಿಯಂ

6.ಲಕ್ಷ್ಮಿರಮಣ ಸ್ವಾಮಿ ದೇವಸ್ಥಾನ

ದೇವಾಲಯದ ಬಗ್ಗೆ:

ಮೈಸೂರಿನಲ್ಲಿರುವ ಲಕ್ಷ್ಮಿರಮಣ ಸ್ವಾಮಿ ದೇವಸ್ಥಾನವನ್ನು ಲಕ್ಷ್ಮಿ ನಾರಾಯಣ ದೇವಾಲಯ ಎಂದು ಕೂಡ ಕರೆಯುತ್ತಾರೆ. ಈ ದೇವಸ್ಥಾನವು ಪುರಾತತ್ತ್ವ ಶಾಸ್ತ್ರದ ವಿಶಿಷ್ಟತೆಯನ್ನು  ಹೊಂದಿದೆ. ಮೈಸೂರಿನ ಮಹಾರಾಜ III ಕೃಷ್ಣರಾಜ ಒಡೆಯರ್ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದರು ಮತ್ತು ರಾಜನ ಪ್ರತಿಮೆಯನ್ನು ದೇವಾಲಯಕ್ಕೆ ಬರುವ ಭಕ್ತರು  ಆವರಣದಲ್ಲಿ ನೋಡಬಹುದಾಗಿದೆ.

ಲಕ್ಷ್ಮಿರಮಣನ ಮೂರ್ತಿಯು ಕೈ ಅಲ್ಲಿ  ಚಕ್ರ ಮತ್ತು ಶಂಖವನ್ನು ಧರಿಸಿ ನಿಂತಿರುವುದನ್ನು ಕಾಣಬಹುದಾಗಿದೆ. ಈ ದೇವಸ್ಥಾನದಲ್ಲಿರುವ ವಿಗ್ರಹವನ್ನು 4 ಅಡಿ ಎತ್ತರವಾಗಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗಿದೆ  ಮತ್ತು  ಗೋಪುರವನ್ನು 1851 ರಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯವು 1499 ರಲ್ಲಿ ವಿಜಯನಗರ ರಾಜ ನರಸ ನಾಯಕನಿಂದ ದೇಣಿಗೆಯನ್ನು ಈ ದೇವಾಲಯವು ಪಡೆದುಕೊಂಡಿತ್ತು ಎಂದು ಶಾಸನವು ಹೇಳುತ್ತದೆ.

ದಂತಕಥೆಯಲ್ಲಿ ಹೇಳಿರುವ ಪ್ರಕಾರ, 1599 ರಲ್ಲಿ  ರಾಜ ಒಡೆಯರ್ ದೇವರ ವಿಗ್ರಹವನ್ನು ಪ್ರತಿಷ್ಠಾಪನೆಯನ್ನು ಮಾಡುವ ವೇಳೆಯಲ್ಲಿ ಅರೆ ಕುರುಡನಾಗಿದ್ದ ಬ್ರಾಹ್ಮಣನ ಕಣ್ಣಿನ ದೃಷ್ಟಿ ಬಂದಿತ್ತು. ಈ ಘಟನೆಯ ನೆನಪಿಗಾಗಿ ಮಹಾರಾಜರು ದೇವಸ್ಥಾನದಲ್ಲಿ ಕೈಮುಗಿದು ನಿಂತಿರುವ ಎರಡು ಅಡಿ ಎತ್ತರದ ವಿಗ್ರಹವನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ:  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ.

ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:

*ಮೈಸೂರು ಅರಮನೆ

*ಚಾಮುಂಡಿ ಬೆಟ್ಟ

*ಮೈಸೂರು ಮೃಗಾಲಯ

7.ಕೋಡಿ ಸೋಮೇಶ್ವರ ದೇವಸ್ಥಾನ

ದೇವಾಲಯದ ಬಗ್ಗೆ :

 ಅರಮನೆ ಅವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಈ ಕೋಡಿ ಸೋಮೇಶ್ವರ ದೇವಾಲಯಕ್ಕೂ ಅರಮನೆಗೂ ಅವಿನಾಭಾವ ಸಂಬಂಧವಿದೆ. ರಾಜವಂಶಸ್ಥರು ಯುದ್ಧಕ್ಕೆ ಹೋಗುವ ಮುನ್ನ ಹಾಗೂ ಅರಮನೆಯಲ್ಲಿ ಯಾವುದೇ ಶುಭ ಸಮಾರಂಭ ಕಾರ್ಯಕ್ರಮ ನಡೆದರೂ ಕೋಡಿ ಸೋಮೇಶ್ವರನಿಗೆ ಮೊದಲ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯೋದು ವಾಡಿಕೆ. ಇಷ್ಟೇ ಅಲ್ಲ ಮೈಸೂರಿನ ರಾಜರು ಅರಮನೆಯಿಂದ ಹೊರ ಹೋಗುವ ವೇಳೆಯೂ ಕೋಡಿ ಸೋಮೇಶ್ವರನಿಗೆ ನಮಸ್ಕರಿಸಿ ತೆರಳೋದು ಪ್ರತೀತಿಯಿದೆ.ಇಷ್ಟೇ ಅಲ್ಲದೆ ನವರಾತ್ರಿಯ ಮೊದಲ ದಿನ ರಾಜರು ಬಳಕೆ ಮಾಡಲಾಗುತ್ತಿದ್ದ ಆಯುಧಗಳು, ಪಟ್ಟದ ಆನೆ, ಕುದುರೆ, ಒಂಟೆಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಯದುವಂಶಸ್ಥರ ಮೂಲ ಪುರುಷರಾದ ಯದುರಾಯ ಮತ್ತು  ಕೃಷ್ಣರಾಯ ತಮ್ಮ ಕುಲದೈವವಾದ ಮೇಲುಕೋಟೆಯ ಚಲುವರಾಯಸ್ವಾಮಿ ದರ್ಶನಕ್ಕೆ ಆಗಮಿಸಿರುತ್ತಾರೆ. ಆ ಸಂದರ್ಭದಲ್ಲಿ ಹದಿನಾರು ಸಂಸ್ಥಾನದ ಚಲುವಾಜಮ್ಮಣಿಗೆ ಕಾರ್ಗಳ್ಳಿ ಮಾರನಾಯಕ ಹಾನಿ ಮಾಡಲು ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಮೈಸೂರಿಗೆ ಬಂದಿದ್ದ ಈ ಇಬ್ಬರುಕೋಡಿ ಸೋಮೇಶ್ವರ ದೇವಸ್ಥಾನದ ಎದುರಿನಲ್ಲಿ ನಿದ್ರಿಸುತ್ತಿದ್ದ ವೇಳೆ ಸಾಕ್ಷಾತ್ ಚಲುವರಾಯಸ್ವಾಮಿಯು ದಾಸಯ್ಯನ ರೂಪದಲ್ಲಿ ದರ್ಶನವನ್ನು ಕೊಟ್ಟು ಮಾರನಾಯಕನ ವಿರುದ್ಧ ಯುದ್ಧ ಮಾಡುವಂತೆ ಆರ್ಶಿವಾದ ಮಾಡುತ್ತಾನೆ. 

ಭೇಟಿ ನೀಡಲು ಉತ್ತಮ ಸಮಯ: ಈ ದೇವಾಲಯವು ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 2 ಗಂಟೆವರೆಗೆ, ಮಧ್ಯಾಹ್ನ 3:30 ರಿಂದ ಸಂಜೆ 6 ಗಂಟೆವರೆಗೆ, ಮತ್ತು ಸಂಜೆ 7:30 ರಿಂದ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ.

ತಲುಪುವುದು ಹೇಗೆ:

*ರಸ್ತೆಯ ಮೂಲಕ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ.

*ರೈಲಿನ ಮೂಲಕ: ಮೈಸೂರು ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.

*ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ.

8.ಶ್ವೇತ ವರಾಹಸ್ವಾಮಿ ದೇವಸ್ಥಾನ

ದೇವಾಲಯದ ಬಗ್ಗೆ:

ಶ್ವೇತ ವರಾಹ ಸ್ವಾಮಿ ದೇವಾಲಯವು ಮೈಸೂರಿನಲ್ಲಿ ಕಾಣಬಹುದು. ಹೊಯ್ಸಳ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಈ ದೇವಸ್ಥಾನವನ್ನು ವರಾಹಸ್ವಾಮಿ ದೇವಾಲಯ ಎಂದೂ ಕರೆಯಲಾಗುತ್ತದೆ ಮತ್ತು ಈ ದೇವಾಲಯವು ಸಾಮಾನ್ಯವಾಗಿ  ಆ ನಗರದ ಧಾರ್ಮಿಕ ಸ್ಥಳವಾಗಿದೆ.

ಮೈಸೂರಿನ ಆಡಳಿತಗಾರನಾಗಿದ್ದ  ಚಿಕ್ಕ ದೇವರಾಜ ಒಡೆಯರ್, ಈ ವಿಗ್ರಹವನ್ನು ಹಳೆಯ ರಾಜಧಾನಿಯಾಗಿದ್ದ ಶ್ರೀನಾಗಪಟ್ಟಣದಲ್ಲಿರುವ ದೇವಸ್ಥಾನದಲ್ಲಿ  ಪ್ರತಿಷ್ಠಾಪನೆ ಮಾಡಲಾಗಿತ್ತು. ನಂತರ 1809 ರಲ್ಲಿ ರಾಜಧಾನಿಯನ್ನು ಮೈಸೂರಿಗೆ ಬದಲಾಯಿಸಿದ ನಂತರ, ವಿಗ್ರಹವನ್ನು ಮತ್ತಷ್ಟು ಉತ್ತಮವಾಗಿಸಿ ಹೊಸ ದೇವಸ್ಥಾನದಲ್ಲಿ ಇಡಲಾಯಿತು. ಭಗವಾನ್ ವರಾಹನ ಅದ್ಭುತವಾದ ಪ್ರತಿಮೆಯು ಬಿಳಿ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ ಮತ್ತು ಆದ್ದರಿಂದ ಈ ದೇವಸ್ಥಾನವನ್ನು ಶ್ವೇತ ವರಾಹಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ, ಅಂದರೆ ಶ್ವೇತ ಎಂದರೆ ಬಿಳಿ ಎಂಬ ಅರ್ಥ ಬರುತ್ತದೆ.

ದೇವಾಲಯದೊಳಗೆ ಸಂಪೂರ್ಣವಾಗಿ ಬೇರೆ ಬೇರೆ ಅವಧಿಗಳಿಗೆ ಸೇರಿದ ಅನೇಕ ಶಾಸನಗಳನ್ನು ನೋಡಬಹುದಾಗಿದೆ. ದೇವಾಲಯದ ದಕ್ಷಿಣ ಗೋಡೆಯ ಮೇಲೆ ಹದಿಮೂರನೇ ಶತಮಾನದ ಒಂದು ಶಾಸನವನ್ನು ನೋಡಬಹುದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ. 

ರೈಲಿನ ಮೂಲಕ: ಮೈಸೂರು ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ.

9.ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನ

ದೇವಾಲಯದ ಬಗ್ಗೆ:

ಗುಂಜಾ ನರಸಿಂಹ ಸ್ವಾಮಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲ್ ನರಸಿಪುರದಲ್ಲಿರುವ ಒಂದು ಹಿಂದೂ ಧಾರ್ಮಿಕ  ದೇವಾಲಯವಾಗಿದೆ. ಈ ದೇವಾಲಯವು ಐತಿಹಾಸಿಕ ಪ್ರಮುಖ ನಗರವಾದ ಮೈಸೂರು ನಗರದಿಂದ 20 ಮೈಲುಗಳಷ್ಟು ಆಗ್ನೇಯ ದಿಕ್ಕಿನಲ್ಲಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ವೇಳೆಯದ್ದಾಗಿದೆ ಮತ್ತು ಪ್ರವೇಶ ದ್ವಾರದ ಮೇಲೆ ವಿಶಿಷ್ಟವಾದ ಸುಂದರವಾದ ಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯ ಎದುರಿನಲ್ಲಿ   ನಾಲ್ಕು ಕಂಬಗಳ ಮಂಟಪವಿರುವ ಸುಂದರ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವನ್ನು ಕಾವೇರಿ ನದಿ ಮತ್ತು ಕಬಿನಿ ನದಿಯ ಸಂಗಮದಲ್ಲಿ ಇರುವ ದೇವಾಲಯವಾಗಿದೆ ಮತ್ತು ಹಿಂದೂಗಳು ಈ ನದಿ ಸಂಗಮವನ್ನು ಪವಿತ್ರವೆಂದು ಭಾವಿಸುತ್ತಾರೆ.

ದೇವಾಲಯದ ಎದುರಿನಲ್ಲಿ ಬೆಳೆಯುವ ಗುಂಜಾ ಮರದಿಂದ ಈ ದೇವಾಲಯವು ಗುಂಜಾ ನರಸಿಂಹ ಸ್ವಾಮಿ ಎಂಬ ಹೆಸರನ್ನು ಹೊಂದಿದೆ.  ಗುಂಜಾ ಸಸ್ಯದಿಂದ ಈ ದೇವಾಲಯವು  ವಾರಣಾಸಿ (ಕಾಶಿ) ಗಿಂತ ಹೆಚ್ಚು ಪವಿತ್ರವೆಂದು ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಹೇಳಲಾಗುತ್ತದೆ. ದೇವಸ್ಥಾನದಲ್ಲಿರುವ ಶಿಲ್ಪಗಳಲ್ಲಿ ಹಿಂದೂ ದೇವರು ನರಸಿಂಹ ಗುಂಜಾ ಹಣ್ಣು ಮತ್ತು ಕಾಂಡವನ್ನು ಹಿಡಿದಿರುವ ಶಿಲ್ಪ ಕಲೆಯನ್ನು ಕಾಣಬಹುದಾಗಿದೆ ಮತ್ತು ರಾಕ್ಷಸ ರಾಜನಾದ ಹಿರಣ್ಯಕಶಿಪುವನ್ನು ನೋಡಬಹುದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಪ್ರತಿದಿನ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಸಂಜೆ 5:30 ರಿಂದ ರಾತ್ರಿ 8:30 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹತ್ತಿರದ ಬಸ್ ನಿಲ್ದಾಣ ಟಿ ನರಸೀಪುರ ಆಗಿದೆ. ಮೈಸೂರು ಬಸ್ ನಿಲ್ದಾಣವು ಗುಂಜಾ ನರಸಿಂಹ ದೇವಸ್ಥಾನಕ್ಕೆ ಸಮೀಪದ ಬಸ್ ನಿಲ್ದಾಣವಾಗಿದೆ, ಇದು ಬಸ್ ನಿಲ್ದಾಣದಿಂದ ಸುಮಾರು 32.9 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ಜಂಕ್ಷನ್ ರೈಲು ನಿಲ್ದಾಣವು ಮೈಸೂರಿನ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಾಲಯಕ್ಕೆ ಸಮೀಪದ ರೈಲು ನಿಲ್ದಾಣ ಇದಾಗಿದೆ.

ವಿಮಾನದ ಮೂಲಕ: ಮೈಸೂರು ದೇಶೀಯ ವಿಮಾನ ನಿಲ್ದಾಣವು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ.

  1. ಗಾಯತ್ರಿ ದೇವಸ್ಥಾನ

ದೇವಾಲಯದ ಬಗ್ಗೆ:

ಒಡೆಯರ್ ರಾಜವಂಶವು ಮೈಸೂರು ಎಂಬ ರಾಜ್ಯವನ್ನು ನಿರ್ಮಾಣವನ್ನು ಮಾಡಿತ್ತು. ಒಡೆಯರ್ ಅವರ ಆಡಳಿತವು ಮೈಸೂರು ಅಭಿವೃದ್ಧಿ ರಾಜ್ಯವಾಗಿ ನಿರ್ಮಾಣ ಮಾಡುವುದರಲ್ಲಿ  ಮತ್ತು ಭಾರತದ ಕಲೆ ಮತ್ತು ಸಂಸ್ಕೃತಿಯ ಉನ್ನತಿಯಲ್ಲಿ ಪ್ರಮುಖ ಪಾತ್ರವನ್ನು ಕಾಣಬಹುದಾಗಿದೆ. ಒಡೆಯರ್ ವಂಶವು ಲಲಿತಕಲೆಗಳ ಪ್ರತಿಪಾದಕರು ಮತ್ತು ಉತ್ಸಾಹಭರಿತ ಪೋಷಕರೂ ಆಗಿದ್ದರು ಮತ್ತು ಅವರ ಪರಂಪರೆಯು  ಸಂಗೀತ ಮತ್ತು ಕಲೆಯ ಮೇಲೆ ಅಪಾರವಾದ ಗೌರವವನ್ನು ಹೊಂದಿತ್ತು.

ಮೈಸೂರಿನ ಮಹಾರಾಜರಾದ  ಶ್ರೀ ಜಯಚಾಮರಾಜ ಒಡೆಯರು ಶ್ರೀ ಗಾಯತ್ರಿ ದೇವಿಯ ನಿಷ್ಠೆಯ ಭಕ್ತರಾಗಿದ್ದರು. ಅವರು ತಮ್ಮ ಹಿರಿಯ ಮಗಳಿಗೆ ಶ್ರೀ ಗಾಯತ್ರಿ ದೇವಿಯ ಹೆಸರನ್ನೆ ಇಟ್ಟರು. 1951 ರಲ್ಲಿ ಶ್ರೀ ಜಯಚಾಮರಾಜ ಒಡೆಯರು ಮೈಸೂರು ಅರಮನೆ ಕೋಟೆಯಲ್ಲಿ  ಶ್ರೀ ಗಾಯತ್ರಿ ದೇವಿ ದೇವಾಲಯದ ನಿರ್ಮಿಸಲು ಆರಂಭಿಸಿದರು. ಅರಮನೆಯಲ್ಲಿಯೆ ಇದ್ದ ಪೌರಾಣಿಕ ಶಿಲ್ಪಿಯಾದ ಶ್ರೀ ಸಿದ್ದಲಿಂಗಸ್ವಾಮಿ, ಮತ್ತು  ಶಿಷ್ಯ ಶ್ರೀ ಬಿ. ಬಸವಣ್ಣ ಅವರನ್ನು ದೇವಸ್ಥಾನದ ಶಿಲ್ಪಗಳ ರಚನಾ ವಿನ್ಯಾಸವನ್ನು ನಿರ್ಮಾಣ ಮಾಡಲು ನೇಮಿಸಿದ್ದರು. ನಂತರ ನಿರ್ಮಾಣವಾದ ಅದ್ಭುತ ವಾಸ್ತುಶಿಲ್ಪ ಇದಾಗಿದ್ದು,  ಶಿಲ್ಪಗಳು ಶ್ರೀ ಬಿ. ಬಸವಣ್ಣನವರ  ಕೌಶಲ್ಯ, ಶ್ರೀ ಸಿದ್ದಲಿಂಗಸ್ವಾಮಿಗಳ ಅನುಭವದಿಂದ ಈ ದೇವಾಲಯವು ನಿರ್ಮಾಣವಾಗಿದೆ. ಶ್ರೀ ಜಯಚಾಮರಾಜ ಒಡೆಯರ್ ಅವರ ಭಕ್ತಿಯನ್ನು ಇಲ್ಲಿ ನೋಡಬಹುದಾಗಿದೆ.

ಭೇಟಿ ನೀಡಲು ಉತ್ತಮ ಸಮಯ:

ತಲುಪುವುದು ಹೇಗೆ:

ರಸ್ತೆಯ ಮೂಲಕ: ಹತ್ತಿರದ ಬಸ್ ನಿಲ್ದಾಣ ಗಾಯತ್ರಿ ಪುರಂ ಬಸ್ ನಿಲ್ದಾಣವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಮೈಸೂರು ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.

ವಿಮಾನದ ಮೂಲಕ: ಮೈಸೂರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು (MYQ) ವಿಮಾನ ನಿಲ್ದಾಣ.  

Leave a Comment

Your email address will not be published. Required fields are marked *

Scroll to Top