ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆಯುವುದು ಏಕೆ?
ತೆಂಗಿನಕಾಯಿಯ ವಿಶೇಷತೆ:
ತೆಂಗಿನಕಾಯಿಯನ್ನು ನಾವು ಭಕ್ತಿಯಿಂದ ದೇವರಿಗೆ ಸಮರ್ಪಣೆಯನ್ನು ಮಾಡುತ್ತೇವೆ. ಇದು ನಾವು ತೊರೆಯಬೇಕಾದ ಆಂತರಿಕ ಮತ್ತು ಭೌತಿಕ ಆಸೆಗಳ ಸಂಕೇತ. ಹೀಗೆ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ದೇವರೆದು ಅಥವಾ ನೆಲಕ್ಕೆ ಬಡಿದು ಒಡೆಯುವುದು ಹಿಂದೂ ಸಂಸ್ಕ್ರತಿಯಲ್ಲಿ ರೂಡಿಯಲ್ಲಿದೆ. ಇದು ನಮ್ಮ ಅಹಂಕಾರ ತೊರೆದು ಹೋಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದಾಗಿದೆ.ಅಂದರೆ, ದೇವರೇ ಈ ಭೂಮಿ ಮೇಲೆ ನಾವೆಲ್ಲರೂ ಬರೀ ಶೂನ್ಯ ಎಂಬರ್ಥ ಇಲ್ಲಿನದ್ದು.
ದೇವರರಿಗೆ ಸಂಪೂರ್ಣ ಭಕ್ತಿಯಿಂದ ಶರಣಾಗುವ ಸಂಕೇತವಿದು. ತೆಂಗಿನಕಾಯಿ ಒಡೆದ ನಂತರ ತೆಂಗಿನ ನೀರು ಅದರಿಂದ ಹೊರಬರುತ್ತದೆ. ಇದು ನಮ್ಮೊಳಗಿನ ಎಲ್ಲಾ ನಕಾರಾತ್ಮಕತೆಯ ದೂರ ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವ ಸಂಕೇತ. ಅಂದರೆ, ನಮ್ಮ ಮನಸ್ಸು, ಆಂತರ್ಯದಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ತೊಡೆದು ಪ್ರಶಾಂತತೆಯ ಜೀವನ ನಡೆಸಬೇಕು ಎಂಬುದನ್ನೂ ಇದು ಪ್ರತಿನಿಧಿಸುತ್ತದೆ. ತೆಂಗಿನಕಾಯಿಯ ಮೃದುವಾದ ಒಳಭಾಗವು ಬಿಳಿಯ ಬಣ್ಣವು ಶಾಂತಿಯನ್ನು ಸಂಕೇತಿಸುತ್ತ ಭಕ್ತರ ಬಯಕೆಗಳನ್ನು ಈಡೇರಿಸುತ್ತದೆ.
ಪುರಾಣಗಳ ಪ್ರಕಾರ ವಿಷ್ಣು ದೇವರು ದೇವಿ ಲಕ್ಷ್ಮಿಯೊಂದಿಗೆ ಭೂಮಿಗೆ ಬಂದಾಗ ಮನುಕುಲದ ಕಲ್ಯಾಣಕ್ಕಾಗಿ ತನ್ನೊಂದಿಗೆ ಕಲ್ಪವೃಕ್ಷ ಎಂದರೆ ತೆಂಗಿನಮರ ಮತ್ತು ಕಾಮಧೇನುವನ್ನು ಭೂಮಿಗೆ ತಂದರು ಎಂದು ಹೇಳಲಾಗುತ್ತದೆ. ವಿಷ್ಣು ಮತ್ತು ದೇವಿ ಲಕ್ಷ್ಮಿಗೆ ತೆಂಗಿನಕಾಯಿ ಬಲು ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ತೆಂಗಿನಕಾಯಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದೂ ಹಿಂದಿನಿಂದಲೂ ಹೇಳಲಾಗುತ್ತದೆ . ತೆಂಗಿನ ಕಾಯಿ ಬಹು ಪ್ರಾಚೀನ ಕಾಲದಿಂದಲೂ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವವುಳ್ಳದ್ದಾಗಿದೆ.
ಕಳಶದಲ್ಲಿ ತೆಂಗಿನಕಾಯಿ ಏಕೆ ಇಡುತ್ತಾರೆ…?
ತೆಂಗಿನಕಾಯಿಯಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅದೂ ಅಲ್ಲದೆ, ದೇವರ ಮುಂದೆ ತೆಂಗಿನಕಾಯಿ ಇಟ್ಟು ಆರಾಧಿಸುವುದರಿಂದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗಿ ಮನಸಿನಲ್ಲಿ ಶಾಂತಿ ಉಂಟಾಗುತ್ತದೆ ಹಾಗೂ ಯಾವುದೇ ಕಾರ್ಯಗಳು ವಿಘ್ನವಿಲ್ಲದೆ ಪರಿಪೂರ್ಣಗೊಳ್ಳುತ್ತವೆ ಎಂಬುದು ನಂಬಿಕೆ. ಜತೆಗೆ, ಕಳಶದಲ್ಲಿಯೂ ತೆಂಗಿನಕಾಯಿಯನ್ನು ಇಡಲಾಗುತ್ತದೆ. ಹೀಗೆ ಕಳಶದಲ್ಲಿ ತೆಂಗಿನಕಾಯಿ ಇಟ್ಟಾಗ ಅದು ಗಣಪತಿಯ ಸಂಕೇತ ಎಂದು ಅದನ್ನು ಪೂಜಿಸಲಾಗುತ್ತದೆ . ಮೊದಲ ಪೂಜೆ ಗಣಪತಿಯಿಂದಲೇ ಪ್ರಾರಂಭ ಮಾಡಲಾಗುತ್ತದೆ. ಹೀಗಾಗಿ, ಗಣಪತಿಯ ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ ಎಂಬುದು ನಮ್ಮಲ್ಲಿರುವ ಶ್ರದ್ಧಾ ಭಕ್ತಿಯ ನಂಬಿಕೆ. ಇದೇ ಕಾರಣದಿಂದ ಕಳಶದ ಮೇಲೆ ತೆಂಗಿನಕಾಯಿಯನ್ನು ಇಟ್ಟು ಗಣೇಶನ ರೂಪದಲ್ಲಿ ಪೂಜಿಸಲಾಗುತ್ತದೆ.
ತೆಂಗಿನಕಾಯಿ ಧಾರ್ಮಿಕ ಮಹತ್ವ :
ತೆಂಗಿನ ಕಾಯಿಯನ್ನು ಮನುಷ್ಯನ ತಲೆಗೆ ಹೋಲಿಸಲಾಗುತ್ತದೆ. ಅಂದರೆ, ತೆಂಗಿನ ನಾರು ಮನುಷ್ಯನ ಕೂದಲಿಗೆ ಹೋಲಿಸಲಾಗುತ್ತದೆ, ಚಿಪ್ಪು ತಲೆಬುರುಡೆ ಎಂದು ಹೇಳಲಾಗುತ್ತದೆ, ತೆಂಗಿನಕಾಯಿ ನೀರನ್ನ ರಕ್ತಕ್ಕೆ ಹೋಲಿಸಲಾಗುತ್ತದೆ, ಬಿಳಿಯ ಪದರ ಮೆದುಳನ್ನು ಸೂಚಿಸುತ್ತದೆ. ಹೀಗಾಗಿ, ಭಕ್ತರು ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಿದರೆ ತಮ್ಮನ್ನೇ ದೇವರಿಗೆ ಸಮರ್ಪಣೆ ಮಾಡಿಕೊಂಡಂತೆ ಎಂದು ಭಾವಿಸುತ್ತಾರೆ. ಹೀಗೆ ತಮ್ಮ ಆತ್ಮವನ್ನು ಸಂಪೂರ್ಣ ದೇವರಿಗೆ ಅರ್ಪಿಸುತ್ತಾರೆ. ತೆಂಗಿನ ಚಿಪ್ಪು ಅಹಂಕಾರವನ್ನು ಸೂಚಿಸುತ್ತದೆ, ಮೃದುವಾದ ಬಿಳಿಯ ತಿರುಳಿನ ಭಾಗವು ಮಾನವನ ಹೃದಯವನ್ನೂ, ನೀರು ಶುದ್ಧತೆಯನ್ನು ಪ್ರತಿನಿಧಿಸುತ್ತದೆ . ಹೀಗಾಗಿ, ಎಲ್ಲರೂ ತಮ್ಮೆಲ್ಲಾ ಅಹಂಕಾರವನ್ನು, ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕಿ ಸದ್ಮಾರ್ಗದಲ್ಲಿ ನಡೆಯಬೇಕೆಂದು ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಅಜ್ಞಾನವನ್ನು ದೂರ ಮಾಡಿ ದೇವರ ಅನುಗ್ರಹವನ್ನು ಪಡೆಯಲು ಇದು ಪ್ರೇರೇಪಿಸುತ್ತದೆ ಎಂಬ ನಂಬಿಕೆ ಕೂಡಾ ಇದೆ.
ಪ್ರಾಣಿ ಬಲಿಯನ್ನು ತಡೆಗಟ್ಟುವಲ್ಲಿ ತೆಂಗಿನಕಾಯಿಯ ಮಹತ್ವ :
ಉತ್ತಮ ವೈದಿಕ ಧರ್ಮವನ್ನು ಸ್ತಾಪಿಸುವ ಸಲುವಾಗಿ ಆದಿ ಶಂಕರರು ಚರ್ಚೆ ನಡೆಸುತ್ತಿದ್ದಾಗ, ಪ್ರಾಣಿಗಳ ಬಲಿ ಅವರ ಮನವನ್ನು ಕಲಕಿತು, ಆದ್ದರಿಂದ ಅವರು ಇನ್ನು ಮುಂದೆ ಎಲ್ಲಾ ಬ್ರಾಹ್ಮಣರು ಅಧಿಕೃತವಾಗಿ ಸಸ್ಯಾಹಾರಿಗಳಾಗಿರಬೇಕು ಮತ್ತು ತೆಂಗಿನಕಾಯಿ ಒಡೆಯುವ ಮೂಲಕ ಯಜ್ಞವಾಗಿರಬೇಕು ಎಂದು ಹೇಳಿದರು. ಇದು ಐತಿಹಾಸಿಕ ಸತ್ಯ ಮತ್ತು ನಂತರ ಅನೇಕ ಭಾರತೀಯ ಆಚರಣೆಗಳು ತೆಂಗಿನಕಾಯಿ ಒಡೆಯುವ ಶೈಲಿಯನ್ನು ರೂಡಿಸಿಕೊಂಡವು.
ದೇವಸ್ಥಾನಗಳಲ್ಲಿ ತೆಂಗಿನಕಾಯಿ ನೀರಿನ ಬಳಕೆ :
ದೇವಾಲಯಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸುವ ಅಭಿಷೇಕ ಆಚರಣೆಯ ಸಮಯದಲ್ಲಿ, ಹಾಲು, ಮೊಸರು, ಜೇನುತುಪ್ಪ, ಶ್ರೀಗಂಧ ಮತ್ತು ಪವಿತ್ರ ಭಸ್ಮ ದೇವರ ಮೇಲೆ ಎಳನೀರು ಮತ್ತು ತೆಂಗಿನಕಾಯಿಯ ನೀರಿನೊಂದಿಗೆ ಮಿಶ್ರಣ ಮಾಡಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವು ಭಕ್ತರಿಗೆ ಕೆಲವು ನಿರ್ದಿಷ್ಟ ಪ್ರಯೋಜನಗಳನ್ನು ನೀಡುತ್ತದೆ ಮತ್ತು ತೆಂಗಿನ ನೀರು ಭಕ್ತರಿಗೆ ಆಧ್ಯಾತ್ಮಿಕ ತೀರ್ಥ ರೂಪದಲ್ಲಿ ನೀಡಲಾಗುತ್ತದೆ ಇದು ಒಂದು ಧಾರ್ಮಿಕ ಸಂಪ್ರದಾಯವಾಗಿದೆ.
ಪೂಜೆಯ ನಂತರ ಕಾಲಶದ ಮೇಲಿರುವ ತೆಂಗಿನ ಕಾಯಿಯನ್ನು ಏನು ಮಾಡಬೇಕು :
ಕಲಶದ ಮೇಲಿರುವ ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ, ಅಂದರೆ ಅದು ಶ್ರೀಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಅದನ್ನು ನಿಮ್ಮ ಮನೆಯೊಳಗೆ ಇಡಬೇಕು. ಈ 9 ದಿನಗಳಲ್ಲಿ ಶ್ರೀಫಲವನ್ನು ಕೆಂಪು ಚುನ್ರಿ ಅಥವಾ ಸರಳ ಕೆಂಪು ವಸ್ತ್ರದಲ್ಲಿ ಸುತ್ತಿ ಇಡಬೇಕು. ನವಮಿಯ ಪೂಜೆಯ ನಂತರ, ಚುನ್ರಿಯೊಂದಿಗೆ ಈ ತೆಂಗಿನ ಕಾಯಿಯನ್ನು ಮನೆಯ ಮಹಿಳೆಗೆ ನೀಡಬೇಕು. ಅವಳು ಅದನ್ನು ತನ್ನ ದುಪಟ್ಟಾ ಅಥವಾ ಸೀರೆಯಲ್ಲಿ ಭಕ್ತಿಯಿಂದ ಸ್ವೀಕರಿಸಬೇಕು.
ನಿಮ್ಮ ಪೂಜಾ ಕೊಠಡಿಯಲ್ಲಿ ಅಥವಾ ನಿಮ್ಮ ನಗದು ಪೆಟ್ಟಿಗೆಯಲ್ಲಿ ಇರಿಸಬಹುದಾಗಿದೆ ಅಥವಾ ಈಶಾನದಲ್ಲಿ (ಈಶಾನ್ಯ) ಸೂಕ್ತವಾದ ಸ್ಥಳದಲ್ಲಿ ಇಡಬಹುದಾಗಿದೆ. ಅಲ್ಲಿ ಮೊದಲೇ ಒಂದು ಇದ್ದರೆ, ನೀವು ಅದನ್ನು ಈ ಹೊಸದರೊಂದಿಗೆ ಬದಲಾಯಿಸಬೇಕು. ನಿಮಗೆ ಬೇಡವಾದರೆ ನೀವು ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಇಡಬಹುದು. ಅದನ್ನು ಭೂಮಿಯ ಮೇಲೆ ಇಡಬಾರದು ಅಥವಾ ತಿನ್ನಬಾರದು ಮತ್ತು ಅಡುಗೆಗೆ ಬಳಕೆ ಮಾಡಬಾರದು. ಶ್ರೀಫಲವು ಇಡೀ ಪೂಜೆಯ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆದ್ದರಿಂದ ಈ ಶಕ್ತಿಯನ್ನು ಮನೆಯವರು ಸರಿಯಾದ ರೀತಿಯಲ್ಲಿ ಭಕ್ತಿಯಿಂದ ನೋಡಿಕೊಳಬೇಕು.
ಯಾವುದೇ ಕಟ್ಟಡ ಅಥವಾ ಹೊಸತರ ಪ್ರಾರಂಭದಲ್ಲಿ ತೆಂಗಿನ ಕಾಯಿ ಒಡೆಯಲು ಕಾರಣ :
ಆತ್ಮಗಳನ್ನು ಸಮಾಧಾನ ಪಡಿಸಲು ಮತ್ತು ಅಡೆತಡೆಗಳನ್ನು ತೆಗೆದುಹಾಕಲು ಮನುಷ್ಯನನ್ನು ಬಲಿಕೊಡುವುದು (ಅವನ ತಲೆಯನ್ನು ಕತ್ತರಿಸುವುದು) ರೂಡಿಯಲ್ಲಿತ್ತು. ಆತ್ಮಗಳು ರಕ್ತವನ್ನು ಕುಡಿದವು, ತೃಪ್ತವಾದವು ಮತ್ತು ಇನ್ನು ಮುಂದೆ ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ ಎಂದು ನಂಬಿಕೆ ಇತ್ತು.
ಆತ್ಮಗಳನ್ನು ರಕ್ತದಿಂದ ಸಮಾಧಾನಪಡಿಸದಿದ್ದರೆ, ಅವರ ಕೆಲಸಗಳು ಅಪೂರ್ಣವಾಗಿ ಇದ್ದು ತೊಂದರೆ ನೀಡುತ್ತವೆ ಅಥವಾ ಆಕಸ್ಮಿಕವಾಗಿ ಜೀವಗಳನ್ನು ತೆಗೆದುಕೊಳ್ಳುತ್ತವೆ ಎಂದು ನಂಬಲಾಗಿತ್ತು. ಆದ್ದರಿಂದ, ಯಾವುದೇ ಕೆಲಸದ ರಚನೆಯ ನಿರ್ಮಾಣದ ಮೊದಲು ಮನುಷ್ಯನನ್ನು ಬಲಿಕೊಡಲಾಗುತ್ತಿತ್ತು. ಆದರೆ ಸಾಮಾಜಿಕ ಅಭಿಪ್ರಾಯಗಳು ಬದಲಾದವು. ತೆಂಗಿನಕಾಯಿಯನ್ನು ಬದಲಾಗಿ ಬಳಸಲಾಯಿತು, ಏಕೆಂದರೆ ಅದು ಮಾನವ ತಲೆಯನ್ನು ಹೋಲುತ್ತದೆಯೆಂಬ ನಂಬಿಕೆ ಇದೆ.