ಪಶ್ಚಿಮ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು
1.ಮುರುಡೇಶ್ವರ ದೇವಸ್ಥಾನ (ಉತ್ತರ ಕನ್ನಡ)
ದೇವತೆ: ಶಿವ
ವಿಶೇಷತೆ : ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ; ಅರಬ್ಬಿ ಸಮುದ್ರದ ತೀರದಲ್ಲಿರುವ ರಮಣೀಯ ಸ್ಥಳ.
ದೇವಾಲಯದ ಬಗ್ಗೆ :
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಇರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಸ್ಥಳವಾಗಿದ್ದು,ಇದೊಂದು ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಪ್ರೇಕ್ಷಣೀಯ ಸ್ಥಳವಾಗಿದೆ ಮತ್ತು ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿಗರನ್ನು ತನ್ನೆಡೆ ಸೆಳೆಯುವ ಒಂದು ಸುಂದರ ತಾಣವಾಗಿದೆ.
“ಮುರ್ಡೇಶ್ವರ” ಎಂಬ ಹೆಸರಿನ ಮೂಲವು ರಾಮಾಯಣದ ಕಾಲಕ್ಕೆ ಸೇರಿದ್ದಾಗಿದೆ. ಹಿಂದೂ ದೇವರುಗಳು ಆತ್ಮ-ಲಿಂಗ ಎಂಬ ದೈವಿಕ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಮತ್ತು ಅಜೇಯತೆಯನ್ನು ಪಡೆದಿದ್ದಾರೆ. ಹಾಗೆಯೇ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ಧಾರ್ಮಿಕ ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು, ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಇಂದಿಗೂ ಕಾಣಬಹುದು.
ಭೇಟಿ ನೀಡಲು ಉತ್ತಮ ಸಮಯ:
ಇಲ್ಲಿಯ ದೇವಾಲಯದಲ್ಲಿ ಮುಂಜಾನೆ 3 ಗಂಟೆಗೆ ದರ್ಶನದ ಅವಕಾಶವನ್ನು ನೀಡಲಾಗುತ್ತದೆ. ಮಧ್ಯಾಹ್ನ 1 ಗಂಟೆಯವರೆಗೆ ಪೂಜೆಗೆ ಅವಕಾಶ ಇರುತ್ತದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಭಟ್ಕಳದಿಂದ 18 ಕಿ.ಮೀ. , ಬೆಂಗಳೂರಿಗೆ 464 ಕಿ.ಮೀ. ದೂರದಲ್ಲಿದೆ.
ರೈಲಿನ ಮೂಲಕ: ಹತ್ತಿರದ ರೈಲ್ವೆ ನಿಲ್ದಾಣಗಳು ಭಟ್ಕಳ ಮತ್ತು ಮುರ್ಡೇಶ್ವರ
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
*ಅಪ್ಸರಾ ಕೊಂಡ ಜಲಪಾತ :ಮುರುಡೇಶ್ವರದಿಂದ 20 ಕಿಮೀ ದೂರದಲ್ಲಿದೆ.
*ಬೈಂದೂರು / ಬೈಂದೂರು ಬೀಚ್: ಮುರುಡೇಶ್ವರದಿಂದ 30 ಕಿ.ಮೀ ದೂರದಲ್ಲಿದೆ.
*ಬಸವರಾಜ ದುರ್ಗ ದ್ವೀಪ: ಮುರುಡೇಶ್ವರದಿಂದ 36 ಕಿ.ಮೀ ದೂರದಲ್ಲಿದೆ.
*ನೇತ್ರಾಣಿ ದ್ವೀಪ: ಮುರುಡೇಶ್ವರದಿಂದ 20 ಕಿ.ಮೀ ದೂರದಲ್ಲಿದೆ.
*ಗೋಕರ್ಣ ಬೀಚ್: ಮುರುಡೇಶ್ವರದಿಂದ 75 ಕಿ.ಮೀ ದೂರದಲ್ಲಿದೆ.
2.ಇಡಗುಂಜಿ ಗಣಪತಿ ದೇವಸ್ಥಾನ (ಉತ್ತರ ಕನ್ನಡ)
ದೇವರು : ಗಣೇಶ
ದೇವಾಲಯದ ಬಗ್ಗೆ :
ಇಡಗುಂಜಿ ವಿನಾಯಕ ದೇವಾಲಯವು ಕರ್ನಾಟಕದ ಒಂದು ಹಿಂದೂ ಧಾರ್ಮಿಕ ಕ್ಷೇತ್ರವಾಗಿದ್ದು ಸುಮಾರು 1500 ವರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪೂರ್ವ ದಿಕ್ಕಿನಲ್ಲಿ ಕಾಣಬಹುದಾಗಿದೆ.
ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಪ್ರತಿಮೆಯು ಸುಮಾರು 88 ಸೆ.ಮೀ ಎತ್ತರ ಮತ್ತು 59 ಸೆ.ಮೀ ಅಗಲವನ್ನು ಹೊಂದಿರುವ ಮೂರ್ತಿಯಾಗಿದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದ್ದು ಭಕ್ತರ ಮನ ಸೆಳೆಯುವಂತಿದೆ.
ವಸತಿ ಮತ್ತು ಆಹಾರ ಸೌಕರ್ಯಗಳು:
ಇಡುಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳ ಸೌಲಭ್ಯವನ್ನು ಇಲ್ಲಿ ಒದಗಿಸಲಾಗುತ್ತದೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಭಕ್ತರು ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳ ಸೌಲಭ್ಯವು ದೊರೆಯುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ವರೆಗೆ ಭಕ್ತಾದಿಗಳು ದರ್ಶನವನ್ನು ಪಡೆಯಬಹುದಾಗಿದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಭಟ್ಕಳ ಮತ್ತು ಹೊನ್ನಾವರ ದಿಂದ ರಾಷ್ಟೀಯ ಹೆದ್ದಾರಿ 66 (ರಾ.ಹೆ. 17)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ದೊರೆಯುತ್ತದೆ. ಭಟ್ಕಳದಿಂದ 32 ಕಿ.ಮೀ ಹಾಗೂ ಹೊನ್ನಾವರದಿಂದ 15 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ: ಹೊನ್ನಾವರ (ಕೊಂಕಣ ರೈಲ್ವೆ )
ವಿಮಾನದ ಮೂಲಕ: ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು.
*ಅಪ್ಸರಕೊಂಡ ಜಲಪಾತ:
ಅಪ್ಸರಕೊಂಡ ಜಲಪಾತವು ಇಡಗುಂಜಿಗೆ ಸಮೀಪವಿರುವ ಒಂದು ರಮಣೀಯ ಜಲಪಾತ ಇರುವ ಸ್ಥಳವಾಗಿದೆ. ದಟ್ಟವಾದ ಕಾಡುಗಳಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಇದು ಶಾಂತ ವಾತಾವರಣವನ್ನು ಹೊಂದಿದೆ.
*ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ:
ಇಡಗುಂಜಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯವು ಮೂಕಾಂಬಿಕಾ ದೇವಿಗೆ ಸಮರ್ಪಿತವಾದ ಧಾರ್ಮಿಕ ಕ್ಷೇತ್ರವಾಗಿದೆ.
3.ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (ಉತ್ತರ ಕನ್ನಡ)
ದೇವತೆ: ಶಿವ (ಆತ್ಮಲಿಂಗ)
ವಿಶೇಷತೆ : ಕಾಶಿಯಷ್ಟೇ ಪವಿತ್ರವೆಂದು ಪರಿಗಣಿಸಲಾಗಿದೆ; ಯಾತ್ರಿಕರು ಮತ್ತು ಆಧ್ಯಾತ್ಮಿಕ ಅನ್ವೇಷಕರನ್ನು ಆಕರ್ಷಿಸುತ್ತದೆ.
ದೇವಾಲಯದ ಬಗ್ಗೆ :
ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನವು ಕ್ರಿ.ಶ. 4 ನೇ ಶತಮಾನದ ದೇವಸ್ಥಾನವಾಗಿದ್ದು, ಇದನ್ನು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ. ಇದು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಅರೇಬಿಯನ್ ಸಮುದ್ರದ ಗೋಕರ್ಣ ಕಡಲತೀರದತ್ತ ಮುಖ ಮಾಡಿರುವ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿರುವ ಪ್ರಾಣಲಿಂಗವನ್ನು ಆತ್ಮಲಿಂಗ ಅಥವಾ ಶಿವಲಿಂಗ ಎಂದೂ ಕರೆಯಲ್ಪಡುತ್ತದೆ.
ಧಾರ್ಮಿಕ ಆಚರಣೆಗಳು:
ಭಕ್ತರು ತಮ್ಮ ಪುರೋಹಿತರೊಂದಿಗೆ ಆಚರಿಸುವ ಧಾರ್ಮಿಕ ಆಚರಣೆಗಳಾದ ತಲೆ ಬೋಳಿಸಿಕೊಳ್ಳುವುದು, ಉಪವಾಸ ಮಾಡುವುದು ಮತ್ತು ನಂತರ ದೇವಾಲಯದ ಎದುರಿನ ಅರೇಬಿಯನ್ ಸಮುದ್ರದಲ್ಲಿ ಸ್ನಾನ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡುತ್ತಾರೆ. ನಂತರ ಅವರು ಮಹಾಬಲೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ದರ್ಶನವನ್ನು ಪಡೆಯುತ್ತಾರೆ.
ಹಬ್ಬ:
ಶಿವ ಮತ್ತು ಪಾರ್ವತಿಯರ ಆಚರಣೆಯಾದ ಶಿವರಾತ್ರಿ ಹಬ್ಬವನ್ನು ಗೋಕರ್ಣದಲ್ಲಿ ಮಾಘ ಮಾಸದ ಕತ್ತಲೆಯ ಹದಿನೈದು ದಿನಗಳ 14 ನೇ ದಿನದಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಭೇಟಿ ನೀಡಲು ಉತ್ತಮ ಸಮಯ:
ಬೆಳಿಗ್ಗೆ 6:00 ಗಂಟೆ ಇಂದ ಮಧ್ಯಾಹ್ನ 12:30ರ ವರೆಗೆ
ಸಂಜೆ 5:00 ಗಂಟೆ ಇಂದ ರಾತ್ರಿ 8:00 ಗಂಟೆ ವರೆಗೆ
ತಲುಪುವುದು ಹೇಗೆ?
ರಸ್ತೆಯ ಮೂಲಕ:
ಕರಾವಳಿ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿ 66 (NH66), ಗೋಕರ್ಣಕ್ಕೆ ಸಮೀಪದಲ್ಲಿ ಇರುವಂತಹ ಹೆದ್ದಾರಿಯಾಗಿದೆ . ಗೋಕರ್ಣವು ಕಾರವಾರದಿಂದ 56 ಕಿಲೋಮೀಟರ್ ದೂರದಲ್ಲಿದೆ, ಮಂಗಳೂರಿನಿಂದ 252 ಕಿಲೋಮೀಟರ್, ಹುಬ್ಬಳ್ಳಿಯಿಂದ 145 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 450 ಕಿಲೋಮೀಟರ್ ದೂರದಲ್ಲಿದೆ. ಯಾತ್ರಿಕರಿಗೆ ಈ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
ರೈಲು ಮೂಲಕ:
ಗೋಕರ್ಣವು ಕಾರವಾರ, ಅಂಕೋಲಾ, ಹುಬ್ಬಳ್ಳಿ, ಮಂಗಳೂರು, ಕುಮಟಾ ಮತ್ತು ಮಾರ್ಗೋವಾ ಮೂಲಕ ರೈಲು ಸಂಪರ್ಕ ಕಲ್ಪಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ಇತರ ಹಲವು ರೈಲುಗಳು ಗೋಕರ್ಣದ ಮೂಲಕ ಸಂಪರ್ಕವನ್ನು ಹೊಂದಿವೆ. ಕುಮಟಾ (35 ಕಿ.ಮೀ) ಮತ್ತು ಅಂಕೋಲಾ (20 ಕಿ.ಮೀ) ಸಮೀಪದ ರೈಲು ಮಾರ್ಗಗಳಾಗಿವೆ.
ವಿಮಾನದ ಮೂಲಕ: ವಿಮಾನ ನಿಲ್ದಾಣವು ಗೋವಾದ ಪಣಜಿಯಲ್ಲಿದೆ.
4.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (ಉಡುಪಿ ಜಿಲ್ಲೆ)
ದೇವತೆ: ಮೂಕಾಂಬಿಕಾ ದೇವತೆ
ವಿಶೇಷತೆ: ಪ್ರಬಲ ಶಕ್ತಿ ಪೀಠ; ಶೈವ ಮತ್ತು ಶಾಕ್ತ ಅನುಯಾಯಿಗಳಿಬ್ಬರಿಗೂ ಮುಖ್ಯವಾಗಿದೆ.
ದೇವಾಲಯದ ಬಗ್ಗೆ:
ಮೂಕಾಂಬಿಕೆಯು ಆದಿಪರ ಶಕ್ತಿ ಮತ್ತು ಪರಬ್ರಹ್ಮರ ಶಕ್ತಿಯಾಗಿದ್ದು, ಲಿಂಗವು ಅದರ ಎಡಭಾಗದಲ್ಲಿ ಮಹಾ ಕಾಳಿ, ಮಹಾ ಲಕ್ಷ್ಮಿ ಮತ್ತು ಮಹಾ ಸರಸ್ವತಿ” ಯಲ್ಲಿ ರೂಪವಾಗಿದ್ದರಿಂದ. ಈ ದೇವಸ್ಥಾನವು 108 ದುರ್ಗಾಲಯಗಳು ಮತ್ತು 108 ಶಿವಾಲಯಗಳ ವರ್ಗವಾಗಿರುವುದರಿಂದ ಇದು ಬಹಳ ವಿಶೇಷವಾಗಿರುವ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವು ಸೌಪರ್ಣಿಕಾ ನದಿಯ ದಕ್ಷಿಣ ದಂಡೆಯಲ್ಲಿರುವ ಕೊಡಚಾದ್ರಿ ಬೆಟ್ಟಗಳ ಪ್ರದೇಶದಲ್ಲಿ ಕಾಣಬಹುದಾಗಿದೆ
ಸೌಪರ್ಣಿಕಾ ನದಿ ಕರ್ನಾಟಕದ ಬೈಂದೂರು ತಾಲ್ಲೂಕಿನಲ್ಲಿ ಹರಿಯುವ ಪವಿತ್ರ ನದಿಯಾಗಿದೆ . ಇದು ವಾರಾಹಿ ನದಿ , ಕುಬ್ಜಾ ನದಿಯೊಂದಿಗೆ ಸೇರಿ ಅರೇಬಿಯನ್ ಸಮುದ್ರಕ್ಕೆ ಹರಿದು ಸಾಗುತ್ತದೆ . ಈ ನದಿಯು ಕೊಲ್ಲೂರಿನ ಮೂಕಾಂಬಿಕಾ ದೇವಾಲಯದ ಬಳಿ ಹರಿಯುತ್ತದೆ, ದೇವಾಲಯದ ಭಕ್ತರು ಇದೊಂದು ಪವಿತ್ರ ನದಿ ಎಂದು ಪೂಜಿಸುತ್ತಾರೆ.
ಸುಪರ್ಣ ಗರುಡ ನದಿಯ ಪಕ್ಕದಲ್ಲಿ ತಪಸ್ಸು ಆಚರಿಸಿ ಮೋಕ್ಷವನ್ನು ಪಡೆಯಿತು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ಹೆಸರು ಸೌಪರ್ಣಿಕಾ ನದಿಗೆ ಬಂದಿದೆ. ನದಿಯು ಹರಿದು ಬರುವಾಗ 64 ಅನೇಕ ರೀತಿಯ ಔಷಧೀಯ ಸಸ್ಯಗಳು ಮತ್ತು ಬೇರುಗಳ ಗುಣಗಳನ್ನು ತೆಗೆದುಕೊಂಡು ಬರುತ್ತದೆ, ಆದ್ದರಿಂದ ಈ ನದಿಯಲ್ಲಿ ಸ್ನಾನ ಮಾಡಿದವರ ರೋಗಗಳು ಈ ನದಿ ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಭೇಟಿ ನೀಡಲು ಉತ್ತಮ ಸಮಯ:
ಬೆಳಿಗ್ಗೆ 5:00 ಗಂಟೆಯಿಂದ 7:30 ರವರೆಗೆ ಮತ್ತು ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಅವಕಾಶವಿರುತ್ತದೆ.
ಮಧ್ಯಾಹ್ನದ ಸಮಯ: ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 5:00 ರವರೆಗೆ ಅವಕಾಶವಿರುತ್ತದೆ.
ಸಂಜೆ ಸಮಯ: ಸಂಜೆ 5:00 ಗಂಟೆಯಿಂದ ರಾತ್ರಿ 9:00 ರವರೆಗೆ ಅವಕಾಶವಿರುತ್ತದೆ.
ತಲುಪುವುದು ಹೇಗೆ?
ರಸ್ತೆಯ ಮೂಲಕ: ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತವೆ .
ರೈಲು ಮೂಲಕ:
ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿಸನಿಹದ ರೈಲ್ವೆ ನಿಲ್ದಾಣವಾಗಿವೆ ಈ ಮೂಲಕ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಬಹುದಾಗಿದೆ.
ಕೊಲ್ಲೂರಿನ ಸುತ್ತಮುತ್ತಲಿನ ಪ್ರಕೃತಿ ನೋಟ:
ನಿತ್ಯಹರಿದ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಹಳ್ಳಿಗಳಿಂದ ಕಾಣಸಿಗುತ್ತದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳೂ ಸೇರಿಕೊಂಡು ದೇವಸ್ಥಾನದಿಂದ ಒಂದು ಕಂಗೊಳಿಸುವ ಪ್ರಕೃತಿಯನ್ನು ವೀಕ್ಷಿಸಬಹುದಾಗಿದೆ.
5.ಉಡುಪಿ ಶ್ರೀ ಕೃಷ್ಣ ಮಠ (ಉಡುಪಿ)
ದೇವರು : ಕೃಷ್ಣ
ವಿಶೇಷತೆ : ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು; ವಿಶಿಷ್ಟವಾದ “ಕನಕನ ಕಿಂಡಿ“ಗೆ ಹೆಸರುವಾಸಿ.
ದೇವಾಲಯದ ಬಗ್ಗೆ :
ಉಡುಪಿ ಶ್ರೀ ಕೃಷ್ಣ ದೇವಸ್ಥಾನವು ಕರ್ನಾಟಕದ ಉಡುಪಿ ನಗರದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಮತ್ತು ದ್ವೈತ ಮಠಕ್ಕೆ ಸೇರಿದ ಪ್ರಸಿದ್ಧ ಪುರಾತನ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ದೈನಂದಿನ ಭಕ್ತಿ ಮತ್ತುಆಧ್ಯಾತ್ಮಿಕ ಪವಿತ್ರ ಪ್ರದೇಶವಾಗಿದೆ. ಶ್ರೀ ಕೃಷ್ಣ ದೇವಾಲಯದ ಸುತ್ತಲೂ ಹಲವಾರು ಭಕ್ತಿ ಪ್ರಧಾನ ದೇವಾಲಯಗಳಿವೆ, ಅವುಗಳೆಂದರೆ ಸಾವಿರ ವರ್ಷಗಳಿಗೂ ಹಳೆಯದಾದ ಉಡುಪಿ ಅನಂತೇಶ್ವರ ದೇವಾಲಯವು ಬಹಳ ಮಹತ್ವಪೂರ್ಣ ದೇಗುಲವಾಗಿದೆ.
ಕೃಷ್ಣ ಮಠವನ್ನು ೧೩ನೇ ಶತಮಾನದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದರು . ಅವರು ದ್ವೈತ ವೇದಾಂತ ಪಂಥದ ಸ್ಥಾಪಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಮಧ್ವಾಚಾರ್ಯರು ಗೋಪಿಚಂದನದ ದೊಡ್ಡ ಉಂಡೆಯಲ್ಲಿ ಕೃಷ್ಣನ ವಿಗ್ರಹದ ದರ್ಶನವಾಯಿತು ಎಂದು ಹೇಳಲಾಗುತ್ತದೆ . ಮಧ್ವಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಹೇಳಿದಂತೆ , ವಿಗ್ರಹವನ್ನು ಪ್ರಾರಂಭದಲ್ಲಿ ಪೂರ್ವ ದಿಕ್ಕಿನಲ್ಲಿ ಗೋಚರಿಸುವಂತೆ ಇರಿಸಲಾಗಿತ್ತು. ಕನಕದಾಸರು ತೋರಿಸಿದ ತೀವ್ರ ಭಕ್ತಿಗೆ ಒಲಿದ ಶ್ರೀ ಕೃಷ್ಣನು ಪಶ್ಚಿಮಕ್ಕೆ ಮುಖ ಮಾಡಿ ದರ್ಶನವನ್ನು ನೀಡಿದನೆಂದು ನಂಬಿಕೆ ಇದೆ.
ಕೃಷ್ಣ ಮಠಗಳ ದೈನಂದಿನ ಸೇವೆಗಳು ಮತ್ತು ಆಡಳಿತ ಚಟುವಟಿಕೆಯನ್ನು ಅಷ್ಟ ಮಠಗಳು ನಿರ್ವಹಿಸುತ್ತಾ ಬಂದಿವೆ. ಪ್ರತಿಯೊಂದು ಅಷ್ಟ ಮಠಗಳು ಎರಡು ವರ್ಷಗಳ ಕಾಲ ದೇವಾಲಯ ನಿರ್ವಹಣಾ ಕಾರ್ಯಗಳನ್ನು ಚಕ್ರೀಯ ಕ್ರಮದ ಅನುಸಾರ ನಿರ್ವಹಿಸುತ್ತಾ ಬಂದಿವೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕೆಎಸ್ಆರ್ಟಿಸಿ ಬಸ್ಗಳು ಉಡುಪಿಯಿಂದ ಬೆಂಗಳೂರು ಮತ್ತು ಮಂಗಳೂರಿನಂತಹ ಪ್ರದೇಶಗಳಿಗೆ ಸಂಪರ್ಕ ಸೌಲಭ್ಯವನ್ನು ಹೊಂದಿವೆ.
ರೈಲಿನ ಮೂಲಕ: ಉಡುಪಿ ತನ್ನದೇ ಆದ ರೈಲು ನಿಲ್ದಾಣ ಸೌಲಭ್ಯವನ್ನು ಹೊಂದಿದೆ.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ , ಉಡುಪಿಯಿಂದ ಸುಮಾರು 60 ಕಿ.ಮೀ ದೂರದಲ್ಲಿ ಲಭ್ಯವಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಅನಂತೇಶ್ವರ ದೇವಸ್ಥಾನ : ಶ್ರೀ ಕೃಷ್ಣ ದೇವಸ್ಥಾನದ ಪಕ್ಕದಲ್ಲಿದ್ದು, ಶಿವನಿಗೆ ಅರ್ಪಿತವಾಗಿದ್ದು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.
ಚಂದ್ರಮೌಳೇಶ್ವರ ದೇವಸ್ಥಾನ : ಇದೊಂದು ಧಾರ್ಮಿಕ ದೇಗುಲವಾಗಿದ್ದು ವಿಶೇಷ ಮಹತ್ವವನ್ನು ಹೊಂದಿರುವ ಪ್ರಾಚೀನ ದೇವಸ್ಥಾನ.
6.ಸಿಗಂದೂರು ಚೌಡೇಶ್ವರಿ ದೇವಸ್ಥಾನ (ಶಿವಮೊಗ್ಗ ಜಿಲ್ಲೆ)
ದೇವತೆ: ಚೌಡೇಶ್ವರಿ ದೇವತೆ
ವಿಶೇಷತೆ : ಶರಾವತಿ ಹಿನ್ನೀರಿನಲ್ಲಿ ನೆಲೆಗೊಂಡಿದೆ.
ದೇವಾಲಯದ ಬಗ್ಗೆ:
ಸಿಗಂದೂರು ಭಾರತದ ಕರ್ನಾಟಕ ರಾಜ್ಯದ ತುಮರಿಯ ಬಳಿಯ ಒಂದು ದೈವಿಕ ಕ್ಷೇತ್ರವಾಗಿದೆ. ಈ ಗ್ರಾಮವು ಸಿಗಂದೂರು ಚೌಡೇಶ್ವರಿ ಆವಾಸ ಸ್ಥಾನವಾಗಿದೆ,ಈ ಪ್ರದೇಶವು ಶರಾವತಿ ನದಿಯಿಂದ ನಿರ್ಮಾಣವಾಗಿದ್ದು ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಸುತ್ತುವರಿಯಲ್ಪಟ್ಟಿದ. ಶ್ರೀ ಚೌಡಮ್ಮ ದೇವಿಗೆ ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿ ಇದ್ದು ಇದು ಭಕ್ತರನ್ನು ಹೆಚ್ಚು ಆಕರ್ಷಿಸುತ್ತಿದೆ. ಯಾವುದೇ ಭಕ್ತರ ಮನೆಯಲ್ಲಿ ಯಾವುದೇ ಕಳ್ಳತನ ನಡೆದರೆ, ದೇವಿಯ ಬಳಿಯಲ್ಲಿ ಭಕ್ತಿಯಿಂದ ಬೇಡಿಕೊಂಡಾಗ ಅವರನ್ನು ಶಿಕ್ಷಿಸುತ್ತಾಳೆ.
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 3:30 ರಿಂದ ಮಧ್ಯಾಹ್ನ 2:30 ರವರೆಗೆ, ಸಂಜೆ 5:30 ರಿಂದ 7:30 ರವರೆಗೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ನೀವು ಸಾಗರ ತಲುಪಬಹುದು, ನಂತರ ಬಸ್/ವ್ಯಾನ್ ತೆಗೆದುಕೊಂಡು ಹೊಳೆಬಾಗಿಲು ತಲುಪಬಹುದು, ನಂತರ ಲಾಂಚರ್ ಮತ್ತು ದೇವಾಲಯವನ್ನು ತಲುಪಬಹುದು.
ರೈಲಿನ ಮೂಲಕ: ಶಿವಮೊಗ್ಗ ಪಟ್ಟಣ ನಿಲ್ದಾಣದ ನಂತರ ಬರುವ ಸಾಗರ ಜಂಬಗಾರು ನಿಲ್ದಾಣವು ತಲುಪಲು ಹತ್ತಿರದ ನಿಲ್ದಾಣವಾಗಿದೆ.
ವಿಮಾನದ ಮೂಲಕ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ 105 ಕಿ.ಮೀ ದೂರ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಜೋಗ ಜಲಪಾತ: ಕರ್ನಾಟಕ-ಭಾರತದ ಅತ್ಯಂತ ಭವ್ಯವಾದ ಮತ್ತು ಸುಂದರವಾದ ಮನಮೋಹಕ ಜಲಪಾತವಾಗಿದೆ. ಶರಾವತಿ ನದಿಯ ಸುತ್ತಮುತ್ತಲಿನ ಕಾಡುಗಳ ಮದ್ಯದಲ್ಲಿ ಕಂಡುಬರುತ್ತದೆ
ಕೊಲ್ಲೂರು : ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ ರಾಜ್ಯದ ಮಂಗಳೂರು ನಗರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಕುಂದಾಪುರ ಪಟ್ಟಣದಿಂದ 40 ಕಿ.ಮೀ ದೂರದಲ್ಲಿರುವ ಒಂದು ಧಾರ್ಮಿಕ ಕ್ಷೇತ್ರವಾಗಿದೆ.
ಶಿವಮೊಗ್ಗ ಜಿಲ್ಲೆ : ಶರಾವತಿ ಕಣಿವೆ ಅಥವಾ ಪಶ್ಚಿಮ ಘಟ್ಟಗಳು ಪ್ರಕೃತಿ ಪ್ರಿಯರಿಗೆ ವೀಕ್ಷಿಸಲು ಬಹು ಸುಂದರವಾಗಿದೆ.
7. ಆನೆಗುಡ್ಡೆ ವಿನಾಯಕ ದೇವಸ್ಥಾನ (ಕುಂದಾಪುರ, ಉಡುಪಿ ಜಿಲ್ಲೆ)
ದೇವತೆ: ಗಣೇಶ
ವಿಶೇಷತೆ : ವ್ರತ ಪೂರೈಸುವ ದೇವಸ್ಥಾನ; ಗಣೇಶ ಚತುರ್ಥಿಯ ಸಮಯದಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ.
ದೇವಾಲಯದ ಬಗ್ಗೆ:
ಆನೆಗುಡ್ಡೆ ವಿನಾಯಕ ದೇವಸ್ಥಾನವು ಉಡುಪಿ ಮತ್ತು ಕಾರವಾರದ ನಡುವಿನ ಕುಂಭಾಶಿಯಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಉಡುಪಿಯಿಂದ 25 ಕಿ.ಮೀ, ಮಂಗಳೂರಿನಿಂದ 86 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ದೇವಸ್ಥಾನವಾಗಿದೆ. ಆನೆಗುಡ್ಡೆ ವಿನಾಯಕ ದೇವಸ್ಥಾನವು ಗಣಪತಿಗೆ ಸಮರ್ಪಿತವಾದ ದೇವಾಲಯವಾಗಿದೆ. ಕರ್ನಾಟಕದ ಪರಶುರಾಮ ಕ್ಷೇತ್ರಗಳಲ್ಲಿ ಆನೆಗುಡ್ಡೆಯೂ ಒಂದಾಗಿದೆ. ಈ ದೇವಾಲಯವನ್ನು ಪರಶುರಾಮ ಋಷಿ ಸೃಷ್ಟಿಸಿದ್ದಾರೆಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ:
ಆನೆಗುಡ್ಡ ಸ್ಥಳವನ್ನು ಕುಂಬಾಶಿ ಎಂದೂ ಕರೆಯುತ್ತಾರೆ, ಕಾರಣ ಕುಂಭಾಶಿ ಎಂಬ ರಾಕ್ಷಸನಾದ ಕುಂಭಾಸುರನಿಂದ ಬಂದಿದ್ದು, ಪುರಾಣದ ಪ್ರಕಾರ ಈ ಪ್ರದೇಶದಲ್ಲಿ ಬರಗಾಲ ಬಂದಾಗ ಅಗಸ್ತ್ಯ ಋಷಿ ಮಳೆಗಾಗಿ ತಪಸ್ಸು ಆಚರಿಸಿದನು. ತಪಸ್ಸಿನ್ನು ಮಾಡುವ ವೇಳೆಯಲ್ಲಿ, ರಾಕ್ಷಸ ಕುಂಭಾಸುರನು ಋಷಿಗಳನ್ನು ಅಡಚಣೆ ಮಾಡಲು ಪ್ರಾರಂಭಿಸಿದನು. ಭೀಮಸೇನನು ಗಣೇಶನಿಂದ ಕುಂಭಹಾಸುರನನ್ನು ಸಂಹರಿಸಲು ಈ ಪ್ರದೇಶದಲ್ಲಿ ಆಯುಧವನ್ನು ಸ್ವೀಕರಿಸುತ್ತಾನೆ. ಆನೆಗುಡ್ಡೆಯಲ್ಲಿರುವ ದೇವಸ್ಥಾನ ವಿನಾಯಕನಿಗೆ ಅರ್ಪಿತವಾಗಿರುವ ದೇವಾಲಯವಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 5:30 ರಿಂದ ರಾತ್ರಿ 8:30 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕುಂದಾಪುರದಿಂದ ಕುಂಬಾಸಿಗೆ ಬಸ್ ಸೇವೆಗಳು ಲಭ್ಯವಿದೆ. ಕುಂಭಾಸಿಯನ್ನು ತಲುಪಲು ಮಂಗಳೂರಿನಿಂದ ಉಡುಪಿ ಬಸ್ ಮೂಲಕ ತಲುಪಬಹುದಾಗಿದೆ .
ರೈಲಿನ ಮೂಲಕ: ಕುಂದಾಪುರ ರೈಲು ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ.
ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಮೀಪದ ವಿಮಾನ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಪಡುಕೋಣೆ:
ಕುಂದಾಪುರದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಪಡುಕೋಣೆ ಗ್ರಾಮವು ಪ್ರವಾಸಿಗರು ಭೇಟಿ ಮಾಡಬಹುದಾದ ಸ್ಥಳವಾಗಿದ್ದು ಇಲ್ಲಿ ತೆಂಗಿನ ಮರಗಳು, ಕುದ್ರು ಮತ್ತು ಸೌಪರ್ಣಿಕಾ ನದಿಯಿಂದ ಕೂಡಿದ ಪ್ರದೇಶವಾಗಿದೆ.
ತ್ರಾಸಿ ಬೀಚ್:
ಕುಂದಾಪುರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ತ್ರಾಸಿ, ಇಲ್ಲಿಯ ಬೀಚ್, ಬೀಚ್ ರೆಸಾರ್ಟ್ ಮತ್ತು ಟರ್ಟಲ್ ಕೊಲ್ಲಿಗೆ ಪ್ರಸಿದ್ದವಾದ ಪ್ರದೇಶವಾಗಿದೆ.
8.ಶಂಕರನಾರಾಯಣ ದೇವಸ್ಥಾನ (ಉಡುಪಿ ಜಿಲ್ಲೆ)
ದೇವತೆ: ಶಿವ (ಶಂಕರ) ಮತ್ತು ವಿಷ್ಣು (ನಾರಾಯಣ) ರ ಸಂಯೋಜಿತ ರೂಪ
ದೇವಾಲಯದ ಬಗ್ಗೆ:
ಶಂಕರನಾರಾಯಣವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಸ್ಥಳವಾಗಿದೆ . ಶಂಕರನಾರಾಯಣ ದೇವಾಲಯವು ನೀರಿನ ಮೇಲೆ ನಿರ್ಮಾಣ ಮಾಡಿದ್ದು. ಈ ಗ್ರಾಮವನ್ನು ಮೊದಲು ಗೋಳಿಕಟ್ಟೆ ಎಂದು ಕರೆಯುತ್ತಿದ್ದರು, ಶಂಕರ ಮತ್ತು ನಾರಾಯಣ ದೇವರು ನೆಲೆಸಿರುವುದರಿಂದ ಈ ಗ್ರಾಮದ ಹೆಸರನ್ನು ಶಂಕರನಾರಾಯಣ ಎಂದು ಕರೆಯಲಾಯಿತು. ಈಗ ಶಂಕರನಾರಾಯಣ ದೇವಾಲಯವು ತುಂಬಾ ಪ್ರಸಿದ್ದಿಯನ್ನು ಪಡೆದಿದೆ.
ಪ್ರತಿ ವರ್ಷ ಜನವರಿ 16 ರಂದು ಆಚರಣೆ ಮಾಡುವ ವಾರ್ಷಿಕ ಜಾತ್ರೆಯು ಹೆಚ್ಚಿನ ಸಂಖ್ಯೆಯ ಜನರನ್ನುಆಕರ್ಷಿಸುವಂತೆ ಮಾಡುತ್ತದೆ. ಶಂಕರ ಮತ್ತು ನಾರಾಯಣ ದೇವರು ಇಲ್ಲಿ ಒಟ್ಟಿಗೆ ಆರಾಧಿಸಲಾಗುತ್ತದೆ ಮತ್ತು ಸುಮಾರು 15 ಕಿಲೋಮೀಟರ್ ಪ್ರದೇಶದಲ್ಲಿ ಐದು ಶಂಕರನಾರಾಯಣ ದೇವಸ್ಥಾನಗಳಿವೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕುಂದಾಪುರದಿಂದ ಶಂಕರನಾರಾಯಣಕ್ಕೆ ಪ್ರಯಾಣಿಸಲು ಕೆಎಸ್ಆರ್ಟಿಸಿ (ಕರ್ನಾಟಕ) ಬಸ್ ವ್ಯವಸ್ಥೆ ಲಭ್ಯವಿದೆ.
ರೈಲಿನ ಮೂಲಕ: ಈ ದೇವಾಲಯವು ಕುಂದಾಪುರ ರೈಲು ನಿಲ್ದಾಣದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಮಹಾಲಸಾ ನಾರಾಯಣಿ:
ಮಹಾಲಸಾ ನಾರಾಯಣಿ ದೇವಿಗೆ ಸಮರ್ಪಿತವಾದ ಈ ದೇವಾಲಯವು ವಾರಾಹಿ ನದಿಯ ದಡದಲ್ಲಿದೆ ಪ್ರವಾಸಿಗರು ಈ ಪ್ರದೇಶಕ್ಕೂ ಭೇಟಿ ನೀಡಬಹುದಾಗಿದೆ.
ತ್ರಾಸಿ ಬೀಚ್:
ಕುಂದಾಪುರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ತ್ರಾಸಿ, ಇಲ್ಲಿಯ ಬೀಚ್, ಬೀಚ್ ರೆಸಾರ್ಟ್ ಮತ್ತು ಟರ್ಟಲ್ ಕೊಲ್ಲಿಗೆ ಪ್ರಸಿದ್ದವಾದ ಪ್ರದೇಶವಾಗಿದೆ.
9.ಯಾಣ ದೇವಸ್ಥಾನ (ಕುಮಟಾ, ಉತ್ತರ ಕನ್ನಡ ಬಳಿ)
ದೇವತೆ: ಶಿವ
ವಿಶೇಷತೆ : ಬೃಹತ್ ಕಪ್ಪು ಸುಣ್ಣದ ಕಲ್ಲಿನ ಬೆಟ್ಟಗಳ ನಡುವೆ ಇದೆ.
ದೇವಾಲಯದ ಬಗ್ಗೆ:
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಯಾಣದ ದೈತ್ಯಾಕಾರದ ಸ್ಫಟಿಕದಂತಹ ಶಿಲಾ ರಚನೆಗಳು ತುಂಬಾ ಅದ್ಭುತವಾಗಿ ಮತ್ತು ಮುಗಿಲೆತ್ತರಕ್ಕೆ ನಿಂತಿವೆ. ಯಾತ್ರಾರ್ಥಿಗಳು, ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ಯಾನಾ ಸೂಕ್ತ ಸ್ಥಳವಾಗಿದೆ. ತಂಪಾದ ಮತ್ತು ಹಚ್ಚ ಹಸಿರಾದ ಬೆಟ್ಟಗಳ ಮೂಲಕ 16 ಕಿ.ಮೀ. ಚಾರಣವು ನಿಮ್ಮನ್ನು ಪರ್ವತದ ಸಮೀಪಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಶಿಲಾ ರಚನೆಗಳು ಪ್ರಾರಂಭವಾಗುತ್ತವೆ. ಮೇಲ್ಭಾಗದಲ್ಲಿ, ಒಂದು ಅದ್ಭುತ ದೃಶ್ಯವು ನಿಮಗಾಗಿ ಕಾಯುತ್ತಿದೆ. ಅದ್ಭುತವಾದ ಭೈರವೇಶ್ವರ ಮತ್ತು ಜಗನ್ಮೋಹಿನಿ ಶಿಖರಗಳು (ಅಥವಾ ಶಿಖರಗಳು). ಶಿವನಿಗೆ ಅರ್ಪಿತವಾದ ಗುಹಾ ದೇವಾಲಯವು ಈ ಶಿಖರಗಳ ಕೆಳಗೆ ಇದೆ.
ದುಷ್ಟ ರಾಕ್ಷಸನಾದ ಭಸ್ಮಾಸುರನು ಶಿವನಿಗೆ ತಪಸ್ಸು ಮಾಡಿ ಅವನಿಂದ ವರವನ್ನು ಪಡೆದು ಮತ್ತು ಯಾರ ತಲೆಯ ಮೇಲೆ ಕೈ ಇಟ್ಟನೋ ಅವರನ್ನು ಬೂದಿ ಮಾಡುವ ಶಕ್ತಿಯನ್ನು ಪಡೆದನು. ಆದಾಗ್ಯೂ, ಕೃತಜ್ಞತೆಯಿಲ್ಲದ ಭಸ್ಮಾಸುರನು ಶಿವನ ಮೇಲೆ ವರವನ್ನು ಪರೀಕ್ಷಿಸಲು ನಿರ್ಧರಿಸಿದನು. ಅವನಿಂದ ತಪ್ಪಿಸಿಕೊಳ್ಳಲು, ಶಿವನು ಭೂಮಿಗೆ ಬಂದು ಈ ಸ್ಥಳದಲ್ಲಿ ಅಡಗಿಕೊಂಡನು. ವಿಷ್ಣುವು ಸುಂದರಿ ಮೋಹಿನಿಯ ರೂಪವನ್ನು ಧರಿಸಿ, ರಾಕ್ಷಸನಿಗೆ ನೃತ್ಯ ಮಾಡಲು ಸವಾಲು ಹಾಕಿ, ಅವನ ತಲೆಯನ್ನು ತಾನೇ ಮುಟ್ಟುವಂತೆ ಮಾಡಿ, ಅವನನ್ನು ಬೂದಿ ಮಾಡಿ ಸಂಹರಿಸಿದನು ಎಂದು ಪುರಾಣಗಳು ಹೇಳುತ್ತವೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಪ್ರಯಾಣಿಕರು ಸ್ವಂತ ವಾಹನಗಳಲ್ಲಿ ಬೆಂಗಳೂರಿನಿಂದ ಯಾಣಕ್ಕೆ ಸುಗಮವಾದ NH 48 ಮೂಲಕ ಚಾಲನೆ ಮಾಡಬಹುದು, ಇದು ಸುಮಾರು 470 ಕಿ.ಮೀ ಮತ್ತು ರಸ್ತೆಯ ಮೂಲಕ ಸುಮಾರು 9 ಗಂಟೆಗಳ ದೂರದಲ್ಲಿದೆ.
ರೈಲಿನ ಮೂಲಕ: ಯಾಣಕ್ಕೆ ಹತ್ತಿರದ ರೈಲು ನಿಲ್ದಾಣ ಕುಮಟಾ.
ವಿಮಾನದ ಮೂಲಕ: ಗೋವಾದ ಡೆಬೋಲಿಮ್ ವಿಮಾನ ನಿಲ್ದಾಣ
ವಸತಿ : ಕುಮಟಾದಲ್ಲಿ ಹಲವಾರು ಹೋಟೆಲ್ ಆಯ್ಕೆಗಳು ಲಭ್ಯವಿದೆ.
10.ಕೊಡಚಾದ್ರಿ ಬೆಟ್ಟಗಳು – ಸರ್ವಜ್ಞ ಪೀಠ ಮತ್ತು ಮೂಕಾಂಬಿಕಾ ದೇವಸ್ಥಾನದ ಚಾರಣ (ಶಿವಮೊಗ್ಗ ಜಿಲ್ಲೆ)
ಆಧ್ಯಾತ್ಮಿಕ ತಾಣ: ಸರ್ವಜ್ಞ ಪೀಠ (ಶಂಕರಾಚಾರ್ಯರು ಇಲ್ಲಿ ಧ್ಯಾನ ಮಾಡಿದರು)
ವಿಶೇಷತೆ : ಚಾರಣಿಗರು ಮತ್ತು ಭಕ್ತರು ಇಲ್ಲಿ ಆಶೀರ್ವಾದ ಮತ್ತು ಶಾಂತಿಯನ್ನು ಬಯಸುತ್ತಾರೆ.
ದೇವಾಲಯದ ಬಗ್ಗೆ:
ಸರ್ವಜ್ಞ ಪೀಠವು ಆದಿ ಶಂಕರರು ಧ್ಯಾನ ಮಾಡಿದ್ದ ಸ್ಥಳದಲ್ಲಿ ಇರುವಂತಹ ಚಿಕ್ಕ ದೇವಾಲಯದ ನಿರ್ಮಾಣವಾಗಿದೆ. ಈ ದೇವಾಲಯವು ಸರ್ವಜ್ಞಪೀಠವನ್ನು ಹೋಲುವ ರೀತಿಯಲ್ಲಿಯೇ ಇರುವುದರಿಂದ ಇದನ್ನು ಸರ್ವಜ್ಞ ಪೀಠ ಎನ್ನಲಾಗುತ್ತದೆ, ಮತ್ತು ಈ ಪೀಠವನ್ನು ಜಮ್ಮು ಮತ್ತು ಕಾಶ್ಮೀರದ ಶಾರದಾ ಪೀಠ ಎಂದೂ ಕೂಡ ಹೇಳಲಾಗುತ್ತದೆ. ಆದಿ ಶಂಕರರು ಆಧ್ಯಾತ್ಮಿಕ ಪ್ರಯಾಣದ ಅವಧಿಯಲ್ಲಿ ಇಲ್ಲಿ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತದೆ, ಆದಿ ಶಂಕರರು ತಾತ್ವಿಕ ಚರ್ಚೆಯನ್ನು ನಡೆಸಿ ಇತರ ವಿದ್ವಾಂಸರನ್ನು ಸೋಲಿಸಿ ದೇವಸ್ಥಾನದ ದಕ್ಷಿಣ ದ್ವಾರ ಬಾಗಿಲನ್ನು ತೆರೆದರು. ಇನ್ನೊಂದು ದೇವಾಲಯವು ಪ್ರಯಾಣಿಕರ ಬಂಗಲೆಯ ಹತ್ತಿರ ಇದೆ ಮತ್ತು ಈ ಪ್ರದೇಶವು ಶ್ರೀ ಮೂಕಾಂಬಿಕಾ ದೇವಿಯ ಮೂಲ ಸ್ಥಾನವಾಗಿದೆ .
ಶಿಖರದ ಕೆಲ ಭಾಗದಲ್ಲಿ ಬಹುತೇಕ ಮಾರ್ಗವು ಚಿತ್ರಮೂಲ ಎಂಬ ಸಣ್ಣ ಗುಹೆ ಕಾಣಬಹುದು, ಆ ಪ್ರದೇಶದಿಂದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ ಕಾಣಬಹುದಾಗಿದೆ. ಚಿತ್ರಮೂಲಕ್ಕೆ ತಲುಪುವ ದಾರಿಯನ್ನು ಅರಣ್ಯ ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಈಗ ಪ್ರವಾಸಿಗರು ಸರ್ವಜ್ಞಪೀಠಕ್ಕೆ ಮಾತ್ರ ಭೇಟಿ ನೀಡಬಹುದಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ ನಿಂದ ಫೆಬ್ರವರಿಯಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕೊಡಚಾದ್ರಿಯ ಬೆಟ್ಟದ ಸರ್ವಜ್ಞ ದೇವಸ್ಥಾನಕ್ಕೆ ಹತ್ತಿರದ ಬಸ್ ನಿಲ್ದಾಣ ಕೊಲ್ಲೂರು, ಇದು ದೇವಾಲಯದಿಂದ ಸುಮಾರು 20 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದು.
ರೈಲಿನ ಮೂಲಕ: ಕೊಡಚಾದ್ರಿ ಬೆಟ್ಟ ಸರ್ವಜ್ಞ ದೇವಸ್ಥಾನಕ್ಕೆ ಹತ್ತಿರದ ರೈಲು ನಿಲ್ದಾಣ ಕುಂದಾಪುರ ಸುಮಾರು 49 ಕಿಲೋಮೀಟರ್ ದೂರದಲ್ಲಿದೆ.
ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ನಿಲ್ದಾಣ.