ಚಾಮುಂಡೇಶ್ವರಿ ದೇವಾಲಯ:
ಚಾಮುಂಡೇಶ್ವರಿ ದೇವಾಲಯದ ಇತಿಹಾಸ
ಚಾಮುಂಡೇಶ್ವರಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳ ಮೇಲೆ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಈ ದೇವಸ್ಥಾನಕ್ಕೆ ಶಕ್ತಿಯ ಉಗ್ರ ರೂಪವಾದ ಚಾಮುಂಡೇಶ್ವರಿ ದೇವಿಯ ಹೆಸರಿಡಲಾಗಿದೆ , ಇದು ಮೈಸೂರು ಮಹಾರಾಜರ ಕಾಲದಿಂದಲೂ ಪೂಜಿಸಲ್ಪಟ್ಟ ಪ್ರಸಿದ್ದ ದೇವತೆಯಾಗಿದ್ದು ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ಒಂದಾಗಿದೆ.
ಕನ್ನಡ ನಾಡಿನ ಜನತೆಯು ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಪೂಜಿಸುತ್ತಾರೆ, ಇದರ ಅರ್ಥ ನಾಡ ದೇವತೆ. ಇದು ಸಮುದ್ರ ಮಟ್ಟದಿಂದ ಸುಮಾರು 3300 ಅಡಿ ಎತ್ತರದಲ್ಲಿರುವ ಒಂದು ಪವಿತ್ರ ಹಿಂದೂ ದೇವಾಲಯವಾಗಿದೆ. ದುರ್ಗಾ ದೇವಿಯು ರಾಕ್ಷಸನಾದ ಮಹಿಷಾಸುರನನ್ನು ತನ್ನ ಶಕ್ತಿಯಿಂದ ಈ ಬೆಟ್ಟದ ತುದಿಯಲ್ಲಿ ಸಂಹರಿಸಿದಳು ಎಂದು ಹೇಳಲಾಗುತ್ತದೆ, ಈ ಪ್ರದೇಶವನ್ನು ಅವನು ಆಳುತ್ತಿದ್ದನು. ನಂತರ ಈ ಸ್ಥಳವನ್ನು ಮಹಿಷೂರು ಎಂದು ಪ್ರಚಲಿತವಾಯಿತು. ಬ್ರಿಟಿಷರು ಇದನ್ನು ಮೈಸೂರು ಎಂದು ಬದಲಾಯಿಸಿದರು.
ವಾಸ್ತುಶಿಲ್ಪ
ಪ್ರಾರಂಭದಲ್ಲಿ ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಆಡಳಿತ ನಡೆಸುತ್ತಿದ್ದವರು ನಿರ್ಮಾಣ ಮಾಡಿದ್ದಾರೆಂದು ಹೇಳಲಾಗುತ್ತದೆ, ಆದರೆ ಇದರ ಗೋಪುರವನ್ನು ಸಾಮಾನ್ಯವಾಗಿ 17 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣ ಮಾಡಿರಬಹುದೆಂದು ಅಂದಾಜಿಸಲಾಗಿದೆ. 1659 ರಲ್ಲಿ, ಬೆಟ್ಟದ 3000 ಅಡಿ ಶಿಖರಕ್ಕೆ ಭಕ್ತರು ದೇವಿಯನ್ನು ದರ್ಶಿಸಲು ಒಂದು ಸಾವಿರ ಮೆಟ್ಟಿಲುಗಳ ಮೆಟ್ಟಿಲನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗುಡಿಯಲ್ಲಿ ‘ಅಷ್ಟಭುಜ’ ಅಥವಾ ಎಂಟು ಕೈಗಳನ್ನು ಹೊಂದಿರುವ ಚಾಮುಂಡೇಶ್ವರಿಯನ್ನು ಕಾಣಬಹುದಾಗಿದೆ. ದೇವಾಲಯದಲ್ಲಿ ನಂದಿಯ ಹಲವಾರು ಚಿತ್ರಗಳಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ದೂರದಲ್ಲಿರುವ ಚಿಕ್ಕ ಶಿವ ದೇವಸ್ಥಾನದ ಬಳಿ ಬೆಟ್ಟದ ಮೇಲೆ 700 ನೇ ಮೆಟ್ಟಿಲುಗಳ ಮೇಲೆ ಬೃಹತ್ ಗ್ರಾನೈಟ್ ನಂದಿ ವಿಗ್ರಹವಿರುವುದನ್ನು ನೋಡಬಹುದಾಗಿದೆ. ಈ ರಚನೆಯನ್ನು 1664 ರಲ್ಲಿ ಮೈಸೂರು ಮಹಾರಾಜ ದೂದ ದೇವರಾಜ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಚಾಮುಂಡಿ ಬೆಟ್ಟಗಳು ಶ್ರೀ ಮಹಾಬಲೇಶ್ವರ ದೇವಸ್ಥಾನ ಜೊತೆಯಲ್ಲಿಯೆ ಶ್ರೀ ನಾರಾಯಣಸ್ವಾಮಿ ದೇಗುಲವನ್ನು ಭಕ್ತರು ವೀಕ್ಷಿಸಬಹುದಾಗಿದೆ.
ದ್ರಾವಿಡ ಶೈಲಿಯ ಶಿಲ್ಪಕಲೆಯಿಂದ ನಿರ್ಮಾಣವಾದ ಚಾಮುಂಡೇಶ್ವರಿ ದೇವಾಲಯವು ಚತುರ್ಭುಜಾಕೃತಿಯ ರಚನೆಯನ್ನು ಹೊಂದಿರುವ ಒಂದು ಅದ್ಬುತ ಕಲಾ ಶಿಲ್ಪವಾಗಿದೆ . ಇಲ್ಲಿನ ಗೋಪುರವು ಏಳು ಹಂತದ ಪ್ರಭಾವಶಾಲಿ ನಿರ್ಮಾಣವನ್ನು ಮತ್ತು ಅಷ್ಟೇ ಭವ್ಯವಾದ ಪ್ರವೇಶದ್ವಾರವನ್ನು ಕೂಡ ಈ ದೇವಾಲಯವು ಹೊಂದಿದೆ. ಈ ಎರಡನ್ನೂ ಬಹಳ ದೂರದಿಂದಲೂ ವೀಕ್ಷಿಸಬಹುದಾಗಿದೆ. ಇಲ್ಲಿನ ಬೆಳ್ಳಿ ದ್ವಾರಗಳು ರಾಜಮನೆತನದ ಪುರಾತನ ಕಾಲದ ಒಂದು ನೋಟವನ್ನು ಭಕ್ತರು ಕಾಣಬಹುದಾಗಿದೆ. ಇವುಗಳಲ್ಲದೆ, ದೇವಾಲಯವು ಗರ್ಭಗುಡಿ, ನವರಂಗ ಹಾಲ್, ಅಂತರಾಳ ಮಂಟಪ ಮತ್ತು ಪ್ರಕಾರಗಳನ್ನು ಒಳಗೊಂಡಿದೆ. ಗರ್ಭಗುಡಿಯ ಮೇಲ್ಭಾಗದಲ್ಲಿ ‘ವಿಮಾನ’ ಎಂಬ ಸಣ್ಣ ಗೋಪುರ ವಿಶೇಷವಾಗಿದೆ.
ಮೈಸೂರಿನಲ್ಲಿ ಆಚರಿಸಲಾಗುವ ಪ್ರಸಿದ್ದ ಹಬ್ಬ:
ಮೈಸೂರಿನಲ್ಲಿ ಆಚರಿಸಲಾಗುವ ಪ್ರಸಿದ್ದ ಹಬ್ಬವೆಂದರೆ ನವರಾತ್ರಿ. ಮೈಸೂರು ದಸರಾವನ್ನು ಕರ್ನಾಟಕದ ರಾಜ್ಯ ನಾಡ ಹಬ್ಬವಾಗಿ ಆಚರಿಸಲಾಗುತ್ತ ಬಂದಿದೆ, ನವರಾತ್ರಿಯ ಸಮಯದಲ್ಲಿ, ನವದುರ್ಗೆಯರು ಎಂದು ಪೂಜಿಸಲ್ಪಡುವ ದೇವಿಯ ಒಂಬತ್ತು ರೀತಿಯ ಅಂಶಗಳನ್ನು ಚಿತ್ರಿಸಲು ವಿಗ್ರಹವನ್ನು 9 ರೀತಿಯಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ಕಾಳರಾತ್ರಿ ದೇವತೆಗೆ ನವರಾತ್ರಿಯ 7 ನೇ ದಿನದಂದು, ಮಹಾರಾಜರು ದಾನ ಮಾಡಿದ ಎಲ್ಲಾ ಆಭರಣಗಳನ್ನು ಮೈಸೂರು ಜಿಲ್ಲಾ ಖಜಾನೆಯಿಂದ ತಂದು ವಿಗ್ರಹವನ್ನು ಅಲಂಕರಿಸಲು ದೇವಸ್ಥಾನಕ್ಕೆ ನೀಡುತ್ತಾರೆ.
ಮೈಸೂರಿನ ಮತ್ತೊಂದು ದೇವಸ್ಥಾನವು ಬೆಟ್ಟದ ತಪ್ಪಲಿನಲ್ಲಿದ್ದು, ಈ ದೇವಾಲಯವನ್ನು ಉತ್ತನಹಳ್ಳಿಯಲ್ಲಿ ಜ್ವಾಲಾಮಾಲಿನಿ ಶ್ರೀ ತ್ರಿಪುರ ಸುಂದರಿ ದೇವಸ್ಥಾನವೆಂದು ಎಂದು ಪ್ರಸಿದ್ದಿಯಾಗಿದೆ. ಈ ದೇವತೆಯು ರಕ್ತಬೀಜ ಎಂಬ ರಾಕ್ಷಸನನ್ನು ಸಂಹರಿಸಲು ಸಹಾಯ ಮಾಡಿದ ಚಾಮುಂಡೇಶ್ವರಿಯ ಸಹೋದರಿ ಎಂದು ನಂಬಲಾಗುತ್ತದೆ.
ಚಾಮುಂಡೇಶ್ವರಿ ದೇವಾಲಯ ಪ್ರವೇಶ ಶುಲ್ಕ:
ಸಾಮಾನ್ಯ ಪ್ರವೇಶ : ಉಚಿತ ಪ್ರವೇಶವಿರುತ್ತದೆ
ವಿಶೇಷ ಪ್ರವೇಶ ಶುಲ್ಕ : ಪ್ರತಿ ಭಕ್ತಾದಿಗೆ 100 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ
ವಿಐಪಿ ದರ್ಶನ : ಪ್ರತಿ ಭಕ್ತಾದಿಗೆ 300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ
ಚಾಮುಂಡೇಶ್ವರಿ ದೇವಸ್ಥಾನವನ್ನು ತಲುಪುವುದು ಹೇಗೆ?
ವಿಮಾನದ ಮೂಲಕ : ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ , ಇದು ಸುಮಾರು 20 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ಈ ದೇವಸ್ಥಾನವನ್ನು ತಲುಪಲು ಟ್ಯಾಕ್ಸಿ ವ್ಯವಸ್ಥೆ ಕೂಡ ಲಭ್ಯವಿದೆ.
ರೈಲು ಮೂಲಕ : ಸಮೀಪದ ರೈಲು ನಿಲ್ದಾಣ ಮೈಸೂರು ಜಂಕ್ಷನ್ ಆಗಿದೆ, ಇದು ದೇವಾಲಯದಿಂದ 13 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ದೊರೆಯುತ್ತದೆ.
ರಸ್ತೆಯ ಮೂಲಕ : ಮೈಸೂರು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ದೇವಾಲಯವನ್ನು ತಲುಪಲು ನೀವು ಸಾರ್ವಜನಿಕ ಬಸ್ ಅಥವಾ ಟ್ಯಾಕ್ಸಿಯನ್ನು ಕೂಡ ಬಳಸಬಹುದಾಗಿದೆ. ಮೈಸೂರು ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ಸೌಲಭ್ಯವು ಉತ್ತಮವಾಗಿಯೆ ಇದೆ.
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ:
ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಭೇಟಿ ನೀಡಲು ಸೂಕ್ತ ಅವಧಿ, ಚಳಿಗಾಲದಲ್ಲಿ ವಾತಾವರಣವು ಸೂಕ್ತವಾಗಿದೆ ಮತ್ತು ದೇವಿಯ ದರ್ಶನಕ್ಕೆ ಉತ್ತಮವಾಗಿದೆ. ದಸರಾ ಹಬ್ಬದ ಸಮಯದಲ್ಲಿ ದೇವಾಲಯವು ವಿಶೇಷವಾಗಿ ಅಲಂಕಾರಗಳಿಂದ ತುಂಬಿರುತ್ತದೆ, ಆ ಸಮಯದಲ್ಲಿ ದೇವಿಯಗೆ ವಿಶೇಷ ಪೂಜೆಗಳು ಮತ್ತು ಅನುಷ್ಠಾನಗಳು ನಡೆಸಲಾಗುತ್ತದೆ.
ಬೇಸಿಗೆ : ಬೇಸಿಗೆ ಬಿಸಿಲು ಹೆಚ್ಚಾಗಿರುತ್ತದೆ ಆದರೆ ಬೆಳಿಗ್ಗೆ ಮತ್ತು ಸಂಜೆ ಭೇಟಿ ನೀಡಲು ಅನುಕೂಲಕರವಾಗಿರುತ್ತದೆ.
ಮಳೆಗಾಲ: ಈ ಸಮಯದಲ್ಲಿ ಮಳೆಯೂ ಹೆಚ್ಚಾಗಿರುತ್ತದೆ, ಸುತ್ತಮುತ್ತಲಿನ ವಾತಾವರಣವು ಹಚ್ಚ ಹಸಿರಿನಿಂದ ತುಂಬಿರುತ್ತದೆ, ಆದರೆ ಆ ಸಮಯದಲ್ಲಿ ಜಾರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಚಳಿಗಾಲ : ದೇವಿಯ ದರ್ಶನಕ್ಕೆ ತಂಪಾದ ಹವಾಮಾನವು ಭೇಟಿ ನೀಡಲು ಸೂಕ್ತ ಸಮಯ ಇದಾಗಿದೆ.
ಹತ್ತಿರದ ಆಕರ್ಷಣೆಯ ಸ್ಥಳಗಳು:
ಮೈಸೂರು ಅರಮನೆ : ದೇವಾಲಯದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರಾಚೀನ ಅರಮನೆಯು ಇದಾಗಿದ್ದು ಎಲ್ಲಾ ಯಾತ್ರಿಕರು ಭೇಟಿ ಮಾಡಲೇ ಬೇಕಾದ ಸ್ಥಳ ಇದಾಗಿದೆ.
ಬೃಂದಾವನ ಉದ್ಯಾನಗಳು : ಸುಮಾರು 25 ಕಿ.ಮೀ ದೂರದಲ್ಲಿದೆ, ಸುಂದರವಾದ ಉದ್ಯಾನಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ ಮತ್ತು ಸಂಗೀತ ಕಾರಂಜಿಗಳು ನೋಡುಗರಿಗೆ ಸಂತೋಷವನ್ನು ಉಂಟುಮಾಡುತ್ತವೆ.
ಸಂತ ಫಿಲೋಮಿನಾ ಚರ್ಚ್ : ದೇವಾಲಯದಿಂದ 10 ಕಿ.ಮೀ ದೂರದಲ್ಲಿರುವ ಗೋಥಿಕ್ ಶೈಲಿಯ ಕ್ಯಾಥೆಡ್ರಲ್ ಇದಾಗಿದ್ದು ನೋಡಲೇ ಬೇಕಾದ ಸ್ಥಳ ಇದಾಗಿದೆ.
ಕಾರಂಜಿ ಸರೋವರ : ಇದು ಸುಮಾರು 11 ಕಿ.ಮೀ ದೂರದಲ್ಲಿರುವ ಪ್ರಶಾಂತ ಸರೋವರ, ಪಕ್ಷಿ ವೀಕ್ಷಣೆ ಮತ್ತು ದೋಣಿ ವಿಹಾರಕ್ಕೆ ಸೂಕ್ತವಾಗಿರುವ ಪ್ರವಾಸಿಗರ ಮನೋರಂಜನೆಗೆ ಸೂಕ್ತವಾಗಿದೆ.
ಲಲಿತ ಮಹಲ್ ಅರಮನೆ : ಇದೊಂದು ಸುಂದರವಾದ ಬಿಳಿ ಅರಮನೆಯಾಗಿದೆ , ಈಗ ಇದು ಒಂದು ಪಾರಂಪರಿಕ ಹೋಟೆಲ್, ದೇವಾಲಯದಿಂದ 17 ಕಿ.ಮೀ ದೂರದಲ್ಲಿ ಇದನ್ನು ಭೇಟಿ ಮಾಡಬಹುದಾಗಿದೆ.