ಉತ್ತರ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು
1.ಬಾದಾಮಿ ಗುಹೆ ದೇವಾಲಯಗಳು (ಬಾಗಲಕೋಟೆ ಜಿಲ್ಲೆ)
ಸ್ಥಳ: ಬಾದಾಮಿ, ಬಾಗಲಕೋಟೆ ಜಿಲ್ಲೆ
ದೇವಾಲಯದ ಬಗ್ಗೆ:
ಭಾರತದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಹಿಂದೂ ಮತ್ತು ಜೈನ ಗುಹಾ ದೇವಾಲಯಗಳ ತಾಣವಾಗಿದ್ದು .ಈ ಗುಹೆಗಳು ಬಂಡೆಕಲ್ಲುಗಳಿಂದ ಕೊರೆದು ನಿರ್ಮಾಣ ಮಾಡಿರುವುದರಿಂದ ಭಾರತದಲ್ಲಿನ ವಾಸ್ತುಶಿಲ್ಪದ ವಿಶೇಷವಾಗಿ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ಕೊಡುಗೆಗಳಾಗಿವೆ. ಅವುಗಳಲ್ಲಿ ಕೆಲವು 6 ನೇ ಶತಮಾನದ್ದಾಗಿದ್ದು ಚಾಲುಕ್ಯರ ಮನಮೋಹಕ ವಾಸ್ತು ಶಿಲ್ಪವನ್ನು ಕಾಣಬಹುದಾಗಿದೆ. ಬಾದಾಮಿಯನ್ನು ಹಿಂದೆ ವಾತಾಪಿ ಎಂದು ಚಾಲುಕ್ಯರ ಕಾಲದಲ್ಲಿ ಕರೆಯಲಾಗುತ್ತಿತ್ತು, ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೆ ಕರ್ನಾಟಕದ ಬಹುಭಾಗವನ್ನು ಆಳಿದ ಚಾಲುಕ್ಯ ರಾಜವಂಶದ ರಾಜಧಾನಿಯಾಗಿ ಕಂಗೊಳಿಸಿದ ಸ್ಥಳವಾಗಿದ್ದು ಚಾಲುಕ್ಯರ ಅದ್ಭುತವಾದ ವಾಸ್ತು ಶಿಲ್ಪವನ್ನು ಪ್ರವಾಸಿಗರು ಕಾಣಬಹುದಾಗಿದೆ.
ಬಾದಾಮಿ ಗುಹಾ ದೇವಾಲಯಗಳ ನಿರ್ಮಾಣವು ಬೆಟ್ಟದ ಬಂಡೆಯ ಮೇಲೆ ಮೃದುವಾದ ಬಾದಾಮಿ ಮರಳುಗಲ್ಲಿನಿಂದ ತುಂಬಾ ಸುಂದರವಾಗಿ ಕೆತ್ತಲಾಗಿದೆ .ನಾಲ್ಕು ಗುಹೆಗಳಲ್ಲಿ ಪ್ರತಿಯೊಂದು ಗುಹೆಗಳಲ್ಲಿ ಕಲ್ಲಿನ ಕಂಬಗಳು ಮತ್ತು ವರಾಂಡಾ ಹೊಂದಿರುವ ಪ್ರವೇಶದ್ವಾರವನ್ನು ಕಾಣಬಹುದಾಗಿದೆ.
ದೇವಾಲಯದ ಒಳಭಾಗದ ಗೋಡೆಗಳಲ್ಲಿ ಭಾಗವತ ಪುರಾಣದಂತಹ ಹಿಂದೂ ಗ್ರಂಥಗಳ ಕಥೆಗಳನ್ನು ಚಿತ್ರಿಸಲಾಗಿದೆ. ಇವು ಬ್ರಹ್ಮಾಂಡದ ಸಾಗರ ಮಂಥನದ ದಂತಕಥೆ ಮತ್ತು ಕೃಷ್ಣನ ಜನನ ಮತ್ತು ಕೊಳಲು ನುಡಿಸುವಿಕೆಯನ್ನು ಚಿತ್ರಿಸುವ ಆಕೃತಿಗಳಾಗಿವೆ, ಈ ಗುಹೆಗಳಲ್ಲಿ ಇನ್ನು ಹಲವಾರು ರೀತಿಯ ಕಲೆಗಳನ್ನು ಕಾಣಬಹುದಾಗಿದೆ ಅವುಗಳೆಂದರೆ ಛಾವಣಿ ಮತ್ತು ಬಾಗಿಲಿನ ತಲೆಯ ಕೆತ್ತನೆಗಳು ಗಜಲಕ್ಷ್ಮಿ , ಸ್ವಸ್ತಿಕ ಚಿಹ್ನೆಗಳು, ಹಾರುವ ದಂಪತಿಗಳು, ಬ್ರಹ್ಮ, ವಿಷ್ಣು ಶೇಷ ಮತ್ತು ಇತರರ ಮೇಲೆ ನಿದ್ರಿಸುತ್ತಿರುವುದನ್ನು ಈ ಗುಹೆಗಳಲ್ಲಿ ಕಾಣಬಹುದಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಈ ಗುಹಾಲಯಗಳು ಬೆಳ್ಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ.
ತಲುಪುವುದು ಹೇಗೆ:
ವಿಮಾನದ ಮೂಲಕ:
1) ಬೆಳಗಾವಿ ಏರ್ ಪೋರ್ಟ್ ಬಾಗಲಕೋಟೆ – ಬಾದಾಮಿ
2) ಹುಬ್ಬಳ್ಳಿ ಏರ್ ಪೋರ್ಟ್ ಬಾಗಲಕೋಟೆ – ಬಾದಾಮಿ
ರೈಲಿನ ಮೂಲಕ: ರೈಲಿನ ಹೆಸರು:
1) ಹುಬ್ಬಳ್ಳಿಯಿಂದ ಬಾಗಲಕೋಟೆಗೆ-
UBL SUR PASS ರೈಲು ಸಂಖ್ಯೆ:56906
2) ಬೆಂಗಳೂರಿನಿಂದ ಬಾಗಲಕೋಟೆಗೆ-
ರೈಲಿನ ಹೆಸರು: BASAVA EXPRESS ರೈಲು ಸಂಖ್ಯೆ:17307
ರಸ್ತೆಯ ಮೂಲಕ:
1) ಹುಬ್ಬಳ್ಳಿಯಿಂದ ಬಾಗಲಕೋಟ NH52 ಮೂಲಕ 122.6 ಕಿಮೀ ದೂರದಲ್ಲಿದೆ
2) ಬಿಜಾಪುರದಿಂದ ಬಾಗಲಕೋಟ 83.8 ಕಿಮೀ NH52 ಮೂಲಕ ದೂರದಲ್ಲಿದೆ
3) ಬೆಳಗಾವಿಯಿಂದ ಬಾಗಲಕೋಟ 140.5 ಕಿಮೀ ಬಾಚಿ – ರಾಯಚೂರು ಹೆದ್ದಾರಿ ದೂರದಲ್ಲಿದೆ
4) ಬೆಂಗಳೂರಿನಿಂದ ಬಾಗಲಕೋಟೆ NH 48 ಮೂಲಕ 529.0 ಕಿಮೀ ದೂರದಲ್ಲಿದೆ
- 2. ಪಟ್ಟದಕಲ್ಲು ದೇವಾಲಯಗಳ ಗುಂಪು
ಸ್ಥಳ: ಬಾಗಲಕೋಟೆ ಜಿಲ್ಲೆ
ರಾಜವಂಶ: ಚಾಲುಕ್ಯ
ದೇವಾಲಯದ ಬಗ್ಗೆ:
ಪಟ್ಟದಕಲ್ಲು ಇದನ್ನು ರಕ್ತಪುರ ಎಂದೂ ಕರೆಯಲಾಗುತ್ತದೆ, ಇದು ಭಾರತದ ಉತ್ತರ ಕರ್ನಾಟಕದ 7 ನೇ ಮತ್ತು 8 ನೇ ಶತಮಾನದ CE ಹಿಂದೂ ಮತ್ತು ಜೈನ ದೇಗುಲಗಳ ತಾಣವಾಗಿದೆ. ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ಪಶ್ಚಿಮ ದಂಡೆಯಲ್ಲಿರುವ ಈ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಬಾದಾಮಿಯಿಂದ 23 ಕಿಲೋಮೀಟರ್ ಮತ್ತು ಐಹೊಳೆಯಿಂದ ಸುಮಾರು 9.7 ಕಿಲೋಮೀಟರ್ ದೂರದಲ್ಲಿದೆ ಭೇಟಿ ಮಾಡಬಹುದಾದ ಪ್ರವಾಸಿ ತಾಣವಾಗಿದೆ, ಈ ಎರಡು ಸ್ಥಳಗಳು ಚಾಲುಕ್ಯ ಸ್ಮಾರಕಗಳ ಪುರಾತನ ಶಿಲ್ಪಕಲಾ ತಾಣಗಳಾಗಿವೆ. ಈ ಸ್ಮಾರಕವು ಭಾರತೀಯ ಕಾನೂನಿನ ಅಡಿಯಲ್ಲಿ ಸುರಕ್ಷಿತವಾದ ಸ್ಥಳವಾಗಿದೆ ಮತ್ತು ಇದನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಿರ್ವಹಣೆ ಮಾಡುತ್ತ ಬಂದಿದೆ.
ಜೈನ ದೇವಾಲಯವನ್ನು ಸ್ಮಾರಕಗಳ ಗುಂಪಿನಲ್ಲಿ ಕೊನೆಯದಾಗಿ ನಿರ್ಮಾಣವನ್ನು ಮಾಡಲಾಗಿರುವ ದೇವಾಲಯವಾಗಿದೆ, ಇದು ಜೈನ ನಾರಾಯಣ ದೇವಾಲಯವೆಂದೆ ಪ್ರಸಿದ್ದಿಯಾಗಿದೆ, ಎರಡನೇ ಕೃಷ್ಣನ ಇದನ್ನು ಬಹುಶಃ 9 ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಇದರ ನಿರ್ಮಾಣ ಶೈಲಿಯು ಕಾಂಚೀಪುರಂನಲ್ಲಿರುವ ಕೈಲಾಸನಾಥ ದೇಗುಲದ ಶೈಲಿಯನ್ನು ಹೋಲುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ರಾಜ್ಯ ಸಾರಿಗೆ ಬಸ್ಸುಗಳು ಬಾಗಲಕೋಟೆ ಮತ್ತು ಹುಬ್ಬಳ್ಳಿಯಿಂದ ನಿಯಮಿತವಾಗಿ ಕಾರ್ಯನಿರ್ವಹಿಸುತ್ತವೆ.
ರೈಲಿನ ಮೂಲಕ: ಬಾದಾಮಿ ರೈಲು ನಿಲ್ದಾಣ 22 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ: ಹುಬ್ಬಳ್ಳಿ ವಿಮಾನ ನಿಲ್ದಾಣ ಸರಿಸುಮಾರು 130 ಕಿ.ಮೀ ದೂರದಲ್ಲಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಜೈನ ದೇವಾಲಯ:
ಈ ಜೈನ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಶೈಲಿಯ ರೀತಿಯಲ್ಲಿಯೆ ಮಾಡಲ್ಪಟ್ಟಿವೆ, ವಿವಿಧ ಸುಂದರ ಮತ್ತು ಸಂಕೀರ್ಣವಾದ ವಾಸ್ತುಶಿಲ್ಪವನ್ನು ನೋಡಬಹುದು.
ಸಂಗಮೇಶ್ವರ ದೇವಸ್ಥಾನ:
ಭಾರತದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವ ಇದನ್ನು ಕ್ರಿ.ಶ. 696 ಮತ್ತು 733 ರ ನಡುವೆ ಚಾಲುಕ್ಯ ರಾಜ ವಿಜಯಾದಿತ್ಯ ಸತ್ಯಾಶ್ರಯ ನಿರ್ಮಾಣವನ್ನು ಮಾಡಿದ್ದಾನೆ . ದ್ರಾವಿಡ ವಾಸ್ತುಶಿಲ್ಪವನ್ನು ಚಿತ್ರಿಸುವ ಇದನ್ನು ವಿಜಯೇಶ್ವರ ದೇವಾಲಯ ಎಂದು ಪ್ರಸಿದ್ಧಿಯಾಗಿತ್ತು.
3.ಐಹೊಳೆ ದೇವಾಲಯಗಳು (ಬಾಗಲಕೋಟೆ ಜಿಲ್ಲೆ)
ದುರ್ಗಾ ದೇವಾಲಯ, ಐಹೊಳೆ
ರಾಜವಂಶ: ಚಾಲುಕ್ಯ
ದೇವಾಲಯದ ಬಗ್ಗೆ:
ದುರ್ಗಾ ದೇವಸ್ಥಾನವು ಭಾರತದ ಕರ್ನಾಟಕದ ಐಹೊಳೆಯಲ್ಲಿರುವ 8 ನೇ ಶತಮಾನದ ಪ್ರಾರಂಭದ ಧಾರ್ಮಿಕ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಸೂರ್ಯನಿಗೆ ಅರ್ಪಿತವಾದ ಇದು ಐಹೊಳೆಯಲ್ಲಿ ಶೈವ ಧರ್ಮ, ವೈಷ್ಣವ ಧರ್ಮ, ಶಕ್ತಿ ಧರ್ಮ ಮತ್ತು ವೈದಿಕ ದೇವತೆಗಳ ಕಲಾಕೃತಿಯನ್ನು ಪ್ರತಿಬಿಂಬಿಸುವ ಅದ್ಬುತ ಮತ್ತು ದೊಡ್ಡ ಉಬ್ಬು ಫಲಕಗಳನ್ನು ಕಾಣಬಹುದಾಗಿದೆ. ಆರಂಭಿಕ ಚಾಲುಕ್ಯರ ಹಿಂದೂ ದೇವಾಲಯದ ವಾಸ್ತುಶಿಲ್ಪ ಬಹು ಅಪರೂಪವಾಗಿದೆ.
ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ ದೇವಾಲಯದ ಸುತ್ತಲೂ ನಿರ್ಮಾಣ ಮಾಡಿರುವ ಪೆರಿಸ್ಟೈಲ್ ಮತ್ತು ಅದರ ಗೋಡೆಗಳ ಮೇಲೆ ವಿಭಿನ್ನ ದೇವರುಗಳನ್ನು ಶಿಲ್ಪಗಳಿಂದ ಚಿತ್ರಿಸಲಾಗಿದೆ.
ಮಧ್ಯಕಾಲೀನ ಯುಗದಲ್ಲಿ ಐಹೊಳೆ ಆರಂಭದ ಪ್ರಮುಖ ಸ್ಥಳವಾಗಿತ್ತು ಮತ್ತು ಹಿಂದೂ ಕಲೆಗಳನ್ನು ಇಲ್ಲಿಯೆ ಪ್ರಯೋಗಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿತ್ತು, ಮುಖ್ಯವಾಗಿ ದೇವಾಲಯ ವಾಸ್ತುಶಿಲ್ಪಕ್ಕೆ ತೊಟ್ಟಿಲು ಇದಾಗಿತ್ತು ಎಂದು ಹೇಳಬಹುದಾಗಿದೆ. ಐಹೊಳೆ ಪ್ರದೇಶದ ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳು ಹಿಂದೂ ಧರ್ಮದ ದೇವತಾಶಾಸ್ತ್ರವನ್ನು ಕಲ್ಲಿನಲ್ಲಿ ರಚಿಸಲು 16 ರೀತಿಯ ದೇವಾಲಯಗಳು ಮತ್ತು 4 ವಿಧದ ಶಿಲಾ-ಕೆತ್ತನೆಯ ದೇಗುಲಗಳ ಮಾದರಿಗಳನ್ನು ರಚನೆಯನ್ನು ಮಾಡಿದ್ದಾರೆ. ಐಹೊಳೆಯಲ್ಲಿ ಜೈನ ಸ್ಮಾರಕಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ ಮತ್ತು ಉಬ್ಬು ಕಲಾಕೃತಿಗಳು ಮುಖ್ಯವಾಗಿ ಹಿಂದುಧರ್ಮದ್ದೇ ಆಗಿರುವುದನ್ನು ಕಾಣಬಹುದಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಐಹೊಳೆಗೆ ಹತ್ತಿರದ ಪಟ್ಟಣ ಬಾದಾಮಿ, ರಸ್ತೆಯ ಮೂಲಕ 40 ನಿಮಿಷಗಳ ದೂರದಲ್ಲಿ ತಲುಪಬಹುದಾಗಿದೆ.
ರೈಲಿನ ಮೂಲಕ: ಬಾದಾಮಿ ಐಹೊಳೆಗೆ ಹತ್ತಿರದ ರೈಲು ನಿಲ್ದಾಣವಾಗಿದೆ.
ವಿಮಾನದ ಮೂಲಕ: ಹುಬ್ಬಳ್ಳಿ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ರಾವಣ ಫಾದಿ ಗುಹಾಲಯ : ಐಹೊಳೆಯ ಅತ್ಯಂತ ಪ್ರಾಚೀನ ಶಿಲಾ ಕೆತ್ತನೆಯ ಗುಹಾ ದೇವಾಲಯವಾಗಿದೆ, ಇದು 6 ನೇ ಶತಮಾನದಷ್ಟು ಹಿಂದಿನದು.
ಪುರಾತತ್ವ ವಸ್ತು ಸಂಗ್ರಾಹಾಲಯ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆಸಿ ಕೊಡಲಾಗುತ್ತಿರುವ ವಸ್ತು ಸಂಗ್ರಹಾಲಯವು ದುರ್ಗಾ ದೇವಾಲಯ ಇರುವ ಸ್ಥಳದಲ್ಲಿ ವೀಕ್ಷಿಸಬಹುದಾಗಿದೆ.
- ಬನಶಂಕರಿ ದೇವಿ ದೇವಾಲಯ (ಬಾಗಲಕೋಟೆ ಜಿಲ್ಲೆಯ ಬಾದಾಮಿ):
ದೇವಾಲಯದ ಬಗ್ಗೆ:
ಬನಶಂಕರಿ ದೇವಿ ದೇವಾಲಯವು ಭಾರತದ ಕರ್ನಾಟಕ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿಯ ಚೋಳಚಗುಡ್ಡದಲ್ಲಿರುವ ಒಂದು ಪ್ರಸಿದ್ಧ ಹಿಂದೂ ಧಾರ್ಮಿಕ ದೇವಾಲಯವಾಗಿದೆ. ಈ ದೇವಸ್ಥಾನವು ತಿಲಕಾರಣ್ಯ ಅರಣ್ಯದಲ್ಲಿ ದೇವಿ ಇರುವುದರಿಂದ ಈ ದೇವಾಲಯವನ್ನು ‘ಬನಶಂಕರಿ’ ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿರುವ ದೇವತೆಯನ್ನು ಪಾರ್ವತಿ ದೇವಿಯ ಅವತಾರವಾದ ಶಾಕಂಭರಿ ಎಂದೂ ಕೂಡ ಪೂಜಿಸುತ್ತಾರೆ.
ಬನಶಂಕರಿಯ ಮೂಲ ದೇವಾಲಯವನ್ನು 7 ನೇ ಶತಮಾನದ ಬಾದಾಮಿ ಚಾಲುಕ್ಯ ರಾಜರು ತಮ್ಮ ಆಡಳಿತದ ಅವಧಿಯಲ್ಲಿ ನಿರ್ಮಿಸಿದರು, ಬಾದಾಮಿ ಚಾಲುಕ್ಯರು ಬನಶಂಕರಿ ದೇವಿಯನ್ನು ತಮ್ಮ ಆರಾಧ್ಯ ದೇವತೆಯಾಗಿ ಆರಾಧಿಸುತ್ತಿದ್ದರು. ಈ ದೇವಸ್ಥಾನವು ಬಹಳ ವಿಜೃಂಭಣೆಯಿಂದ ಜನವರಿ ಅಥವಾ ಫೆಬ್ರವರಿ ಅವಧಿಯಲ್ಲಿ ಬನಶಂಕರಿ ಜಾತ್ರೆ ಎಂಬ ವಾರ್ಷಿಕ ಉತ್ಸವವನ್ನು ಆಚರಿಸಿಕೊಳ್ಳುತ್ತ ಬಂದಿದೆ.
ಬನಶಂಕರಿ ದೇವಸ್ಥಾನದ ಸಮಯ:
ದೇವರ ದರ್ಶನಕ್ಕಾಗಿ ಬೆಳ್ಳಿಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನೀಡಲಾಗುತ್ತದೆ. ಪೂಜಾ ಸಮಯವನ್ನು ಪ್ರತಿದಿನ ಮೂರು ಅವಧಿಗಳಾಗಿ ಮಾಡಲಾಗಿದೆ. ಮೊದಲನೆ ಅವಧಿಯಲ್ಲಿ ಪ್ರತಿದಿನ ನಡೆಯುವ ಅಭಿಷೇಕಕ್ಕಾಗಿ. ಮತ್ತು ಉಳಿದ ಎರಡು ಅವಧಿಯಲ್ಲಿ ಕ್ರಮವಾಗಿ ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮತ್ತು ದರ್ಶನಕ್ಕಾಗಿ ನೀಡಲಾಗುತ್ತದೆ. ಅಭಿಷೇಕವನ್ನು ಮುಂಜಾನೆ 6:30 ರಿಂದ 8:30 ರವರೆಗೆ ನೆರವೇರಿಸಲಾಗುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಬಾಗಲಕೋಟೆ ಮತ್ತು ಬಾದಾಮಿಯಿಂದ ಐಹೊಳೆಗೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸೌಲಭ್ಯ ದೊರೆಯುತ್ತದೆ.
ರೈಲಿನ ಮೂಲಕ: ಬಾದಾಮಿ ಮತ್ತು ಬಾಗಲಕೋಟೆ ರೈಲ್ವೆ ನಿಲ್ದಾಣದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿವೆ
ವಿಮಾನದ ಮೂಲಕ: ಐಹೊಳೆ ಮತ್ತು ಬಾಗಲಕೋಟೆಗೆ ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿ ವಿಮಾನ ನಿಲ್ದಾಣವಾಗಿದೆ .
ಬಾದಾಮಿಯ ಹತ್ತಿರದ ಸ್ಥಳಗಳು:
ಗುಹೆ 1
ಬಾದಾಮಿ ಬಸ್ ನಿಲ್ದಾಣದಿಂದ 1 ಕಿ.ಮೀ ಅಂತರದಲ್ಲಿರುವ ಗುಹೆ 1 ಕರ್ನಾಟಕದ ಬಾದಾಮಿಯಲ್ಲಿರುವ ಒಂದು ಅದ್ಬುತ ಕೆತ್ತಿದ ಗುಹೆಯಾಗಿದ್ದು ಪ್ರವಾಸಿಗರು ಭೇಟಿ ನೀಡಬಹುದಾದ ಸ್ಥಳವಾಗಿದೆ.
ಭೂತನಾಥ ದೇವಾಲಯ :
ಬಾದಾಮಿ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಭೂತನಾಥ ದೇವಾಲಯವು ಬಾದಾಮಿ ವಸ್ತುಸಂಗ್ರಹಾಲಯದ ಮುಂಭಾಗದ ಅಗಸ್ತ್ಯ ಸರೋವರದ ದಡದಲ್ಲಿ ಕಾಣಸಿಗುವ ಒಂದು ದೇವಾಲಯವಾಗಿದೆ.
ಅಗಸ್ತ್ಯ ಸರೋವರ:
ಬಾದಾಮಿ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ಅಗಸ್ತ್ಯ ಸರೋವರ, ಗುಹೆ ದೇವಾಲಯಗಳ ಕೆಳಗೆ ಇರುವ ಒಂದು ವಿಶೇಷ ಸರೋವರವಾಗಿದೆ. 5 ನೇ ಶತಮಾನದಲ್ಲಿ ನಿರ್ಮಾಣವಾದ ಈ ಸರೋವರವು ಅದರ ನೀರಿನಲ್ಲಿ ಆರೋಗ್ಯಕರ ಶಕ್ತಿಯಿಂದಾಗಿ ಪವಿತ್ರವೆಂದು ಪರಿಗಣಿಸಲಾಗಿದೆ.
5.ಮಹಾದೇವ ದೇವಾಲಯ, ಇಟಗಿ
ಸ್ಥಳ: ಕೊಪ್ಪಳ ಜಿಲ್ಲೆ
ರಾಜವಂಶ: ಪಶ್ಚಿಮ ಚಾಲುಕ್ಯ
ದೇವಾಲಯದ ಬಗ್ಗೆ:
ಮಹಾದೇವ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಇರುವ ದೇವಾಲಯವಾಗಿದೆ. ಇದು ಕುಕನೂರಿನಿಂದ ಸುಮಾರು 7 ಕಿ.ಮೀ ಮತ್ತು ಲಕ್ಕುಂಡಿಯಿಂದ 20 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ.
ಇಟಗಿಯಲ್ಲಿರುವ ಮಹಾದೇವ ದೇವಸ್ಥಾನವನ್ನು ಪಶ್ಚಿಮ ಚಾಲುಕ್ಯ ೪ನೇ ರಾಜ ವಿಕ್ರಮಾದಿತ್ಯನ ಸೈನ್ಯದಲ್ಲಿ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಾದೇವನು ಸುಮಾರು 1112 CE ಯಲ್ಲಿ ನಿರ್ಮಾಣವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಇಟಗಿ ಗದಗದಿಂದ ಪೂರ್ವಕ್ಕೆ ಸುಮಾರು 35 ಕಿಮೀ ಮತ್ತು ಹಂಪಿಯಿಂದ ಪಶ್ಚಿಮಕ್ಕೆ 64 ಕಿಮೀ ದೂರದಲ್ಲಿದೆ. ಈ ದೇವಸ್ಥಾನವು ಒಂದು ಹಿಂದೂ ಶಿವನ ದೇಗುಲವಾಗಿದೆ. ಉತ್ತಮವಾಗಿ ರಚಿಸಲಾದ ಶಿಲ್ಪಗಳು, ಗೋಡೆಗಳು, ಕಂಬಗಳು ಮತ್ತು ಗೋಪುರದ ಮೇಲೆ ಸೂಕ್ಷ್ಮವಾಗಿ ಕೆತ್ತಲಾದ ಕೆತ್ತನೆಗಳು ಇವು ಸಂಪೂರ್ಣ ಪಾಶ್ಚಿಮಾತ್ಯ ಚಾಲುಕ್ಯ ಕಲೆಯ ಉತ್ತಮ ವಾಸ್ತುಶಿಲ್ಪವಾಗಿದೆ, ಇದು ಚಾಲುಕ್ಯ ಕುಶಲಕರ್ಮಿಗಳ ತುಂಬಾ ಪ್ರತಿಭಾವಂತರಾಗಿದ್ದರು ಎಂಬುದನ್ನು ಕಾಣಬಹುದಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಈ ದೇವಾಲಯವು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಿಂದ ಅವು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳಿಂದ 36, 130, 59, 63 ಕೊಪ್ಪಳದಲ್ಲಿ ಸಂಧಿಸುತ್ತವೆ.
ರೈಲಿನ ಮೂಲಕ: ಹತ್ತಿರದ ರೈಲ್ವೆ ನಿಲ್ದಾಣಗಳು ಭಾನಾಪುರ್, ಬನ್ನಿಕೊಪ್ಪ , ಕೊಪ್ಪಳ ನಿಲ್ದಾಣಗಳಾಗಿವೆ.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ 72.3 ಕಿಮೀ ದೂರದಲ್ಲಿದೆ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ 123.4 ಕಿಮೀ ದೂರದಲ್ಲಿದೆ.
6.ದತ್ತಾತ್ರೇಯ ದೇವಸ್ಥಾನ, ಗಾಣಗಾಪುರ (ಕಲಬುರಗಿ ಜಿಲ್ಲೆ)
ದೇವಾಲಯದ ಬಗ್ಗೆ :
ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಅಫ್ಜಲ್ಪುರ ತಾಲ್ಲೂಕಿನಲ್ಲಿ ಭೀಮಾ ನದಿಯ ದಡದಲ್ಲಿರುವ ದೇವಾಲಯವಾಗಿದೆ . ಇಲ್ಲಿರುವ ನಿರ್ಗುಣ ಮಠ ಶ್ರೀ ನರಸಿಂಹ ಸರಸ್ವತಿ ಸ್ವಾಮಿಯ ಪಾದುಕೆಗಳು ಇಲ್ಲಿ ಇವೆ. ಭೀಮಾ ಮತ್ತು ಅಮರರಾಜ ನದಿಗಳ ಸಂಗಮ ನೀರನ್ನು ಅತ್ಯಂತ ಪವಿತ್ರವೆಂದು ಹೇಳಲಾಗುತ್ತದೆ.
ಈ ದೇವಾಲಯದಲ್ಲಿ ಪೂಜಿಸಲ್ಪಡುವ ಶ್ರೀ ನರಸಿಂಹ ಸರಸ್ವತಿ ಸ್ವಾಮಿಯ ಪಾದುಕೆಗಳು ಕಂದು-ಕೆಂಪು ಬಣ್ಣದಲ್ಲಿ ಇದ್ದು. ಅವು ಕಲ್ಲಿನಿಂದ ತಯಾರಿಸಿರುವುದೂ ಅಥವಾ ಮರದಿಂದ ತಯಾರಿಸಿರಬಹುದು ಎಂಬುವುದು ತಿಳಿದಿಲ್ಲ. ಪಾದುಕೆಗಳನ್ನು ಸ್ಪರ್ಶಿಶಿದಾಗ ಅವು ಮಾನವ ದೇಹದ ಅಂಗಗಳಂತೆ ಮೃದುವಾಗಿರುವುದು ಕಂಡುಬರುತ್ತದೆ. ಶ್ರೀ ಶೈಲಂ ಬಳಿಯ ಕರ್ದಲಿ ವನಕ್ಕೆ ಹೋಗುವುದಕ್ಕಿಂತ ಮೊದಲು ಶ್ರೀ ನರಸಿಂಹರು ಅವುಗಳನ್ನು ಇಲ್ಲಿಯೇ ಬಿಟ್ಟು ಹೋದರು ಎಂದು ನಂಬಲಾಗುತ್ತದೆ. ಕರ್ದಲಿ ವನವು ಶ್ರೀ ನರಸಿಂಹರು ತಮ್ಮ ಐಹಿಕ ದೇಹವನ್ನು ತ್ಯಜಿಸಿ ಪರಬ್ರಹ್ಮದೊಂದಿಗೆ ಐಕ್ಯವಾದ ಪ್ರದೇಶ ಇದಾಗಿದೆ.
ಶ್ರೀ ಗುರುಚರಿತ್ರ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಶ್ರೀ ನರಸಿಂಹರು ಗಾಣಗಾಪುರದಲ್ಲಿ ನಿರಂತರವಾಗಿ ಇಲ್ಲಿಯೆ ನೆಲೆಸುವುದಾಗಿ ಜನರಿಗೆ ಪ್ರತಿಜ್ಞೆ ಮಾಡಿ ಹೇಳಿದ್ದರು ಎಂದು ಹೇಳಲಾಗುತ್ತದೆ. ಮುಂಜಾನೆಯ ವೇಳೆಯಲ್ಲಿ ಅವರು ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿ ತಮ್ಮ ಸ್ನಾನ ಕಾರ್ಯವನ್ನು ಮುಗಿಸಿ, ನಂತರ ಮಧ್ಯಾಹ್ನ ಅವರು ಭಿಕ್ಷೆ ಕೇಳುತ್ತಾ ಹಳ್ಳಿಗಳಲ್ಲಿ ತಿರುಗಾಡುತ್ತ ಆಹಾರವನ್ನು ಸಂಗ್ರಹ ಮಾಡುತಿದ್ದರು ಮತ್ತು ದೇವಾಲಯದಲ್ಲಿ ನಿರ್ಗುಣ ಪಾದುಕೆ ರೂಪದಲ್ಲಿ ಇಂದಿಗೂ ಪೂಜಿಸಲಾಗುತ್ತಿದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಗುಲ್ಬರ್ಗದಿಂದ 40 ಕಿ.ಮೀ ದೂರದಲ್ಲಿರುವ ಗಾಣಗಾಪುರವು ಎಲ್ಲಾ ಪ್ರಮುಖ ನಗರಗಳಿಗೆ ರಸ್ತೆ ಮಾರ್ಗವನ್ನು ಹೊಂದಿದೆ.
ರೈಲಿನ ಮೂಲಕ: ರೈಲ್ವೆ ಸ್ಟೇಷನ್ ಗಾಣಗಾಪುರ ರಸ್ತೆ’ ಯಿಂದ ವಿಶ್ವರೂಪ ದತ್ತ ಕ್ಷೇತ್ರ ಇರುವ ಗಾಣಗಾಪುರ ಪಟ್ಟಣಕ್ಕೆ ರಸ್ತೆಯ ಮೂಲಕ ಸುಮಾರು 20 ನಿಮಿಷಗಳ ಪ್ರಯಾಣ.
ವಿಮಾನದ ಮೂಲಕ: ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಾಲಯಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕಲಬುರಗಿ ವಿಮಾನ ನಿಲ್ದಾಣ, ಈ ನಿಲ್ದಾಣವು 52 ಕಿಲೋಮೀಟರ್ ದೂರದಲ್ಲಿದೆ.
ಗಂಗಾಪುರ ದತ್ತಾತ್ರೇಯ ದೇವಸ್ಥಾನದ ವಸತಿ:
ಗಂಗಾಪುರದಲ್ಲಿ ಭಕ್ತರು ತಂಗಲು ಖಾಸಗಿ ಹೋಟೆಲ್ಗಳು ಮತ್ತು ವಸತಿಗೃಹಗಳು ಸೌಲಭ್ಯ ದೊರೆಯುತ್ತದೆ. ಗಂಗಾಪುರ ಒಂದು ಚಿಕ್ಕ ಹಳ್ಳಿಯಾಗಿರುವುದರಿಂದ, ಉನ್ನತ ಮಟ್ಟದ ವಸತಿ ಸೌಕರ್ಯಗಳು ದೊರೆಯುವುದಿಲ್ಲ. ಹಬ್ಬದ ಸಮಯದಲ್ಲಿ, ಪೂರ್ಣಿಮಾ, ಅಮಾವಾಸ್ಯೆ ಮತ್ತು ಗುರುವಾರಗಳಂದು ಮುಂಗಡವಾಗಿ ಬುಕಿಂಗ್ ಮಾಡಬೇಕಾಗುತ್ತದೆ.
- ಶರಣ ಬಸವೇಶ್ವರ ದೇವಸ್ಥಾನ (ಕಲಬುರಗಿ/ಗುಲ್ಬರ್ಗ)
ದೇವಾಲಯದ ಬಗ್ಗೆ :
ಶರಣ ಬಸವೇಶ್ವರ ದೇವಾಲಯವು ಕರ್ನಾಟಕದ ಕಲಬುರ್ಗಿ (ಗುಲ್ಬರ್ಗಾ) ದಲ್ಲಿರುವ ಒಂದು ಪ್ರೇಕ್ಷಣಿಯ ಸ್ಥಳವಾಗಿದೆ.ಈ ದೇವಾಲಯವು ತತ್ವಜ್ಞಾನಿ ಶ್ರೀ ಶರಣ ಬಸವೇಶ್ವರರಿಗೆ ಸಮರ್ಪಿತವಾಗಿರುವ ಸ್ಥಳವಾಗಿದೆ. 12 ನೇ ಶತಮಾನದ ಬಸವಣ್ಣನವರು ದಾಸೋಹ ಮತ್ತು ಕಾಯಕಕ್ಕೆ ಪ್ರಸಿದ್ಧಿಯಾಗಿದ್ದರೆ.
ಈ ದೇವಾಲಯದ ಮಧ್ಯಭಾಗದಲ್ಲಿ ಗರ್ಭ ಗುಡಿಯಲ್ಲಿ ಶ್ರೀ ಶರಣ ಬಸವೇಶ್ವರರ ಸಮಾಧಿಯನ್ನು ಕಾಣಬಹುದಾಗಿದೆ. ಇದರ ಸಮೀಪದಲ್ಲಿ ಒಂದು ಸುಂದರ ಸರೋವರವೂ ಇದೆ, ಈ ಸ್ಥಳವು ಅನೇಕ ಭಕ್ತರು ಮತ್ತು ಪ್ರವಾಸಿಗರಿಗೆ ಪ್ರೇಕ್ಷಣಿಯ ಸ್ಥಳವಾಗಿದೆ.
ಈ ದೇವಾಲಯದ ಕೆತ್ತನೆಯಲ್ಲಿ ಗರುಡ, ಗಿಳಿಗಳು, ಹೂವುಗಳು ಮತ್ತು ಆನೆಗಳ ಚಿತ್ರಗಳಿರುವುದನ್ನು ಕಾಣಬಹುದಾಗಿದೆ. ಅದಲ್ಲದೆ ದೇವಾಲಯವನ್ನು ಸಭಾಮಂಟಪ ಎಂದೂ ಕೂಡ ಕರೆಯುತ್ತಾರೆ. ಈ ದೇವಾಲಯದ ರಚನೆಯಲ್ಲಿ ಸುಮಾರು 36 ಕಮಾನುಗಳಿದ್ದು ಮತ್ತು ಹಲವಾರು ಕಂಬಗಳ ರಚನೆಗಳು ಕೂಡ ಇವೆ, ಇದರಿಂದ ದೇವಾಲಯದ ಆಕರ್ಷಣೆಯು ಕೂಡ ಹೆಚ್ಚಿಸುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ 11 ಗಂಟೆವರೆಗೆ, ಮಧ್ಯಾಹ್ನ 3 ಗಂಟೆಯಿಂದ 8:30ರ ವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳು ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಚಲಿಸುತ್ತವೆ. ಗುಲ್ಬರ್ಗದಿಂದ, ಶರಣ ಬಸವೇಶ್ವರ ದೇವಾಲಯವನ್ನು ಟ್ಯಾಕ್ಸಿ ಅಥವಾ ಆಟೋ ರಿಕ್ಷಾ ಮೂಲಕ ಸ್ಥಳವನ್ನು ಭೇಟಿ ಮಾಡಬಹುದಾಗಿದೆ.
ರೈಲಿನ ಮೂಲಕ: ಬೆಂಗಳೂರಿನಿಂದ ಗುಲ್ಬರ್ಗಕ್ಕೆ ರೈಲಿನಲ್ಲಿ 10 ಗಂಟೆಗಳ ಪ್ರಯಾಣವಾಗಿದೆ.
ವಿಮಾನದ ಮೂಲಕ: ಕಲಬುರಗಿ ವಿಮಾನ ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.
ಹತ್ತಿರದ ಸ್ಥಳಗಳು:
ಮಲ್ಖೇಡ ಕೋಟೆ : ಮಲ್ಖೇಡವು ಪ್ರಸಿದ್ಧ ಸ್ಥಳವಾಗಿದ್ದು, ಗುಲ್ಬರ್ಗದಿಂದ ಸುಮಾರು 40 ಕಿ.ಮೀ ದೂರದಲ್ಲಿ, ಭೀಮಾ ನದಿಯ ಉಪನದಿಯಾದ ಕಾಗಿನಾ ನದಿಯ ದಂಡೆಯ ಮೇಲೆ ಕಾಣಬಹುದಾಗಿದೆ. ಹಿಂದೆ ಮಾನ್ಯಖೇಡರ ಆಡಳಿತದ ಸಮಯದಲ್ಲಿ ರಾಷ್ಟ್ರಕೂಟ ರಾಜರ ರಾಜಧಾನಿಯಾಗಿತ್ತು.
ಬುದ್ಧ ವಿಹಾರ: ಗುಲ್ಬರ್ಗ ವಿಶ್ವವಿದ್ಯಾಲಯದಸಮೀಪ ಇರುವ ಜಿಲ್ಲಾ ಕೇಂದ್ರದಿಂದ 6 ಕಿ.ಮೀ ದೂರದಲ್ಲಿದೆ ಬುದ್ಧ ವಿಹಾರವನ್ನು ಭಾರತದ ರಾಷ್ಟ್ರಪತಿಗಳು ಜನವರಿ 2009 ರಲ್ಲಿ ಉದ್ಘಾಟಿಸಿದ್ದಾರೆ.
8.ಯೆಲ್ಲಮ್ಮ ದೇವಸ್ಥಾನ, ಸೌಂದತ್ತಿ (ಬೆಳಗಾವಿ ಜಿಲ್ಲೆ)
ದೇವಾಲಯದ ಬಗ್ಗೆ:
ಯೆಲ್ಲಮ್ಮ ದೇವಸ್ಥಾನವು ತಾಯಿ ರೇಣುಕಾ ದೇವಿಯ ದೇವಸ್ಥಾನವಾಗಿದೆ, ಇದು ಭಾರತದ ಕರ್ನಾಟಕ ರಾಜ್ಯದ ಸೌಂದತ್ತಿಯಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ದೇವಾಲಯವಾಗಿದೆ ಮತ್ತು ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು. ಇದನ್ನು ಮೊದಲು ಸಿದ್ಧಾಚಲ ಪರ್ವತ ಎಂದು ಕರೆಯುತ್ತಿದ್ದ ಬೆಟ್ಟದ ತುದಿಯಲ್ಲಿ ಕಾಣಬಹುದಾಗಿದೆ ಮತ್ತು ಈಗ “ಯೆಲ್ಲಮ್ಮಣ್ಣ ಗುಡ್ಡ” ಎಂದು ಪ್ರಸಿದ್ದಿಯಾಗಿದೆ.
ಈದೇವಸ್ಥಾನವನ್ನು 1514 ರಲ್ಲಿ ರಾಯಬಾಗ್ನ ಬೊಮ್ಮಪ್ಪ ನಾಯಕ ನಿರ್ಮಾಣ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಸಿಕ್ಕಿರುವ ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಅಧ್ಯಯನ ಮಾಡಿದ ಪ್ರಕಾರ, ಇಲ್ಲಿ ಪ್ರಾರಂಭದಲ್ಲಿ ರಾಷ್ಟ್ರಕೂಟ ಅಥವಾ ಚಾಲುಕ್ಯರ ಅವಧಿಯಲ್ಲಿ ಒಂದು ದೇವಾಲಯ ಇಲ್ಲಿ ಇತ್ತು ಎಂದು ಹೇಳಲಾಗಿದೆ. ಇಲ್ಲಿ ಕಂಡುಬರುವ ಮೆಗಾಲಿಥಿಕ್ ಸಮಾಧಿಗಳು ಬಹಳ ಹಿಂದಿನ ಕಾಲಕ್ಕೆ ಸೇರಿವೆ ಎಂದು ಹೇಳಬಹುದಾಗಿದೆ. ಬೆಟ್ಟದ ತುದಿಯಲ್ಲಿ ಮೆಗಾಲಿಥಿಕ್ ಕಪ್ಪು ಪಾತ್ರೆಗಳು ಮತ್ತು ಕೆಂಪು ಪಾತ್ರೆಗಳ ಮಡಕೆ ಚೂರುಗಳು ಕಂಡು ಬರುವುದನ್ನು ಕಾಣಬಹುದಾಗಿದೆ. ಚಾಲುಕ್ಯರ ಆಡಳಿತದ ಕಾಲದಲ್ಲಿಯೂ ಕೂಡ ಯೆಲ್ಲಮ್ಮ ಆರಾಧನೆಯನ್ನು ಇಲ್ಲಿ ಮಾಡಲಾಗುತ್ತಿತ್ತು ಎಂದು ನಂಬಲಾಗಿದೆ .
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟಿವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಬೆಳಗಾವಿಯಿಂದ 80 ಕಿ.ಮೀ. ದೂರದಲ್ಲಿದೆ.
ರೈಲಿನ ಮೂಲಕ:ಹತ್ತಿರದ ರೈಲು ನಿಲ್ದಾಣ ಧಾರವಾಡ ನಿಲ್ದಾಣವಾಗಿದೆ.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಬೆಳಗಾವಿ 80 ಕಿ.ಮೀ. ದೂರದಲ್ಲಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
*ಚೌಮಹಲ್ಲಾ ಅರಮನೆ
*ಬಿರ್ಲಾ ಮಂದಿರ
*ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವನ (ಕೆಬಿಆರ್)
*ಗೋಲ್ಕೊಂಡ ಕೋಟೆ
*ಸಂಜೀವಯ್ಯ ಮಕ್ಕಳ ಉದ್ಯಾನವನ
*ಜಲವಿಹಾರ್ ವಾಟರ್ ಪಾರ್ಕ್
9.ಚಾಲುಕ್ಯ ದೇವಾಲಯಗಳು, ಲಕ್ಕುಂಡಿ (ಗದಗ ಜಿಲ್ಲೆ)
ದೇವಾಲಯದ ಬಗ್ಗೆ:
ಲಕ್ಕುಂಡಿಯ ಕಾಶಿ ವಿಶ್ವನಾಥ ದೇವಸ್ಥಾನವು ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಯಲ್ಲಿರುವ ದೇವಾಲಯವಾಗಿದೆ. ಕಾಶಿವಿಶ್ವೇಶ್ವರ ದೇವಸ್ಥಾನವು ಅದ್ಬುತ ಆಡಳಿತ ನಡೆಸುತ್ತಿದ್ದ ಕಲ್ಯಾಣ ಚಾಲುಕ್ಯ ಶೈಲಿಯ ಹಿಂದೂ ವಾಸ್ತುಶಿಲ್ಪವನ್ನು ಯಾತ್ರಿಕರು ಕಾಣಬಹುದಾಗಿದೆ.
ಲಕ್ಕುಂಡಿ ಎಂಬುದು ಐತಿಹಾಸಿಕ ನಗರವಾದ ಲೋಕ್ಕಿಗುಂಡಿ ಎಂಬ ಹೆಸರಿನಿಂದ ಬಂದಿದೆ, ದಕ್ಷಿಣ ಕರ್ನಾಟಕ ಮತ್ತು ಮಹಾರಾಷ್ಟ್ರದ ಶಾಸನಗಳಲ್ಲಿ ಈ ಹೆಸರನ್ನು ಕಾಣಬಹುದಾಗಿದೆ. ತುಂಬಾ ಹಳೆಯ ಶಾಸನವನ್ನು ಬ್ರಿಟಿಷ್ ಪುರಾತತ್ತ್ವಜ್ಞರು ಲಕ್ಕುಂಡಿಯಲ್ಲಿರುವ ಮೆಟ್ಟಿಲು ಬಾವಿಯಾದ ಕಣ್ಣರ್ ಭನ್ವಿ ಹತ್ತಿರದ ಕಲ್ಲಿನ ಚಪ್ಪಡಿಯ ಮೇಲೆ ಇರುವುದನ್ನು ನೋಡಿದರು. ಈ ಸ್ಥಳದಲ್ಲಿ ಕೆತ್ತಲಾದ ಕಲ್ಲಿನ ಚಪ್ಪಡಿಯನ್ನು ಅಲ್ಲಿಯ ಜನರು ಮೆಟ್ಟಿಲು ಬಾವಿಯಲ್ಲಿ ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದರ. ಅದರ ಮೇಲಿನ ಶಾಸನವು 790 CE ಯ ಕಾಲದಾಗಿದೆ. ಈ ಶಾಸನದಲ್ಲಿ ಲಕ್ಕುಂಡಿ ಎಂಬ ಪ್ರದೇಶವು ಮೊದಲೇ ಇತ್ತು ಮತ್ತು 8 ನೇ ಶತಮಾನದ ಶಾಸನ ಸಾಕಷ್ಟು ಮಹತ್ವದ್ದಾಗಿತ್ತು ಎಂದು ಹೇಳುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಎಲ್ಲಾ ಸಮಯದಲ್ಲೂ ದರ್ಶನಕ್ಕೆ ಅವಕಾಶವಿರುತ್ತದೆ. ಅಕ್ಟೋಬರ್ ನಿಂದ ಫೆಬ್ರವರಿ ಯಾತ್ರಿಕರಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಗದಗ ಜಿಲ್ಲೆಯ ಲಕ್ಕುಂಡಿ ಕಾಶಿ ವಿಶ್ವೇಶ್ವರ ದೇವಾಲಯವನ್ನು ತಲುಪಲು ಸಾರ್ವಜನಿಕ ಮತ್ತು ಖಾಸಗಿ ವಾಹನಗಳ ಸೌಲಭ್ಯ ಕೂಡ ದೊರೆಯುತ್ತದೆ. ಕೆಎಸ್ಆರ್ಟಿಸಿ ಬಸ್ ಸೇವೆ ಕೂಡ ಲಭ್ಯವಿದೆ.
ರೈಲಿನ ಮೂಲಕ: ಗದಗ ರೈಲು ನಿಲ್ದಾಣ ಹತ್ತಿರದಲ್ಲಿದೆ.
ವಿಮಾನದ ಮೂಲಕ: ಹುಬ್ಬಳ್ಳಿ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
*ನವಿಲತೀರ್ಥ
*ನೃಪತುಂಗ ಬೆಟ್ಟ
*ಭವಾನಿಶಂಕರ ದೇವಸ್ಥಾನ
*ತ್ರಿಕೂಟೇಶ್ವರ ದೇವಸ್ಥಾನ
*ಸಿದ್ಧಾರೂಢ ಮಠ
*ಸಾತ್ತೋಡಿ ಮತ್ತು ಮಾಗೋಡು ಜಲಪಾತ
*ಯಲಿಸೂರು-ಶ್ರೀ.ಭೋಗೇಶ್ವರ
*ಹೊಸೂರು-ಶ್ರೀ.ತ್ರಿಲಿಂಗೇಶ್ವರ
10.ತ್ರಿಕೂಟೇಶ್ವರ ದೇವಸ್ಥಾನ, ಗದಗ:
ದೇವಾಲಯದ ಬಗ್ಗೆ:
ತ್ರಿಕೂಟೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನ ಕರ್ನಾಟಕದ ಹುಬ್ಬಳ್ಳಿ -ಧಾರವಾಡದಿಂದ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿರುವ ಗದಗದಲ್ಲಿ ಭೇಟಿ ಮಾಡಬಹುದಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಒಂದೇ ಕಲ್ಲಿನ ಮೇಲೆ ಮೂರು ಲಿಂಗಗಳನ್ನು ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನದಲ್ಲಿ ಸರಸ್ವತಿಗೆ ಸಮರ್ಪಿತವಾದ ದೇವಾಲಯವಾಗಿದೆ, ಅದು ಕೆತ್ತಿದ ಕಂಬಗಳಿಂದ ಅದ್ಬುತವಾಗಿ ರಚನೆ ಮಾಡಲಾಗಿದೆ.
ಈ ದೇವಸ್ಥಾನದಲ್ಲಿ ಅದ್ಬುತ ಶಿಲ್ಪಕಲೆಯೊಂದಿಗೆ ಅಲಂಕೃತ ಕಂಬಗಳನ್ನು ಕೂಡ ಕಾಣಬಹುದಾಗಿದೆ. ಗರ್ಭಗುಡಿಯಲ್ಲಿ ಮೂರು ಶಿವಲಿಂಗಗಳನ್ನೂ ಒಂದೇ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ದೇವಾಲಯದಲ್ಲಿ ಕೆತ್ತಿದ ಕಲ್ಲಿನ ಪರದೆಗಳ ರಚನೆ ಇದ್ದು ಮತ್ತು ಕೆತ್ತಿದ ಪ್ರತಿಮೆಗಳನ್ನು ಸಹ ಕಾಣಬಹುದಾಗಿದೆ. ತ್ರಿಕೂಟೇಶ್ವರ ದೇವಸ್ಥಾನದ ಒಳಗಡೆ ಸರಸ್ವತಿಯ ದೇವಾಲಯವು ಇರುವುದು ವಿಶೇಷವಾಗಿದೆ, ಇಲ್ಲಿಯ ಕಲ್ಲಿನ ಕಂಬಗಳು ಕೂಡ ಆಕರ್ಷಣೀಯವಾಗಿವೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 07 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ದೇವಾಲಯಕ್ಕೆ ಬಸ್ ಸೇವೆಗಳ ವ್ಯವಸ್ಥೆ ಕೂಡ ಇದೆ.
ರೈಲಿನ ಮೂಲಕ: ಗದಗ ಜಂಕ್ಷನ್ ರೈಲು ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ.
ವಿಮಾನದ ಮೂಲಕ: ತ್ರಿಕೂಟೇಶ್ವರ ದೇವಸ್ಥಾನಕ್ಕೆ ಗದಗ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.