ಕರ್ನಾಟಕದ ಟಾಪ್ 10 ಬೇಸಿಗೆ ರಜಾ ದಿನಗಳಲ್ಲಿ ಭೇಟಿನೀಡಬಹುದಾದ ದೇವಾಲಯಗಳು
ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಸೂಕ್ತವಾದ ಕರ್ನಾಟಕದ ಟಾಪ್ 10 ದೇವಾಲಯಗಳ ಕುರಿತು ಮಾಹಿತಿನೀಡಲಾಗಿದೆ. ತಂಪಾದ ಬೆಟ್ಟದ ತುದಿಯ ದೇವಾಲಯಗಳಿಂದ ಹಿಡಿದು ಶಾಂತಿಯುತ ಗುಹಾ ದೇವಾಲಯಗಳವರೆಗೆ, ಈ ಕನ್ನಡ ಲೇಖನವು ನಿಮ್ಮ ಬೇಸಿಗೆ ಪ್ರವಾಸಕ್ಕೆ ಉತ್ತಮ ಆಧ್ಯಾತ್ಮಿಕ ತಾಣಗಳಿಗೆ ಮಾರ್ಗದರ್ಶನ ನೀಡುತ್ತದೆ.
1. ಶೃಂಗೇರಿ ಶಾರದಾ ಪೀಠ – ಚಿಕ್ಕಮಗಳೂರು
ದೇವಾಲಯದ ಬಗ್ಗೆ: ಅಧಿಪತಿ: ದೇವತೆ ಶಾರದಾಂಬೆ, ಸ್ಥಾಪಿಸಿದವರು: 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು, ಈ ದೇವಾಲಯವು ಕೇವಲ ಪೂಜಾ ಸ್ಥಳವಲ್ಲ, ಕಲಿಕೆ, ವೈದಿಕ ಸಂಪ್ರದಾಯ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಕೇಂದ್ರವಾಗಿದೆ.ತುಂಗಾ ನದಿ ಮತ್ತು ಆಚರಣೆಗಳು:
ದೇವಾಲಯವು ತುಂಗಾ ನದಿಯ ದಡದಲ್ಲಿದೆ, ಇದನ್ನು ಪವಿತ್ರವೆಂದು ನಂಬಲಾಗಿದೆ. ಭಕ್ತರು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಮಾಡುತ್ತಾರೆ:
ಶೃಂಗೇರಿ ಶಾರದಾ ಪೀಠ – ಚಿಕ್ಕಮಗಳೂರಿನ ಒಂದು ದೈವಿಕ ಬೇಸಿಗೆಯ ವಿಶ್ರಾಂತಿ ತಾಣ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶೃಂಗೇರಿ. ಬೇಸಿಗೆಯಲ್ಲಿ ಏಕೆ ಭೇಟಿ ನೀಡಬೇಕು?
ಶೃಂಗೇರಿಯು ಬೇಸಿಗೆಯ ಉತ್ತುಂಗದಲ್ಲೂ ತಂಪಾದ, ಮಂಜಿನ ವಾತಾವರಣವನ್ನು ನೀಡುತ್ತದೆ, ಇದು ಆದರ್ಶ ಆಧ್ಯಾತ್ಮಿಕ ಪಲಾಯನ ತಾಣವಾಗಿದೆ. ಹಸಿರು ಬೆಟ್ಟಗಳು ಮತ್ತು ತುಂಗಾ ನದಿಯಿಂದ ಸುತ್ತುವರೆದಿರುವ ಇದು ಆತ್ಮಕ್ಕೆ ಶಾಂತಿ ಮತ್ತು ಇಂದ್ರಿಯಗಳಿಗೆ ಶಾಂತತೆಯನ್ನು ತರುತ್ತದೆ.
ಭೇಟಿ ನೀಡಲು ಉತ್ತಮ ಸಮಯ:
ಮಾರ್ಚ್ ನಿಂದ ಜೂನ್ (ಬೇಸಿಗೆ) – ಆಹ್ಲಾದಕರ ಹವಾಮಾನ, ಕಡಿಮೆ ಜನಸಂದಣಿ, ಎಲ್ಲಾ ಭಕ್ತರಿಗೆ ಪ್ರತಿದಿನ ಉಚಿತ ಊಟ (ಅನ್ನದಾನ) ನೀಡಲಾಗುತ್ತದೆ.
ಶೃಂಗೇರಿ ತಲುಪುವುದು ಹೇಗೆ:
ರಸ್ತೆಯ ಮೂಲಕ: ಚಿಕ್ಕಮಗಳೂರು (90 ಕಿಮೀ), ಮಂಗಳೂರು (110 ಕಿಮೀ), ಮತ್ತು ಶಿವಮೊಗ್ಗದಿಂದ ಉತ್ತಮ ಸಂಪರ್ಕ ಹೊಂದಿದೆ.
ರೈಲಿನ ಮೂಲಕ: ಹತ್ತಿರದ ನಿಲ್ದಾಣಗಳು – ಉಡುಪಿ ಅಥವಾ ಶಿವಮೊಗ್ಗ.
ವಿಮಾನದ ಮೂಲಕ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (~110 ಕಿಮೀ)ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು
ವಿದ್ಯಾಶಂಕರ ದೇವಾಲಯ – ಹೊಯ್ಸಳ ಮತ್ತು ದ್ರಾವಿಡ ವಾಸ್ತುಶಿಲ್ಪದ ಅದ್ಭುತ ಸಮ್ಮಿಲನ.
ಸಿರಿಮನೆ ಜಲಪಾತ – ಶೃಂಗೇರಿಯಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಜಲಪಾತ.
ಧ್ಯಾನ, ಕಲಿಕೆ ಮತ್ತು ನದಿ ತೀರದ ವಿಶ್ರಾಂತಿಗೆ ಸೂಕ್ತವಾಗಿದೆ.
2. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ – ಉಡುಪಿ ಜಿಲ್ಲೆ
ದೇವಾಲಯದ ಬಗ್ಗೆ:
ಮೂಕಾಂಬಿಕಾ ದೇವಿ ದೇವಾಲಯವು, ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಭಕ್ತರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಹಚ್ಚ ಹಸಿರಿನಿಂದ ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟವು ನೋಡುಗರ ಗಮನವನ್ನು ಸೆಳೆಯುತ್ತವೆ , ಮಂಗಳೂರಿನಿಂದ 147 ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪ್ರತಿವರ್ಷವೂ ಸಾವಿರಾರು ಯಾತ್ರಾರ್ಥಿಗಳನ್ನು ತನ್ನೆಡೆ ಆಕರ್ಷಿಸುತ್ತದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಸಮಯ:
ಪ್ರತಿದಿನ ಮುಂಜಾನೆ: 5:00 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿದಿನ ಮಧ್ಯಾಹ್ನ: 3:00 ರಿಂದ ರಾತ್ರಿ 9:00 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ತಲುಪುವುದು ಹೇಗೆ:
ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಯಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಬಸ್ಸುಗಳ ವ್ಯವಸ್ಥೆಯನ್ನು ಹೊಂದಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ (ಬೈಂದೂರು) ಅಥವಾ ಕುಂದಾಪುರ ರೈಲ್ವೆ ನಿಲ್ದಾಣ ಕೊಲ್ಲೂರಿಗೆ ಸನಿಹದಲ್ಲಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಬೈಂದೂರು ಕಡಲ ತೀರ(ಉಡುಪಿ ಜಿಲ್ಲೆ): 15 ಕಿ.ಮೀ.; ಇದು ಕಡಲ ತೀರದ ಸುಂದರ ಪ್ರದೇಶವಾಗಿದೆ. ಒತ್ತಿನಾಣೆ (ಉಡುಪಿ ಜಿಲ್ಲೆ): 14 ಕಿ.ಮೀ.; ಇಲ್ಲಿ ಎತ್ತರದ ನೆಲ (ಪ್ರಸ್ಥಭೂಮಿ) ಮತ್ತು ಸಮುದ್ರ ಹೆದ್ದಾರಿಯ ಸನಿಹ ಸ್ಥಳವಾಗಿದೆ. ನಗರ ಕೋಟೆ (ಶಿವಮೊಗ್ಗ ಜಿಲ್ಲೆ): 30 ಕಿ.ಮೀ.; ಹಳೆಯ ಕೋಟೆಯನ್ನು ಪ್ರವಾಸಿಗರಿಗೆ ಒಂದು ವೀಕ್ಷಣಾ ಸ್ಥಳವಾಗಿದೆ. ಮೂಕಾಂಬಿಕಾ ಅಭಯಾರಣ್ಯ (ಉಡುಪಿ ಜಿಲ್ಲೆ): 5 ಕಿ.ಮೀ; ಘಟ್ಟದ ರಸ್ತೆಗಳು ಮತ್ತು ಕಾಡಿನ ಸೊಬಗನ್ನು ಇದು ಒಳಗೊಂಡಿದೆ. ಸಿಗಂದೂರು (ಶಿವಮೊಗ್ಗ ಜಿಲ್ಲೆ): 35 ಕಿ.ಮೀ.
ವಸತಿ ಸೌಕರ್ಯಗಳು:
ಕೊಲ್ಲೂರಿನಲ್ಲಿ ಹಲವಾರು ವಸತಿ-ಸೌಕರ್ಯಗಳು ಲಭ್ಯವಿವೆ. ದೇವಸ್ಥಾನದ ಆಡಳಿತ ಮಂಡಳಿಯು ಸೌಪರ್ಣಿಕಾ ಅತಿಥಿ ಗೃಹವನ್ನು ನಿರ್ವಹಿಸುತ್ತಾ ಬಂದಿದೆ. ಶ್ರೀ ಲಲಿತಾಂಬಿಕಾ ಅತಿಥಿ ಗೃಹ, ಮಾತಾ ಛತ್ರಂ ಅತಿಥಿ ಗೃಹ, ಗೋಯೆಂಕಾ ಅತಿಥಿ ಗೃಹ ಇತ್ಯಾದಿಗಳೂ ಕೂಡ ದೊರೆಯುತ್ತವೆ ಮತ್ತು ಯಾವುದೇ ವಸತಿ ಸೌಕರ್ಯಗಳ ಕೊರತೆ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಈ ಸೌಕರ್ಯಗಳಲ್ಲಿ ಸುಮಾರು 400 ಕೋಣೆಗಳು ರಚಿಸಲ್ಪಟ್ಟಿವೆ ಎಂದು ಹೇಳಬಹುದು.
3. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ – ಚಿಕ್ಕಮಗಳೂರು
ದೇವಾಲಯದ ಬಗ್ಗೆ:
ಈ ದೇವಸ್ಥಾನವನ್ನು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ ಎಂದೂ ಕರೆಯುತ್ತಾರೆ. 8 ನೇ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಈ ಪ್ರದೇಶದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ.
ಅನ್ನಪೂರ್ಣೇಶ್ವರಿ ದೇವಿಯನ್ನು ಇಲ್ಲಿ ಪೀಠದ ಮೇಲೆ ನಿಂತಿರುವ ರೂಪದಲ್ಲಿ ಕಾಣಬಹುದು. ಅನ್ನಪೂರ್ಣೇಶ್ವರಿ ದೇವಿಯು ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಶ್ರೀ ಚಕ್ರ ಮತ್ತು ದೇವಿ ಗಾಯತ್ರಿಯನ್ನು ಧರಿಸಿ ನೆಲೆಯಾಗಿದ್ದಾಳೆ. ವಿಗ್ರಹವು ತಲೆಯಿಂದ ಪಾದದವರೆಗೆ ಚಿನ್ನದ ಹೊದಿಕೆಯಿಂದ ಮಾಡಲ್ಪಟ್ಟಿದೆ, ಮತ್ತು ಅನ್ನಪೂರ್ಣ ದೇವಿಯನ್ನು ದರ್ಶನ ಮಾಡಿದವರು ಅವರ ಜೀವನದಲ್ಲಿ ಎಂದಿಗೂ ಆಹಾರದ ಕೊರತೆಯನ್ನು ಹೊಂದುವುದಿಲ್ಲ ಎಂದು ನಂಬಲಾಗಿದೆ.
ಭೇಟಿ ನೀಡಲು ಉತ್ತಮ ಸಮಯ:
ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿಗೆ ಭೇಟಿ ಮಾಡಬಹುದಾದರೂ, ಮಳೆಗಾಲದ ಮೂರು ತಿಂಗಳಿನಲ್ಲಿ ಮಳೆ ಹೆಚ್ಚಾಗಿರುವುದರಿಂದ, ಸ್ವಲ್ಪ ಮಟ್ಟಿಗೆ ಅನಾನುಕೂಲವಾಗಬಹುದು.
ದೇವಾಲಯವು ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ತೆರೆದಿರುತ್ತದೆ.
ತಲುಪುವುದು ಹೇಗೆ:
ವಿಮಾನದ ಮೂಲಕ: ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಚೆನ್ನೈ ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನಗಳ ವ್ಯವಸ್ಥೆ ಇದೆ.
ರೈಲು ಮಾರ್ಗವಾಗಿ: ಶಿವಮೊಗ್ಗ ರೈಲು ನಿಲ್ದಾಣವು ಹೊರನಾಡಿಗೆ ಹತ್ತಿರದ ನಿಲ್ದಾಣವಾಗಿದೆ.
ರಸ್ತೆಯ ಮೂಲಕ: ನೀವು ಮೈಸೂರು, ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರಿನಿಂದ ಬಸ್ ಮೂಲಕ ಹೊರನಾಡು ದೇವಾಲಯವನ್ನು ತಲುಪಬಹುದಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಈ ಪ್ರದೇಶದ ಆಸುಪಾಸಿನಲ್ಲಿ ಶೃಂಗೇರಿ, ಕುದುರೆಮುಖ ಮತ್ತು ಅದರ ಅಭಯಾರಣ್ಯಗಳು ಮತ್ತು ಕಳಸದಂತಹ ಸಮೀಪದ ಸ್ಥಳಗಳನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ.
4. ಧರ್ಮಸ್ಥಳ ಮಂಜುನಾಥ ದೇವಸ್ಥಾನ – ದಕ್ಷಿಣ ಕನ್ನಡ
ದೇವಾಲಯದ ಬಗ್ಗೆ:
ಮಂಜುನಾಥಸ್ವಾಮಿ ದೇವಾಲಯವಿರುವ ಈ ಪ್ರದೇಶವು ಬಹಳ ಪುಣ್ಯ ಕ್ಷೇತ್ರವಾಗಿದೆ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆಯನ್ನು ಯಾತ್ರಾರ್ಥಿಗಳು ಕಾಣಬಹುದಾಗಿದೆ. ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಈ ಸ್ಥಳವು ನೇತ್ರಾವತಿ ನದಿಯ ದಡದ ಮೇಲೆ ನೋಡಬಹುದಾಗಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ತಂದು ಉಡುಪಿಯ ಯತ್ರಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಈ ದೇವಾಲಯವು ದಾನ ಧರ್ಮಕ್ಕೆ ಹೆಸರುವಾಸಿಯಾಗ್ಗಿದ್ದು ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿರುವ ಈ ಪ್ರದೇಶವು ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಈ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ನವೆಂಬರ್ – ಫೆಬ್ರವರಿ ತಿಂಗಳಲ್ಲಿ ಭೇಟಿ ಮಾಡಲು ಉತ್ತಮ ಸ್ಥಳವಾಗಿದೆ.
ತಲುಪುವುದು ಹೇಗೆ:
ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 82 ಕಿ.ಮೀ. ದೂರದಲ್ಲಿದೆ.
ರೈಲಿನ ಮೂಲಕ: ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 72 ಕಿ.ಮೀ. ದೂರದಲ್ಲಿದೆ.
ರಸ್ತೆಯ ಮೂಲಕ: ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 74 ಕಿ.ಮೀ. ದೂರದಲ್ಲಿದೆ
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
* ಶ್ರೀ ಸೌತಡ್ಕ ಮಹಾಗಣಪತಿ ದೇವಾಲಯವು ಧರ್ಮಸ್ಥಳದಿಂದ ಕೇವಲ 17 ಕಿ.ಮೀ ದೂರದಲ್ಲಿರುವ ಧಾರ್ಮಿಕ ಸ್ಥಳವಾಗಿದೆ.
* ಸೂರ್ಯ ಸದಾಶಿವ ರುದ್ರ ಪವಿತ್ರ ದೇವಾಲಯವು ಧರ್ಮಸ್ಥಳದಿಂದ ಕೇವಲ 13 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದಾಗಿದೆ.
* ಶ್ರೀ ವೈದ್ಯನಾಥೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ಕೊಕ್ಕಡ. ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡ ಕ್ಷೇತ್ರ. ಇದು ಧರ್ಮಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿದೆ.
* ಕನ್ಯಾಡಿ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 4 ಕಿ.ಮೀ ಅತಿ ಸಮೀಪದ ಸ್ಥಳವಾಗಿದೆ.
* ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಧರ್ಮಸ್ಥಳದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಒಂದು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ.
5. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ – ಸುಬ್ರಹ್ಮಣ್ಯ (ದಕ್ಷಿಣ ಕನ್ನಡ)
ದೇವಾಲಯದ ಬಗ್ಗೆ:
ಕುಕ್ಕೆ ಸುಬ್ರಹ್ಮಣ್ಯವು 5000 ವರ್ಷಗಳಷ್ಟು ಹಳೆಯದಾದ ಹಿಂದೂ ಧಾರ್ಮಿಕ ಕ್ಷೇತ್ರವಾಯಿದೆ, ಇದು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿರುವ ಸುಬ್ರಹ್ಮಣ್ಯ ಗ್ರಾಮದಲ್ಲಿ ಕುಮಾರಧಾರ ನದಿಯ ದಡದಲ್ಲಿದ್ದು ಸುತ್ತಲೂ ಕುಮಾರ ಪರ್ವತ್ತವಿದ್ದು ಪೂರ್ವ ದಿಕ್ಕಿನಲ್ಲಿ ದೇವಾಲಯವು ಆಧ್ಯಾತ್ಮಿಕ ಸ್ಥಳವಾಗಿ ಭಕ್ತರಿಗೆ ಕಾಣಸಿಗುತ್ತದೆ. ಕಾರ್ತಿಕೇಯನನ್ನು ದೇವಾಲಯದಲ್ಲಿ ಎಲ್ಲಾ ಸರ್ಪಗಳ ಅಧಿಪತಿ ಸುಬ್ರಹ್ಮಣ್ಯ ಎಂದು ಪೂಜಿಸಲಾಗುವ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಪ್ರೇಕ್ಷಣಿಯ ಸ್ಥಳವಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 6.30 ರಿಂದ ಮಧ್ಯಾಹ್ನ1.30ರ ವರೆಗೆ ಮತ್ತು ಮಧ್ಯಾಹ್ನ 3.30ರಿಂದ ರಾತ್ರಿ 8.30ರ ವರೆಗೆ ಭಕ್ತರು ದರ್ಶನವನ್ನು ಪಡೆಯಬಹುದಾಗಿದೆ.
ತಲುಪುವುದು ಹೇಗೆ:
ವಿಮಾನದ ಮೂಲಕ : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇವಲ 112 ಕಿ.ಮೀ ದೂರದಲ್ಲಿದೆ.
ರಸ್ತೆಯ ಮೂಲಕ : ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬೇರೆ ಬೇರೆ ಬಸ್ಸುಗಳ ಸೌಲಭ್ಯವಿದೆ.
104 ಕಿ.ಮೀ ದೂರದಲ್ಲಿರುವ ಮಂಗಳೂರಿನ ಬಸ್ ಪ್ರಯಾಣಿಕರು ಕಡಬ ರಸ್ತೆಯ ಮೂಲಕ ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣಿಸುವಾಗ 3 ಗಂಟೆಗಳನ್ನು ತೆಗೆದುಕೊಳ್ಳಬಹುದು.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಆದಿ ಸುಬ್ರಹ್ಮಣ್ಯ: 0.25 ಕಿಮೀ ದೂರದಲ್ಲಿದೆ.
ಕಾಶಿಕಟ್ಟೆ ಗಣಪತಿ : ಸುಮಾರು 0.25 ಕಿ.ಮೀ ದೂರದಲ್ಲಿದೆ.
ಬಿಲದ್ವಾರ :ದೇವಾಲಯದಿಂದ 0.30 ಕಿ.ಮೀ ದೂರದಲ್ಲಿದೆ.
ವನದುರ್ಗಾ ದೇವಿ ದೇವಾಲಯ :ಸುಮಾರು 0.50 ಕಿ.ಮೀ ದೂರದಲ್ಲಿದೆ
ಕುಕ್ಕೆ ಶ್ರೀ ಅಭಯ ಮಹಾಗಣಪತಿ :ಸುಮಾರು 0.45 ಕಿ.ಮೀ ದೂರದಲ್ಲಿದೆ.
ಬಸವೇಶ್ವರ ದೇವಸ್ಥಾನ ಕುಲ್ಕುಂದ: 2 ಕಿ.ಮೀ ದೂರದಲ್ಲಿ
ಹರಿ ಹರೇಶ್ವರ ದೇವಸ್ಥಾನ : 8 ಕಿ.ಮೀ ದೂರದಲ್ಲಿದೆ.
6. ಮುರುಡೇಶ್ವರ ದೇವಸ್ಥಾನ – ಉತ್ತರ ಕನ್ನಡ
ದೇವಾಲಯದ ಬಗ್ಗೆ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಇರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಸ್ಥಳವಾಗಿದ್ದು,ಇದೊಂದು ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ . ಅರಬ್ಬೀ ಸಮುದ್ರದ ತೀರದಲ್ಲಿರುವ ಪ್ರೇಕ್ಷಣೀಯ ಸ್ಥಳವಾಗಿದೆ ಮತ್ತು ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿಗರನ್ನು ತನ್ನೆಡೆ ಸೆಳೆಯುವ ಒಂದು ಸುಂದರ ತಾಣವಾಗಿದೆ.
“ಮುರ್ಡೇಶ್ವರ” ಎಂಬ ಹೆಸರಿನ ಮೂಲವು ರಾಮಾಯಣದ ಕಾಲಕ್ಕೆ ಸೇರಿದ್ದಾಗಿದೆ. ಹಿಂದೂ ದೇವರುಗಳು ಆತ್ಮ-ಲಿಂಗ ಎಂಬ ದೈವಿಕ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಮತ್ತು ಅಜೇಯತೆಯನ್ನು ಪಡೆದಿದ್ದಾರೆ. ಹಾಗೆಯೇ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ಧಾರ್ಮಿಕ ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು, ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಇಂದಿಗೂ ಕಾಣಬಹುದು.
ಭೇಟಿ ನೀಡಲು ಉತ್ತಮ ಸಮಯ:
ಇಲ್ಲಿಯ ದೇವಾಲಯದಲ್ಲಿ ಮುಂಜಾನೆ 3 ಗಂಟೆಗೆ ದರ್ಶನದ ಅವಕಾಶವನ್ನು ನೀಡಲಾಗುತ್ತದೆ. ಮಧ್ಯಾಹ್ನ 1 ಗಂಟೆಯವರೆಗೆ ಪೂಜೆಗೆ ಅವಕಾಶ ಇರುತ್ತದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಭಟ್ಕಳದಿಂದ 18 ಕಿ.ಮೀ. , ಬೆಂಗಳೂರಿಗೆ 464 ಕಿ.ಮೀ. ದೂರದಲ್ಲಿದೆ.
ರೈಲಿನ ಮೂಲಕ: ಹತ್ತಿರದ ರೈಲ್ವೆ ನಿಲ್ದಾಣಗಳು ಭಟ್ಕಳ ಮತ್ತು ಮುರ್ಡೇಶ್ವರ
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಅಪ್ಸರಾ ಕೊಂಡ ಜಲಪಾತ :ಮುರುಡೇಶ್ವರದಿಂದ 20 ಕಿಮೀ
ಬೈಂದೂರು / ಬೈಂದೂರು ಬೀಚ್: ಮುರುಡೇಶ್ವರದಿಂದ 30 ಕಿ.ಮೀ
ಬಸವರಾಜ ದುರ್ಗ ದ್ವೀಪ: ಮುರುಡೇಶ್ವರದಿಂದ 36 ಕಿ.ಮೀ
ನೇತ್ರಾಣಿ ದ್ವೀಪ: ಮುರುಡೇಶ್ವರದಿಂದ 20 ಕಿ.ಮೀ
ಗೋಕರ್ಣ ಬೀಚ್: ಮುರುಡೇಶ್ವರದಿಂದ 75 ಕಿ.ಮೀ
7. ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ – ಶಿವಮೊಗ್ಗ
ದೇವಾಲಯದ ಬಗ್ಗೆ:
ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನವು ಒಂದು ಧಾರ್ಮಿಕ ಹಿಂದೂ ದೇವಾಲಯವಾಗಿದೆ. ಇದೊಂದು ಪುರಾತನ ಗುಹಾ ದೇವಾಲಯವು ಕೂಡ ಇದಾಗಿದೆ .ಇದು ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸೊರಬದಿಂದ 19 ಕಿಮೀ ದೂರದಲ್ಲಿದೆ ಮತ್ತು ಸಿರ್ಸಿ ಮತ್ತು ಸಿದ್ದಾಪುರ ಪಟ್ಟಣಗಳಿಂದ 19 ಕಿಮೀ ದೂರದಲ್ಲಿರುವ ಒಂದು ದೇವಾಲಯವಾಗಿದೆ.
ಪುರಾಣ ಪ್ರಸಿದ್ಧವಾದ ಪರುಶುರಾಮನ ತಾಯಿಯಾದ ರೇಣುಕಾಂಬೆ ದೇವಾಲಯ ಇದಾಗಿದೆ. ಎದುರಿಗೆ ಪರಶುರಾಮ ಮತ್ತು ಏಳು ಹೆಡೆ ನಾಗೇಂದ್ರನ ದೇವಾಲಯವು ಕಾಣಬಹುದಾಗಿದೆ. ಇಲ್ಲಿ ಎತ್ತರವಾದ ಗುಡ್ಡವಿರುವುದರಿಂದ ಕದಂಬರ ಕಾಲದಲ್ಲಿ ಕೋಟೆ ನಿರ್ಮಾಣ ಮಾಡಿ ಯುದ್ಧಕಾಲದಲ್ಲಿ ಇದನ್ನು ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವಿತ್ತೆಂದು ಹೇಳಲಾಗುತ್ತದೆ. ಅಮವಾಸ್ಯೆ ಮತ್ತು ನವರಾತ್ರಿಗಳಲ್ಲಿ ಹೆಚ್ಚು ಭಕ್ತಾದಿಗಳು ಇಲ್ಲಿ ದರ್ಶನಕ್ಕಾಗಿ ಬರುತ್ತಾರೆ . ಸಾಧಾರಣವಾಗಿ ಉತ್ತರ ಕರ್ನಾಟಕದಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಭೇಟಿ ನೀಡಲು ಉತ್ತಮ ಸಮಯ:
ಈ ದೇವಾಲಯವು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಪೂರ್ತಿ ದಿನ ದರ್ಶನಕ್ಕೆ ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಕೇವಲ ಬೆಳಗ್ಗಿನ ಸಮಯದಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಭಕ್ತರಿಗೆ ಅವಕಾಶವಿರುತ್ತದೆ.
ರಸ್ತೆಯ ಮೂಲಕ: ಚಂದ್ರಗುತ್ತಿ ಸೊರಬ (ಮುಖ್ಯ ಬಸ್ ನಿಲ್ದಾಣ) ದಿಂದ 16 ಕಿ.ಮೀ ದೂರದಲ್ಲಿದೆ, ಸಿದ್ಧಾಪುರದಿಂದಲೂ ಬಸ್ಸ ವ್ಯವಸ್ಥೆ ದೊರೆಯುತ್ತದೆ.
ರೈಲಿನ ಮೂಲಕ: ತಾಳಗುಪ್ಪ ರೈಲ್ವೆ ನಿಲ್ದಾಣವು ಅತಿ ಸಮೀಪದ ನಿಲ್ದಾಣವಾಗಿದೆ.
ವಿಮಾನದ ಮೂಲಕ: ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಬನವಾಸಿ ದೇವಾಲಯ, ಗುಡವಿ ಪಕ್ಷಿಧಾಮ ಮತ್ತು ಶರಾವತಿ ನದಿ ಚಂದ್ರಗುತ್ತಿಗೆ ಹತ್ತಿರವಿರುವ ಪ್ರವಾಸಿ ತಾಣಗಳಾಗಿವೆ.
8. ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳು – ಕೂರ್ಗ್
ದೇವಾಲಯದ ಬಗ್ಗೆ:
ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು , ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಸುಂದರ ಸ್ಥಳವಾಗಿದೆ. ಮಡಿಕೇರಿಯಿಂದ ಸುಮಾರು 46 ಕಿ.ಮೀಗಳ ದೂರದಲ್ಲಿ ಸಿಗುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಕಾಣಬಹುದಾಗಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತದೆ . ಇದ ‘ತೀರ್ಥೋದ್ಭವ’ ಎಂದು ಹೆಚ್ಚು ಪ್ರಚಲಿತದಲ್ಲಿದೆ.
ಭೇಟಿ ನೀಡಲು ಉತ್ತಮ ಸಮಯ: ಭಾಗಮಂಡಲ ತ್ರಿವೇಣಿ ಸಂಗಮ ಕೂರ್ಗ್ ಟೈಮಿಂಗ್ಸ್ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 7:00 ಗಂಟೆವರೆಗೆ
ತಲುಪುವುದು ಹೇಗೆ:
ರಸ್ತೆಯ ಮೂಲಕ: ತಲಕಾವೇರಿ: ಮಡಿಕೇರಿಯಿಂದ 39 ಕಿಮೀ, ದೂರದಲ್ಲಿರುವ ಭಾಗಮಂಡಲಕ್ಕೂ ತಲಕಾವೇರಿಗೂ 8 ಕಿಮೀ. ಉದ್ದದ ವಾಹನಯೋಗ್ಯ ರಸ್ತೆ ಸಂಚಾರ ಮಾಡಬಹುದಾಗಿದೆ.
ಭಾಗಮಂಡಲವು ಮಡಿಕೇರಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ. ಪ್ರವಾಸಿಗರು ಸ್ಥಳೀಯವಾಗಿ ನಡೆಸುವ ಸರ್ಕಾರಿ ಅಥವಾ ಖಾಸಗಿ ಬಸ್ಗಳ ಮೂಲಕ ತಲುಪಬಹುದಾಗಿದೆ ಅಥವಾ ತಮ್ಮದೇ ಆದ ವಾಹನಗಳಲ್ಲಿಯೂ ಈ ಸ್ಥಳವನ್ನು ತಲುಪಬಹುದಾಗಿದೆ. ಅವರು ಈ ಸ್ಥಳವನ್ನು ಭೇಟಿ ನೀಡಲು ಕೊಡಗಿನ ಪ್ರಮುಖ ಕಾರು ಬಾಡಿಗೆ ಕಂಪನಿಗಳಿಂದ ಖಾಸಗಿ ಕ್ಯಾಬ್ ಅನ್ನು ಸಹ ಬುಕ್ ಮಾಡಿ ಸಂಚರಿಸಬಹುದಾಗಿದೆ.
ರೈಲಿನ ಮೂಲಕ: ಮೈಸೂರು ಮತ್ತು ಮಂಗಳೂರು ರೈಲ್ವೆ ನಿಲ್ದಾಣ.
ವಿಮಾನದ ಮೂಲಕ: ತಲಕಾವೇರಿ ಮತ್ತು ಭಾಗಮಂಡಲಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (CNN), ಇದು ತಲಕಾವೇರಿಯಿಂದ ಸುಮಾರು 53 ಕಿ.ಮೀ ಮತ್ತು ಭಾಗಮಂಡಲದಿಂದ 63 ಕಿ.ಮೀ ದೂರದಲ್ಲಿ ಪ್ರಯಾಣಿಕರಿಗೆ ಸಿಗುವಂತಹ ನಿಲ್ದಾಣವಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಶ್ರೀ ಭಗಂಡೇಶ್ವರ ದೇವಸ್ಥಾನ. ಚೋಳರು ನಿರ್ಮಿಸಿರುವ ಈ ದೇವಸ್ಥಾನವು ಪ್ರತಿವರ್ಷ ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.
ಭಾಗಮಂಡಲದಲ್ಲಿರುವ ಮಧುವನ: ರಾಜ್ಯದ ಪ್ರಸಿದ್ಧ ಜೇನು ಸಾಕಣೆ ಕೇಂದ್ರಗಳಲ್ಲಿ ಮಹತ್ವದಾಗಿದೆ.
ಮೌಂಟ್ ತಾವೂರು.
ತಲಕಾವೇರಿ ವನ್ಯಜೀವಿ ಅಭಯಾರಣ್ಯ.
9. ಯಾನ ಗುಹೆ ದೇವಾಲಯ – ಉತ್ತರ ಕನ್ನಡ
ದೇವಾಲಯದ ಬಗ್ಗೆ: ಇದು ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶದ ಒಂದು ಸ್ಥಳವಾಗಿದೆ. ಯಾಣವು ವಿಶ್ವದ ಅತ್ಯಂತ ಮಳೆ ಬೀಳುವ ಪ್ರದೇಶದಲ್ಲಿ ಒಂದಾಗಿದೆ. ಇದು ಕರ್ನಾಟಕದ ಅತ್ಯಂತ ಸ್ವಚ್ಛವಾದ ಹಳ್ಳಿಗಳಲ್ಲಿ ಒಂದಾಗಿದೆ ಮತ್ತು ಭಾರತದ ಎರಡನೇ ಅತ್ಯಂತ ಸ್ವಚ್ಛವಾದ ಹಳ್ಳಿ ಎಂಬ ಕೀರ್ತಿಗೆ ಪಾತ್ರವಾಗಿದೆ.
ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂದು ಹೆಸರುವಾಸಿಯಾದ ಈ ಎರಡು ಬೃಹತ್ ಶಿಲಾ ರಚನೆಗಳಿಗೆ ಯಾಣ ಪ್ರಸಿದ್ಧವಾಗಿದೆ. ಭೈರವೇಶ್ವರ ಶಿಖರದ ಕೆಳಗೆ ಗುಹಾ ದೇವಾಲಯವಿರುವುದರಿಂದ ಯಾಣವು ತೀರ್ಥಯಾತ್ರೆಯ ಸ್ಥಳವಾಗಿಯೂ ಪ್ರಸಿದ್ದಿಯಲ್ಲಿದೆ. ಶಿವರಾತ್ರಿಯ ವೇಳೆಯಲ್ಲಿ ಇಲ್ಲಿ ರಥೋತ್ಸವವನ್ನು ಇತರ ಉತ್ಸವಗಳ ಜೊತೆಗೆ ನೆರವೇರಿಸಲಾಗುತ್ತದೆ.
ಭೇಟಿ ನೀಡಲು ಉತ್ತಮ ಸಮಯ: ಯಾಣಕ್ಕೆ ಭೇಟಿ ನೀಡಲು ಮಳೆಗಾಲವು ಅತ್ಯುತ್ತಮ ಸಮಯ. ನೀವು ಚಳಿಗಾಲದಲ್ಲಿಯೂ ಯಾಣ ಗುಹೆಗಳಿಗೆ ಭೇಟಿ ಮಾಡಲು ಉತ್ತಮ ಸಮಯವಾಗಿದೆ
ತಲುಪುವುದು ಹೇಗೆ:
ರಸ್ತೆಯ ಮೂಲಕ: ಕುಮಟಾ – 25 ಕಿಲೋಮೀಟರ್, ಶಿರಸಿ – 40 ಕಿಲೋಮೀಟರ್, ಗೋಕರ್ಣ – 52 ಕಿಲೋಮೀಟರ್, ಹುಬ್ಬಳ್ಳಿ – 142 ಕಿಲೋಮೀಟರ್ ಮತ್ತು ಮಂಗಳೂರು – 230 ಕಿಲೋಮೀಟರ್.
ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಕುಮಟಾದಲ್ಲಿದೆ
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ ಮತ್ತು ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ವಿಭೂತಿ ಜಲಪಾತ: ಅಕ್ಟೋಬರ್ ನಿಂದ ಜನವರಿ. ಪ್ರವೇಶದ್ವಾರದಿಂದ ಜಲಪಾತವನ್ನು ತಲುಪಲು ನೀವು 1 ರಿಂದ 1.5 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ.
ಉಂಚಲ್ಲಿ ಜಲಪಾತ: ಅಘನಾಶಿನಿ ನದಿಯಿಂದ ನಿರ್ಮಾಣವಾದ ಈ ಜಲಪಾತವು ಶಿರಸಿಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. 116 ಮೀಟರ್ ಎತ್ತರದಿಂದ ನೀರು ದುಮುಕುತ್ತದೆ.
ಗೋಕರ್ಣ ಬೀಚ್: ಒಂದು ಬದಿಯಲ್ಲಿ ಪರ್ವತಗಳಿಂದ ಮತ್ತು ಇನ್ನೊಂದು ಕಡೆ ಅರೇಬಿಯನ್ ಸಮುದ್ರದಿಂದ ಸುತ್ತುವರೆದು ರಮಣೀಯವಾಗಿ ಕಾಣುತ್ತದೆ.
10. ಸಿಗಂದೂರು ಚೌಡೇಶ್ವರಿ ದೇವಸ್ಥಾನ – ಸಾಗರ, ಶಿವಮೊಗ್ಗ
ದೇವಾಲಯದ ಬಗ್ಗೆ:
ಸಿಗಂದೂರು ಭಾರತದ ಕರ್ನಾಟಕ ರಾಜ್ಯದ ತುಮರಿಯ ಬಳಿಯ ಒಂದು ದೈವಿಕ ಕ್ಷೇತ್ರವಾಗಿದೆ. ಈ ಗ್ರಾಮವು ಸಿಗಂದೂರು ಚೌಡೇಶ್ವರಿ ಆವಾಸ ಸ್ಥಾನವಾಗಿದೆ,ಈ ಪ್ರದೇಶವು ಶರಾವತಿ ನದಿಯಿಂದ ನಿರ್ಮಾಣವಾಗಿದ್ದು ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಸುತ್ತುವರಿಯಲ್ಪಟ್ಟಿದ. ಶ್ರೀ ಚೌಡಮ್ಮ ದೇವಿಗೆ ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿ ಇದ್ದು ಇದು ಭಕ್ತರನ್ನು ಹೆಚ್ಚು ಆಕರ್ಷಿಸುತ್ತಿದೆ. ಯಾವುದೇ ಭಕ್ತರ ಮನೆಯಲ್ಲಿ ಯಾವುದೇ ಕಳ್ಳತನ ನಡೆದರೆ, ದೇವಿಯ ಬಳಿಯಲ್ಲಿ ಭಕ್ತಿಯಿಂದ ಬೇಡಿಕೊಂಡಾಗ ಅವರನ್ನು ಶಿಕ್ಷಿಸುತ್ತಾಳೆ.
ಭೇಟಿ ನೀಡಲು ಉತ್ತಮ ಸಮಯ: ಮುಂಜಾನೆ 3:30 ರಿಂದ ಮಧ್ಯಾಹ್ನ 2:30 ರವರೆಗೆ, ಸಂಜೆ 5:30 ರಿಂದ 7:30 ರವರೆಗೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ನೀವು ಸಾಗರ ತಲುಪಬಹುದು, ನಂತರ ಬಸ್/ವ್ಯಾನ್ ತೆಗೆದುಕೊಂಡು ಹೊಳೆಬಾಗಿಲು ತಲುಪಬಹುದು, ನಂತರ ಲಾಂಚರ್ ಮತ್ತು ದೇವಾಲಯವನ್ನು ತಲುಪಬಹುದು.
ರೈಲಿನ ಮೂಲಕ: ಶಿವಮೊಗ್ಗ ಪಟ್ಟಣ ನಿಲ್ದಾಣದ ನಂತರ ಬರುವ ಸಾಗರ ಜಂಬಗಾರು ನಿಲ್ದಾಣವು ತಲುಪಲು ಹತ್ತಿರದ ನಿಲ್ದಾಣವಾಗಿದೆ.
ವಿಮಾನದ ಮೂಲಕ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ 105 ಕಿ.ಮೀ ದೂರ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಜೋಗ ಜಲಪಾತ: ಕರ್ನಾಟಕ-ಭಾರತದ ಅತ್ಯಂತ ಭವ್ಯವಾದ ಮತ್ತು ಸುಂದರವಾದ ಮನಮೋಹಕ ಜಲಪಾತವಾಗಿದೆ. ಶರಾವತಿ ನದಿಯ ಸುತ್ತಮುತ್ತಲಿನ ಕಾಡುಗಳ ಮದ್ಯದಲ್ಲಿ ಕಂಡುಬರುತ್ತದೆ
ಕೊಲ್ಲೂರು : ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ ರಾಜ್ಯದ ಮಂಗಳೂರು ನಗರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಕುಂದಾಪುರ ಪಟ್ಟಣದಿಂದ 40 ಕಿ.ಮೀ ದೂರದಲ್ಲಿರುವ ಒಂದು ಧಾರ್ಮಿಕ ಕ್ಷೇತ್ರವಾಗಿದೆ.
ಶಿವಮೊಗ್ಗ ಜಿಲ್ಲೆ : ಶರಾವತಿ ಕಣಿವೆ ಅಥವಾ ಪಶ್ಚಿಮ ಘಟ್ಟಗಳು ಪ್ರಕೃತಿ ಪ್ರಿಯರಿಗೆ ವೀಕ್ಷಿಸಲು ಬಹು ಸುಂದರವಾಗಿದೆ.