10 ಪ್ರಸಿದ್ಧ ಹರಕೆ ತೀರಿಸುವ ದೇವಾಲಯಗಳು
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (ದಕ್ಷಿಣ ಕನ್ನಡ)
ಸರ್ಪ ದೋಷ ನಿವಾರಣಾ ಪೂಜೆ ಮತ್ತು ಇಷ್ಟಾರ್ಥ ಈಡೇರಿಕೆಗೆ ಪ್ರಸಿದ್ಧ.
ದೇವಾಲಯದ ಬಗ್ಗೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಶಿವ ಪುತ್ರ ಷಣ್ಮುಖನನ್ನು ಸುಬ್ರಹ್ಮಣ್ಯ ಎಂಬ ನಾಮದಲ್ಲಿ ಪೂಜಿಸಲಾಗುತ್ತದೆ. ಷಣ್ಮುಖನು ಇಲ್ಲಿ ಆರಾಧಿಸುವ ದೇವರಾಗಿದೆ, ನಾಗಮಂಡಲವೆಂಬ ನೃತ್ಯವನ್ನು ಇಲ್ಲಿ ನಡೆಸಲಾಗುತ್ತದೆ.
ಸರ್ಪ ದೋಷ ನಿವಾರಣಾ ಪೂಜೆ:
ಸುಬ್ರಹ್ಮಣ್ಯ ದೇವಾಲಯದಲ್ಲಿ ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಬೇರಾವುದಾದರೂ ದೋಷಗಳ ಕಾರಣದಿಂದ ಅನಾರೋಗ್ಯ, ತಡವಾಗಿ ವಿವಾಹವಾಗುವುದು, ವೈವಾಹಿಕ ಸಂಬಂಧದಲ್ಲಿ ತೊಂದರೆ ಉಂಟಾಗುವುದು, ಪುತ್ರಹೀನತೆ ,ಸಂತಾನಹೀನತೆ,ಉದ್ಯೋಗದಲ್ಲಿ ತೊಂದರೆ ,ಬೇರೆರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಈ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸಬಹುದು.
ಕರ್ನಾಟಕದಲ್ಲಿರುವ ಹೆಚ್ಚು ಪ್ರಸಿದ್ದವಾದ ನಾಗರೂಪದಲ್ಲಿ ನೆಲೆಸಿರುವ ಸುಬ್ರಹ್ಮಣ್ಯಸ್ವಾಮಿಯ ದೇವಾಲಯವಿರುವ ಕ್ಷೇತ್ರ ಎಂದರೆ ಅದು ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಹೇಳಬಹುದಾಗಿದೆ. ಈ ಕ್ಷೇತ್ರಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಎಲ್ಲ ರೀತಿಯ ಸೇವೆ ಸಲ್ಲಿಸಿ ದೋಷ ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಾರೆ. ಕುಜದೋಷವಿರುವವರೂ ದೋಷ ಪರಿಹಾರ ಮಾಡಿಕೊಂಡು ಹೋಗಬಹುದಾಗಿದೆ. ಕಾರ್ತಿಕೇಯ, ಸುಬ್ರಹ್ಮಣ್ಯ ವಿವಿಧ ನಾಮಗಳಿಂದ ಕರೆಯುತ್ತಾರೆ. ಭಕ್ತರ ದೋಷಗಳನ್ನು ಪರಿಹಾರ ಮಾಡುತ್ತ ಈ ಕ್ಷೇತ್ರದಲ್ಲಿ ನೆಲೆಯಾಗಿ ನಿಂತಿದ್ದಾನೆ ಎಂದು ಹೇಳಬಹುದು.
ಭೇಟಿ ನೀಡಲು ಉತ್ತಮ ಸಮಯ:
ಮುಂಜಾನೆ 6.30 ರಿಂದ ಮಧ್ಯಾಹ್ನ1.30ರ ವರೆಗೆ ಮತ್ತು ಮಧ್ಯಾಹ್ನ 3.30ರಿಂದ ರಾತ್ರಿ 8.30ರ ವರೆಗೆ ಭಕ್ತರು ದರ್ಶನವನ್ನು ಪಡೆಯಬಹುದಾಗಿದೆ.
ತಲುಪುವುದು ಹೇಗೆ:
ವಿಮಾನದ ಮೂಲಕ : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇವಲ 112 ಕಿ.ಮೀ ದೂರದಲ್ಲಿದೆ.
ರಸ್ತೆಯ ಮೂಲಕ :
ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬೇರೆ ಬೇರೆ ಬಸ್ಸುಗಳ ಸೌಲಭ್ಯವಿದೆ.
104 ಕಿ.ಮೀ ದೂರದಲ್ಲಿರುವ ಮಂಗಳೂರಿನ ಬಸ್ ಪ್ರಯಾಣಿಕರು ಕಡಬ ರಸ್ತೆಯ ಮೂಲಕ ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣಿಸುವಾಗ 3 ಗಂಟೆಗಳನ್ನು ತೆಗೆದುಕೊಳ್ಳಬಹುದು.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಆದಿ ಸುಬ್ರಹ್ಮಣ್ಯ: 0.25 ಕಿಮೀ ದೂರದಲ್ಲಿದೆ.
ಕಾಶಿಕಟ್ಟೆ ಗಣಪತಿ : ಸುಮಾರು 0.25 ಕಿ.ಮೀ ದೂರದಲ್ಲಿದೆ.
ಬಿಲದ್ವಾರ :ದೇವಾಲಯದಿಂದ 0.30 ಕಿ.ಮೀ ದೂರದಲ್ಲಿದೆ.
ವನದುರ್ಗಾ ದೇವಿ ದೇವಾಲಯ :ಸುಮಾರು 0.50 ಕಿ.ಮೀ ದೂರದಲ್ಲಿದೆ
ಕುಕ್ಕೆ ಶ್ರೀ ಅಭಯ ಮಹಾಗಣಪತಿ :ಸುಮಾರು 0.45 ಕಿ.ಮೀ ದೂರದಲ್ಲಿದೆ.
ಬಸವೇಶ್ವರ ದೇವಸ್ಥಾನ ಕುಲ್ಕುಂದ: 2 ಕಿ.ಮೀ ದೂರದಲ್ಲಿ
ಹರಿ ಹರೇಶ್ವರ ದೇವಸ್ಥಾನ : 8 ಕಿ.ಮೀ ದೂರದಲ್ಲಿದೆ.
- ಧರ್ಮಸ್ಥಳ ಮಂಜುನಾಥ ದೇವಸ್ಥಾನ (ದಕ್ಷಿಣ ಕನ್ನಡ)
ಮದುವೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಜ್ಞೆಗಳಿಗೆ ಜನಪ್ರಿಯವಾಗಿದೆ.
ದೇವಾಲಯದ ಬಗ್ಗೆ :
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೆಲೆಸಿರುವ ಮಂಜುನಾಥಸ್ವಾಮಿ ಪ್ರಸಿದ್ಧ ದೇವರಾಗಿದೆ. ಶ್ರವಣ ಬೆಳಗೊಳದಂತೆ ಇರುವ ಬಾಹುಬಲಿಯ ಪ್ರತಿಮೆ ಕೂಡ ಇಲ್ಲಿ ಕಾಣಬಹುದಾಗಿದೆ. ಸುಮಾರು ಏಳು ನೂರು ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಧಾರ್ಮಿಕ ದೇವಾಲಯವಾಗಿದ್ದು ಇದು ಪವಿತ್ರ ನೇತ್ರಾವತಿ ನದಿಯ ದಡದಲ್ಲಿ ಇರುವ ದೇವಾಲಯವಾಗಿದೆ. ಇಲ್ಲಿಯ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ತಂದು ಉಡುಪಿಯ ಶ್ರೀ ವಾದಿರಾಜರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ನಂಬಲಾಗುತ್ತದೆ.
ಧರ್ಮಸ್ಥಳದ ದೇವಾಲಯದಲ್ಲಿ ಅಭಿಷೇಕವು ಬೆಳಗಿನ ಪೂಜೆಯು ಬೆಳಿಗ್ಗೆ 6:30 ರ ಸುಮಾರಿಗೆ ಪ್ರಾರಂಭವಾಗುತ್ತದೆ, . ಭಕ್ತರು ಪವಿತ್ರ ಪೂಜೆ ಮತ್ತು ತಮ್ಮ ಹರಕೆಗಳನ್ನು ಆಚರಿಸಲು ಮತ್ತು ಮಂಜುನಾಥನಿಗೆ ತಮ್ಮ ಅರ್ಜಿಗಳನ್ನು ನೀಡಲು ಪ್ರಾರಂಭಿಸುತ್ತಾರೆ.
ನವಕಲಶ ಅಭಿಷೇಕ: ಧರ್ಮಸ್ಥಳ ದೇವಸ್ಥಾನದಲ್ಲಿ ನಂತರದ ಅಭಿಷೇಕವು ಮಧ್ಯಾಹ್ನ 12:30 ಕ್ಕೆ ನಡೆಯುತ್ತದೆ. ಇದು ಒಂದು ಪವಿತ್ರ ಅಭಿಷೇಕವಾಗಿದ್ದು ಈ ಸಮಯಾದ್ದಲ್ಲಿ ಅತಿ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ, ಭಕ್ತರು ದೇವಾಲಯದಲ್ಲಿ ದೇವರ ದರ್ಶನ ಮಾಡಲು ಮತ್ತು ಮಂಜುನಾಥನ ಆಶೀರ್ವಾದವನ್ನು ಪಡೆಯಲುದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಸಂಜೆಯ ಸಮಯದಲ್ಲಿ ಆರತಿ ಮತ್ತು ಕೆಲವು ಪೂಜೆಗಳು ನಡೆಯುತ್ತವೆ, ಈ ಆಚರಣೆಗಳು ಸಂಜೆ ಸುಮಾರು 6:30 ಕ್ಕೆ ಆರಂಭವಾಗುತ್ತವೆ. ಭಕ್ತರು ಸಮಾರಂಭಗಳ ಭವ್ಯತೆಯನ್ನು ನೋಡಲು ಮತ್ತು ಶಾಂತ ವಾತಾವರಣ ಇರುವ ಸಮಯದಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಬರುತ್ತಾರೆ. ಭಕ್ತರು ತಮ್ಮ ಹರಕೆಗಳ್ಳನ್ನು ಇಲ್ಲಿ ಹೇಳಿಕೊಂಡು ಹೋಗಬಹುದಾಗಿದೆ.
ಭೇಟಿ ನೀಡಲು ಉತ್ತಮ ಸಮಯ: ಈ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ನವೆಂಬರ್ – ಫೆಬ್ರವರಿ ತಿಂಗಳಲ್ಲಿ ಭೇಟಿ ಮಾಡಲು ಉತ್ತಮ ಸ್ಥಳವಾಗಿದೆ.
ತಲುಪುವುದು ಹೇಗೆ:
ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 82 ಕಿ.ಮೀ. ದೂರದಲ್ಲಿದೆ.
ರೈಲಿನ ಮೂಲಕ: ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 72 ಕಿ.ಮೀ. ದೂರದಲ್ಲಿದೆ.
ರಸ್ತೆಯ ಮೂಲಕ: ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 74 ಕಿ.ಮೀ. ದೂರದಲ್ಲಿದೆ
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
* ಶ್ರೀ ಸೌತಡ್ಕ ಮಹಾಗಣಪತಿ ದೇವಾಲಯವು ಧರ್ಮಸ್ಥಳದಿಂದ ಕೇವಲ 17 ಕಿ.ಮೀ ದೂರದಲ್ಲಿರುವ ಧಾರ್ಮಿಕ ಸ್ಥಳವಾಗಿದೆ.
* ಸೂರ್ಯ ಸದಾಶಿವ ರುದ್ರ ಪವಿತ್ರ ದೇವಾಲಯವು ಧರ್ಮಸ್ಥಳದಿಂದ ಕೇವಲ 13 ಕಿ.ಮೀ ದೂರದಲ್ಲಿ ಭೇಟಿ ಮಾಡಬಹುದಾಗಿದೆ.
* ಶ್ರೀ ವೈದ್ಯನಾಥೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ಕೊಕ್ಕಡ. ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡ ಕ್ಷೇತ್ರ. ಇದು ಧರ್ಮಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿದೆ.
* ಕನ್ಯಾಡಿ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 4 ಕಿ.ಮೀ ಅತಿ ಸಮೀಪದ ಸ್ಥಳವಾಗಿದೆ.
* ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಧರ್ಮಸ್ಥಳದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಒಂದು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ.
3.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (ಉಡುಪಿ)
ಮೂಕಾಂಬಿಕಾ ದೇವಿಯು ಭಕ್ತರಿಗೆ ಬುದ್ಧಿವಂತಿಕೆ, ಶಿಕ್ಷಣ ಮತ್ತು ಯಶಸ್ಸನ್ನು ಅನುಗ್ರಹಿಸುತ್ತಾಳೆ ಎಂದು ನಂಬಲಾಗಿದೆ.
ದೇವಾಲಯದ ಬಗ್ಗೆ:
ಮೂಕಾಂಬಿಕಾ ದೇವಿ ದೇವಾಲಯವು, ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಭಕ್ತರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಹಚ್ಚ ಹಸಿರಿನಿಂದ ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟವು ನೋಡುಗರ ಗಮನವನ್ನು ಸೆಳೆಯುತ್ತವೆ , ಮಂಗಳೂರಿನಿಂದ 147 ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪ್ರತಿವರ್ಷವೂ ಸಾವಿರಾರು ಯಾತ್ರಾರ್ಥಿಗಳನ್ನು ತನ್ನೆಡೆ ಆಕರ್ಷಿಸುತ್ತದೆ.
ಈ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುವ ಕೊನೆಯ ದಿನದಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ ವಿಶೇಷ ಪೂಜೆ ಇದ್ದು ನಂತರದಲ್ಲಿ ಪುಟ್ಟ ಮಕ್ಕಳಿಗೆ ಮಾತೃಭಾಷೆಯ ವರ್ಣಮಾಲೆಯ ಅಕ್ಷರಗಳಲ್ಲಿ ಉಪದೇಶವನ್ನು ಮಾಡಲಾಗುತ್ತದೆ ಮತ್ತು ಇದು ವಿದ್ಯಾರಂಭ ಮಾಡುವ ಒಂದು ಆಚರಣೆಯಾಗಿದೆ. ಈ ದೇವಾಲಯದ್ದಲ್ಲಿ ಯಾವುದೇ ಒಳ್ಳೆಯ ದಿನದಂದು ಅಕ್ಷರ ಉಪದೇಶವನ್ನು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಪ್ರಾರಂಭ ಮಾಡಬಹುದಾಗಿದೆ. ಪ್ರತಿನಿತ್ಯವೂ ಮಧ್ಯಾಹ್ನದ ವೇಳೆಯಲ್ಲಿ ಮತ್ತು ಸಾಯಂಕಾಲಗಳಲ್ಲಿ ಇಲ್ಲಿ ಬರುವ ಭಕ್ತರಿಗೆ ಅನ್ನದಾನವನ್ನು ಮಾಡುವ ವ್ಯವಸ್ಥೆ ಕೂಡ ಇಲ್ಲಿ ನಡೆಯುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿದಾನದಲ್ಲಿ ಮಕ್ಕಳ್ಳಿಗೆ ವಿದ್ಯಾಭ್ಯಾಸ ಮಾಡಿಸುವುದರಿಂದ ಮಕ್ಕಳು ಬುದ್ದಿವಂತರಾಗುತ್ತಾರೆ ಎಂಬ ನಂಬಿಕೆ ಇದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಸಮಯ:
ಪ್ರತಿದಿನ ಮುಂಜಾನೆ: 5:00 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿದಿನ ಮಧ್ಯಾಹ್ನ: 3:00 ರಿಂದ ರಾತ್ರಿ 9:00 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ತಲುಪುವುದು ಹೇಗೆ:
ಮಂಗಳೂರು, ಉಡುಪಿ ಮತ್ತು ಕುಂದಾಪುರ ರಸ್ತೆಯಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಬಸ್ಸುಗಳ ವ್ಯವಸ್ಥೆಯನ್ನು ಹೊಂದಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ (ಬೈಂದೂರು) ಅಥವಾ ಕುಂದಾಪುರ ರೈಲ್ವೆ ನಿಲ್ದಾಣ ಕೊಲ್ಲೂರಿಗೆ ಸನಿಹದಲ್ಲಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
*ಬೈಂದೂರು ಕಡಲ ತೀರ(ಉಡುಪಿ ಜಿಲ್ಲೆ): 15 ಕಿ.ಮೀ.; ಇದು ಕಡಲ ತೀರದ ಸುಂದರ ಪ್ರದೇಶವಾಗಿದೆ. *ಒತ್ತಿನಾಣೆ (ಉಡುಪಿ ಜಿಲ್ಲೆ): 14 ಕಿ.ಮೀ.; ಇಲ್ಲಿ ಎತ್ತರದ ನೆಲ (ಪ್ರಸ್ಥಭೂಮಿ) ಮತ್ತು ಸಮುದ್ರ ಹೆದ್ದಾರಿಯ ಸನಿಹ ಸ್ಥಳವಾಗಿದೆ.
*ನಗರ ಕೋಟೆ (ಶಿವಮೊಗ್ಗ ಜಿಲ್ಲೆ): 30 ಕಿ.ಮೀ.; ಹಳೆಯ ಕೋಟೆಯನ್ನು ಪ್ರವಾಸಿಗರಿಗೆ ಒಂದು ವೀಕ್ಷಣಾ ಸ್ಥಳವಾಗಿದೆ.
*ಮೂಕಾಂಬಿಕಾ ಅಭಯಾರಣ್ಯ (ಉಡುಪಿ ಜಿಲ್ಲೆ): 5 ಕಿ.ಮೀ; ಘಟ್ಟದ ರಸ್ತೆಗಳು ಮತ್ತು ಕಾಡಿನ ದೃಶ್ಯಾವಳಿಯನ್ನು ಇದು ಒಳಗೊಂಡಿದೆ. ಸಿಗಂದೂರು (ಶಿವಮೊಗ್ಗ ಜಿಲ್ಲೆ): 35 ಕಿ.ಮೀ.
4.ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿ ಬೆಟ್ಟಗಳು (ಮೈಸೂರು)
ಭಕ್ತರು ವೃತ್ತಿ, ಆರೋಗ್ಯ ಮತ್ತು ಕುಟುಂಬದ ಆಸೆಗಳನ್ನು ಪೂರೈಸಲು ಬಯಸುತ್ತಾರೆ.
ದೇವಾಲಯದ ಬಗ್ಗೆ:
ಚಾಮುಂಡೇಶ್ವರಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳ ಮೇಲೆ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಈ ದೇವಸ್ಥಾನಕ್ಕೆ ಶಕ್ತಿಯ ಉಗ್ರ ರೂಪವಾದ ಚಾಮುಂಡೇಶ್ವರಿ ದೇವಿಯ ಹೆಸರಿಡಲಾಗಿದೆ , ಇದು ಮೈಸೂರು ಮಹಾರಾಜರ ಕಾಲದಿಂದಲೂ ಪೂಜಿಸಲ್ಪಟ್ಟ ಪ್ರಸಿದ್ದ ದೇವತೆಯಾಗಿದ್ದು ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ಒಂದಾಗಿದೆ. ಕನ್ನಡ ನಾಡಿನ ಜನತೆಯು ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಪೂಜಿಸುತ್ತಾರೆ, ಇದರ ಅರ್ಥ ನಾಡ ದೇವತೆ. ಇದು ಸಮುದ್ರ ಮಟ್ಟದಿಂದ ಸುಮಾರು 3300 ಅಡಿ ಎತ್ತರದಲ್ಲಿರುವ ಒಂದು ಪವಿತ್ರ ಹಿಂದೂ ದೇವಾಲಯವಾಗಿದೆ.
ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ನವರಾತ್ರಿ ಮತ್ತು ಅಮ್ಮನವರ ವರ್ಧಂತಿ ಮುಂತಾದ ಮುಂತಾದ ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆಷಾಢ ಮಾಸದಲ್ಲಿ ಶುಕ್ರವಾರವನ್ನುಆಚರಿಸುವುದರಿಂದ ಎಲ್ಲ ಕೆಲಸಗಳಲ್ಲೂ ಮಂಗಳವಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಮತ್ತು ತಮ್ಮ ಬೇಡಿಕೆ, ಹರಕೆಗಳು ಸಲ್ಲಿಸಲು ಬರುತ್ತಾರೆ. ಈ ತಿಂಗಳಲ್ಲಿ ಆಚರಿಸಲಾಗುವ ಮತ್ತೊಂದು ಆಚರಣೆಯೆಂದರೆ ಚಾಮುಂಡಿ ಜಯಂತಿ ಇದು ಕೂಡ ಒಂದು ಧಾರ್ಮಿಕ ಆಚರಣೆಯಾಗಿದೆ. ಮೈಸೂರು ಮಹಾರಾಜರು ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ದಿನವನ್ನು ಚಾಮುಂಡಿ ಜಯಂತಿ ಎಂದು ಸಂಭ್ರಮಿಸಲಾಗುತ್ತದೆ . ಈ ವೇಳೆಯಲ್ಲಿ ದೇವಿ ಯನ್ನು ಬಂಗಾರದ ಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಉತ್ಸವನ್ನು ನಡೆಸಲಾಗುತ್ತದೆ.
ಚಾಮುಂಡೇಶ್ವರಿ ದೇವಾಲಯ ಪ್ರವೇಶ ಶುಲ್ಕ:
ಸಾಮಾನ್ಯ ಪ್ರವೇಶ : ಉಚಿತ ಪ್ರವೇಶವಿರುತ್ತದೆ.
ವಿಶೇಷ ಪ್ರವೇಶ ಶುಲ್ಕ : ಪ್ರತಿ ಭಕ್ತಾದಿಗೆ 100 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ವಿಐಪಿ ದರ್ಶನ : ಪ್ರತಿ ಭಕ್ತಾದಿಗೆ 300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಚಾಮುಂಡೇಶ್ವರಿ ದೇವಸ್ಥಾನವನ್ನು ತಲುಪುವುದು ಹೇಗೆ?
ವಿಮಾನದ ಮೂಲಕ : ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ , ಇದು ಸುಮಾರು 20 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ಈ ದೇವಸ್ಥಾನವನ್ನು ತಲುಪಲು ಟ್ಯಾಕ್ಸಿ ವ್ಯವಸ್ಥೆ ಕೂಡ ಲಭ್ಯವಿದೆ.
ರೈಲು ಮೂಲಕ : ಸಮೀಪದ ರೈಲು ನಿಲ್ದಾಣ ಮೈಸೂರು ಜಂಕ್ಷನ್ ಆಗಿದೆ, ಇದು ದೇವಾಲಯದಿಂದ 13 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣದಿಂದ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ದೊರೆಯುತ್ತದೆ.
ರಸ್ತೆಯ ಮೂಲಕ : ಮೈಸೂರು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ದೇವಾಲಯವನ್ನು ತಲುಪಲು ನೀವು ಸಾರ್ವಜನಿಕ ಬಸ್ ಅಥವಾ ಟ್ಯಾಕ್ಸಿಯನ್ನು ಕೂಡ ಬಳಸಬಹುದಾಗಿದೆ. ಮೈಸೂರು ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ಸೌಲಭ್ಯವು ಉತ್ತಮವಾಗಿಯೆ ಇದೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ (ದಕ್ಷಿಣ ಕನ್ನಡ)
ಕೌಟುಂಬಿಕ ಕಲಹಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಸರುವಾಸಿಯಾಗಿದೆ.
ದೇವಾಲಯದ ಬಗ್ಗೆ:
ಕಟೀಲು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವ ಒಂದು ದೇವಾಲಯ ಸ್ಥಳವಾಗಿದೆ. ಕಟೀಲು ಪ್ರದೇಶವನ್ನು ಭಾರತದ ಅತ್ಯಂತ ಪವಿತ್ರ ಹಿಂದೂ ದೇಗುಲಗಳ ಪಟ್ಟಣಗಳಲ್ಲಿ ಒಂದಾಗಿದೆ. ಈ ಸ್ಥಳವು ನಂದಿನಿ ನದಿಯ ದಡದಲ್ಲಿ ಕಾಣುವ ದೇವಾಲಯವಾಗಿದೆ. ಈ ಸ್ಥಳವು ಮಂಗಳೂರಿನಿಂದ ಸುಮಾರು 20.6 ಕಿಲೋಮೀಟರ್ ಅಂತರದಲ್ಲಿದೆ .ಕಟೀಲು ಉಡುಪಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ.
ವಾರ್ಷಿಕ ಉತ್ಸವ : ಮೇಷ ಸಂಕ್ರಮಣ ದಿನದ ಹಿಂದಿನ ರಾತ್ರಿ ಇದನ್ನು ಆಚರಿಸಲಾಗುತ್ತದೆ, ನಂತರ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಈ ಉತ್ಸವವು ಏಪ್ರಿಲ್ ತಿಂಗಳಲ್ಲಿ ಆಚರಣೆ ಮಾಡಲಾಗುತ್ತದೆ ಮತ್ತು ಪ್ರತಿ ನಿತ್ಯವೂ ವಿಶಿಷ್ಟ ರೀತಿಯ ಆಚರಣೆಗಳನ್ನು 8 ದಿನಗಳವರೆಗೆ ನಡೆಸಲಾಗುತ್ತದೆ.
ಲಕ್ಷ ದೀಪೋತ್ಸವ : ಈ ಉತ್ಸವವನ್ನು ಕಾರ್ತಿಕ ಬಹುಳ ಪಂಚಮಿಯ ದಿನದಂದು ಆಚರಣೆ ಮಾಡಲಾಗುತ್ತದೆ.
ಶರನ್ನವರಾತ್ರಿ : ಆಶ್ವೀಜ ಶುದ್ಧ ಪ್ರತಿಪದದಂದು ಪ್ರಾರಂಭವಾಗುವ ಈ ಆಚರಣೆಯನ್ನು ಒಂಬತ್ತು ದಿನಗಳ ಕಾಲ ನಡೆಸಲಾಗುತ್ತದೆ. ಈ ಸಮಯದಲ್ಲಿ ರಂಗಪೂಜಾ ಸೇವೆಗಳನ್ನು ನಡೆಸಲಾಗುತ್ತದೆ. ನವರಾತ್ರಿ ಉತ್ಸವದ ಸಮಯದಲ್ಲಿ ಲಲಿತ ಪಂಚಮಿ, ಮಹಾ ನವಮಿ ಮತ್ತು ವಿಜಯ ದಶಮಿ ವಿಶಿಷ್ಟ ದಿನಗಳಾಗಿವೆ.
ಯಾವುದೇ ರೀತಿಯ ಕುಟುಂಬದಲ್ಲಿ ಕಲಹ ಮತ್ತು ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಈ ದೇವಾಲಯದಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಮತ್ತೆ ಹರಕೆಯನ್ನು ಹೇಳಿಕೊಂಡರೆ ಈಡೇರುತ್ತವೆ ಎಂಬ ನಂಬಿಕೆ ಇದೆ.
ತಲುಪುವುದು ಹೇಗೆ:
ವಿಮಾನದ ಮೂಲಕ : ಮಂಗಳೂರು ನಗರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಬಜ್ಪೆ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ.
ರೈಲು ಮೂಲಕ : ಮುಂಬೈನಿಂದ ಕೊಂಕಣ ರೈಲುಗಳು, ಕೇರಳ-ಮಂಗಳೂರು ರೈಲುಗಳು ಮತ್ತು ಬೆಂಗಳೂರು-ಹಾಸನ-ಮಂಗಳೂರು ರೈಲುಗಳು ಇಲ್ಲಿನ ಪ್ರಮುಖ ರೈಲು ಸೌಲಭ್ಯಗಳಾಗಿವೆ.
ರಸ್ತೆ ಮೂಲಕ : ಜಿಲ್ಲೆಯನ್ನು ರಾಷ್ಟ್ರೀಯ ಹೆದ್ದಾರಿ 48 ಮತ್ತು ರಾಷ್ಟ್ರೀಯ ಹೆದ್ದಾರಿ 17 ಮೂಲಕ ಹಾದುಹೋಗುತ್ತದೆ ಮತ್ತು ಈ ಹೆದ್ದಾರಿಗಳು ದೇಶದ ಇತರ ಪ್ರದೇಶಗಳನ್ನು ಸಂಪರ್ಕ ಹೊಂದಿವೆ.
- ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ (ಚಿಕ್ಕಮಗಳೂರು)
ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ವ್ರತವು ಬಡತನವನ್ನು ಹೋಗಲಾಡಿಸಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ದೇವಾಲಯದ ಬಗ್ಗೆ :
ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮಾರು 10 ಕಿ.ಮೀ ದೂರದಲ್ಲಿ ಪಶ್ಚಿಮ ಘಟ್ಟಗಳ ನಡುವೆ ಇರುವ ಶ್ರೀ ಅನ್ನಪೂರ್ಣೇಶ್ವರಿಯ ಹಿಂದೂ ದೇವಾಲಯವು 831 ಮೀ ಎತ್ತರದಲ್ಲಿರುವ ದೇವಾಲಯವಾಗಿದೆ. ವರ್ಷ ಪೂರ್ತಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಭದ್ರಾ ನದಿಯ ದಡದಲ್ಲಿರುವ ಮಲೆನಾಡು ಪ್ರದೇಶದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವತೆಯ ದರ್ಶನ ಪಡೆಯಬಹುದಾಗಿದೆ.
ದೇವಿಯನ್ನು ಹಲವಾರು ಶತಮಾನಗಳ ಹಿಂದೆಯೆ ಶ್ರೇಷ್ಠ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪನೆಯನ್ನು ಮಾಡಿದರು. ಅದಲ್ಲದೆ ಅನ್ನಪೂರ್ಣೇಶ್ವರಿ ದೇವತೆಯ ಪ್ರಮುಖ ದೇವತೆಯನ್ನು 1973 ರಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಚಿನ್ನದಿಂದ ಮಾಡಿರುವ ಅನ್ನಪೂರ್ಣೇಶ್ವರಿ ಪ್ರತಿಮೆ ವರ್ಷಪೂರ್ತಿ ಭಕ್ತರನ್ನು ತನ್ನ ಮಹಿಮೆಯಿಂದ ಆಕರ್ಷಿಸುತ್ತದೆ.
ಅನ್ನಪೂರ್ಣೇಶ್ವರಿ ದೇವತೆಯು ಆಹಾರದ ದೇವತೆ ಎಂದು ಹೇಳಲಾಗುತ್ತದೆ. ಹಿಂದೂ ಪುರಾಣಗಳ ನಂಬಿಕೆಯ ಪ್ರಕಾರ, ದೇವಿಗೆ ಆರಾಧನೆಯನ್ನು ಮಾಡಿ ಭಕ್ತಿಯಿಂದ ದೇವಿ ಸೇವೆಯನ್ನು ಮಾಡಿದರೆ ಅವರ ಜೀವನದಲ್ಲಿ ಅನ್ನದ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ದೇವಾಲಯದಲ್ಲಿ ಪ್ರತಿ ನಿತ್ಯವೂ ಅನ್ನ ದಾನವನ್ನು ನಡೆಸಲಾಗವುದು.
ದೇವಾಲಯದಲ್ಲಿ ಯಾವುದೇ ಧರ್ಮ, ಜಾತಿ, ಮತ ಮತ್ತು ಭಾಷೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ಭಕ್ತರಿಗೂ ದರ್ಶನಕ್ಕೆ ಮತ್ತು ಪ್ರಸಾದ ಸ್ವೀಕರಿಸಲು ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ. ಅನ್ನಪೂರ್ಣೇಶ್ವರಿ ದೇವಿಯ ಪೂಜೆ ಮತ್ತು ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಆಹಾರದ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6:30 ರಿಂದ ರಾತ್ರಿ 9:30ರ ವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಿಂದ 121 ಕಿ.ಮೀ ದೂರದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣವು ಹೊರನಾಡಿನಿಂದ ಸುಮಾರು 320 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣವಾಗಿದೆ.
ರೈಲು ಮೂಲಕ: ಹತ್ತಿರದ ರೈಲು ನಿಲ್ದಾಣವು ಹೊರನಾಡುನಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಬಂಟವಾಳ ನಿಲ್ದಾಣವಾಗಿದೆ.
ರಸ್ತೆ ಮೂಲಕ: ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳಿಂದ ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಮಂಗಳೂರುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಬಲ್ಲಾಳರಾಯಣ ದುರ್ಗಾ:
ಹೊರನಾಡುವಿನಿಂದ 34 ಕಿ.ಮೀ ದೂರದಲ್ಲಿರುವ ಬಲ್ಲಾಳರಾಯನ ದುರ್ಗವು 12 ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಾಣ ಮಾಡಿರುವ ಕೋಟೆಯಾಗಿದೆ ಹೊರನಾಡಿಗೆ ಭೇಟಿನೀಡುವ ಯಾತ್ರಿಕರು ಈ ಪ್ರದೇಶವನ್ನು ಭೇಟಿ ಮಾಡಬಹುದಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ:
ಭಾರತದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕುದುರೆಮುಖವೂ ಒಂದು ಅದ್ಬುತವ ಉದ್ಯಾನವನವಾಗಿದೆ. ಅತ್ಯುತ್ತಮ ಪ್ರಕೃತಿ ಸೌಂದರ್ಯ, ಬೆಟ್ಟಗಳು, ಪ್ರಾಣಿ ಮತ್ತು ಸಸ್ಯ ಸಂಪತ್ತು ಹೊಂದಿರುವ ಪ್ರದೇಶವಾಗಿದೆ.
- ಶೃಂಗೇರಿ ಶಾರದಾಂಬ ದೇವಸ್ಥಾನ (ಚಿಕ್ಕಮಗಳೂರು)
ವಿದ್ಯಾರ್ಥಿಗಳು ಮತ್ತು ಭಕ್ತರು ಶೈಕ್ಷಣಿಕ ಶ್ರೇಷ್ಠತೆ ಮತ್ತು ಜ್ಞಾನಕ್ಕಾಗಿ ಇಲ್ಲಿ ಪ್ರಾರ್ಥಿಸುತ್ತಾರೆ.
ದೇವಾಲಯದ ಬಗ್ಗೆ:
ಶೃಂಗೇರಿ ಮಠವು ಎರಡು ದೇಗುಲಗಳನ್ನು ಹೊಂದಿದೆ. ಒಂದು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಇದನ್ನು ವಿದ್ಯಾ ಶಂಕರ ದೇವಾಲಯ ಎಂದು ಪ್ರಸಿದ್ದಿಯಾಗಿದೆ, ಇನ್ನೊಂದು ಸರಸ್ವತಿಗೆ ಸಮರ್ಪಿತವಾದ ಶಾರದಾ ಅಂಬಾ ದೇವಾಲಯ ಎಂದು ಪೂಜಿಸಲಾಗುತ್ತದೆ. ಶಿವ ದೇವಾಲಯದ ಆವೃತ್ತಿಯನ್ನು 14 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, 15 ನೇ ಶತಮಾನದಲ್ಲಿ ದೇವತೆ ಸರಸ್ವತಿಯನ್ನು ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಶ್ರೀ ಶಾರದಾ ಪೀಠವು ಶೃಂಗೇರಿಯಲ್ಲಿ ಉಡುಪಿಯಿಂದ ಪೂರ್ವಕ್ಕೆ ಸುಮಾರು 85 ಕಿಲೋಮೀಟರ್ ದೂರದಲ್ಲಿದೆ. ಶೃಂಗೇರಿಯನ್ನು ಬೆಂಗಳೂರು ಮತ್ತು ಮಂಗಳೂರಿನಿಂದ ರಸ್ತೆಯ ಮೂಲಕ ತಲುಪಬಹುದು.
ಶೃಂಗೇರಿ ಶಾರದಾ ಪೀಠವನ್ನು ಆದಿ ಶಂಕರರೆ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ, ಕ್ರಿ.ಪೂ 5 ನೇ ಶತಮಾನದಲ್ಲಿ ಸ್ಥಾಪನೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ, ಆದರೆ ಆದಿ ಶಂಕರರ ಅವಧಿಯಿಂದ ಸುಮಾರು 14 ನೇ ಶತಮಾನದವರೆಗಿನ ಶೃಂಗೇರಿ ಪೀಠದ ಇತಿಹಾಸದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಮೂಲಗಳು ದಿನಾಂಕಗಳು ಮತ್ತು ಘಟನೆಗಳ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಿಲ್ಲ, ಪ್ರಾದೇಶಿಕ ಕನ್ನಡ ಭಾಷೆಯಲ್ಲಿ ಶೃಂಗೇರಿಯನ್ನು ಉಲ್ಲೇಖಿಸುವ ಆರಂಭಿಕ ಶಾಸನಗಳು ಸ್ಮರಣಾರ್ಥವಾಗಿವೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಣದಲ್ಲಿ ಉನ್ನತಿಯನ್ನು ಬಯಸುವವರ ಈ ದೇವಾಲಯದಲ್ಲಿ ತಮ್ಮ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಹರಕೆಯನ್ನು ಹೇಳಿಕೊಳ್ಳುತ್ತಾರೆ ಮತ್ತು ದೇವಿಯನ್ನು ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಶೃಂಗೇರಿಯು ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿಯೊಂದಿಗೆ ಬಸ್ ಉತ್ತಮ ಸಂಪರ್ಕ ಸೌಲಭ್ಯವನ್ನು ಹೊಂದಿದೆ.
ರೈಲಿನ ಮೂಲಕ: ಉಡುಪಿ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ ಮತ್ತು ಶಿವಮೊಗ್ಗದಿಂದಲೂ ರೈಲು ಸೌಲಭ್ಯ ದೊರೆಯುತ್ತದೆ.
ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ, ಇದು ಶೃಂಗೇರಿಯಿಂದ 101 ಕಿ.ಮೀ ದೂರದಲ್ಲಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
*ಆಗುಂಬೆ 30 ಕಿ.ಮೀ ದೂರದಲ್ಲಿದೆ.
*ಸಿರಿಮನೆ ಜಲಪಾತ 12 ಕಿ.ಮೀ ದೂರದಲ್ಲಿದೆ.
*ಕುಂದಾದ್ರಿ 28 ಕಿ.ಮೀ ದೂರದಲ್ಲಿದೆ.
*ಕವಿಶೈಲ 40 ಕಿ.ಮೀ ದೂರದಲ್ಲಿದೆ.
*ಹೊರನಾಡು 54 ಕಿ.ಮೀ ದೂರದಲ್ಲಿದೆ .
- ಬನಶಂಕರಿ ಅಮ್ಮ ದೇವಸ್ಥಾನ (ಬಾದಾಮಿ, ಬಾಗಲಕೋಟೆ)
ವಿವಾಹ ಸಂಬಂಧಗಳು, ವೈಯಕ್ತಿಕ ಯೋಗಕ್ಷೇಮಕ್ಕಾಗಿ ಅನೇಕ ವ್ರತಗಳು.
ದೇವಾಲಯದ ಬಗ್ಗೆ:
ಬನಶಂಕರಿ ದೇವಿ ದೇವಾಲಯವು ಭಾರತದ ಕರ್ನಾಟಕ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿಯ ಚೋಳಚಗುಡ್ಡದಲ್ಲಿರುವ ಒಂದು ಪ್ರಸಿದ್ಧ ಹಿಂದೂ ಧಾರ್ಮಿಕ ದೇವಾಲಯವಾಗಿದೆ. ಈ ದೇವಸ್ಥಾನವು ತಿಲಕಾರಣ್ಯ ಅರಣ್ಯದಲ್ಲಿ ದೇವಿ ಇರುವುದರಿಂದ ಈ ದೇವಾಲಯವನ್ನು ‘ಬನಶಂಕರಿ’ ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿರುವ ದೇವತೆಯನ್ನು ಪಾರ್ವತಿ ದೇವಿಯ ಅವತಾರವಾದ ಶಾಕಂಭರಿ ಎಂದೂ ಕೂಡ ಪೂಜಿಸುತ್ತಾರೆ.
ಬನಶಂಕರಿಯ ಮೂಲ ದೇವಾಲಯವನ್ನು 7 ನೇ ಶತಮಾನದ ಬಾದಾಮಿ ಚಾಲುಕ್ಯ ರಾಜರು ತಮ್ಮ ಆಡಳಿತದ ಅವಧಿಯಲ್ಲಿ ನಿರ್ಮಿಸಿದರು, ಬಾದಾಮಿ ಚಾಲುಕ್ಯರು ಬನಶಂಕರಿ ದೇವಿಯನ್ನು ತಮ್ಮ ಆರಾಧ್ಯ ದೇವತೆಯಾಗಿ ಆರಾಧಿಸುತ್ತಿದ್ದರು. ಈ ದೇವಸ್ಥಾನವು ಬಹಳ ವಿಜೃಂಭಣೆಯಿಂದ ಜನವರಿ ಅಥವಾ ಫೆಬ್ರವರಿ ಅವಧಿಯಲ್ಲಿ ಬನಶಂಕರಿ ಜಾತ್ರೆ ಎಂಬ ವಾರ್ಷಿಕ ಉತ್ಸವವನ್ನು ಆಚರಿಸಿಕೊಳ್ಳುತ್ತ ಬಂದಿದೆ.
ಬನಶಂಕರಿ ದೇವಿಯಲ್ಲಿ ಭಕ್ತರು ತಮ್ಮ ಇಚ್ಛೆಗಳನ್ನು ಅಲ್ಲಿ ಬೇಡಿಕೊಳ್ಳುವುದರಿಂದ ದೇವಿ ನೆರವೇರಿಸಿಕೊಡುತ್ತಾಳೆ ಎಂಬ ನಂಬಿಕೆ ಇದೆ ಮತ್ತು ಭಕ್ತರು ಯಾವುದೇ ರೀತಿಯ ವಿವಾಹದ ಸಮಸ್ಯೆ ಮತ್ತು ವೈಯಕ್ತಿಕ ಸಮಸ್ಯೆ ಗಳನ್ನೂ ದೇವರಲ್ಲಿ ಪ್ರಾರ್ಥಿಸುವುದರಿಂದ ದೇವಿ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.
ಬನಶಂಕರಿ ದೇವಸ್ಥಾನದ ಸಮಯ:
ದೇವರ ದರ್ಶನಕ್ಕಾಗಿ ಬೆಳ್ಳಿಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನೀಡಲಾಗುತ್ತದೆ. ಪೂಜಾ ಸಮಯವನ್ನು ಪ್ರತಿದಿನ ಮೂರು ಅವಧಿಗಳಾಗಿ ಮಾಡಲಾಗಿದೆ. ಮೊದಲನೆ ಅವಧಿಯಲ್ಲಿ ಪ್ರತಿದಿನ ನಡೆಯುವ ಅಭಿಷೇಕಕ್ಕಾಗಿ. ಮತ್ತು ಉಳಿದ ಎರಡು ಅವಧಿಯಲ್ಲಿ ಕ್ರಮವಾಗಿ ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮತ್ತು ದರ್ಶನಕ್ಕಾಗಿ ನೀಡಲಾಗುತ್ತದೆ. ಅಭಿಷೇಕವನ್ನು ಮುಂಜಾನೆ 6:30 ರಿಂದ 8:30 ರವರೆಗೆ ನೆರವೇರಿಸಲಾಗುತ್ತದೆ.
ಬಾದಾಮಿಯ ಹತ್ತಿರದ ಸ್ಥಳಗಳು:
ಗುಹೆ 1
ಬಾದಾಮಿ ಬಸ್ ನಿಲ್ದಾಣದಿಂದ 1 ಕಿ.ಮೀ ಅಂತರದಲ್ಲಿರುವ ಗುಹೆ 1 ಕರ್ನಾಟಕದ ಬಾದಾಮಿಯಲ್ಲಿರುವ ಒಂದು ಅದ್ಬುತ ಕೆತ್ತಿದ ಗುಹೆಯಾಗಿದ್ದು ಪ್ರವಾಸಿಗರು ಭೇಟಿ ನೀಡಬಹುದಾದ ಸ್ಥಳವಾಗಿದೆ.
ಭೂತನಾಥ ದೇವಾಲಯ :
ಬಾದಾಮಿ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಭೂತನಾಥ ದೇವಾಲಯವು ಬಾದಾಮಿ ವಸ್ತುಸಂಗ್ರಹಾಲಯದ ಮುಂಭಾಗದ ಅಗಸ್ತ್ಯ ಸರೋವರದ ದಡದಲ್ಲಿ ಕಾಣಸಿಗುವ ಒಂದು ದೇವಾಲಯವಾಗಿದೆ.
ಅಗಸ್ತ್ಯ ಸರೋವರ:
ಬಾದಾಮಿ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ಅಗಸ್ತ್ಯ ಸರೋವರ, ಗುಹೆ ದೇವಾಲಯಗಳ ಕೆಳಗೆ ಇರುವ ಒಂದು ವಿಶೇಷ ಸರೋವರವಾಗಿದೆ. 5 ನೇ ಶತಮಾನದಲ್ಲಿ ನಿರ್ಮಾಣವಾದ ಈ ಸರೋವರವು ಅದರ ನೀರಿನಲ್ಲಿ ಆರೋಗ್ಯಕರ ಶಕ್ತಿಯಿಂದಾಗಿ ಪವಿತ್ರವೆಂದು ಪರಿಗಣಿಸಲಾಗಿದೆ.
- ಮಲೆ ಮಹದೇಶ್ವರ ದೇವಸ್ಥಾನ (ಎಂಎಂ ಹಿಲ್ಸ್, ಚಾಮರಾಜನಗರ)
ಆರೋಗ್ಯ ಮತ್ತು ಆರ್ಥಿಕ ಸಮೃದ್ಧಿಗೆ ಸಂಬಂಧಿಸಿದ ವ್ರತಗಳಿಗೆ ಪ್ರಬಲವಾದ ಯಾತ್ರಾ ಸ್ಥಳ.
ದೇವಾಲಯದ ಬಗ್ಗೆ:
ಮಲೆ ಮಹದೇಶ್ವರ ಬೆಟ್ಟ ಇದು ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ಇದು ಮೈಸೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ. ಶ್ರೀ ಮಲೆ ಮಹದೇಶ್ವರ ದೇವಾಲಯವು ಪವಿತ್ರ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ಮಹದೇಶ್ವರರು ವಾಸಿಸುತ್ತಿದ್ದು ಸಿದ್ಧರಾಗಿ ವೈದ್ಯಶಾಸ್ತ್ರವನ್ನು ಅಧ್ಯಯನ ಮಾಡಿದರು, ಏಳು ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಅಹಿಂಸಾ ಮಾರ್ಗದ ಬಗ್ಗೆ ತಿಳುವಳಿಕೆಯನ್ನು ನೀಡಿದರು.
ಇಲ್ಲಿ ಹೇಳುವ ದಂತಕಥೆಯ ಪ್ರಕಾರ, ಅನುಮಲೆ, ಜೇನುಮಲೆ, ಕನುಮಲೆ, ಕಾಡುಮಲೆ, ಪಚ್ಚೆಮಲೆ, ಪವಲಮಲೆ, ಪೊನ್ನಾಚಿಮಲೆ ಎಂಬ ಏಳು ಬೆಟ್ಟಗಳಿದ್ದು, ಈ ಏಳು ಬೆಟ್ಟಗಳು ಒಟ್ಟಾಗಿ ಮಲೆ ಮಹದೇಶ್ವರ ಬೆಟ್ಟವನ್ನು ನಿರ್ಮಾಣ ಮಾಡಿವೆ.
ಸಂತ ಮಹಾದೇಶ್ವರರು ಈ ಸ್ಥಳದ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರ ಮತ್ತು ಆಚರಣೆಗಳನ್ನು ನೋಡಿಕೊಳ್ಳಲು ಒಂದು ಮಠವನ್ನು ನಿರ್ಮಾಣವನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ತಮ್ಮ ಜ್ಞಾನದ ಮೂಲಕ ಬೆಟ್ಟದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರನ್ನು ಜ್ಞಾನೋದಯವಾಗಿಸಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕಾರ ಮಾಡಿಕೊಂಡರು ಎಂದು ನಂಬಲಾಗುತ್ತದೆ.
ಇಲ್ಲಿಗೆ ಬರುವ ಭಕ್ತರು ತಮ್ಮ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕವಾಗಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಈ ದೇವರಲ್ಲಿ ಬೇಡಿಕೊಂಡು ಮತ್ತು ಹರಕೆಗಳನ್ನು ಹೇಳಿಕೊಳುವುದರಿಂದ ಅವರ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ
ಭೇಟಿ ನೀಡಲು ಉತ್ತಮ ಸಮಯ: ಬೆಳಿಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 5:30 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.
ತಲುಪುವುದು ಹೇಗೆ:
ರಸ್ತೆಯ ಮೂಲಕ: ಮಲೆ ಮಹದೇಶ್ವರ ಬೆಟ್ಟ ತಲುಪಲು ಬಸ್ ಸೌಲಭ್ಯ ಲಭ್ಯವಿದೆ ಆದರೆ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡು ಪ್ರಯಾಣ ಮಾಡುವುದು ಸೂಕ್ತವಾಗಿದೆ.
ರೈಲಿನ ಮೂಲಕ: ಮಲೆ ಮಹದೇಶ್ವರ ಬೆಟ್ಟ ಬೆಂಗಳೂರು ಮತ್ತು ಮೈಸೂರಿನಲ್ಲಿ ರೈಲು ನಿಲ್ದಾಣದ ಸೌಲಭ್ಯವಿದೆ.
ವಿಮಾನದ ಮೂಲಕ: ಮಲೆ ಮಹದೇಶ್ವರ ಬೆಟ್ಟ ಬೆಂಗಳೂರು ನಗರದಿಂದ 135 ಕಿ.ಮೀ ದೂರದಲ್ಲಿದ್ದು ಹತ್ತಿರದ ವಿಮಾನ ನಿಲ್ದಾಣವಾಗಿದೆ .
ಮೈಸೂರಿನಿಂದ 138 ಕಿ.ಮೀ ದೂರದಲ್ಲಿದ್ದು ಈ ಸ್ಥಳದಲ್ಲೂ ವಿಮಾನ ನಿಲ್ದಾಣವಿದೆ.
ಹತ್ತಿರದಲ್ಲಿ ಇತರ ಪ್ರಸಿದ್ದ ಸ್ಠಳಗಳು:
ಬಂಡೀಪುರ ರಾಷ್ಟ್ರೀಯ ಉದ್ಯಾನವನ : ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಸುಂದರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ .
ಭರಚುಕ್ಕಿ ಜಲಪಾತ: ಶಿವನಸಮುದ್ರ ದ್ವೀಪವು ಕಾವೇರಿ ನದಿಯಿಂದ ರಚನೆಯಾದ ಎರಡು ಸುಂದರವಾದ ಜಲಪಾತಗಳನ್ನು ನೋಡಬಹುದಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಭರಚುಕ್ಕಿ ಜಲಪಾತವು ನದಿಯು ಬಹಳ ಸುಂದರವಾಗಿದೆ.
10.ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (ಉತ್ತರ ಕನ್ನಡ)
ಗಂಭೀರವಾದ ಇಚ್ಛೆಗಳ ಈಡೇರಿಕೆ ಮತ್ತು ಮೋಕ್ಷಕ್ಕಾಗಿ ಶಿವನನ್ನು ಇಲ್ಲಿ ಪೂಜಿಸಲಾಗುತ್ತದೆ.
ದೇವಾಲಯದ ಬಗ್ಗೆ:
ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನವು ಕ್ರಿ.ಶ. 4 ನೇ ಶತಮಾನದ ದೇವಸ್ಥಾನವಾಗಿದ್ದು, ಇದನ್ನು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ. ಇದು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಅರೇಬಿಯನ್ ಸಮುದ್ರದ ಗೋಕರ್ಣ ಕಡಲತೀರದತ್ತ ಮುಖ ಮಾಡಿರುವ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿರುವ ಪ್ರಾಣಲಿಂಗವನ್ನು ಆತ್ಮಲಿಂಗ ಅಥವಾ ಶಿವಲಿಂಗ ಎಂದೂ ಕರೆಯಲ್ಪಡುತ್ತದೆ.
ಭಕ್ತರು ತಮ್ಮ ಪುರೋಹಿತರೊಂದಿಗೆ ಆಚರಿಸುವ ಧಾರ್ಮಿಕ ಆಚರಣೆಗಳಾದ ತಲೆ ಬೋಳಿಸಿಕೊಳ್ಳುವುದು, ಉಪವಾಸ ಮಾಡುವುದು ಮತ್ತು ನಂತರ ದೇವಾಲಯದ ಎದುರಿನ ಅರೇಬಿಯನ್ ಸಮುದ್ರದಲ್ಲಿ ಸ್ನಾನ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡುತ್ತಾರೆ. ನಂತರ ಅವರು ಮಹಾಬಲೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ದರ್ಶನವನ್ನು ಪಡೆಯುತ್ತಾರೆ. ಈ ಸ್ಥಳದಲ್ಲಿ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮತ್ತು ಮೋಕ್ಷ ಸಂಪಾದನೆಗಾಗಿ ಭೇಟಿ ನೀಡುತ್ತಾರೆ
ಭೇಟಿ ನೀಡಲು ಉತ್ತಮ ಸಮಯ:
ಬೆಳಿಗ್ಗೆ 6:00 ಗಂಟೆ ಇಂದ ಮಧ್ಯಾಹ್ನ 12:30ರ ವರೆಗೆ
ಸಂಜೆ 5:00 ಗಂಟೆ ಇಂದ ರಾತ್ರಿ 8:00 ಗಂಟೆ ವರೆಗೆ
ತಲುಪುವುದು ಹೇಗೆ?
ರಸ್ತೆಯ ಮೂಲಕ:
ಕರಾವಳಿ ಹೆದ್ದಾರಿಯಾದ ರಾಷ್ಟ್ರೀಯ ಹೆದ್ದಾರಿ 66 (NH66), ಗೋಕರ್ಣಕ್ಕೆ ಸಮೀಪದಲ್ಲಿ ಇರುವಂತಹ ಹೆದ್ದಾರಿಯಾಗಿದೆ . ಗೋಕರ್ಣವು ಕಾರವಾರದಿಂದ 56 ಕಿಲೋಮೀಟರ್ ದೂರದಲ್ಲಿದೆ, ಮಂಗಳೂರಿನಿಂದ 252 ಕಿಲೋಮೀಟರ್, ಹುಬ್ಬಳ್ಳಿಯಿಂದ 145 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 450 ಕಿಲೋಮೀಟರ್ ದೂರದಲ್ಲಿದೆ. ಯಾತ್ರಿಕರಿಗೆ ಈ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
ರೈಲು ಮೂಲಕ:
ಗೋಕರ್ಣವು ಕಾರವಾರ, ಅಂಕೋಲಾ, ಹುಬ್ಬಳ್ಳಿ, ಮಂಗಳೂರು, ಕುಮಟಾ ಮತ್ತು ಮಾರ್ಗೋವಾ ಮೂಲಕ ರೈಲು ಸಂಪರ್ಕ ಕಲ್ಪಿಸಲಾಗಿದೆ. ಕೊಂಕಣ ರೈಲ್ವೆ ಮತ್ತು ಇತರ ಹಲವು ರೈಲುಗಳು ಗೋಕರ್ಣದ ಮೂಲಕ ಸಂಪರ್ಕವನ್ನು ಹೊಂದಿವೆ. ಕುಮಟಾ (35 ಕಿ.ಮೀ) ಮತ್ತು ಅಂಕೋಲಾ (20 ಕಿ.ಮೀ) ಸಮೀಪದ ರೈಲು ಮಾರ್ಗಗಳಾಗಿವೆ.
ವಿಮಾನದ ಮೂಲಕ: ವಿಮಾನ ನಿಲ್ದಾಣವು ಗೋವಾದ ಪಣಜಿಯಲ್ಲಿದೆ.