ಇಸ್ಕಾನ್ ದೇವಸ್ಥಾನ ಬೆಂಗಳೂರು

ದೇವಾಲಯದ ಬಗ್ಗೆ :

ಶ್ರೀ ರಾಧಾ ಕೃಷ್ಣ-ಚಂದ್ರ ದೇವಾಲಯ ವಿಶ್ವದ ಅತಿದೊಡ್ಡ ಕೃಷ್ಣ ಧಾರ್ಮಿಕ ಪ್ರಸಿದ್ಧ ದೇವಾಲಯವಾಗಿದೆ.  ಈ ದೇವಾಲಯವನ್ನು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಹಿಂದೂ ದೇವರಾದ ರಾಧಾ ಕೃಷ್ಣನಿಗೆ ಅರ್ಪಿತವಾಗಿದೆ ಮತ್ತು ಛಾಂದೋಗ್ಯ ಉಪನಿಷತ್‌ನಲ್ಲಿ ಹೇಳಿರುವಂತೆ  ಏಕದೇವೋಪಾಸನೆಯನ್ನು ಈ ದೇವಾಲಯವು ಪ್ರಚಾರ ಮಾಡುತ್ತದೆ.

 ಬೆಂಗಳೂರು ಇಸ್ಕಾನ್ ದೇವಸ್ಥಾನವನ್ನು ಮೇ 1997 ರಲ್ಲಿ, ಭಾರತದ ಒಂಬತ್ತನೇ ಅಧ್ಯಕ್ಷ ಶಂಕರ್ ದಯಾಳ್ ಶರ್ಮಾ ಉದ್ಘಾಟನೆಯನ್ನು ಮಾಡಿದರು.

ಶ್ರೀಲ ಪ್ರಭುಪಾದರು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ ( ಇಸ್ಕಾನ್ ) ಅನ್ನು ಸ್ಥಾಪನೆಯನ್ನು ಮಾಡಿದ್ದಾರೆ. 1966 ರಲ್ಲಿ, ಅವರು ನ್ಯೂಯಾರ್ಕ್ ನಗರದಲ್ಲಿ ಕೂಡ  ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ (ಇಸ್ಕಾನ್)ವನ್ನು  ಸ್ಥಾಪನೆಯನ್ನು ಮಾಡಿದ್ದಾರೆ, ಭಗವದ್ಗೀತೆಯ ಬೋಧನೆಗಳು ಮತ್ತು ಭಕ್ತಿ ಯೋಗದ ಅಭ್ಯಾಸವನ್ನು ಎಲ್ಲಾ ಜನತೆಗೆ ಪ್ರಚಾರ ಮಾಡಲು ತಮ್ಮ ಜೀವನದುದ್ದಕ್ಕೂ ಭಕ್ತಿ ಸೇವೆಯನ್ನು ಮಾಡಿದ್ದಾರೆ. ಅವರ ಪ್ರಯತ್ನದಿಂದ ವಿಶ್ವಾದ್ಯಂತ ದೇವಾಲಯಗಳು, ಆಶ್ರಮಗಳು ಮತ್ತು ಸಮುದಾಯಗಳನ್ನು ಸ್ಥಾಪಿಸುವುದು, ವೈದಿಕ ಜ್ಞಾನವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪುವಂತೆ ಮಾಡಿದವು.

ವಿಶ್ವದ ಬೃಹತ್ ಆಧ್ಯಾತ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭಮೇಳದ ವೇಳೆಯಲ್ಲಿ, ಶ್ರೀಲ ಪ್ರಭುಪಾದರಿಗೆ ಮರಣೋತ್ತರವಾಗಿ ಅಖಿಲ ಭಾರತೀಯ ಅಖಾಡ ಪರಿಷತ್ತು “ವಿಶ್ವ ಗುರು” ಎಂಬ ಬಿರುದನ್ನು ನೀಡಿ ಗೌರವಿಸಿತು. ಈ ಗೌರವವು ಆಧ್ಯಾತ್ಮಿಕತೆಯ ಸೇವೆಗಾಗಿ ಮತ್ತು ಅವರ ಸ್ಮರಣೀಯ ಕೊಡುಗೆಗಳಿಗಾಗಿ, ಪ್ರಾಚೀನ ವೈದಿಕ ಸಂಪ್ರದಾಯಗಳನ್ನು ಮಹತ್ವವನ್ನು ಹೆಚ್ಚಿಸುವಲ್ಲಿ ಮತ್ತು ಜಾಗತಿಕ ಆಧ್ಯಾತ್ಮಿಕ ಸೇವೆಯಲ್ಲಿ ಅವರ ಪ್ರಭಾವವನ್ನು ಗುರುತಿಸಿತು.

ದೈನಂದಿನ ಆಚರಣೆಗಳು:

ಪ್ರತಿದಿನ 4.30 ಕ್ಕೆ ರಾಧಾಕೃಷ್ಣ ದೇವರಿಗೆ ಮಂಗಳ-ಆರತಿ ಮಾಡಲಾಗುತ್ತದೆ, ನಂತರ ತುಳಸಿ ದೇವಿ, ಶ್ರೀ ನರಸಿಂಹ ಆರತಿ ಮತ್ತು ಶ್ರೀ ಶ್ರೀನಿವಾಸ ಗೋವಿಂದನಿಗೆ ಸುಪ್ರಭಾತ ಸೇವೆ ನಡೆಸಲಾಗುತ್ತದೆ. ನಂತರದ ಆಚರಣೆಗಳು ಶೃಂಗಾರ ದರ್ಶನ ಆರತಿ ಮತ್ತು ಜಪ ಧ್ಯಾನ ಕಾರ್ಯಕ್ರಮಗಳು ನಡೆಯುತ್ತವೆ.

 7.OO ಕ್ಕೆ ಆರತಿ ಮತ್ತೊಮ್ಮೆ ಆರತಿಯನ್ನು ಮಾಡಲಾಗುತ್ತದೆ, ಆ ಸಮಯದಲ್ಲಿ ಭಕ್ತರು ಭಕ್ತಿಯಿಂದ ಕೀರ್ತನೆ ಹಾಡುತ್ತಾರೆ. ಮುಖ್ಯ ದೇವಸ್ಥಾನದಲ್ಲಿ, ಮೂವರು ಪುರೋಹಿತರು ಇದ್ದು ಆರತಿಯನ್ನು ಅವರು ಮಾಡುತ್ತಾರೆ. ಈ ಆರತಿಯ ನಂತರ ಮತ್ತೆ ಕೀರ್ತನೆ ಮಾಡಲಾಗುತ್ತದೆ, ಅಲ್ಲಿ ಭಕ್ತರು ಭಕ್ತಿಯಿಂದ ” ಹರೇ ಕೃಷ್ಣ ಹರೇ ರಾಮ ” ಲಯಕ್ಕೆ ನೃತ್ಯ ಮಾಡುತ್ತಾರೆ.

ಇಸ್ಕಾನ್ ವೈಕುಂಠ ಬೆಟ್ಟ

ಬೆಂಗಳೂರಿನ ಇಸ್ಕಾನ್ನಲ್ಲಿ  ವೈಕುಂಠ ಬೆಟ್ಟದಲ್ಲಿ  ವೆಂಕಟೇಶ್ವರನ ನಿವಾಸವನ್ನು ಕಾಣಬಹುದಾಗಿದೆ. ಈ ಕಲ್ಲಿನ ದೇವಸ್ಥಾನವನ್ನು ಸಾಂಪ್ರದಾಯಿಕ ಶಿಲ್ಪ ಶಾಸ್ತ್ರಗಳ ಪ್ರಕಾರ  ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದಲ್ಲಿ ಗರ್ಭಗುಡಿಯ ಏಳು ಬಾಗಿಲುಗಳ ರಚನಾ ವಿನ್ಯಾಸ ಮತ್ತು ಸೌಂದರ್ಯಶಾಸ್ತ್ರವು ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ರೀತಿಯಲ್ಲಿಯೇ ನಿರ್ಮಾಣ ಮಾಡಲಾಗಿದೆ. 

ತಿರುಮಲದಲ್ಲಿರುವ ಮೂಲ ದೇವಾಲಯದಂತೆಯೇ ಈ ದೇವಾಲಯವು ಎತ್ತರವಾಗಿದ್ದು, ಶ್ರೀ ರಾಜಾಧಿರಾಜ ಗೋವಿಂದ ಎಂದು ಕರೆಯಲಾಗುತ್ತದೆ. ಶ್ರೀಲ ಪ್ರಭುಪಾದರು ತಮ್ಮ 125 ನೇ ಜನ್ಮ ದಿನಾಚರಣೆಯಂದು ತಿರುಮಲದಂತಹ ಪ್ರಸಿದ್ಧ ದೇವಸ್ಥಾನವನ್ನು ನಿರ್ಮಿಸುವ ಬಯಕೆಯಿಂದ, ಈ ದೇವಾಲಯವನ್ನು ಇಸ್ಕಾನ್ ಮತ್ತು  ಬೆಂಗಳೂರಿನ ಭಕ್ತರು ಯೋಜನೆಯನ್ನು ರೂಪಿಸಿಕೊಂಡು ಕಾರ್ಯಗತಗೊಳಿಸಿದರು.

ವೈಕುಂಠ ಬೆಟ್ಟದ ಕಥೆ

ವೈಕುಂಠ ಬೆಟ್ಟ ಮತ್ತು ಭಗವಾನ್ ಶ್ರೀನಿವಾಸ ಗೋವಿಂದನೊಂದಿಗಿನ ಇರುವ ಸಂಬಂಧ ಹೀಗೆ ಹೇಳಲಾಗಿದೆ.  ಈ ಬೆಟ್ಟದಲ್ಲಿ ಇರುವ ಗುಹೆಯಲ್ಲಿ ಅತ್ಯಂತ ಘೋರ  ತಪಸ್ಸು ಆಚರಿಸಿದ ಶ್ರೀ ಮಾಂಡವ್ಯ ಮುನಿಯ ದೈವಿಕ ಕಥೆಗೆ ಸಂಬಂಧಿಸಿದ್ದು ಇದಾಗಿದೆ. ಶ್ರೀ ಶ್ರೀನಿವಾಸ ಗೋವಿಂದನು ಭಕ್ತಿಗೆ ಒಲಿದು ಶ್ರೀ ಮಾಂಡವ್ಯ ಮುನಿಗೆ ವರವನ್ನು ನೀಡಿದ.

ಭಗವಾನ್ ಶ್ರೀನಿವಾಸ ಗೋವಿಂದ ತಿರುಮಲ ರಾಜಕುಮಾರಿ ಪದ್ಮಾವತಿಯನ್ನು ವಿವಾಹ ಆದ ನಂತರ, ಶ್ರೀ ಮಾಂಡವ್ಯ ಮುನಿ ತಪಸ್ಸು ಮಾಡಿದ ಬೆಟ್ಟಕ್ಕೆ ಭೇಟಿ ನೀಡಿ ವಿಹಾರ ಅಥವಾ ಮಧುಚಂದ್ರದ ಲೀಲೆಯನ್ನು ಮಾಡುವುದಾಗಿ ಹೇಳಿದನು. ಹೀಗೆ ಈ ಪವಿತ್ರ ಧಾರ್ಮಿಕ ಸ್ಥಳವು ವಸಂತಪುರ ಎಂದು ಹೆಸರುವಾಸಿಯಾಯಿತು . ವಸಂತಪುರ ಎಂಬ ಹೆಸರು ಗೋವಿಂದನು ತನ್ನ ವಸಂತ ವಿಹಾರಕ್ಕೆ ಬಂದಿದ್ದ  ಸ್ಥಳವಾಗಿದ್ದರಿಂದ  ಈ ಸ್ಥಳಕ್ಕೆ ವಸಂತಪುರ ಎಂಬ ಹೆಸರು ಬಂದಿದೆ.

ಇಸ್ಕಾನ್ ಭಕ್ತರು ಹೆಚ್ಚಾಗಿ ಗೌಡೀಯ ವೈಷ್ಣವರ ಶಿಷ್ಯ ಪರಂಪರೆಯನ್ನು ಅನುಸರಿಸುತ್ತ ಬಂದಿದ್ದಾರೆ. ವೈಷ್ಣವ ಎಂಬುದರ ಅರ್ಥ ‘ ವಿಷ್ಣುವಿನ ಆರಾಧನೆ ‘, ಎಂದಾಗಿದೆ  ಮತ್ತು ಗೌಡ ಎಂಬುವುದು ಈ ವೈಷ್ಣವ ಶಾಖೆಯು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗೌಡ ಪ್ರದೇಶದಲ್ಲಿ ಹುಟ್ಟಿಕೊಂಡಿದ್ದರಿಂದ ಬಂದಿದೆ. ಈ ಗೌಡಿಯ ವೈಷ್ಣವ ಧರ್ಮವು ಐದು ನೂರು ವರ್ಷಗಳಿಂದಲೂ ಭಾರತದಲ್ಲಿನ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಹೆಚ್ಚಾಗಿ ಇರುವುದನ್ನು ಕಾಣಬಹುದಾಗಿದೆ.

ಇಸ್ಕಾನ್ ಶ್ರೀ ಕೃಷ್ಣ ಸರ್ವಶಕ್ತ ದೇವರ ಎಲ್ಲಾ ಅವತಾರಗಳ ಮೂಲ ಶ್ರೀ ಕೃಷ್ಣನೆ ಎಂದು ಹೇಳುತ್ತದೆ.  ಕೃಷ್ಣ ಭಕ್ತರು ಕೃಷ್ಣನನ್ನು ದೇವರ ಅತ್ಯುನ್ನತ ರೂಪ ಮತ್ತು ಜಗತ್ತಿನ ಸೃಷ್ಟಿ ಕರ್ತಾ   , ಸ್ವಯಂ ಭಗವಾನ್ ಎಂದು ನಂಬುತ್ತಾರೆ ಮತ್ತು ಎಲ್ಲ ಪುರಾಣ ಗ್ರಂಥಗಳಲ್ಲಿ ಕೃಷ್ಣನನ್ನು ಹೆಚ್ಚಾಗಿ ದೇವೋತ್ತಮ ಪರಮ ಪುರುಷ ಎಂದು ಹೇಳಲಾಗುತ್ತದೆ, ಇದು ಭಗವದ್ಗೀತೆಯಲ್ಲಿ ಕಂಡುಬರುವ “ಪುರುಷೋತ್ತಮ” ಎಂಬ ಪ್ರಭುಪಾದರು ಉಲ್ಲೇಖಿಸಿದ್ದಾರೆ.

ರಾಧೆಯು ಕೃಷ್ಣನ ದೈವಿಕ ಸ್ತ್ರೀ ಪ್ರತಿರೂಪ ಎಂದು ಹೇಳಿದ್ದಾರೆ, ರಾಧೆಯು ಮೂಲ ಆಧ್ಯಾತ್ಮಿಕ ಶಕ್ತಿ ಮತ್ತು ಭಕ್ತಿ ಪ್ರೀತಿಯನ್ನು ಪ್ರತಿನಿಧಿಸುತ್ತಾಳೆ. ವೈಯಕ್ತಿಕ ಆತ್ಮವು ಶಾಶ್ವತ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ. ಪ್ರಭುಪಾದರು ವೈದಿಕ ಅಧಿಕಾರವನ್ನು ಸ್ವೀಕರಿಸುವ ಧಾರ್ಮಿಕ ವ್ಯವಸ್ಥೆಗೆ ಸನಾತನ-ಧರ್ಮ ಮತ್ತು ವರ್ಣಾಶ್ರಮ ಧರ್ಮ ಎಂಬ   ಹೆಸರುಗಳಿಂದ ಕರೆಯುತ್ತಾರೆ.

ಕೀರ್ತನೆಯ ಮಹತ್ವ :

ಭಕ್ತಿ ಪ್ರಧಾನ ಸಂಪ್ರದಾಯ ಮತ್ತು ಸಾರ್ವಜನಿಕವಾಗಿ ಆಚರಿಸುವ ಇಸ್ಕಾನ್ ಅಭ್ಯಾಸವೆಂದರೆ ಕೀರ್ತನೆ ಮಾಡುವುದಾಗಿದೆ, ಇದು ಹರೇ ಕೃಷ್ಣ ಮಂತ್ರದ ಸಾಮೂಹಿಕ ಪಠಣ ಮಾಡುವುದು  ಅಥವಾ ಹಾಡುವಿಕೆಯಾಗಿದೆ. ಕೀರ್ತನೆಯು ಆಧ್ಯಾತ್ಮಿಕ ಹಂತದ ಒಂದು ಮಾರ್ಗವಾಗಿದೆ ಮತ್ತು ಭಕ್ತಿಯ ಕಡೆಗೆ ಎಲ್ಲರನ್ನು ಆಕರ್ಷಿಸುವ ಒಂದು ಮಾರ್ಗ ಕೂಡ ಇದಾಗಿದೆ. ಭಕ್ತರು ಸಾರ್ವಜನಿಕವಾಗಿ ಒಟ್ಟಾಗಿ ಸೇರಿ, ಬೀದಿಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಒಂದಾಗಿ,  ವಾದ್ಯಗಳೊಂದಿಗೆ ಮಂತ್ರವನ್ನು ಕೀರ್ತನೆ ಮಾಡುತ್ತಾರೆ.

1970 ರ ದಶಕದಲ್ಲಿ, ಇಸ್ಕಾನ್ ಈ ಒಂದು ಆಚರಣೆಯಿಂದಾಗಿ  ಸಾರ್ವಜನಿಕರನ್ನು ಆಕರ್ಷಿಸಿತ್ತು . ಭಕ್ತರು ವಿಮಾನ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಾಡುತ್ತಿದ್ದರು, ಪುಸ್ತಕಗಳನ್ನು ನೀಡುತ್ತಿದ್ದರು ಮತ್ತು ಅದರ ಬಗ್ಗೆ ಅರಿವು ಮೂಡಿಸುತ್ತಿದ್ದರು, ಭಕ್ತಿಯ ಸಂಕೀರ್ತನೆ ಇಂದು ಪ್ರಪಂಚದಾದ್ಯಂತ ಕಾಣಬಹುದಾಗಿದೆ. 

ಜಪದ ವಿಶೇಷತೆ

  1. ಹರೇ ಕೃಷ್ಣ ಹರೇ ಕೃಷ್ಣ
  2. ಕೃಷ್ಣ ಕೃಷ್ಣ ಹರೇ ಹರೇ
  3. ಹರೇ ರಾಮ ಹರೇ ರಾಮ
  4. ರಾಮ ರಾಮ ಹರೇ ಹರೇ

ಈ ಮಂತ್ರವನ್ನು ಮಣಿಯ ಮೇಲೆ 108 ಬಾರಿ ಜಪಿಸಲಾಗುತ್ತದೆ.ಶ್ರೀ ಕೃಷ್ಣನ ಭಕ್ತರು ಪ್ರತಿದಿನ ಈ ಜಪ ಮಾಲೆಯನ್ನು 16 ಸುತ್ತುಗಳಲ್ಲಿ ಜಪಿಸುತ್ತಾರೆ.  ಈಗಿನ ಕಲಿಯುಗದಲ್ಲಿ  ಇದು  ಒಂದೇ  ಮೋಕ್ಷದ ಏಕೈಕ ಸುಲಭ ಮಾರ್ಗವೆಂದು ಹೇಳಲಾಗುತ್ತದೆ. ಪ್ರಭುಪಾದರು ದೀಕ್ಷೆ ಪಡೆದ ಎಲ್ಲಾ ಭಕ್ತರು ಪ್ರತಿದಿನ 108 ಮಣಿಗಳ ಜಪಮಾಲೆಯಲ್ಲಿ ಹರೇ ಕೃಷ್ಣ ಮಹಾಮಂತ್ರದ ಹದಿನಾರು ಸುತ್ತುಗಳನ್ನು ಪಠಿಸಬೇಕೆಂದು ಹೇಳಿದ್ದಾರೆ.  ಪ್ರತಿಯೊಂದು ಸುತ್ತಿನಲ್ಲಿ ಕೃಷ್ಣನ ಹೆಸರುಗಳ 1728 ಪುನರಾವರ್ತನೆಗಳಿವೆ ಎಂದು ಹೇಳಲಾಗಿದೆ.

ಧರ್ಮೋಪದೇಶ

ಇಸ್ಕಾನ್ ಮುಖ್ಯ ಉದ್ದೇಶ ಧರ್ಮೋಪದೇಶವನ್ನು ಮಾಡಿ ಜನರಿಗೆ ಆಧ್ಯಾತ್ಮಿಕ ಮಹತ್ವವನ್ನು ತಿಳಿಸುವುದಾಗಿದೆ. ಭಕ್ತರು ಪ್ರಥಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹರೇ ಕೃಷ್ಣ ಮಂತ್ರವನ್ನು ಹಾಡುವ ಮೂಲಕ ಮತ್ತು ಚಳವಳಿಯ ಸಂಸ್ಥಾಪಕ ಪ್ರಭುಪಾದರು ತಮ್ಮ ಮೂಲ ಭಾಷೆಗಳಿಂದ ಭಾಷ್ಯಂತರ ಮಾಡಿದ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ ಭಾರತೀಯ ಆಧ್ಯಾತ್ಮಿಕ ಪುಸ್ತಕಗಳನ್ನು ಮಾರಾಟ ಮಾಡಿ ಕೃಷ್ಣ ಪ್ರಜ್ಞೆಯನ್ನು ಮೂಡಿಸುವುದಾಗಿದೆ.

ಸಾತ್ವಿಕ ಆಹಾರ ಪದ್ಧತಿ:

ಸಾತ್ವಿಕ ಆಹಾರ ಪದ್ದತಿಯು ಇಸ್ಕಾನ್‌ನ ನಾಲ್ಕು ತತ್ವಗಳಲ್ಲಿ ಒಂದು ಎಂದು ಹೇಳಬಹುದಾಗಿದೆ.  ಪ್ರಭುಪಾದರು ಆಹಾರ ವಿತರಣೆಗೆ ಹೆಚ್ಚು ಮಹತ್ವ ನೀಡಿದ್ದರಿಂದ, ಬಹುತೇಕ  ಇಸ್ಕಾನ್ ಸದಸ್ಯರು ಸಸ್ಯಾಹಾರಿ ಆಹಾರ ಪದ್ದತಿಗೆ ಆದ್ಯತೆಯನ್ನು ನೀಡುತ್ತಾ ಬಂದಿದ್ದಾರೆ. ಬಹುತೇಕ ಗೋವಿಂದರ ರೆಸ್ಟೋರೆಂಟ್‌ಗಳು ಅಥವಾ ಅಡುಗೆ ವ್ಯವಹಾರಗಳು ಮುಖ್ಯ ದೇವಾಲಯದ ಕೇಂದ್ರದಿಂದ ಕಾರ್ಯ ನಿರ್ವಹಿಸುತ್ತಾ ಬಂದಿವೆ.

ಇಸ್ಕಾನ್ ಸದಸ್ಯರು ಆಹಾರವನ್ನು ‘ಕೃಷ್ಣಾಟೇರಿಯನ್’ ಎಂದು ಹೇಳುತ್ತಾರೆ. ಕೃಷ್ಣಾಟೇರಿಯನ್ ಊಟ ಎಂದರೆ ಶುದ್ಧ, ಸಸ್ಯಾಹಾರಿ ಪದಾರ್ಥಗಳನ್ನು ಮಾತ್ರ ಬಳಸಿ ಮಾಡುವ ಪದಾರ್ಥವಾಗಿದೆ (ಈರುಳ್ಳಿ, ಬೆಳ್ಳುಳ್ಳಿ, ಕೆಂಪು ಮಸೂರ ಮತ್ತು ಅಣಬೆಗಳನ್ನು ಬಳಸಲಾಗುವುದಿಲ್ಲ) ಮತ್ತು ಹಾಲಿನ ಉತ್ಪನ್ನಗಳನ್ನು ಮಾತ್ರ  ಉಪಯೋಗಿಸಿ ತಯಾರಿಸುವ ಆಹಾರ ಪದ್ಧತಿ ಇದಾಗಿದೆ, ಈ ಪದ್ದತಿಯು ಇಸ್ಕಾನ್ ಅನುಯಾಯಿಗಳು ತಯಾರಿಸಿ ಅದನ್ನು ವಿತರಿಸುವ ಮತ್ತು ಸೇವಿಸುವ ಮುಂಚಿತವಾಗಿ ಅವರ ಶ್ರೀ ಕೃಷ್ಣನಿಗೆ ಅರ್ಪಿಸುತ್ತಾರೆ.

Leave a Comment

Your email address will not be published. Required fields are marked *

Scroll to Top